ಕೆಳ ನ್ಯಾಯಾಲಯವು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿದ್ದ ಆರೋಪಿಯನ್ನು ಪಾಟ್ನಾ ಉಚ್ಚ ನ್ಯಾಯಾಲಯದಿಂದ ಖುಲಾಸೆ

ಪಾಟಲಿಪುತ್ರ (ಬಿಹಾರ) – ಮಹಿಳೆಯೊಬ್ಬರ ಪೈಜಾಮಾದೊಳಗೆ ಕೈ ಹಾಕುವುದು ಅಥವಾ ಎದೆಗೆ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯದ (ಅತ್ಯಾಚಾರ) ಕ್ರಿಮಿನಲ್ ಪ್ರಕರಣವಾಗಬಹುದು; ಆದರೆ ಕೇವಲ ಈ ಕೃತ್ಯಗಳ ಆಧಾರದ ಮೇಲೆ ಅತ್ಯಾಚಾರದ ಪ್ರಯತ್ನದ ಅಪರಾಧ ಸಾಬೀತಾಗುವುದಿಲ್ಲ ಎಂದು ಪಾಟ್ನಾ ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ವಿಶೇಷವೆಂದರೆ, ಕೆಳ ನ್ಯಾಯಾಲಯವು ಆರೋಪಿಯನ್ನು ತಪ್ಪು ಕಾಯ್ದೆಯಡಿ ದೋಷಿ ಎಂದು ಘೋಷಿಸಿದೆ ಎಂದು ಹೇಳುತ್ತಾ, ಉಚ್ಚ ನ್ಯಾಯಾಲಯವು ತಾಂತ್ರಿಕ ಕಾರಣಗಳಿಂದಾಗಿ ಆತನನ್ನು ಈ ಪ್ರಕರಣದಿಂದ ಸಂಪೂರ್ಣವಾಗಿ ಖುಲಾಸೆಗೊಳಿಸಿದೆ.
ಪ್ರಕರಣವೇನು ?
ಬಿಹಾರದ ಅಮರಪುರ ಪ್ರದೇಶದಲ್ಲಿ 2008 ರಲ್ಲಿ ಸಂತ್ರಸ್ತ ಯುವತಿಯು ತನ್ನ ತಂದೆಯೊಂದಿಗೆ ಫೋಟೋ ಸ್ಟುಡಿಯೋಗೆ ಹೋಗಿದ್ದಳು. ಫೋಟೋ ತೆಗೆದ ನಂತರ, ಸ್ಟುಡಿಯೋ ಮಾಲೀಕನು ಯುವತಿಯ ತಂದೆಗೆ ಕಂಪ್ಯೂಟರ್ನಲ್ಲಿ ಫೋಟೋಗಳನ್ನು ತೋರಿಸುವ ನೆಪದಲ್ಲಿ ಹೊರಗೆ ನಿಲ್ಲಲು ಹೇಳಿದನು. ನಂತರ ಅವನು ಸ್ಟುಡಿಯೋದ ಬಾಗಿಲನ್ನು ಒಳಗಿನಿಂದ ಮುಚ್ಚಿ, ಯುವತಿಯ ಸಲ್ವಾರ್ ಬಿಚ್ಚಲು ಮತ್ತು ಆಕೆಯ ಎದೆಯನ್ನು ಒತ್ತಿ ಆಕೆಯ ಮೇಲೆ ದೌರ್ಜನ್ಯ ಎಸಗಲು ಪ್ರಯತ್ನಿಸಿದನು. ಯುವತಿ ಕಿರುಚಿದ ನಂತರ, ಆಕೆಯ ತಂದೆ ಬಾಗಿಲಿನ ಕಡೆಗೆ ಓಡಿದರು. ನಂತರ ಆರೋಪಿ ಅಲ್ಲಿಂದ ಪರಾರಿಯಾದನು. ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯವು ಆರೋಪಿಯನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಆರೋಪಿಯು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದನು.
ಆರೋಪಿಯು ಯುವತಿಯನ್ನು ಬಂಧಿಸಿಟ್ಟಿದ್ದನು ಮತ್ತು ದುರ್ವರ್ತನೆ ಮಾಡಿದ್ದನು ಎಂಬುದು ನಿಜವಾಗಿದ್ದರೂ, ನೇರವಾಗಿ ದೈಹಿಕ ಸಂಬಂಧ ಬೆಳೆಸಲು ಪ್ರಯತ್ನಿಸಿದ ಅಥವಾ ಅಂತಹ ನೇರ ಪ್ರಯತ್ನ ಮಾಡಿದ ಯಾವುದೇ ಸ್ಪಷ್ಟ ಪುರಾವೆಗಳು ಲಭ್ಯವಿಲ್ಲ ಎಂದು ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದ್ದರಿಂದ ಈ ಪ್ರಕರಣದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಅಪರಾಧ ಅನ್ವಯಿಸುವುದಿಲ್ಲ.
ತಾಂತ್ರಿಕ ಕಾರಣದಿಂದ ಆರೋಪಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಯಿಲ್ಲ!
ಉಚ್ಚ ನ್ಯಾಯಾಲಯವು ಆರೋಪಿಯ ಕೃತ್ಯವು ಲೈಂಗಿಕ ದೌರ್ಜನ್ಯ (ಅತ್ಯಾಚಾರ) ಎಂದು ಒಪ್ಪಿಕೊಂಡರೂ, ಆತನಿಗೆ ಶಿಕ್ಷೆಯಾಗಲಿಲ್ಲ; ಏಕೆಂದರೆ ಕೆಳ ನ್ಯಾಯಾಲಯದಲ್ಲಿ ಆರೋಪಿಯ ಮೇಲೆ ಸೆಕ್ಷನ್ 354 (ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಾಗಿರಲಿಲ್ಲ. ಆತನ ವಿರುದ್ಧ ಕೇವಲ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದ ವಿಚಾರಣೆ ನಡೆದಿತ್ತು. ಸರ್ಕಾರಿ ಪಕ್ಷವು ಅತ್ಯಾಚಾರಕ್ಕೆ ಯತ್ನಿಸಿದ ಅಪರಾಧವನ್ನು ಸಾಬೀತುಪಡಿಸುವಲ್ಲಿ ವಿಫಲವಾದ ಕಾರಣ, ಉಚ್ಚ ನ್ಯಾಯಾಲಯವು ಕೆಳ ನ್ಯಾಯಾಲಯದ ಶಿಕ್ಷೆಯನ್ನು ರದ್ದುಗೊಳಿಸಿತು. ಕಾನೂನಿನ ತಾಂತ್ರಿಕ ಚೌಕಟ್ಟಿನ ಕಾರಣದಿಂದಾಗಿ, ನ್ಯಾಯಾಲಯವು ಆರೋಪಿಯನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸುವಂತೆ ಆದೇಶಿಸಿತು ಮತ್ತು ಆತ ಪಾವತಿಸಿದ ದಂಡವನ್ನು ಹಿಂತಿರುಗಿಸುವಂತೆಯೂ ನಿರ್ದೇಶಿಸಿತು.
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ