ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮವನ್ನು ಕಲಿಸದಿರುವುದರ ದುಷ್ಪರಿಣಾಮ ಇದುವರೆಗಿನ ೭೨ ವರ್ಷಗಳ ಆಡಳಿತಗಾರರು ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮವನ್ನು ಕಲಿಸದಿರುವುದರಿಂದ ಮಕ್ಕಳಿಗೆ ಹಿಂದೂ ಧರ್ಮದ ಮಹತ್ವವು ತಿಳಿದಿಲ್ಲ. ಅದುದರಿಂದ ಅವರಿಗೆ ಧರ್ಮದ ಅಭಿಮಾನವು ತಿಳಿದಿಲ್ಲ. ತದ್ವಿರುದ್ಧ ಮುಸಲ್ಮಾನರಿಗೆ ಧರ್ಮಾಭಿಮಾನವಿರುವುದರಿಂದ ಜಗತ್ತಿನೆಲ್ಲೆಡೆ ಅವರ ಪ್ರಭಾವವಿದೆ.

ಜ್ಞಾನವಾಪಿ ಕಾಶಿ ವಿಶ್ವನಾಥ ಮಂದಿರವನ್ನು ಪುನಃ ಕಟ್ಟಲೇ ಬೇಕು ! – ಡಾ. ಸುಬ್ರಮಣಿಯಮ್ ಸ್ವಾಮಿ, ಭಾಜಪ ಸಂಸದರು, ರಾಜ್ಯಸಭೆ

೧೬೬೯ ರಲ್ಲಿ ಔರಂಗಜೇಬನ ಆದೇಶದಂತೆ ಜ್ಞಾನವಾಪಿ ಕಾಶಿ ವಿಶ್ವನಾಥ ಮಂದಿರವನ್ನು ಪುನಃ ನಾಶ ಮಾಡಲಾಯಿತು ಮತ್ತು ಅದನ್ನು ಮೊದಲಿನಂತೆ ಕಟ್ಟಲು ಆಗಬಾರದೆಂದು ಆ ಸ್ಥಳದಲ್ಲಿ ಇಂದು ಇರುವ ‘ಜ್ಞಾನವಾಪಿ ಮಸೀದಿಯನ್ನು ಕಟ್ಟಲಾಯಿತು. ಸಯ್ಯದ ಶಹಾಬುದ್ದೀನನ ಅಭಿಪ್ರಾಯದಂತೆ ‘ಇತರರ ಧಾರ್ಮಿಕ ಸ್ಥಳಗಳನ್ನು ಬಲವಂತದಿಂದ ವಶಪಡಿಸಿಕೊಂಡು ಅಲ್ಲಿ ಮಸೀದಿಯನ್ನು ಕಟ್ಟುವುದು, ಹದೀಸ್‌ನಲ್ಲಿ ಹೇಳಿರುವ ಇಸ್ಲಾಮಿಕ್ ಕಾನೂನಿನ ಉಲ್ಲಂಘನೆಯಾಗಿದೆ.

ಚೀನಾದ ಶಿನ್‌ಜಿಯಾಂಗ್‌ನಲ್ಲಿ ಮುಸಲ್ಮಾನರ ಮೇಲಾಗುತ್ತಿರುವ ದೌರ್ಜನ್ಯಗಳು !

ಚೀನಾದಲ್ಲಿ ಟಿಬೇಟಿಯನ್ನರ ಸ್ಥಿತಿ ಉಯಿಘರ್ ಮುಸಲ್ಮಾನರಂತೆಯೇ ಇದೆ. ಟಿಬೇಟಿಯನ್ನರು ಅತ್ಯಂತ ಶಾಂತ ಮತ್ತು ಸಹಿಷ್ಣುಗಳಾಗಿದ್ದಾರೆ; ಆದರೆ ಚೀನಾ ಅವರ ಮೇಲೆ ಅಪಾರ ಪ್ರಮಾಣದಲ್ಲಿ ದೌರ್ಜನ್ಯವೆಸಗುತ್ತದೆ. ಟಿಬೇಟಿಯನ್ನರ ಮಠಗಳನ್ನು ನೆಲಸಮಗೊಳಿಸಲಾಗಿದೆ. ದೊಡ್ಡ ಮಠಗಳ ಸ್ಥಳದಲ್ಲಿ ‘ಶಾಪಿಂಗ್ ಮಾಲ್ಗಳನ್ನು ಕಟ್ಟಲಾಗಿದೆ. ಅಲ್ಲಿ ಪ್ರವಾಸೀತಾಣಗಳನ್ನು ವಿಕಸಿತಗೊಳಿಸಲಾಗಿದೆ. ಆದ್ದರಿಂದ ಈ ಪರಿಸರದಲ್ಲಿ ಪಾವಿತ್ರ್ಯವು ಸಂಪೂರ್ಣ ನಾಶವಾಗಿದೆ.

ಶ್ರೀ ಗುರುನಾನಕರ ಜಯಂತಿ ನಿಮಿತ್ತ (ನವೆಂಬರ್ ೩೦)

ಗುರುನಾನಕರು ಸಿಕ್ಖ್ ಪಂಥದ ಸ್ಥಾಪಕರಾಗಿದ್ದಾರೆ. ನಮ್ಮ ಶರೀರವು ಒಂದು ಸುಂದರವಾದ ಹೊಲ. ನಮ್ಮ ಮನಸ್ಸು ರೈತ. ಈಶ್ವರನ ನಾಮವೆಂಬ ಬೀಜವನ್ನು ಈ ಹೊಲದಲ್ಲಿ ಬಿತ್ತಬೇಕು. ಪ್ರೇಮದಿಂದಲೇ ಈ ಬೀಜಗಳು ಮೊಳಕೆಯೊಡೆಯುತ್ತವೆ, ಅರಳುತ್ತವೆ ಹಾಗೂ ಫಲ ನೀಡುತ್ತವೆ. ನನ್ನ ಹೊಲದಿಂದ ನಾನು ಈ ರೀತಿಯಲ್ಲಿ ನನ್ನ ಕುಟುಂಬಕ್ಕೆ ಸಾಕಷ್ಟು ಆದಾಯ ದೊರಕುವಷ್ಟು ಫಸಲು ತೆಗೆಯುತ್ತೇನೆ’ ಇವು ಗುರುನಾನಕರ ಬೋಧನೆಯಾಗಿದೆ.

ಹಿಂದೂ ಸಂಘಟನೆ ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ ಇವುಗಳಿಗಾಗಿ ಹಿಂದೂ ಜನಜಾಗೃತಿ ಸಮಿತಿ

ಈಗಿನ ಪರಿಸ್ಥಿತಿ ನೋಡಿದರೆ ಹಿಂದೂ ಯುವಕ-ಯುವತಿಯರು ಪಾಶ್ಚಾತ್ಯ ಅಂಧಾನುಕರಣೆಯಿಂದ ಹಿಂದೂ ಧರ್ಮದಿಂದ ದೂರ ಹೋಗುತ್ತಿದ್ದಾರೆ. ಇದರಿಂದಾಗಿ ಲವ್ ಜಿಹಾದ್ ಮತ್ತು ಬೌದ್ಧಿಕವಾಗಿ ಮತಾಂತರ ಆಗುತ್ತಿರುವುದು ಗಮನಕ್ಕೆ ಬರುತ್ತಿದೆ. ಪ್ರತ್ಯಕ್ಷದಲ್ಲಿ ಭಾರತದ ಇತಿಹಾಸವನ್ನು ನೋಡಿದಾಗ ನಮಗೆ ತಿಳಿಯುವುದೇನೆಂದರೆ ಹಿಂದೂ ಧರ್ಮದ ಆಚರಣೆ ಮಾಡುವಂತಹ ಮಹಾಪರಾಕ್ರಮಿ ರಾಜರ ರಕ್ತದ ಕಣಕಣದಲ್ಲಿ ಶೌರ್ಯ ತುಂಬಿತ್ತು.

ಸಾಧಕರು, ವಾಚಕರು, ಹಿತಚಿಂತಕರು ಹಾಗೂ ಸಂಶೋಧಕರಲ್ಲಿ ಸವಿನಯ ವಿನಂತಿ !

ಮಹಾಭೀಕರ ಆಪತ್ಕಾಲವು ಶೀಘ್ರದಲ್ಲಿಯೇ ಆರಂಭವಾಗಲಿದೆ. ಅದಕ್ಕಿಂತ ಮೊದಲೇ ಅನೇಕ ವಿಷಯಗಳ ಮೇಲೆ ಸಂಶೋಧನೆ ಮಾಡಿ ಈ ಜ್ಞಾನಭಂಡಾರವನ್ನು ಅಖಿಲ ಮನುಕುಲಕ್ಕೆ ತಲುಪಿಸಬೇಕಿದೆ. ಆದ್ದರಿಂದ ಗೋವಾದ ರಾಮನಾಥಿ ಆಶ್ರಮದಲ್ಲಿ ವಿವಿಧ ಸೇವೆಗಳಿಗಾಗಿ ತುರ್ತಾಗಿ ಮನುಷ್ಯಬಲದ ಅಗತ್ಯವಿದೆ. ತಾವು ತಮ್ಮ ಇಷ್ಟ ಹಾಗೂ ಕೌಶಲ್ಯಕ್ಕನುಸಾರ ಈ ಮುಂದಿನ ಯಾವುದಾದರೂ ಸೇವೆಯನ್ನು ಕಲಿಯಬಹುದು.

ಪಾಕಿಸ್ತಾನವನ್ನು ನಾಶ ಮಾಡಿದಾಗಲೇ ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗುತ್ತದೆ !

ನವೆಂಬರ್ ೧೯ ರ ಬೆಳಗ್ಗೆ ನಾಗರೋಟದ (ಜಮ್ಮು-ಕಾಶ್ಮೀರ) ಬಾನ್ ಟೋಲ್ ನಾಕಾದಲ್ಲಿ ಭಯೋತ್ಪಾದಕರು ಟ್ರಕ್‌ನಿಂದ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ೩ ಗಂಟೆಗಳ ಕಾಲ ನಡೆದ ಚಕಮಕಿಯಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ.

ಮಂಗಳೂರಿನಲ್ಲಿ ಲಷ್ಕರ್-ಎ-ತೋಯಬಾ ಮತ್ತು ತಾಲಿಬಾನ್ ಬೆಂಬಲವಾಗಿ ಮತ್ತೊಂದು ಗೋಡೆಯ ಮೇಲೆ ಬರವಣಿಗೆ

ಮುಂಬಯಿ ಮೇಲೆ ೨೬/೧೧ ಜಿಹಾದಿ ಭಯೋತ್ಪಾದಕ ದಾಳಿಯ ೧೨ ನೇ ವರ್ಷ ಪೂರ್ಣವಾದ ನಿಮಿತ್ತ ಇಲ್ಲಿ ಗೋಡೆಯ ಮೇಲೆ ಪ್ರಚೋದನಕಾರಿ ಬರಹ ಬರೆಯಲಾಗಿತ್ತು. ನಂತರ ಪೊಲೀಸರು ಅದನ್ನು ಅಳಿಸಿಹಾಕಿ ಅಜ್ಞಾತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈಗ ಮತ್ತೊಂದು ಸ್ಥಳದಲ್ಲಿ ಅದೇ ರೀತಿಯ ಬರವಣಿಗೆ ಬರೆದಿರುವುದು ಬೆಳಕಿಗೆ ಬಂದಿದೆ.

ಬರೇಲಿಯಲ್ಲಿ ಲವ್ ಜಿಹಾದ್ ವಿರೋಧಿ ಮೊದಲನೇಯ ಅಪರಾದ ದಾಖಲು

ಉತ್ತರಪ್ರದೇಶ ಸರಕಾರ ಲವ್ ಜಿಹಾದ್ ವಿರೋಧಿ ಕಾನೂನನ್ನು ಜಾರಿಗೆ ತಂದ ನಂತರ ಮೊದಲ ಪ್ರಕರಣ ಬರೇಲಿಯಲ್ಲಿ ದಾಖಲಿಸಲಾಗಿದೆ. ಹಿಂದೂ ಹುಡುಗಿಯೊಬ್ಬಳನ್ನು ಮದುವೆಗಾಗಿ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಕ್ಕಾಗಿ ಮುಸ್ಲಿಂ ಯುವಕನ ವಿರುದ್ಧ ಹುಡುಗಿಯ ತಂದೆ ದೂರು ನೀಡಿದ ನಂತರ ಈ ಅಪರಾಧವನ್ನು ದಾಖಲಿಸಲಾಗಿದೆ.

‘ನಿಮ್ಮ ಪೀಳಿಗೆ ಕೊನೆಗೊಳ್ಳಬಹುದು; ಆದರೆ ಹೈದರಾಬಾದ್ ಎಂದಿಗೂ ಭಾಗ್ಯನಗರ ಆಗುವುದಿಲ್ಲ !’- ಅಸದುದ್ದೀನ್ ಒವೈಸಿ

ನಿಮ್ಮ ಇಡೀ ಪೀಳಿಗೆ ಮುಗಿಯಬಹುದು; ಆದರೆ ನಗರದ ಹೆಸರು ಹೈದರಾಬಾದ್ ಆಗಿ ಉಳಿಯುತ್ತದೆ. ಚುನಾವಣೆ ಹೈದರಾಬಾದ್ ಮತ್ತು ಭಾಗ್ಯನಗರಗಳ ನಡುವೆ ಇದೆ. ಹೈದರಾಬಾದ್ ಹೆಸರನ್ನು ಬದಲಾಯಿಸಬಾರದು ಎಂದು ನೀಮಗೆ ಅನಿಸುತ್ತಿದ್ದರೆ, ನೀವು ಎಂ.ಐ.ಎಂ.ಗೆ ಮತ ಚಲಾಯಿಸಿ, ಎಂದು ಎಂ.ಐ.ಎಂನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಒವೈಸಿ ಕರೆ ನೀಡಿದ್ದಾರೆ.