‘ಕಳ್ಳನಿಗೊಂದು ಪಿಳ್ಳೆನೆವ ಎಂಬಂತೆ ಪಾಕಿಸ್ತಾನದ ಹೇಳಿಕೆ !
ಮುಂಬಯಿ ಮೇಲಿನ ಭಯೋತ್ಪಾದನಾ ದಾಳಿಯ ಮುಖ್ಯ ರೂವಾರಿ ಹಫೀಜ ಸಯಿದ್ ಮನೆಯ ಹತ್ತಿರ ನಡೆದಿದ್ದ ಬಾಂಬ್ಸ್ಫೋಟದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ ಖಾನ್ ಹೇಳಿದ್ದಾರೆ.
ಮುಂಬಯಿ ಮೇಲಿನ ಭಯೋತ್ಪಾದನಾ ದಾಳಿಯ ಮುಖ್ಯ ರೂವಾರಿ ಹಫೀಜ ಸಯಿದ್ ಮನೆಯ ಹತ್ತಿರ ನಡೆದಿದ್ದ ಬಾಂಬ್ಸ್ಫೋಟದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ ಖಾನ್ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಪ್ರೇರಕ ಚಿಂತನೆ (ಮೋಟಿವೇಶನಲ್ ಥಾಟ್) ಎಂಬ ನಯವಾದ ಹೆಸರಿನಲ್ಲಿ ೧ ಸಾವಿರ ಬಡ ಹಿಂದೂಗಳನ್ನು ಮತಾಂತರಗೊಳಿಸಿದ ಇಬ್ಬರು ಮೌಲಾನಾರನ್ನು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ.
ಆನ್ಲೈನ್ ಮಾರಾಟ ಮಾಡುವ ‘ಫ್ಲಿಪ್ಕಾರ್ಟ್’ ಕಂಪನಿಯು ತನ್ನ ಜಾಲತಾಣದಲ್ಲಿ ಭಗವಾನ್ ಶಿವ ಮತ್ತು ಪಾರ್ವತಿ ಮಾತೆಯ ಇವರು ಪ್ರಣಯಕ್ರೀಡೆ ಮಾಡುತ್ತಿರುವ ಚಿತ್ರವಿರುವ ಸಂಚಾರವಾಣಿಯ ‘ಕವರ್’ ಅನ್ನು ಮಾರಾಟಕ್ಕೆ ಇಟ್ಟಿತ್ತು. ಇದನ್ನು ವಿರೋಧಿಸಿದ ನಂತರ ಅದನ್ನು ತೆಗೆಯಲಾಗಿದೆ.
ತಮಿಳುನಾಡು ರಾಜ್ಯದಲ್ಲಿ ೪೭ ಸಾವಿರ ಎಕರೆ ದೇವಸ್ಥಾನದ ಭೂಮಿಯು ಕಣ್ಮರೆಯಾಗಿರುವ ಬಗ್ಗೆ ವಿವರಣೆ ನೀಡುವಂತೆ ಮದ್ರಾಸ ಉಚ್ಚ ನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ತಿಳಿಸಿದೆ. ದೇವಸ್ಥಾನಗಳ ಭೂಮಿ ೫ ಲಕ್ಷ ೨೫ ಸಾವಿರ ಎಕರೆಗಳಿಂದ ೪ ಲಕ್ಷ ೭೮ ಸಾವಿರ ಎಕರೆಯಷ್ಟಿದೆ.
ಬನಾಸಕಾಂಠ (ಗುಜರಾತ)ದಲ್ಲಿನ ತೆತೋಡಾ ಗ್ರಾಮದ ಒಂದು ಗೋಶಾಲೆಯನ್ನು ಕೋವಿಡ್ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಇಲ್ಲಿಯ ರೋಗಿಗಳಿಗೆ ಗೋವಿನ ಹಾಲು ಮತ್ತು ಗೋಮೂತ್ರ ಇವುಗಳಿಂದ ಸಿದ್ಧಪಡಿಸಿದ ಔಷಧಗಳ ಸಹಾಯದಿಂದ ಉಪಚಾರ ನೀಡಲಾಗುತ್ತಿದೆ.
ಕೊರೊನಾದಿಂದ ಬೆಂಗಳೂರು ನಗರದಲ್ಲಿ ರೋಗಿಯ ಮರಣ ಹೊಂದುವ ವೇಗವು ಅಗಾಧ ಪ್ರಮಾಣದಲ್ಲಿವೆ. ಅವರ ಅಂತಿಮಸಂಸ್ಕಾರಕ್ಕಾಗಿ ಸ್ಮಶಾನಭೂಮಿಯಲ್ಲಿ ಅನೇಕ ಗಂಟೆಗಳವರೆಗೆ ಕಾಯಬೇಕಾಗುತ್ತಿದೆ. ಚಾಮರಾಜಪೇಟೆಯ ಒಂದು ಸ್ಮಶಾನ ಭೂಮಿಯ ಹೊರಗಂತೂ ‘ಹೌಸ್ ಫುಲ್ ಎಂದು ಫಲಕವನ್ನೇ ಹಾಕಲಾಗಿದೆ.
ಇಂಗ್ಲೆಂಡಿನ ಕ್ರಿಕೇಟ್ ಆಟಗಾರ ಮೊಯಿನ್ ಅಲೀ ಐಪಿಎಲ್ ಕ್ರಿಕೆಟ್ ಸ್ಪರ್ಧೆಯಲ್ಲಿ ಚೆನ್ನೈ ಸೂಪರಕಿಂಗ್ಸ್ ತಂಡದ ಪರವಾಗಿ ಆಡುತ್ತಾರೆ. ಈ ತಂಡದ ಟಿ-ಶರ್ಟ್ ಮೇಲೆ ಒಂದು ಸರಾಯಿ ಕಂಪನಿಯ ಲೋಗೋ ಇದ್ದುದರಿಂದ ಮೊಯಿನ್ ಅಲೀ ಇವರು ಅದನ್ನು ತೆಗೆಯುವಂತೆ ಆಗ್ರಹಿಸಿದಾಗ ಆ ಲೋಗೋವನ್ನು ತೆಗೆಯಲಾಯಿತು.
ಹಿಂದೂ ಯುವಾ ವಾಹಿನಿಯು ಡೆಹರಾಡೂನದಲ್ಲಿ (ಉತ್ತರಾಖಂಡ) ೧೫೦ ಕ್ಕೂ ಹೆಚ್ಚು ದೇವಸ್ಥಾನಗಳ ಹೊರಗಡೆ ‘ಈ ತೀರ್ಥಸ್ಥಾನ ಹಿಂದೂಗಳಿಗೆ ಪವಿತ್ರ ಸ್ಥಾನವಾಗಿದೆ. ಇಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲ, ಎಂಬ ಫಲಕಗಳನ್ನು ಹಾಕಿದೆ. ಪೊಲೀಸರು ಇದರ ಮೇಲೆ ಕ್ರಮಕೈಗೊಳ್ಳುತ್ತಾ ಅವುಗಳನ್ನು ತೆಗೆದುಹಾಕಿದರು.
ಪಾಕಿಸ್ತಾನದಲ್ಲಿ ಕಳೆದ ವರ್ಷ ಮತಾಂಧರ ಸಮೂಹವು ಹಿಂದೂಗಳ ಪ್ರಾಚೀನ ಮಂದಿರ ಮತ್ತು ಅಲ್ಲಿನ ಶ್ರೀ ಪರಮಹಂಸಜಿ ಮಹಾರಾಜರ ಸಮಾಧಿಯನ್ನು ಧ್ವಂಸಗೈದು ಬೆಂಕಿ ಹಚ್ಚಿತ್ತು. ಈಗ ಅಲ್ಲಿಯ ಹಿಂದೂಗಳು ಈ ಪ್ರಕರಣದಲ್ಲಿ ಆ ಸಮೂಹವನ್ನು ಕ್ಷಮಿಸುವ ತೀರ್ಮಾನವನ್ನು ಕೈಗೊಂಡಿದ್ದಾರೆ.
ಚೀನಾದ ರಾಷ್ಟ್ರಪತಿ ಶೀ ಜಿನಪಿಂಗ ಇವರು ದೇಶದ ಸದ್ಯದ ಭದ್ರತೆಯ ಸ್ಥಿತಿ ಅಸ್ಥಿರ ಮತ್ತು ಅನಿಶ್ಚಿತವಾಗಿದೆ. ಇಂತಹ ಸಮಯದಲ್ಲಿ ಸಂಪೂರ್ಣ ಸೈನ್ಯವು ಯುದ್ಧದ ಸಿದ್ಧತೆಯನ್ನು ಹೆಚ್ಚಿಸಬೇಕು ಮತ್ತು ಬಲವನ್ನು ಹೆಚ್ಚಿಸಲು ಸಮನ್ವಯ ಇಡಬೇಕು, ಎಂದು ಸೈನ್ಯಕ್ಕೆ ಕರೆ ನೀಡಿದ್ದಾರೆ.