ಡಾ. ಅಮಿತ್ ಥಡಾನಿ ಅವರು ಕಳೆದ ೨೫ ವರ್ಷಗಳಿಂದ ಮುಂಬಯಿ ಮತ್ತು ನವಿ ಮುಂಬಯಿಯಲ್ಲಿ ವೃತ್ತಿ ಮಾಡುತ್ತಿರುವ ಪ್ರಸಿದ್ಧ ‘ಜನರಲ್ ಸರ್ಜನ್’ (ಶಸ್ತ್ರಚಿಕಿತ್ಸಕ) ಆಗಿದ್ದಾರೆ. ಅವರು ‘ಇಂಡಿಯನ್ ಮೆಡಿಕಲ್ ಅಸೋಸಿಯೇಷನ್’ದ ಚೆಂಬೂರು ಶಾಖೆಯ ಮಾಜಿ ಅಧ್ಯಕ್ಷರಾಗಿದ್ದಾರೆ ಮತ್ತು ಅನೇಕ ವೈದ್ಯರ ಸಂಸ್ಥೆಗಳ ಪ್ರಮುಖ ಸದಸ್ಯರಾಗಿದ್ದಾರೆ. ಅವರು ಒಬ್ಬ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಅವರು ಭಾರತ ಮತ್ತು ನೇಪಾಳದ ಅನೇಕ ವಿಪತ್ತು ಪೀಡಿತ ಪ್ರದೇಶಗಳಲ್ಲಿ ೧೧ ಸಾವಿರ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಅವರು ‘ಆಲ್ ಡಾಕ್ಟರ್ ಮ್ಯೂಸಿಕಲ್ ಬ್ಯಾಂಡ್’ನಲ್ಲಿ ಗಿಟಾರ್ ನುಡಿಸುತ್ತಾರೆ ಮತ್ತು ಬಿಡುವಿನ ವೇಳೆಯಲ್ಲಿ ಸಾವಯವ ಕೃಷಿ ಮಾಡುತ್ತಾರೆ.
ಡಾ. ಥಡಾನಿ ಅವರು ‘ಪ್ರಗತಿಪರರ ಕೊಲೆ ಪ್ರಕರಣದಲ್ಲಿ ಹಿಂದುತ್ವನಿಷ್ಠರನ್ನು ಸಿಲುಕಿಸುವ ಷಡ್ಯಂತ್ರ’ ಎಂಬ ವಿಷಯವನ್ನು ವಿವಿಧ ವೇದಿಕೆಗಳಲ್ಲಿ ಅತ್ಯಂತ ಅಧ್ಯಯನಪೂರ್ಣ ರೀತಿಯಲ್ಲಿ ಮಂಡಿಸಿದ್ದಾರೆ, ಹಾಗೆಯೇ ‘ಹಿಂದೂ ಭಯೋತ್ಪಾದನೆ’ ಎಂಬ ಸುಳ್ಳು ಕಾಲ್ಪನಿಕ ಸೂತ್ರವನ್ನು ಅವರು ತೀಕ್ಷ್ಣವಾಗಿ ವಿರೋಧಿಸಿದ್ದಾರೆ. ಈ ವಿಷಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಅವರು ವಿವಿಧ ವೇದಿಕೆಗಳಲ್ಲಿ ಮಾಡುತ್ತಿದ್ದಾರೆ ಮತ್ತು ಪ್ರಗತಿಪರರು ಮಂಡಿಸಿದ ಕಾಲ್ಪನಿಕ ಕಥೆಗಳನ್ನು ವಿರೋಧಿಸುತ್ತಿದ್ದಾರೆ. ಡಾ. ಥಡಾನಿ ಅವರು ದೇವಾಲಯಗಳ ಸರಕಾರೀಕರಣದ ವಿರೋಧಿಯಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇಂತಹ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಅಮಿತ್ ಥಡಾನಿ ಅವರ ಕುರಿತಾದ ಮಾಹಿತಿಯನ್ನು ತಿಳಿಯೋಣ.

ವಿಶೇಷ ಮಾಲಿಕೆ
ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು
೧. ವೈದ್ಯಕೀಯ ಮತ್ತು ಸಾಮಾಜಿಕ ಕಾರ್ಯದಲ್ಲಿನ ಕೊಡುಗೆ
ಡಾ. ಅಮಿತ್ ಥಡಾನಿ ಅವರು ನಿಷ್ಣಾತ ಶಸ್ತ್ರಚಿಕಿತ್ಸಕರಾಗಿದ್ದು, ಕಳೆದ ೨೫ ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ‘ಪಿ.ಇ.ಎಚ್.ಎಲ್. ಸರ್ವಿಸಸ್’ ಎಂಬ ಸ್ವಯಂಸೇವಾ ಸಂಸ್ಥೆಯ ಟ್ರಸ್ಟಿಯಾಗಿದ್ದಾರೆ. ಡಾ. ಥಡಾನಿ ಮತ್ತು ಅವರ ಸಹೋದ್ಯೋಗಿಗಳು ಚಿನ್ಮಯ ಮಿಷನ್, ಶಾಂತಿಕುಂಜ ಆಶ್ರಮ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ಸಂಘಟನೆಗಳೊಂದಿಗೆ ಉತ್ತರಾಖಂಡ, ನೇಪಾಳ, ಚೆನ್ನೈ ಮತ್ತು ಮಹಾರಾಷ್ಟ್ರದ ನೈಸರ್ಗಿಕ ವಿಪತ್ತುಗಳಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ೧೧ ಸಾವಿರ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ. ಡಾ. ಥಡಾನಿ ಅವರು ಮಹಾರಾಷ್ಟ್ರದ ೩ ಜಿಲ್ಲೆಗಳ ಆದಿವಾಸಿ ಬಾಂಧವರಿಗಾಗಿ ವೈದ್ಯಕೀಯ ಶಿಬಿರಗಳನ್ನು ಮತ್ತು ಗ್ರಾಮೀಣ ಭಾಗದ ಜನರಿಗಾಗಿ ಸರಕಾರಿ ಹಾಗೂ ಧರ್ಮಾದಾಯ ಖಾಸಗಿ ಆಸ್ಪತ್ರೆಗಳ ಸಹಾಯದಿಂದ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿದ್ದಾರೆ. ತಮ್ಮ ಸ್ವಂತ ಸಂಸ್ಥೆಯ ವತಿಯಿಂದ ಅವರು ೫೦೦ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದು, ಅವರ ಸಂಸ್ಥೆಯ ಯೋಜನೆಗಳ ಲಾಭವನ್ನು ಸಾವಿರಾರು ಫಲಾನುಭವಿಗಳು ಪಡೆಯುತ್ತಿದ್ದಾರೆ. ಡಾ. ಥಡಾನಿ ಅವರ ಸಂಸ್ಥೆಯು ಲಕ್ನೋ (ಉತ್ತರ ಪ್ರದೇಶ)ದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದ ಚಿಕ್ಕ ಮಕ್ಕಳಿಗಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ನಡೆಸುತ್ತದೆ. ಇದೇ ಸಮಯದಲ್ಲಿ ಸಂಸ್ಥೆಯ ವಿವಿಧ ಸಂಘಟನೆಗಳಲ್ಲಿ ಬಾಲಕ ಮತ್ತು ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ.

Dr Amit Thadani busts the myth of doctors ‘looting’, explains failure of Ayushman Bharat(ಸೌಜನ್ಯ – Vaad) |

೨. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಹಿಂದುತ್ವನಿಷ್ಠರನ್ನು ಅನಗತ್ಯವಾಗಿ ಸಿಲುಕಿಸಿದ ಬಗ್ಗೆ ಪುಸ್ತಕದ ಮೂಲಕ ಧ್ವನಿ ಎತ್ತುವುದು
ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಹಿಂದುತ್ವನಿಷ್ಠರನ್ನು ಅನಗತ್ಯವಾಗಿ ಸಿಲುಕಿಸುವ ಷಡ್ಯಂತ್ರವನ್ನು ಡಾ. ಥಡಾನಿ ಅವರು ಜಗತ್ತಿನ ಮುಂದೆ ತಂದರು. ಈ ಕುರಿತು ಅವರು ಒಂದು ಪುಸ್ತಕವನ್ನು ಬರೆದರು ಮತ್ತು ಅದರಲ್ಲಿ ಸಮಾಜದ ಎಲ್ಲಾ ಹಂತಗಳವರೆಗೆ ಹಿಂದೂಗಳ ಪಾತ್ರವನ್ನು ಮಂಡಿಸಿದರು.
ಸನಾತನ ಸಂಸ್ಥೆಯ ವಿರುದ್ಧ ರಾಜಕೀಯ ಸಂಚು | The Rationalist Murders | Amit Thadhani | Jamboo Talks |
‘ದಾಭೋಲ್ಕರ್ ಹತ್ಯೆ ಪ್ರಕರಣದ ಶಂಕಿತರು ಪದೇ ಪದೇ ಬದಲಾಗುತ್ತಿದ್ದಾರೆ’ ಎಂದು ಗಮನಿಸಿದ ನಂತರ ಡಾ. ಥಡಾನಿ ಅವರು ಈ ಪ್ರಕರಣದ ಅತ್ಯಂತ ಆಳವಾದ ಮತ್ತು ವಿಮರ್ಶಾತ್ಮಕ ಅಧ್ಯಯನ ಮಾಡಿದರು. ‘ಈ ಪ್ರಕರಣದಲ್ಲಿ ಸಿಲುಕಿಸಲಾದ ಹಿಂದುತ್ವನಿಷ್ಠ ಮತ್ತು ಸನಾತನ ಸಂಸ್ಥೆಯ ಸಾಧಕರು ನಿರಪರಾಧಿಗಳಾಗಿದ್ದು, ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲದಿದ್ದರೂ ಅವರನ್ನು ಕೇವಲ ದ್ವೇಷದಿಂದ ಸಿಲುಕಿಸಲಾಗಿದೆ’ ಎಂದು ಅವರ ಗಮನಕ್ಕೆ ಬಂದಿತು. ದಾಭೋಲ್ಕರ್ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿ ಸಾಕ್ಷಿಗಳು ಪೊಲೀಸರ ಸೂಚನೆಯಂತೆ ಬೇರೆ ಬೇರೆ ಜನರನ್ನು ಕೊಲೆಗಾರರೆಂದು ಗುರುತಿಸಿದ್ದರು, ಹಾಗೆಯೇ ಶಂಕಿತರ ರೇಖಾಚಿತ್ರಗಳನ್ನೂ ಬದಲಾಯಿಸಲಾಗಿತ್ತು. ಹಿಂದುತ್ವನಿಷ್ಠರು ‘ಅಂಧಶ್ರದ್ಧಾ ನಿರ್ಮೂಲನ ಕಾಯ್ದೆ’ಯನ್ನು ವಿರೋಧಿಸುತ್ತಿದ್ದರು. ಆ ಸಂಬಂಧಿತ ೭ ವರ್ಷಗಳ ಹಿಂದಿನ ಗಣಕೀಕೃತ ಪತ್ರಗಳನ್ನು ಹುಡುಕಿ ತೆಗೆಯಲಾಯಿತು ಮತ್ತು ‘ದಾಭೋಲ್ಕರನ್ನು ಗಮನದಲ್ಲಿಟ್ಟುಕೊಂಡು ಅವರ ಹತ್ಯೆ ಮಾಡಲಾಯಿತು’ ಎಂಬಂತಹ ಆರೋಪಗಳನ್ನು ಮಾಡಲಾಯಿತು.
‘ದಾಭೋಲ್ಕರ್-ಪಾನ್ಸರೆ ಹತ್ಯೆ: ತನಿಖೆಯ ರಹಸ್ಯಗಳು?’ ಪುಸ್ತಕದ ಕುರಿತಾದ ಅಭಿಪ್ರಾಯ
ಡಾ. ದಾಭೋಲ್ಕರ್-ಕಾ. ಪಾನ್ಸರೆ ಹತ್ಯೆಗಳಿಗೆ ಸಂಬಂಧಿಸಿದ ಪ್ರಕಟಿತ ಮಾಹಿತಿ, ಆರೋಪಪಟ್ಟಿಗಳು ಮತ್ತು ನ್ಯಾಯಾಲಯದ ಆದೇಶಗಳ ಪುಸ್ತಕವು ಒಂದು ವಿಸ್ತೃತ ಸಂಶೋಧನೆಯಾಗಿದೆ. ಹತ್ಯೆಯಾದ ನಾಸ್ತಿಕವಾದಿಗಳ ಒಂದು ಮತ್ತು ಹತ್ಯೆಯ ಆರೋಪ ಹೊತ್ತಿರುವ ಸಂಸ್ಥೆಗಳ ಸದಸ್ಯರ ಇನ್ನೊಂದು ಪಕ್ಷವಿದೆ. ಡಾ. ಥಡಾನಿ ಅವರು ತನಿಖೆಯ ನಿಷ್ಪಕ್ಷಪಾತ ಸತ್ಯಶೋಧನೆ ಮಾಡಿರುವುದರಿಂದ, ಪುಸ್ತಕವು ತನಿಖಾ ಸಂಸ್ಥೆಗಳ ವೈಫಲ್ಯ ಮತ್ತು ಪೊಲೀಸ್ ತನಿಖೆಯ ಮೇಲಿನ ರಾಜಕೀಯ ಪ್ರಭಾವದ ಬಗ್ಗೆ ತಿಳಿಸುತ್ತದೆ. ನಿಜವಾದ ಆರೋಪಿಗಳನ್ನು ಹಿಡಿಯದಿದ್ದರೆ ಸಿಬಿಐನಂತಹ ಉನ್ನತ ತನಿಖಾ ಸಂಸ್ಥೆಯು ಹೇಗೆ ಅನ್ಯಾಯದ ಕೃತ್ಯಗಳನ್ನು ಮಾಡುತ್ತದೆ ಎಂಬುದು ಗಮನಕ್ಕೆ ಬರುತ್ತದೆ. ಡಾ. ಥಡಾನಿ ಅವರು ದೋಷಿಗಳಿಗೆ ಶಿಕ್ಷೆ ಮತ್ತು ನಿರಪರಾಧಿಗಳ ರಕ್ಷಣೆಗಾಗಿ ಪೊಲೀಸ್ ಪಡೆಗಳು ಮತ್ತು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಸುಧಾರಣೆಗಳಿಗಾಗಿ ಬೆಂಬೆತ್ತುವಿಕೆ ಮಾಡಲಾಗುತ್ತಿದೆ.
ಈ ಪ್ರಕರಣದ ೩ ಶಂಕಿತರನ್ನು ನ್ಯಾಯಾಲಯವು ನಿರಪರಾಧಿಗಳೆಂದು ಬಿಡುಗಡೆ ಮಾಡಿದೆ, ಹಾಗೆಯೇ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಯಾವ ೨ ಶಂಕಿತರ ವಿಚಾರಣೆ ನಡೆಯುತ್ತಿದೆಯೋ, ಅವರೂ ಸಹ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಡಾ. ಥಡಾನಿ ಅವರು ಈ ಕುರಿತು ‘ದಿ ರೇಷನಲಿಸ್ಟ್ ಮರ್ಡರ್’ ಎಂಬ ಮರಾಠಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಅವರು ಈ ಪ್ರಕರಣದ ೧೦ ಸಾವಿರ ಪುಟಗಳ ಆರೋಪಪಟ್ಟಿ, ವಿವಿಧ ನ್ಯಾಯಾಲಯದ ಆದೇಶಗಳು, ಸಿಬಿಐನ ಅಜ್ಞಾತ ಮೂಲಗಳ ಆಧಾರದ ಮೇಲೆ ಪತ್ರಿಕೆಗಳು ನೀಡಿದ ನೂರಾರು ಸುಳ್ಳು ವರದಿಗಳು ಮತ್ತು ಅದರಿಂದ ಈ ಪ್ರಕರಣವನ್ನು ದಾರಿ ತಪ್ಪಿಸುವ ಪ್ರಯತ್ನಗಳ ಬಗ್ಗೆ ಕ್ರಮಬದ್ಧ ವಿಶ್ಲೇಷಣೆ ಮಾಡಿದ್ದಾರೆ.
೩. ದರ್ಶನದ ‘ಆನ್ಲೈನ್’ ಮೀಸಲಾತಿಯಲ್ಲಿನ ಭ್ರಷ್ಟಾಚಾರದ ಕಡೆಗೆ ದೇವಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯದ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದು
ಕರೋನಾ ಸಾಂಕ್ರಾಮಿಕದ ಅವಧಿಯಲ್ಲಿ ಮುಂಬಯಿನ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪ್ರವೇಶಕ್ಕೆ ಶುಲ್ಕ ವಿಧಿಸಲಾಗುತ್ತಿತ್ತು. ಆ ಸಮಯದಲ್ಲಿ ಡಾ. ಥಡಾನಿ ಅವರು ದೇವಸ್ಥಾನದ ವಿರುದ್ಧ ಅರ್ಜಿ ಸಲ್ಲಿಸಿ ಈ ತಪ್ಪು ಸಂಪ್ರದಾಯವನ್ನು ನಿಲ್ಲಿಸಿದರು. ಕರೋನಾ ಸಾಂಕ್ರಾಮಿಕದ ಸಮಯದಲ್ಲಿ ಸರಕಾರವು ಈ ದೇವಸ್ಥಾನದಲ್ಲಿ ನೇರ ದರ್ಶನವನ್ನು ನಿಷೇಧಿಸಿತ್ತು ಮತ್ತು ಪ್ರವೇಶಕ್ಕಾಗಿ ಕಂಪ್ಯೂಟರ್ ಆಧಾರಿತ ‘ಆ್ಯಪ್’ನಲ್ಲಿ ನೋಂದಣಿ ಕಡ್ಡಾಯಗೊಳಿಸಿತ್ತು. ಇದರಿಂದ ದೇವಸ್ಥಾನದ ಹೊರಗೆ ನಿಂತಿದ್ದ ದಲ್ಲಾಳಿಗಳು ಈ ‘ಆ್ಯಪ್’ನಲ್ಲಿನ ಬಹುತೇಕ ಸ್ಥಳಗಳನ್ನು ತಡೆಹಿಡಿದಿರುತ್ತಿದ್ದರು. ಆದ್ದರಿಂದ ಸಾಮಾನ್ಯ ಭಕ್ತರು ಹೆಚ್ಚಿನ ಹಣವನ್ನು ನೀಡಿಯೇ ದೇವಸ್ಥಾನದೊಳಗೆ ಪ್ರವೇಶ ಪಡೆಯಬೇಕಾಗಿತ್ತು. ಇದೆಲ್ಲವೂ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿಯ ಕಣ್ಣೆದುರೇ ನಡೆಯುತ್ತಿತ್ತು. ಡಾ. ಥಡಾನಿ ಅವರು ಈ ಕುರಿತು ಅರ್ಜಿ ಸಲ್ಲಿಸಿದರು. ನಂತರ ದೇವಸ್ಥಾನದ ಟ್ರಸ್ಟಿಗಳು ಭಕ್ತರಿಗೆ ನೇರವಾಗಿ ದೇವಸ್ಥಾನದೊಳಗೆ ಪ್ರವೇಶ ನೀಡಲು ಪ್ರಾರಂಭಿಸಿದರು, ಹಾಗೆಯೇ ‘ಆ್ಯಪ್’ ಅನ್ನು ದುರುಪಯೋಗಪಡಿಸಿಕೊಂಡು ಬಹುತೇಕ ಸ್ಥಳಗಳನ್ನು ತಡೆಹಿಡಿಯುವ ದುರಭ್ಯಾಸಕ್ಕೂ ಕಡಿವಾಣ ಹಾಕಿದರು.
Siddhivinayak temple trust has come out with an app for online booking of darshan in Covid times. If you want to visit, prior online booking is mandatory. Of course like all govt controlled temples, there’s a scam going on in online darshan too. Read this thread. 1/n pic.twitter.com/8ZclCqdd4a
— Amit Thadhani (@amitsurg) November 30, 2021
ಡಾ. ಥಡಾನಿ ಅವರು ಭ್ರಷ್ಟಾಚಾರದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿ ಎತ್ತಿದರು. ನಂತರ ಈ ವಿಷಯದ ಬಗ್ಗೆ ವೃತ್ತಪತ್ರಿಕೆಗಳಲ್ಲಿ ೨-೪ ಲೇಖನಗಳೂ ಪ್ರಕಟವಾದವು. ಇದರ ಪರಿಣಾಮವಾಗಿ ದೇವಸ್ಥಾನದ ಆಡಳಿತ ಮಂಡಳಿಯು ದೇವಸ್ಥಾನದ ದರ್ಶನಕ್ಕಾಗಿ ಹೊಸ ಕಾರ್ಯವಿಧಾನವನ್ನು ಜಾರಿಗೆ ತಂದಿತು. ಅದರ ಪ್ರಕಾರ ದರ್ಶನಕ್ಕಾಗಿ ‘ಆನ್ಲೈನ್’ ಮೀಸಲಾತಿ ಕೇವಲ ಒಂದು ದಿನ ಮುಂಚಿತವಾಗಿ ಮಾತ್ರ ಲಭ್ಯವಿರುತ್ತದೆ ಎಂಬ ನಿಯಮವನ್ನು ಮಾಡಲಾಯಿತು.
ಮುಂಬಯಿನ ಶ್ರೀ ಸಿದ್ಧಿವಿನಾಯಕ ಗಣಪತಿ ದೇವಾಲಯ ಸೇರಿದಂತೆ ಸರಕಾರೀಕರಣಗೊಂಡ ದೇವಾಲಯಗಳ ಕುರಿತು ಡಾ. ಅಮಿತ್ ಥಡಾನಿ ಅವರ ಅಭಿಪ್ರಾಯಗಳು!
‘ಪ್ರಭಾದೇವಿಯ ಶ್ರೀ ಸಿದ್ಧಿವಿನಾಯಕ ಗಣಪತಿ ದೇವಾಲಯದ ಟ್ರಸ್ಟಿಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳಿವೆ. ಆದ್ದರಿಂದ ಅವರು ದೇವಾಲಯದ ಆಡಳಿತವನ್ನು ನಿರ್ವಹಿಸಲು ಅಸಮರ್ಥರಾಗಿದ್ದಾರೆ’ ಎಂಬ ಕಾರಣಕ್ಕಾಗಿ ೧೯೮೦ ರಲ್ಲಿ ಮಹಾರಾಷ್ಟ್ರ ಸರಕಾರವು ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಿತು ಮತ್ತು ಅದನ್ನು ಕಾನೂನಾಗಿ ಪರಿವರ್ತಿಸಿ ಈ ದೇವಾಲಯವನ್ನು ಸರಕಾರಿ ನಿಯಂತ್ರಣಕ್ಕೆ ತೆಗೆದುಕೊಂಡಿತು. ನಂತರ ಆ ಟ್ರಸ್ಟ್ಗೆ ‘ಶ್ರೀ ಸಿದ್ಧಿವಿನಾಯಕ ಮಂದಿರ ಟ್ರಸ್ಟ್’ ಎಂದು ಹೆಸರಿಸಲಾಯಿತು. ಕಾನೂನಿನ ಪ್ರಕಾರ ದೇವಾಲಯದ ಪ್ರತಿಯೊಬ್ಬ ಟ್ರಸ್ಟಿಯೂ ಹಿಂದೂ ಆಗಿರಬೇಕು; ಆದರೆ ಅಲ್ಲಿ ಹಾಗೆ ಕಂಡುಬರುವುದಿಲ್ಲ. ದೇವಾಲಯದ ಸಿಬ್ಬಂದಿಗೆ ವೇತನ ಸಿಗುತ್ತದೆ. ಪ್ರತಿಯೊಬ್ಬ ಟ್ರಸ್ಟಿಯೂ ರಾಜಕೀಯ ನಾಯಕನಾಗಿರುತ್ತಾನೆ. ದೇವಾಲಯದ ಹಣವನ್ನು ದೇವಾಲಯದ ಅಭಿವೃದ್ಧಿ, ಪೂಜೆ, ಭೂಮಿ ಮತ್ತು ಆಸ್ತಿ ಖರೀದಿಸಲು ಖರ್ಚು ಮಾಡಬೇಕು. ವಾಸ್ತವವಾಗಿ ಹಾಗೆ ಆಗುತ್ತಿಲ್ಲ. ದೇವಾಲಯದ ಹಣವನ್ನು ಶಾಲೆಗಳು, ಆಸ್ಪತ್ರೆಗಳನ್ನು ನಡೆಸಲು ಮತ್ತು ಮುಜರಾಯಿ ಇಲಾಖೆಗೆ ನೀಡಲಾಗುತ್ತದೆ. ಮಿರಜ್ನ ಸಿದ್ಧಿವಿನಾಯಕ ಕ್ಯಾನ್ಸರ್ ಆಸ್ಪತ್ರೆಗೆ ಇದೇ ದೇವಾಲಯದಿಂದ ಹಣ ನೀಡಲಾಗುತ್ತದೆ. ದೇವಾಲಯದ ಆಡಳಿತದಲ್ಲಿ ಪ್ರತಿ ಹಂತದಲ್ಲೂ ತಪ್ಪುಗಳಿವೆ.
ಶ್ರೀ ಸಿದ್ಧಿವಿನಾಯಕ ದೇವಾಲಯದ ಆರ್ಥಿಕ ವ್ಯವಹಾರಗಳ ಮಾಹಿತಿಯನ್ನು ನಾವು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪಡೆದು ಅಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದೇವೆ. ದೇವಾಲಯದ ಹಣವನ್ನು ಮುಸಲ್ಮಾನರಿಗೂ ನೀಡಲಾಗುತ್ತದೆ. ಯಾರಿಗೆ ಶ್ರದ್ಧೆ ಇಲ್ಲವೋ ಅವರಿಗೆ ಹಣವನ್ನು ಏಕೆ ನೀಡಬೇಕು? ‘ದೇವಾಲಯದ ಟ್ರಸ್ಟಿಗಳಾಗಿ ಕೇವಲ ರಾಜಕೀಯ ನಾಯಕರನ್ನು ಆಯ್ಕೆ ಮಾಡದೆ ಅರ್ಹರಾದ ಗುಣವಂತ ವ್ಯಕ್ತಿಗಳನ್ನು ನೇಮಿಸಬೇಕು, ದೇವಾಲಯವನ್ನು ಸರಕಾರೀಕರಣದಿಂದ ಮುಕ್ತಗೊಳಿಸಿ ಭಕ್ತರ ಸುಪರ್ದಿಗೆ ನೀಡಬೇಕು, ಹಾಗೂ ದೇವಾಲಯಗಳ ನಿಧಿಯನ್ನು ಕೇವಲ ಹಿಂದೂ, ಹಿಂದೂ ಧರ್ಮ ಮತ್ತು ದೇವಾಲಯಗಳಿಗಾಗಿ ಮಾತ್ರ ಬಳಸಬೇಕು’ ಎಂಬುದಕ್ಕಾಗಿ ಹಿಂದುತ್ವನಿಷ್ಠ ಸಂಘಟನೆಗಳೊಂದಿಗೆ ಸಂಘಟಿತವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸಲಾಗುತ್ತಿದೆ.
– ಡಾ. ಅಮಿತ್ ಥಡಾನಿ