ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed

ಆಗಸ್ಟ್ 15 ರ ಮೊದಲು ದೊಡ್ಡ ರಕ್ತಪಾತ ನಡೆಸಲು ಸಂಚು ರೂಪಿಸಿದ್ದನು

ರುದ್ರಪುರ (ಉತ್ತರಾಖಂಡ) – ರಾಜ್ಯದ ಉಧಮಸಿಂಗ್ ನಗರದಿಂದ ಇಶಾನ್‌ಪ್ರೀತ್ ಸಿಂಗ್ ಎಂಬ ಖಲಿಸ್ತಾನಿ ಉಗ್ರನನ್ನು ಭಯೋತ್ಪಾದನಾ ವಿರೋಧಿ ದಳ ಬಂಧಿಸಿದೆ. ಆತನಿಂದ 3 ಜಿಗಾನಾ (ಸೆಮಿ-ಆಟೋಮ್ಯಾಟಿಕ್) ಪಿಸ್ತೂಲ್‌ಗಳು, 3 ಬೆರೆಟ್ಟಾ (ದುಬಾರಿ ಮತ್ತು ಉನ್ನತ ತಂತ್ರಜ್ಞಾನದ) ಪಿಸ್ತೂಲ್‌ಗಳು, 6 ಚೀನೀ ಪಿಸ್ತೂಲ್‌ಗಳು, 20 ಮ್ಯಾಗಜೀನ್‌ಗಳು ಮತ್ತು ಸುಮಾರು 900 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಅವನು ಅಮೃತಸರದ ನಿವಾಸಿಯಾಗಿದ್ದಾನೆ.

ಇಶಾನ್‌ಪ್ರೀತ್ ಸಿಂಗ್‌ಗೆ ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಿಂದ ಡ್ರೋನ್ ಮೂಲಕ ಪಂಜಾಬ್ ಗಡಿಗೆ ತಲುಪಿಸಲಾಗಿತ್ತು. (ಪಾಕಿಸ್ತಾನವು ಭಾರತದ ವಿರುದ್ಧ ಕಿತಾಪತಿಗಳನ್ನು ಮುಂದುವರಿಸುತ್ತಿರುವಾಗ, ಭಾರತವು ‘ಆಪರೇಷನ್ ಸಿಂಧೂರ್-2’ ನಡೆಸಲು ಯಾವ ಘಟನೆಗಾಗಿ ಕಾಯುತ್ತಿದೆ? – ಸಂಪಾದಕರು) ಅವನು ಆಗಸ್ಟ್ 15 ರ ಮೊದಲು ಯಾವುದೇ ದೊಡ್ಡ ರಕ್ತಪಾತವನ್ನು ಉಂಟುಮಾಡಲು ಸಿದ್ಧತೆಯಲ್ಲಿದ್ದನು. ಅವನ ಸಹಚರರು ಪ್ರಸ್ತುತ ಪಂಜಾಬ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಸಕ್ರಿಯರಾಗಿದ್ದಾರೆ.