ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ಈ ಅಗ್ನಿ ನೈಸರ್ಗಿಕವಾಗಿರುವುದರಿಂದ ಅದರಿಂದ ಪ್ರಕ್ಷೇಪಿಸಲ್ಪಡುವ ಸೂಕ್ಷ್ಮ ತೇಜದಾಯಕ ಲಹರಿಗಳು ಸೂಕ್ಷ್ಮ ಸ್ತರದಲ್ಲಿರುವ ರಜ-ತಮಾತ್ಮಕ ಕಣಗಳನ್ನು ವಿಘಟಿತಗೊಳಿಸಬಲ್ಲವು. ಒಲೆಯ ಮೇಲಿನ ಅಡುಗೆಯನ್ನು ತಯಾರಿಸುವಾಗ ಆಹಾರದ ಮೇಲೆ ಅಗ್ನಿಯ ಸಂಸ್ಕಾರವಾಗಿ ಸಾತ್ತ್ವಿಕ ಆಹಾರ ತಯಾರಾಗುತ್ತದೆ. ಇದರದೇ ಅನುಭವವು ಪರೀಕ್ಷಣೆಯಲ್ಲಿ ಮಣ್ಣಿನ ಒಲೆಯ ಮೇಲೆ ಬೇಯಿಸಿದ ಅನ್ನದ ಸಂದರ್ಭದಲ್ಲಿ ಕಂಡು ಬಂದಿತು. ಮಣ್ಣಿನ ಒಲೆಯ ಮೇಲೆ ಬೇಯಿಸಿದ ಅನ್ನದಲ್ಲಿ ಸ್ವಲ್ಪವೂ ನಕಾರಾತ್ಮಕ ಸ್ಪಂದನಗಳು ಇರಲಿಲ್ಲ ಹಾಗೂ ಬಹಳ ಸಕಾರಾತ್ಮಕ ಸ್ಪಂದನಗಳು ಕಂಡು ಬಂದವು.