೧. ಜಾತ್ಯತೀತವಾದಿಗಳು ಇಂತಹ ವಿಷಯಗಳಲ್ಲಿ ಮೌನವಾಗಿರುತ್ತಾರೆ !
ಮಧುರೈ (ತಮಿಳುನಾಡು)ಯಲ್ಲಿ ದ್ವಿಚಕ್ರ ವಾಹನದ ಕಳ್ಳತನದ ಪ್ರಕರಣದಲ್ಲಿ ೩೬ ವರ್ಷದ ವಿಜಯನ್ ಸ್ಯಾಮ್ಯುಯೆಲ್ ಎಂಬ ಪಾದ್ರಿಯನ್ನು ಬಂಧಿಸಲಾಗಿದೆ. ಲಾಕ್ಡೌನ್ದಿಂದಾಗಿ ಆದಾಯದ ಮೂಲವನ್ನು ಕಳಿದುಕೊಂಡಿದ್ದರಿಂದ, ಅವನು ಕದಿಯಲು ಪ್ರಾರಂಭಿಸಿದನು.
೨. ಭಾರತ ಚೀನಾಗೆ ನೀಡಿದ ಪ್ರತಿಕ್ರಿಯೆ ತಿಳಿಯಿರಿ !
ಲಡಾಖ್ನ ಗಾಲ್ವಾನ್ ವ್ಯಾಲಿಯಲ್ಲಿ ಚೀನಾ ಮತ್ತು ಭಾರತದ ಸೈನ್ಯಗಳ ನಡುವೆ ಘರ್ಷಣೆಯಾಯಿತು. ಇದರಲ್ಲಿ ಇಪ್ಪತ್ತು ಭಾರತೀಯ ಸೈನಿಕರು ಹುತಾತ್ಮರಾದರು ಮತ್ತು ೪೩ ಚೀನಾದ ಸೈನಿಕರು ಕೊಲ್ಲಲ್ಪಟ್ಟರು.
೩. ಕೇರಳದ ಕಮ್ಯುನಿಸ್ಟ್ ಸರಕಾರದ ಕ್ರೈಸ್ತಪ್ರೇಮವನ್ನು ತಿಳಿಯಿರಿ !
ಹಿಂದೂ ಧರ್ಮದ ಪರಿಶಿಷ್ಟ ಜಾತಿಗಳಿಂದ ಮತಾಂತರಗೊಂಡ ಕ್ರೈಸ್ತರಿಗಾಗಿ ಕೇರಳದ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ೨೦೨೦-೨೦೨೧ ನೇ ಸಾಲಿಗೆ ೫ ಕೋಟಿ ರೂಪಾಯಿಗಳ ಯೋಜನೆ ಮಾಡಿದೆ.
೪. ಕೇರಳದ ಕಮ್ಯುನಿಸ್ಟ್ ಸರಕಾರದ ಕಾನೂನುದ್ರೋಹ ತಿಳಿಯಿರಿ !
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುರೇಶ ಬಾಬು ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮಹಮ್ಮದ ಹಾಶಿಮ್ ಪೆರೋಲ್ನಲ್ಲಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಗಳ ವಿವಾಹಕ್ಕೆ ‘ಅತಿಗಣ್ಯವ್ಯಕ್ತಿ’ ಎಂದು ಹಾಜರಾಗಿದ್ದನು.
೫. ರಕ್ಷಣೆಯ ಕುರಿತು ಅಕ್ಷಮ್ಯ ನಿರ್ಲಕ್ಷ್ಯವನ್ನು ತಿಳಿಯಿರಿ !
ಚೀನಾದ ದುಷ್ಟತೆಯು ಅದರ ‘ಫೈವ್ ಫಿಂಗರ್ಸ್ ಆಫ್ ಟಿಬೇಟ ಸ್ಟ್ರ್ಯಾಟಜಿಯ ಭಾಗವಾಗಿದ್ದು ಈ ಕುರಿತು ಟಿಬೆಟಿಯನ್ ನಾಯಕರು ಕಳೆದ ೬೦ ವರ್ಷ ಗಳಿಂದ ಭಾರತಕ್ಕೆ ಇದರ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಟಿಬೆಟಿಯನ್ ಆಡಳಿತದ ಅಧ್ಯಕ್ಷ ಲೋಬ್ಸಾಂಗ್ ಸಾಂಗೆ ಇವರು ಹೇಳಿದ್ದಾರೆ.
೬. ಮಾನಸಿಕ ರೋಗವನ್ನು ದೂರವಿರಿಸಲು ಸಾಧನೆ ಮಾಡಿರಿ !
ಖ್ಯಾತ ಜರ್ನಲ್ ‘ದಿ ಲ್ಯಾನ್ಸೆಟ್ನಲ್ಲಿ ಪ್ರಕಟವಾದ ವರದಿಗನುಸಾರ, ‘೨೦೧೭ ರ ವರೆಗೆ ಭಾರತದಲ್ಲಿ ೧೯ ಕೋಟಿ ೭೩ ಲಕ್ಷ ಜನರು ಮಾನಸಿಕ ರೋಗದಿಂದ ಬಳಲುತ್ತಿದ್ದರು. ಅದು ದೇಶದ ಜನಸಂಖ್ಯೆಯ ಶೇಕಡಾ ೧೫ ರಷ್ಟಿತ್ತು.
೭. ಭಾರತದ ಬಗ್ಗೆ ನೇಪಾಳದ ಮುಂದುವರೆದ ದ್ವೇಷ !
ನೇಪಾಳಿ ಪುರುಷರನ್ನು ಮದುವೆಯಾಗಿ ನೇಪಾಳಕ್ಕೆ ಹೋಗುವ ಭಾರತೀಯ ಮಹಿಳೆಯರಿಗೆ ಅಲ್ಲಿನ ಪೌರತ್ವ ಪಡೆಯಲು ಏಳು ವರ್ಷ ಕಾಯಬೇಕಾಗುವ ಮತ್ತು ಅವರಿಗೆ ಎಲ್ಲಾ ರಾಜಕೀಯ ಹಕ್ಕುಗಳಿಂದ ದೂರವಿಡುವ ಪೌರತ್ವ ವಿಷಯದ ತಿದ್ದುಪಡಿ ಕಾನೂನನ್ನು ನೇಪಾಳದ ಸಂಸತ್ತಿನಲ್ಲಿ ಅನುಮೋದಿಸಲಿದೆ.
ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತರು!
ಇಂತಹ ಸಚಿವರು ಎಲ್ಲೆಡೆ ಇರಬೇಕು !
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?