'ಪವಿತ್ರ ನೀರು' ಕುಡಿದರೆ ರೋಗ ಗುಣವಾಗುತ್ತದೆ ಎಂದು ದಾವೆ!
ಜನರ ವಂಚನೆ ಮತ್ತು ದಾರಿ ತಪ್ಪಿಸುವವರನ್ನು ಸರಕಾರ ಕಾರಾಗೃಹಕ್ಕೆ ತಳ್ಳುವುದು ಅವಶ್ಯಕ!

ಪುಣೆ – ಪವಿತ್ರ ನೀರು ಕುಡಿದರೆ ಕ್ಯಾನ್ಸರ್, ಟ್ಯೂಮರ್ನಂತಹ ಅಸಾಧ್ಯ ಕಾಯಿಲೆಗಳು ಗುಣವಾಗುತ್ತವೆ ಎಂದು ಹೇಳಿಕೊಳ್ಳುತ್ತಿದ್ದ ಪಾಸ್ಟರ್ (ಕ್ರಿಶ್ಚಿಯನ್ ಧರ್ಮಪ್ರಚಾರಕ) ಕೆನೆತ್ ಪಾಲ್ ಸಿಲ್ವೆ ಅವರೂ ಸೇರಿದಂತೆ 8 ಜನರ ವಿರುದ್ಧ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಮೂಢನಂಬಿಕೆ ನಿರ್ಮೂಲನಾ ಸಮಿತಿಯ ಕಾರ್ಯಕರ್ತೆಯಾದ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
1. ಕ್ರಿಶ್ಚಿಯನ್ ಧರ್ಮಗುರು ಕೊಂಡ್ವಾದ ಪ್ರಾರ್ಥನಾ ಮಂದಿರಕ್ಕೆ ಬಂದಿದ್ದರು. ದೂರು ನೀಡಿದ ಮಹಿಳೆ ತನ್ನ ಸ್ನೇಹಿತೆಯೊಂದಿಗೆ ಅಲ್ಲಿ ಹಾಜರಿದ್ದರು. ಅಲ್ಲಿನ ಸ್ವಯಂಸೇವಕರು ತಲಾ 20 ರೂಪಾಯಿ ಪಡೆದು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ನೀಡಿದರು.
2. ‘ಯಾವುದೇ ಕಾಯಿಲೆ ಇದ್ದರೂ, ಆ ಭಾಗಕ್ಕೆ ಈ ನೀರನ್ನು ಹಚ್ಚಿ. ಇದರಿಂದ ಕಾಯಿಲೆ ಕಡಿಮೆಯಾಗುತ್ತದೆ’ ಎಂದು ಅವರು ಹೇಳಿದರು.
3. ಧರ್ಮಗುರುಗಳು, ‘ಶರೀರದ ಯಾವ ಭಾಗದಲ್ಲಿ ಕಾಯಿಲೆ ಇದೆಯೋ, ಆ ಭಾಗದ ಮೇಲೆ ಬಲಗೈಯನ್ನು ಇರಿಸಿ. ಕ್ಯಾನ್ಸರ್, ಟ್ಯೂಮರ್ ಸೇರಿದಂತೆ ಯಾವುದೇ ಕಾಯಿಲೆಯಿಂದ ದೇವರು ನಿಮ್ಮನ್ನು ಗುಣಪಡಿಸುತ್ತಾನೆ’ ಎಂದು ಹೇಳಿದರು.
4. ದೂರು ನೀಡಿದ ಮಹಿಳೆ ಮತ್ತು ಆಕೆಯ ಸ್ನೇಹಿತೆ ಇದರ ವಿಡಿಯೋವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದರು. ಆಗ ಅಲ್ಲಿನ ಮಹಿಳಾ ಸ್ವಯಂಸೇವಕರು ಚಿತ್ರೀಕರಿಸದಂತೆ ತಡೆದರು. ಅವರಿಗೆ ತಳ್ಳಾಟ ನಡೆಸಿ ಮೊಬೈಲ್ನಲ್ಲಿದ್ದ ವಿಡಿಯೋವನ್ನು ಅಳಿಸಿ ಹಾಕಿದರು. ಪೊಲೀಸರು ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ‘ಮಹಾರಾಷ್ಟ್ರ ನರಬಲಿ ಮತ್ತು ಇತರ ಅಮಾನವೀಯ, ಅನಿಷ್ಟ ಮತ್ತು ಅಘೋರಿ ಪದ್ಧತಿ ಮತ್ತು ಮಂತ್ರವಾದ ನಿಷೇಧ ಕಾಯ್ದೆ’ ಸೇರಿದಂತೆ ಇತರ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ
ಅಶ್ಲೀಲತೆ ಹರಡುವ ‘ಸ್ಟ್ಯಾಂಡ್-ಅಪ್ ಕಾಮಿಡಿ’ ಕಾರ್ಯಕ್ರಮಗಳಿಗೆ ಸೆನ್ಸಾರ್ ಮಂಡಳಿಯ ಪೂರ್ವಾನ್ಮತಿ ಕಡ್ಡಾಯಗೊಳಿಸಿ!