ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University

ರಾಜ್ಯವನ್ನು ‘ಎಐ-ನೇಟಿವ್’ ರಾಜ್ಯವನ್ನಾಗಿ ಮಾಡಲು ಮುಖ್ಯಮಂತ್ರಿ ಶಿವಕುಮಾರ ಸಂಕಲ್ಪ !

(ಎಐ ಎಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಅಂದರೆ ಕೃತಕ ಬುದ್ಧಿಮತ್ತೆ. ಎಐ-ನೇಟಿವ್ ಎಂದರೆ ಕೃತಕ ಬುದ್ಧಿಮತ್ತೆ ಆಧಾರಿತ ನಿರ್ಮಾಣದ ಕೇಂದ್ರ)

ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು – ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಗೂಗಲ್ ಐ/ಒ ಕನೆಕ್ಟ್ ಇಂಡಿಯಾ ೨೦೨೬’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇಶದ ಮೊದಲ ಸರಕಾರಿ ‘ಎಐ’ ವಿಶ್ವವಿದ್ಯಾಲಯವನ್ನು ಆರಂಭಿಸುವುದಾಗಿ ಘೋಷಿಸಿದರು.

ಈ ಉಪಕ್ರಮದ ಪ್ರಮುಖ ಉದ್ದೇಶಗಳು ಈ ಕೆಳಗಿನಂತಿವೆ :

. ರಾಜ್ಯದ ಅಭಿವೃದ್ಧಿ : ರಾಜ್ಯವನ್ನು ‘ಎಐ-ನೇಟಿವ್’ ರಾಜ್ಯವನ್ನಾಗಿ ಮಾಡುವುದು. ರಾಜ್ಯದ ಆಡಳಿತ, ಶಿಕ್ಷಣ, ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ‘ಎಐ’ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯನ್ನು ಮಾಡುವ ಮೂಲಕ ಸೇವೆಗಳನ್ನು ಸುಧಾರಿಸುವುದು.

. ಸಂಚಾರ ದಟ್ಟಣೆಗೆ ಪರಿಹಾರ: ಬೆಂಗಳೂರಿನ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಉಂಟಾಗುವ ಸಂಚಾರ ದಟ್ಟಣೆಯ ಸಮಸ್ಯೆಗೆ ‘ಎಐ’ ತಂತ್ರಜ್ಞಾನದ ಸಹಾಯದಿಂದ ದೃಢವಾದ ಪರಿಹಾರವನ್ನು ಕಂಡುಕೊಳ್ಳುವುದು.

. ತಂತ್ರಜ್ಞಾನ ಕೇಂದ್ರ : ‘ಎಐ’ ನ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಂಶೋಧನೆ, ‘ಡೇಟಾ ಸೆಂಟರ್ಸ್’ ಮತ್ತು ‘ಕ್ಲೌಡ್ ಕಂಪ್ಯೂಟಿಂಗ್’ (ಅಂತರ್ಜಾಲದ ಮೂಲಕ ಕಂಪ್ಯೂಟರ್ ಸೇವೆಗಳು (ಉದಾ. ಡೇಟಾ ಸ್ಟೋರೇಜ್, ಸರ್ವರ್‌ ಗಳು, ಡೇಟಾಬೇಸ್, ನೆಟ್‌ ವರ್ಕಿಂಗ್, ಸಾಫ್ಟವೇರ್ ಇತ್ಯಾದಿ) ನಂತಹ ಮೂಲಸೌಕರ್ಯಗಳನ್ನು ವಿಸ್ತರಿಸುವ ಮೂಲಕ ರಾಜ್ಯವನ್ನು ಜಾಗತಿಕ ಮಟ್ಟದಲ್ಲಿ ಒಂದು ಬಲಿಷ್ಠ ತಂತ್ರಜ್ಞಾನ ಹಬ್ (ಕೇಂದ್ರ) ಆಗಿ ಅಭಿವೃದ್ಧಿಪಡಿಸುವುದು.

. ಸಹಯೋಗ: ಶೈಕ್ಷಣಿಕ ಸಂಸ್ಥೆಗಳು, ಉದ್ಯಮಗಳು ಮತ್ತು ಸರಕಾರದ ನಡುವಿನ ಸಮನ್ವಯದ ಮೂಲಕ ಹೊಸ ಪೀಳಿಗೆಯ ‘ಎಐ’ ಪ್ರತಿಭೆಗಳನ್ನು ಅಭಿವೃದ್ಧಿಪಡಿಸುವುದು ಸರಕಾರದ ಧ್ಯೇಯವಾಗಿದೆ.