ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್‌ನಲ್ಲಿ ೫ ಭಯೋತ್ಪಾದಕರ ಬಂಧನ

ಕರ್ಣಾವತಿ (ಗುಜರಾತ್) – ಗುಜರಾತ್‌ನಲ್ಲಿ ನಡೆಯಲಿರುವ ಭಗವಾನ್ ಜಗನ್ನಾಥರ ಭವ್ಯ ರಥಯಾತ್ರೆಗೆ ಕೇವಲ ೨ ದಿನಗಳು ಬಾಕಿ ಇರುವಾಗ, ಗುಜರಾತ್ ಭಯೋತ್ಪಾದನೆ ನಿಗ್ರಹ ತಂಡವು ಸಿದ್ಧಪುರದಿಂದ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿದ್ದ ೫ ಜನರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದೆ.

ಅವರು ಜೈಶ್-ಎ-ಮೊಹಮ್ಮದ್ ಈ ಭಯೋತ್ಪಾದಕ ಸಂಘಟನೆಗೆ ಸೇರಿದವರೇ ಅಥವಾ ಬೇರೆ ಯಾವುದೇ ಸಂಘಟನೆಗೆ ಸಂಬಂಧಿಸಿದವರೇ?, ಎಂಬುದನ್ನು ಖಚಿತಪಡಿಸಿಕೊಳ್ಳಲು ಆಳವಾದ ತನಿಖೆ ನಡೆಸುತ್ತಿದೆ. ಅವರಲ್ಲದೆ ಬನಾಸ ಕಾಂಠದಲ್ಲಿ ಮತ್ತಿಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ. ೧೬ ಜುಲೈ ದಿನದಂದು ಕರ್ಣಾವತಿ, ಭಾವನಗರ, ವಡೋದರಾ, ಪಟಾಣ್ ಮತ್ತು ರಾಜ್‌ಕೋಟ್ ಸೇರಿದಂತೆ ಹಲವು ನಗರಗಳಲ್ಲಿ ರಥಯಾತ್ರೆ ನಡೆಯಲಿದೆ.

ಸಂಪಾದಕೀಯ ನಿಲುವು

  • ಇಂದಿಗೂ ಭಾರತದಲ್ಲಿ ಹಿಂದೂಗಳ ಧಾರ್ಮಿಕ ಯಾತ್ರೆಗಳು ಜಿಹಾದಿ ಭಯೋತ್ಪಾದಕರ ನೆರಳಿನಲ್ಲಿ ನಡೆಯುತ್ತಿವೆ. ಇದು ಎಲ್ಲಾಪಕ್ಷಗಳ ಸರಕಾರಗಳಿಗೆ ಲಜ್ಞ್ಯಾಸ್ಪದ!
  • ಈ ಭಯೋತ್ಪಾದನೆಯ ಹಿಂದೆ ಭಾರತದಲ್ಲಿನ ಜಿಹಾದಿ ಮಾನಸಿಕತೆಯ ಮುಸ್ಲಿಮರು ಮತ್ತು ಪಾಕಿಸ್ತಾನವಿದೆ, ಎಂಬುದು ವಾಸ್ತವವಾಗಿದ್ದರೂ ಭಾರತ ಅವರ ವಿರುದ್ಧ ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ, ಎಂಬುದನ್ನು ಗಮನಿಸಿ!