
ಮುಂಬಯಿ – ಉದ್ಧವ ಬಾಳಾಸಾಹೇಬ ಠಾಕ್ರೆ ಪಕ್ಷದ 9 ರಲ್ಲಿ 6 ಸಂಸದರು ಬಂಡಾಯವೆದ್ದಿದ್ದಾರೆ. ಓಂರಾಜೇ ನಿಂಬಾಳ್ಕರ್, ಸಂಜಯ ದಿನಾ ಪಾಟೀಲ್, ಸಂಜಯ ದೇಶಮುಖ, ನಾಗೇಶ ಆಷ್ಟಿಕರ್, ಸಂಜಯ ಜಾಧವ್ ಮತ್ತು ಭೌಸಾಹೇಬ್ ವಾಕ್ಚೌರೆ ಅವರ ಹೆಸರುಗಳು. ಬಂಡಾಯವೆದ್ದ ಸಂಸದರು ಶಿವಸೇನೆಯಲ್ಲಿ ಸೇರುವ ಸಾಧ್ಯತೆಯಿದೆ. ಜೂನ್ 16 ರ ಮಧ್ಯರಾತ್ರಿ ಉಪಮುಖ್ಯಮಂತ್ರಿ ಏಕನಾಥ ಶಿಂದೆ ದೆಹಲಿಗೆ ತಲುಪಿದ್ದರು. ರಾಜಾಭಾವ ವಾಜೆ, ಅರವಿಂದ ಸಾವಂತ ಮತ್ತು ಅನಿಲ್ ದೇಸಾಯಿ ಎಂಬ 3 ಸಂಸದರು ಇನ್ನೂ ಠಾಕ್ರೆ ಬಣದಲ್ಲಿದ್ದಾರೆ.
ಉದ್ಧವ ಠಾಕ್ರೆ ಅವರಿಂದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಠಾಕ್ರೆ ಬಣದಿಂದ ಬಂಡಾಯವೆದ್ದ ಸಂಸದರು ಪ್ರತಿಕ್ರಿಯಿಸಿದ್ದಾರೆ. ಸಂಸದರು ಬಂಡಾಯವೆದ್ದ ನಂತರ ಶಿವಸೇನೆಯ ನಾಯಕ ಸಂಜಯ ರಾವತ ಪತ್ರಿಕಾಗೋಷ್ಠಿ ನಡೆಸಿ ಬಂಡಾಯವೆದ್ದ ಸಂಸದರು ಮತ್ತು ಏಕನಾಥ ಶಿಂದೆ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.
ಬಂಡಾಯವೆದ್ದ ಸಂಸದರು ಜೂನ್ 16 ರಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪ್ರತ್ಯೇಕ ಗುಂಪನ್ನು ರಚಿಸಲು ಪತ್ರ ನೀಡಿದ್ದರು. ಜೂನ್ 17 ರಂದು ಲೋಕಸಭೆಯ ಸ್ಪೀಕರ್ ಅದಕ್ಕೆ ಅನುಮೋದನೆ ನೀಡಿದರು. ಠಾಕ್ರೆ ಬಣದಿಂದ ಹೊರಬಂದ ಸಂಸದರು ಯಾವ ಪಕ್ಷದಲ್ಲಿ ಸೇರುತ್ತಾರೆ ಎಂಬುದರ ಕುರಿತು ಇನ್ನೂ ಯಾವುದೇ ನಿಲುವು ಘೋಷಿಸಿಲ್ಲ. ಜೂನ್ 19 ರಂದು ಶಿವಸೇನೆಯ ಸಂಸ್ಥಾಪನಾ ದಿನವಿದೆ. ಅಂದು ಈ ಸಂಸದರು ಶಿವಸೇನೆಯಲ್ಲಿ ಸೇರುವ ಸಾಧ್ಯತೆಯಿದೆ.
ಠಾಕ್ರೆ ಬಣದ ಸಂಸದರು ಲೋಕಸಭೆಯ ಸ್ಪೀಕರ್ ಅವರನ್ನು ಭೇಟಿಯಾದರು!

ಜೂನ್ 17 ರಂದು ಠಾಕ್ರೆ ಬಣದ ಸಂಸದ ಅನಿಲ್ ದೇಸಾಯಿ, ರಾಜಾಭಾವು ವಾಜೆ ಮತ್ತು ಅರವಿಂದ ಸಾವಂತ ಅವರು ಸಂಜಯ ರಾವತ್ ಅವರೊಂದಿಗೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾದರು. ಈ ಬಗ್ಗೆ ಸಂಜಯ ರಾವತ್ ಮಾತನಾಡಿ, “ಉದ್ಧವ ಬಾಳಾಸಾಹೇಬ ಠಾಕ್ರೆ ಬಣ ಸಭೆಯನ್ನು ಆಯೋಜಿಸಿದೆ. ಸಭೆಗೆ ಹಾಜರಾಗಲು ಎಲ್ಲಾ ಸಂಸದರಿಗೆ ಪಕ್ಷದ ವಿಪ್ ಕಳುಹಿಸಲಾಗಿದೆ. ಎಲ್ಲಾ ಸಂಸದರು ಈ ವಿಪ್ ಅನ್ನು ಪಾಲಿಸಬೇಕು, ಜೊತೆಗೆ ಬಣದ ಸಂಸದರ ಮಾತುಗಳನ್ನು ಕೇಳಬೇಕು, ಎಂಬ ನಿಲುವನ್ನು ನಾವು ಲೋಕಸಭೆಯ ಸ್ಪೀಕರ್ ಅವರ ಮುಂದೆ ಮಂಡಿಸಿದ್ದೇವೆ” ಎಂದು ಹೇಳಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”