ಪಾಕಿಸ್ತಾನಕ್ಕೆ ಸಹಾಯ ಮಾಡಿದ್ದರ ಪರಿಣಾಮ!

ನವದೆಹಲಿ – ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಟರ್ಕಿಯು ಪಾಕಿಸ್ತಾನದ ಪರ ವಹಿಸಿ ಮಿಲಿಟರಿ ನೆರವು ನೀಡಿತ್ತು. ಇದರ ತಕ್ಷಣದ ಪರಿಣಾಮವಾಗಿ, ಭಾರತವು ಟರ್ಕಿಯ ‘ಸೆಲೆಬಿ ಏವಿಯೇಷನ್’ ಸಂಸ್ಥೆಯನ್ನು ದೇಶದಿಂದ ಹೊರಹಾಕಿದ ನಂತರ, ಆ ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟವಾಗಿದೆ. ಭಾರತದ ಈ ಕ್ರಮದಿಂದಾಗಿ ತನಗೆ ಒಂದೇ ದಿನದಲ್ಲಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
‘ಆಪರೇಷನ್ ಸಿಂದೂರ್’ ನಂತರ ಭಾರತದಲ್ಲಿ ಟರ್ಕಿಯ ಸಂಸ್ಥೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸತೊಡಗಿದವು. ಈ ಹಿನ್ನೆಲೆಯಲ್ಲಿ ಭಾರತ ಸರಕಾರವು ಮೇ ೨೦೨೫ ರಲ್ಲಿ ‘ಸೆಲೆಬಿ’ ಯ ಭಾರತೀಯ ಶಾಖೆಯ ಭದ್ರತಾ ಮಂಜೂರಾತಿಯನ್ನು ಕೂಡಲೇ ರದ್ದುಗೊಳಿಸಿತು. ‘ಸೆಲೆಬಿ ಏರ್ಪೋರ್ಟ್ ಸರ್ವಿಸಸ್ ಇಂಡಿಯಾ’ ಇದು ದೇಶದ ಅತಿ ದೊಡ್ಡ ಗ್ರೌಂಡ್ ಹ್ಯಾಂಡ್ಲಿಂಗ್ ಸಂಸ್ಥೆಗಳ ಪೈಕಿ ಒಂದಾಗಿತ್ತು. ಈ ಸಂಸ್ಥೆಯು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟದ ಸಮನ್ವಯ, ಪ್ರಯಾಣಿಕರ ನಿರ್ವಹಣೆ ಮತ್ತು ವಿಮಾನಗಳಿಗೆ ಅಗತ್ಯವಿರುವ ತಾಂತ್ರಿಕ ಸೇವೆಗಳನ್ನು ಪೂರೈಸುವ ಕೆಲಸ ಮಾಡುತ್ತಿತ್ತು. ಈ ಸಂಸ್ಥೆಯು ಪ್ರತಿ ವರ್ಷ ಅಂದಾಜು ೫೮,೦೦೦ ವಿಮಾನಗಳ ಹಾರಾಟ ಮತ್ತು ೫ ಲಕ್ಷದ ೪೦ ಸಾವಿರ ಟನ್ ಸರಕುಗಳ ನಿರ್ವಹಣೆ ಮಾಡುತ್ತಿತ್ತು.
ಒಂದೇ ದಿನದಲ್ಲಿ ಎಲ್ಲವೂ ಮುಗಿದುಹೋಯಿತು! – ಸಂಸ್ಥೆ
ಸಂಸ್ಥೆಯ ಅಧ್ಯಕ್ಷರಾದ ಕ್ಯಾನನ್ ಸೆಲೆಬಿಯೋಗ್ಲು ಈ ಬಗ್ಗೆ ಮಾತನಾಡಿ, ೨೦೦೦ ಸಾಲಿನಿಂದ ಭಾರತದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ತುಂಬಾ ಶ್ರಮಪಟ್ಟಿತ್ತು. ಇದು ಕೇವಲ ವ್ಯವಹಾರದ ನಷ್ಟವಲ್ಲ, ಎರಡು ದಶಕಗಳ ಕಠಿಣ ಪರಿಶ್ರಮದ ಫಲವಾಗಿತ್ತು. ನಾವು ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಿ ಈ ವ್ಯವಹಾರವನ್ನು ಕಟ್ಟಿದ್ದೆವು; ಆದರೆ ಇದೆಲ್ಲವೂ ಒಂದೇ ದಿನದಲ್ಲಿ ಕೊನೆಗೊಂಡಿತು, ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ
ಇದು ನಿಮ್ಮಿಬ್ಬರ ನಡುವಿನ ಪ್ರಶ್ನೆಯಾಗಿದ್ದು, ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಿ! – ಚೀನಾದ ಸಲಹೆ
ರಷ್ಯಾ ತೈಲ ಸಾಗಣೆ ನೌಕೆಯ ಭಾರತೀಯ ಕ್ಯಾಪ್ಟನ್ ಬಂಧನ; ರಷ್ಯಾ ಆಕ್ರೋಶ
ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
ಅಯೋಧ್ಯೆ: ಶ್ರೀರಾಮ ಮಂದಿರದಲ್ಲಿ ಕಳ್ಳತನ; ದೂರು ದಾಖಲಾಗಿದ್ದರೂ ಎಫ್.ಐ.ಆರ್. ಇಲ್ಲ!