ಹಡಪ್ಸರ್‌ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್‌ನಿಂದ ಹಿಂಸಾತ್ಮಕ ಹಲ್ಲೆ!

ಇನ್ನೊಬ್ಬ ವ್ಯಕ್ತಿಗೆ ಗ್ಯಾಂಗ್ ಹಲ್ಲೆ ನಡೆಸುತ್ತಿದ್ದಾಗ ಹಿಂದುತ್ವನಿಷ್ಠ ಕಾರ್ಯಕರ್ತ ವಿಡಿಯೋ ರೆಕಾರ್ಡ್ ಮಾಡಿದ್ದಕ್ಕೆ ಆಕ್ರೋಶ!

ಪುಣೆ – ಹಡಪ್ಸರ್‌ನ ‘೧೫ ನಂಬರ್ ವೃತ್ತ’ದ ಬಳಿ ನಡೆಯುತ್ತಿದ್ದ ಹಲ್ಲೆಯ ಘಟನೆಯೊಂದನ್ನು ವಿಡಿಯೋ ಚಿತ್ರೀಕರಣ ಮಾಡಿದ ಕಾರಣಕ್ಕಾಗಿ, ಹಿಂದುತ್ವನಿಷ್ಠ ಕಾರ್ಯಕರ್ತ ಶ್ರೀ. ನವನಾಥ್ ಲಾಂಡ್ಗೆ ಅವರ ಮೇಲೆ ಸಾಹಿಲ್ ಶೇಖ್ ಮತ್ತು ಆತನ ೮ ರಿಂದ ೧೦ ಸಹಚರರು ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಶ್ರೀ. ಲಾಂಡ್ಗೆ ಅವರ ಮೊಬೈಲ್‌ನಲ್ಲಿದ್ದ ವಿಡಿಯೋವನ್ನು ಬಲವಂತವಾಗಿ ಡಿಲೀಟ್ ಮಾಡಿಸಿದ್ದಾರೆ. ಈ ಘಟನೆಯನ್ನು ಖಂಡಿಸಿ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಹಾಗೂ ಹಿಂದುತ್ವನಿಷ್ಠ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಹಡಪ್ಸರ್ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಮತಾಂಧರ ದರ್ಪ ಎಲ್ಲಿಯವರೆಗೆ ತಲುಪಿದೆ ಎಂಬುದಕ್ಕೆ ಇದು ಸಾಕ್ಷಿ. ಹಲ್ಲೆ ಮಾಡುವುದು, ಅದನ್ನು ಯಾರಾದರೂ ವಿಡಿಯೋ ಮಾಡಿದರೆ ಅವರ ಮೇಲೂ ಹಲ್ಲೆ ನಡೆಸಿ ಸಾಕ್ಷ್ಯವನ್ನು ನಾಶಪಡಿಸಲು ಅನಿವಾರ್ಯಗೊಳಿಸುವುದು ಅತ್ಯಂತ ಉದ್ಧಟತನದ ವರ್ತನೆಯಾಗಿದೆ.