ದಿನಪತ್ರಿಕೆಗಳಿಗೆ ಸಂಬಂಧಿಸಿದ ನಾವೀನ್ಯಪೂರ್ಣ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷೆಯನ್ನು ಮಾಡುತ್ತಿರುವ ಶ್ರೀ. ಆಶೀಷ ಸಾವಂತ

ದೈನಿಕ ‘ಸನಾತನ ಪ್ರಭಾತ’ದ ‘ಕಪ್ಪುಬಿಳುಪು’ ಸಂಚಿಕೆಯ ತುಲನೆಯಲ್ಲಿ ‘ಗುರುಪೂರ್ಣಿಮೆಯ ಬಣ್ಣದ ವಿಶೇಷಾಂಕ’ದಿಂದ ಬಹಳ ಹೆಚ್ಚು ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿತವಾಗುವುದು ಮತ್ತು ಅದರ ಹಿಂದಿನ ಅಧ್ಯಾತ್ಮಶಾಸ್ತ್ರ

ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯೇ

‘ದೈನಿಕ ‘ಸನಾತನ ಪ್ರಭಾತ’ದ ಧ್ಯೇಯವಾಗಿದೆ. ದೈನಿಕದಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ವಿಷಯದಲ್ಲಿ ಮಾರ್ಗದರ್ಶಕ ಲೇಖನಗಳನ್ನು ಪ್ರಕಟಿಸಲಾಗುತ್ತದೆ. ಹಾಗೆಯೇ ಹಿಂದೂ ಧರ್ಮದ ಮುಖ್ಯ ಹಬ್ಬ ಮತ್ತು ಉತ್ಸವಗಳ ಹಿಂದಿನ ಅಧ್ಯಾತ್ಮಶಾಸ್ತ್ರ, ಹಾಗೆಯೇ ಅವುಗಳನ್ನು ಆಚರಿಸುವ ಯೋಗ್ಯ ಪದ್ಧತಿ ಈ ಕುರಿತು ಮಾಹಿತಿಯನ್ನು ಪ್ರಕಟಿಸಲಾಗುತ್ತದೆ. ದೈನಿಕದ ಮಾಧ್ಯಮದಿಂದ ಸಾರ್ವಜನಿಕ ಉತ್ಸವಗಳಲ್ಲಿ ತಪ್ಪು ಆಚರಣೆಗಳ ವಿರುದ್ಧ ಜನಜಾಗೃತಿಯನ್ನೂ ಮಾಡಲಾಗುತ್ತದೆ. ಇದರಿಂದ ಸಮಾಜಕ್ಕೆ ಧರ್ಮಶಿಕ್ಷಣ ದೊರಕಿ ಅದು ಧರ್ಮಾಚರಣಿಯಾಗುತ್ತದೆ. ‘ಸಮಾಜಕ್ಕೆ ಏನು ಇಷ್ಟವಾಗುತ್ತದೆ, ಎನ್ನುವುದಕ್ಕಿಂತ ಸಮಾಜಕ್ಕೆ ಏನು ಆವಶ್ಯಕವಾಗಿದೆ’, ಎಂಬ ವಿಚಾರವನ್ನು ಮಾಡಲಾಗುತ್ತದೆ. ದೇಶ-ವಿದೇಶಗಳಲ್ಲಿ ಮಹತ್ವದ ಘಟನೆಗಳ ವರದಿಯನ್ನು ಮಾಡುವಾಗ ಆ ಘಟನೆಗಳ ಕಡೆಗೆ ನೋಡುವ ಯೋಗ್ಯ ದೃಷ್ಟಿಕೋನವನ್ನು ನೀಡುವ ದೃಷ್ಟಿಕೋನವನ್ನೂ ದೈನಿಕ ‘ಸನಾತನ ಪ್ರಭಾತ’ದಲ್ಲಿ ಮುದ್ರಿಸಲಾಗುತ್ತದೆ. ಆದ್ದರಿಂದ ಸಮಾಜಕ್ಕೆ ಯೋಗ್ಯ-ಅಯೋಗ್ಯ ಯಾವುದು, ಎಂದು ಗಮನಕ್ಕೆ ಬರುತ್ತದೆ. ಹಾಗೆಯೇ ಸಮಾಜಕ್ಕೆ ಪ್ರಬೋಧನೆ ಮಾಡುವ ‘ಬೋಧಚಿತ್ರ’ ಗಳನ್ನು ಮುದ್ರಿಸಲಾಗುತ್ತದೆ; ಆದ್ದರಿಂದ ಸಮಾಜಕ್ಕೆ ಯೋಗ್ಯ ದಿಶೆಯಲ್ಲಿ ವಿಚಾರ ಮಾಡಲು ಉತ್ತೇಜನ ಸಿಗುತ್ತದೆ.

ಪ್ರತಿದಿನ ದೈನಿಕ ‘ಸನಾತನ ಪ್ರಭಾತ’ದ ಕಪ್ಪುಬಿಳುಪು ಸಂಚಿಕೆಯನ್ನು ಪ್ರಕಟಿಸಲಾಗುತ್ತದೆ. ವರ್ಷದಾದ್ಯಂತ ಕೆಲವು ಬಣ್ಣದ ವಿಶೇಷಾಂಕಗಳನ್ನು ಸಹ ಪ್ರಕಟಗೊಳಿಸಲಾಗುತ್ತದೆ. ಹಾಗೆಯೇ ಪ್ರತಿವರ್ಷ ಗುರುಪೂರ್ಣಿಮೆಯ ನಿಮಿತ್ತ ಬಣ್ಣದ ವಿಶೇಷಾಂಕಗಳನ್ನೂ ಪ್ರಕಟಿಸಲಾಗುತ್ತದೆ. ದೈನಿಕ ‘ಸನಾತನ ಪ್ರಭಾತ’ದಿಂದ ಪ್ರಕ್ಷೇಪಿತವಾಗುವ ಸ್ಪಂದನಗಳನ್ನು ವೈಜ್ಞಾನಿಕವಾಗಿ ಅಭ್ಯಾಸ ಮಾಡಲು ೧೮.೧೨.೨೦೧೯ ರಂದು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣಗಳನ್ನು ಬಳಸಲಾಯಿತು. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆಯನ್ನು ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಕೆಳಗೆ ಕೊಡಲಾಗಿದೆ.

ಸನಾತನ ಪ್ರಭಾತ’ ದಲ್ಲಿ ರಜ-ತಮ ಪ್ರಧಾನವಾಗಿರುವ ವಾರ್ತೆಗಳನ್ನು ಮುದ್ರಿಸಲಾಗುತ್ತಿದ್ದರೂ, ಅದರಿಂದ ಸಾತ್ತ್ವಿಕತೆಯು ಪ್ರಕ್ಷೇಪಿತವಾಗುವುದರ ಕಾರಣವೆಂದರೆ ದೈನಿಕದ ಸಾತ್ತ್ವಿಕ ಉದ್ದೇಶ ಮತ್ತು ಅದರ ಸೇವೆ ಮಾಡುವ ಸಾಧಕರು

‘ಸನಾತನ ಪ್ರಭಾತ’ ನಿಯತಕಾಲಿಕೆ ಇರುವುದರಿಂದ ಅದರಲ್ಲಿ ಪ್ರತಿದಿನ ಸಂಭವಿಸುವ ರಜ-ತಮಗಳಿಂದ ತುಂಬಿದ ವಾರ್ತೆಗಳನ್ನು ಮುದ್ರಿಸಬೇಕಾಗುತ್ತವೆ. ಹೀಗಿದ್ದರೂ ಅದರಿಂದ ಸಾತ್ತ್ವಿಕತೆಯು ಪ್ರಕ್ಷೇಪಿತವಾಗುತ್ತದೆ, ಎಂಬುದು ಉಪಕರಣಗಳ ಮೂಲಕ ಮಾಡಿದ ಪರೀಕ್ಷಣೆಯಿಂದ ಸ್ಪಷ್ಟವಾಗಿದೆ. ಈ ಸಾತ್ತ್ವಿಕತೆಗೆ ನಿಯತಕಾಲಿಕೆಯ ಉದ್ದೇಶವು ಸತ್ತ್ವಪ್ರಧಾನ ಸಮಾಜ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಿರುವುದು ಹಾಗೂ ನಿಯತಕಾಲಿಕೆಯಲ್ಲಿ ಸೇವೆ ಮಾಡುವವರೆಲ್ಲರೂ ಸಾಧಕರಿದ್ದಾರೆ, ಎಂಬುದು ಕಾರಣವಾಗಿದೆ. ‘ಸನಾತನ ಪ್ರಭಾತ’ದ ಸಾತ್ತ್ವಿಕತೆಯಿಂದಾಗಿ ವಾಚಕರಿಗೆ ಮತ್ತು ಸಾಧಕರಿಗೆ ಅದರ ಅನುಭೂತಿಗಳು ಬರುತ್ತವೆ.’ – (ಪರಾತ್ಪರ ಗುರು) ಡಾ. ಆಠವಲೆ

‘ಸನಾತನ ಪ್ರಭಾತ’ದಲ್ಲಿ ಸಾತ್ತ್ವಿಕತೆ ಇರುವುದರಿಂದ ಕೆಟ್ಟ ಶಕ್ತಿಗಳ ತೊಂದರೆ ಇರುವ ಅನೇಕ ಜನರು ಚೈತನ್ಯವನ್ನು ಪಡೆಯಲು ಅದನ್ನು ಉಪಯೋಗಿಸುತ್ತಾರೆ ಮತ್ತು ಅವರಿಗೆ ಅದರಿಂದ ಲಾಭವೂ ಆಗುತ್ತದೆ.’ – (ಪರಾತ್ಪರ ಗುರು) ಡಾ. ಆಠವಲೆ

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯಲ್ಲಿ ದೈನಿಕ ‘ಸನಾತನ ಪ್ರಭಾತ’ದ (ಮರಾಠಿ) ಗೋವಾ ಮತ್ತು ಸಿಂಧುದುರ್ಗ ಆವೃತ್ತಿಯ ಮುಂದಿನ ೨ ಸಂಚಿಕೆಗಳನ್ನು ‘ಯು.ಎ.ಎಸ್.’ ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು.

ಅ. ದೈನಿಕ ‘ಸನಾತನ ಪ್ರಭಾತ’ದ ೧೮.೧೨.೨೦೧೯ ರ ಕಪ್ಪುಬಿಳುಪು ಸಂಚಿಕೆ : ಇದು ೮ ಪುಟಗಳ ಸಂಚಿಕೆಯಾಗಿದ್ದು ಇದರಲ್ಲಿ ಎಂದಿನಂತೆ ಲೇಖನ  ಮುದ್ರಿಸಿತ್ತು.

ಆ. ದೈನಿಕ ‘ಸನಾತನ ಪ್ರಭಾತ’ದ ೧೬.೭.೨೦೧೯ ರಂದು ಗುರುಪೂರ್ಣಿಮೆ ನಿಮಿತ್ತ ಮುದ್ರಿಸಿದ ಬಣ್ಣದ ಗುರುಪೂರ್ಣಿಮೆಯ ವಿಶೇಷಾಂಕ : ಇದು ೧೬ ಪುಟಗಳ ಸಂಚಿಕೆಯಿದ್ದು ಅದರಲ್ಲಿ ಗುರುಪೂರ್ಣಿಮೆ ನಿಮಿತ್ತ ಸಂತರ ಸಂದೇಶ (ಅವರ ಬಣ್ಣದ ಛಾಯಾಚಿತ್ರ ಸಹಿತ) ಸನಾತನದ ಸಂತರು ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಭೇಟಿಯ ಬಣ್ಣದ ಛಾಯಾಚಿತ್ರಗಳಿತ್ತು.   

೨. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗೆ ಸಂಬಂಧಿಸಿದ ನಿರೀಕ್ಷಣೆಯ ವಿಶ್ಲೇಷಣೆ

ಕಪ್ಪುಬಿಳುಪು ಸಂಚಿಕೆಯ ತುಲನೆಯಲ್ಲಿ ಬಣ್ಣದ ಗುರುಪೂರ್ಣಿಮೆಯ ವಿಶೇಷಾಂಕದಲ್ಲಿ ಸಕಾರಾತ್ಮಕ ಊರ್ಜೆಯು ಹೆಚ್ಚಿರುವುದು, ದೈನಿಕ ‘ಸನಾತನ ಪ್ರಭಾತದ ಕಪ್ಪುಬಿಳುಪು ಸಂಚಿಕೆ ಮತ್ತು ಗುರುಪೂರ್ಣಿಮೆಯ ಬಣ್ಣದ ವಿಶೇಷಾಂಕ ಇವುಗಳಲ್ಲಿ ‘ಇನ್‌ಫ್ರಾರೆಡ್ ಮತ್ತು ‘ಅಲ್ಟ್ರಾವೈಲೆಟ್ ಈ ಎರಡೂ ರೀತಿಯ ನಕಾರಾತ್ಮಕ ಊರ್ಜೆಯು ಕಂಡು ಬಂದಿಲ್ಲ.

ಎರಡೂ ಸಂಚಿಕೆಗಳಲ್ಲಿ ಬಹಳ ಸಕಾರಾತ್ಮಕ ಊರ್ಜೆ ಇದೆ. ಕಪ್ಪುಬಿಳುಪು ಸಂಚಿಕೆಯ ತುಲನೆಯಲ್ಲಿ ಬಣ್ಣದ ಗುರುಪೂರ್ಣಿಮೆ ವಿಶೇಷಾಂಕದಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ೭.೧೭ ಮೀಟರ್‌ನಷ್ಟು ಹೆಚ್ಚಿದೆ. ಇದು ಮುಂದೆ ನೀಡಲಾದ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ದೈನಿಕ ‘ಸನಾತನ ಪ್ರಭಾತ’ದಿಂದ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವ ಹಿಂದಿನ ಕಾರಣಗಳು

. ದೈನಿಕ ‘ಸನಾತನ ಪ್ರಭಾತ’ ಭಾಷಾಶುದ್ಧಿಗೆ ಮಹತ್ವ ನೀಡುತ್ತದೆ; ಏಕೆಂದರೆ ಭಾಷೆಯು ಎಷ್ಟು ಶುದ್ಧವೋ ಅಷ್ಟು ಅದರಿಂದ ಸಾತ್ತ್ವಿಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ.

೨. ದೈನಿಕದಲ್ಲಿ ಸಂಸ್ಕೃತ ಸುಭಾಷಿತಗಳು, ಶ್ಲೋಕ, ಸಂತರ ಸುವಚನಗಳನ್ನು ಅರ್ಥಸಹಿತ ಪ್ರಕಟಿಸಲಾಗುತ್ತದೆ. ಇದರಿಂದ ದೈನಿಕದ ಸಾತ್ತ್ವಿಕತೆಯು ಇನ್ನಷ್ಟು ಹೆಚ್ಚಳವಾಗುತ್ತದೆ.

೩. ದೈನಿಕದಲ್ಲಿ ಸಾಧಕರು ಸಾಧನೆಗೆ ಸಂಬಂಧಪಟ್ಟಂತೆ ಮಾಡಿದ ಪ್ರಯತ್ನ ಮತ್ತು ಅವರಿಗೆ ಬಂದ ಅನುಭೂತಿಗಳು, ಕಲಿಯಲು ಸಿಕ್ಕಿದ ಅಂಶಗಳು ಮುಂತಾದವುಗಳ ಸಮಾವೇಶವಿರುತ್ತದೆ. ಅವುಗಳನ್ನು ಓದಿ ಸಾಧಕರು ಮತ್ತು ‘ಸನಾತನ ಪ್ರಭಾತ’ದ ವಾಚಕರ ಭಾವಜಾಗೃತಿಯಾಗುತ್ತದೆ. ಇದರಿಂದ ಅವರಿಗೆ ಸಾಧನೆಯ ಪ್ರಯತ್ನವನ್ನು ಮಾಡಲು ಅಥವಾ ಅದನ್ನು ಹೆಚ್ಚಿಸಲು ಪ್ರೇರಣೆ ದೊರಕುತ್ತದೆ.

. ದೈನಿಕದಲ್ಲಿ ಸಂತರು ಹೇಳಿದ ಸಾಧನೆಯ ಕುರಿತು ಮಾರ್ಗದರ್ಶಕ ಅಂಶಗಳನ್ನು ಪ್ರಕಟಿಸಲಾಗುತ್ತದೆ. ಆದ್ದರಿಂದ ಸಾಧಕರಿಗೆ ಮತ್ತು ಸಮಾಜಕ್ಕೆ ಸಂತರು ಮಾಡಿದ ಅಮೂಲ್ಯ ಮಾರ್ಗದರ್ಶನದ ಲಾಭವಾಗುತ್ತದೆ.

೫. ದೈನಿಕದಲ್ಲಿ ಪ್ರಕಟಿಸಲಾಗುವ ಹೆಚ್ಚಿನ ಜಾಹೀರಾತುಗಳು ವ್ಯಾವಹಾರಿಕ ಉದ್ದೇಶದಿಂದಲ್ಲ, ಆದರೆ ಸಮಾಜಕ್ಕೆ ಯೋಗ್ಯ ಸಾಧನೆಯನ್ನು ಹೇಳಿ ಸೇವೆಯೆಂದು ಪ್ರಾಪ್ತಮಾಡಿಕೊಳ್ಳಲಾಗುತ್ತದೆ. ಹಾಗೆಯೇ ಜಾಹೀರಾತುಗಳ ಸಂರಚನೆಯನ್ನು ಸಾತ್ತ್ವಿಕ ಮಾಡಲಾಗುತ್ತದೆ. ಆದ್ದರಿಂದ ಅವುಗಳಲ್ಲಿಯೂ ಸಾತ್ತ್ವಿಕತೆ ಇರುತ್ತದೆ.

೬. ದೈನಿಕದಲ್ಲಿ ವಾರ್ತೆಗಳ ಬೆರಳಚ್ಚು-ಸಂಕಲನ ಮತ್ತು ಕರಡಚ್ಚು ತಿದ್ದುಪಡಿ (Proof checking) ದೈನಿಕದ ಸಂರಚನೆ ಮತ್ತು ದೈನಿಕಗಳ ವಿತರಣೆ ಇತ್ಯಾದಿ ಎಲ್ಲ ಕಾರ್ಯಗಳನ್ನು ಸಾಧಕರು ಸೇವಾಭಾವದಿಂದ ಮಾಡುತ್ತಾರೆ.

. ದೈನಿಕ ‘ಸನಾತನ ಪ್ರಭಾತ’ದ ಉದ್ದೇಶವು ಸಾತ್ತ್ವಿಕವಾಗಿರುವುದರಿಂದ ಅದಕ್ಕೆ ಅನೇಕ ಸಂತರ ಆಶೀರ್ವಾದವು ಪ್ರಾಪ್ತವಾಗಿದೆ. ಈಶ್ವರನ ಅನುಗ್ರಹದಿಂದಾಗಿ ನಿಷೇಧದ ಸಂಕಟಕಾಲವನ್ನೂ ಅದು ನಿರ್ಭಯದಿಂದ ಎದುರಿಸಿತು.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ ದೈನಿಕ ‘ಸನಾತನ ಪ್ರಭಾತ’ದ ಉದ್ದೇಶ, ಹಾಗೆಯೇ ದೈನಿಕಕ್ಕೆ ಸಂಬಂಧಪಟ್ಟ ಎಲ್ಲ ಘಟಕಗಳು ಸಾತ್ತ್ವಿಕವಾಗಿವೆ. ಆದುದರಿಂದ ದೈನಿಕ ‘ಸನಾತನ ಪ್ರಭಾತ’ದಿಂದ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ.

೩ ಆ. ದೈನಿಕ ‘ಸನಾತನ ಪ್ರಭಾತ’ದ ಕಪ್ಪುಬಿಳುಪು ಸಂಚಿಕೆಯ ತುಲನೆಯಲ್ಲಿ ಗುರುಪೂರ್ಣಿಮೆಯ ಬಣ್ಣದ ವಿಶೇಷಸಂಚಿಕೆಯಿಂದ ಅತೀ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವ ಹಿಂದಿನ ಕಾರಣ : ಗುರುಪೂರ್ಣಿಮೆಯ ದಿನದಂದು ಗುರುತತ್ತ್ವವು (ಈಶ್ವರೀತತ್ತ್ವ) ಎಂದಿನ ತುಲನೆಯಲ್ಲಿ ೧ ಸಾವಿರಪಟ್ಟು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಗುರುಪೂರ್ಣಿಮೆಯ ನಿಮಿತ್ತ ಮಾಡಿದ ಸೇವೆ ಮತ್ತು ತ್ಯಾಗ (ಸತ್‌ಗಾಗಿ ಅರ್ಪಣೆ)ಗಳಿಂದ ಇವುಗಳ ಇತರ ದಿನಗಳ ತುಲನೆಯಲ್ಲಿ ೧ ಸಾವಿರಪಟ್ಟು ಹೆಚ್ಚು ಲಾಭವಾಗುತ್ತದೆ; ಆದುದರಿಂದ ಗುರುಪೂರ್ಣಿಮೆಯು ಈಶ್ವರೀ ಕೃಪೆಯ ಒಂದು ಅಮೂಲ್ಯ ಉತ್ಸವ ದಿನವಾಗಿದೆ. ದೈನಿಕ ‘ಸನಾತನ ಪ್ರಭಾತ’ದ ಗುರುಪೂರ್ಣಿಮೆಯ ವಿಶೇಷಸಂಚಿಕೆಯೆಂದರೆ ಸನಾತನದ ಸಾಧಕರಿಗಾಗಿ ಅಮೂಲ್ಯ ಭಂಡಾರವಾಗಿದೆ. ದೈನಿಕ ‘ಸನಾತನ ಪ್ರಭಾತ’ದ ೧೬.೭.೨೦೧೯ ರ ದಿನದ ಗುರುಪೂರ್ಣಿಮೆಯ ಬಣ್ಣದ ವಿಶೇಷಸಂಚಿಕೆಯಲ್ಲಿ ಮುಂದಿನ ಕಾರಣಗಳಿಂದ ಅತೀ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಯಿತು.

೧. ದೈನಿಕದ ಮೊದಲನೇ ಪುಟದಲ್ಲಿ ಮಧ್ಯ ಭಾಗದಲ್ಲಿ ಸನಾತನದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಸ್ವಲ್ಪ ದೊಡ್ಡ ಆಕಾರದಲ್ಲಿ ಛಾಯಾಚಿತ್ರವಿದ್ದೂ ಅವರ ಬಲ ಬದಿಗೆ ‘ಸನಾತನದ ಮೊದಲನೇ ಸಂತರು’ ಸದ್ಗುರು (ಶ್ರೀಮತಿ) ವಿಮಲ ಫಡಕೆ ಮತ್ತು ಎಡಬದಿಗೆ ‘ಸನಾತನದ ೧೦೦ ನೇ ಸಂತರು’ ಪೂ. (ಶ್ರೀಮತಿ) ಸೀತಾ ಜೋಶಿ ಇವರ ಮಧ್ಯಮ ಆಕಾರದ ಛಾಯಾಚಿತ್ರಗಳಿವೆ. ಅದರ ಕೆಳಗೆ ಜನಲೋಕದಿಂದ ಪೃಥ್ವಿಯ ಮೇಲೆ ಜನಿಸಿ ಬಂದಿರುವ ‘ಸನಾತನದ ಮೊದಲನೇ ಬಾಲಕ-ಸಂತರಾದ’ ಪೂ. ಭಾರ್ಗವರಾಮ ಪ್ರಭು, ‘ಅಂಗವಿಕಲರಾಗಿದ್ದರೂ ಅಂತರ್ಮನದಿಂದ ಮಾಡಿದ ಸಾಧನೆಯಿಂದಾಗಿ ಸಂತಪದವಿಯನ್ನು ಪ್ರಾಪ್ತ ಮಾಡಿಕೊಂಡ’ ಪೂ. ಸಂಕೇತ ಕುಲಕರ್ಣಿ, ‘ಸನಾತನದ ಯುವಕ ಸಂತರು’ ಪೂ. (ಸೌ.) ಅಶ್ವಿನಿ ಪವಾರ, ‘ಸನಾತನದ ಉಚ್ಚ ಶಿಕ್ಷಿತ ಸಮಷ್ಟಿ ಸಂತರು’ ಸದ್ಗುರು ಡಾ. ಚಾರುದತ್ತ ಪಿಂಗಳೆ ಮತ್ತು ‘ಗೃಹಸ್ಥಾಶ್ರಮ ಸಂತರು’ ಸದ್ಗುರು (ಶ್ರೀಮತಿ) ಪ್ರೇಮಾ ಕುವೇಲಕರ ಇವರ ಯಾಚಿತ್ರಗಳಿವೆ. ಸಂತರಲ್ಲಿ ತುಂಬಾ ಪ್ರಮಾಣದಲ್ಲಿ ಚೈತನ್ಯವಿರುತ್ತದೆ. ಅದು ಅವರ ಛಾಯಾಚಿತ್ರಗಳಿಂದಲೂ ಪ್ರಕ್ಷೇಪಿತವಾಗುತ್ತದೆ. (ವ್ಯಕ್ತಿಯ ಕಪ್ಪುಬಿಳುಪು ಛಾಯಾಚಿತ್ರದ ತುಲನೆಯಲ್ಲಿ ಅವರ ಬಣ್ಣದ ಛಾಯಾಚಿತ್ರದಲ್ಲಿ ಅವರ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಬರುತ್ತವೆ ಮತ್ತು ಅದಕ್ಕಿಂತಲೂ ಪ್ರತ್ಯಕ್ಷ ವ್ಯಕ್ತಿಯಲ್ಲಿ ಅವರ ಸ್ಪಂದನಗಳು ಅತ್ಯಧಿಕವಾಗಿರುತ್ತವೆ. ವ್ಯಕ್ತಿಯ ಛಾಯಾಚಿತ್ರವು ಎಷ್ಟು ಸ್ಪಷ್ಟವಾಗಿರುವುದೋ ಮತ್ತು ಅದರ ಆಕಾರವು ಎಷ್ಟು ದೊಡ್ಡದಾಗಿರುವುದೋ, ಅಷ್ಟು ಅವರ ಛಾಯಾಚಿತ್ರದಲ್ಲಿ ಅವರ ಸ್ಪಂದನಗಳು ಹೆಚ್ಚು ಬರುತ್ತವೆ.) ಸಂತರ ಬಣ್ಣದ ಛಾಯಾಚಿತ್ರಗಳಿಂದ ಪ್ರಕ್ಷೇಪಿತವಾಗುವ ಚೈತನ್ಯದಿಂದಾಗಿ ದೈನಿಕದ ಸಾತ್ತ್ವಿಕತೆಯಲ್ಲಿ ತುಂಬಾ ಹೆಚ್ಚಳವಾಯಿತು.

೨. ದೈನಿಕದಲ್ಲಿ ಉಳಿದ ೧೫ ಪುಟಗಳಲ್ಲಿಯೂ ಸಂತರ ಛಾಯಾಚಿತ್ರಗಳು, ಸಂತರು ಗುರು ಪೂರ್ಣಿಮೆಯ ನಿಮಿತ್ತದಿಂದ ಸಾಧಕರಿಗೆ ನೀಡಿದ ಸಂದೇಶ, ಸಂತರ ಕುರಿತು ಲೇಖನ ಇತ್ಯಾದಿ ವಿಶೇಷ ಅಂಶಗಳನ್ನು ಪ್ರಕಟಿಸಲಾಗಿತ್ತು. ಇದರಿಂದಾಗಿ ದೈನಿಕದ ಸಾತ್ತ್ವಿಕತೆ ಇನ್ನಷ್ಟು ಹೆಚ್ಚಳವಾಯಿತು.

. ದೈನಿಕಕ್ಕೆ ಸಂಬಂಧಪಟ್ಟ ಸೇವೆ ಮಾಡುವ ಸಾಧಕರು ಗುರುಪೂರ್ಣಿಮೆಯ ನಿಮಿತ್ತದಿಂದ ಮಾಡಿದ ಸೇವೆಯು ಇತರ ದಿನಗಳ ತುಲನೆಯಲ್ಲಿ ಹೆಚ್ಚು ಭಾವಪೂರ್ಣವಾಗಿರುವುದರಿಂದ ಇತರ ದಿನದ ತುಲನೆಯಲ್ಲಿ ಗುರುಪೂರ್ಣಿಮೆಯ ವಿಶೇಷ ಸಂಚಿಕೆಯ ಸಂರಚನೆಯು ಹೆಚ್ಚು ಸಾತ್ತ್ವಿಕವಾಗಿದೆ.

ಸಂಕ್ಷಿಪ್ತದಲ್ಲಿ ಹೇಳಬೇಕೆಂದರೆ ದೈನಿಕ ‘ಸನಾತನ ಪ್ರಭಾತ’ದ ಕಪ್ಪುಬಿಳುಪು ಸಂಚಿಕೆಯ ತುಲನೆಯಲ್ಲಿ ಗುರುಪೂರ್ಣಿಮೆಯ ಬಣ್ಣದ ವಿಶೇಷಾಂಕದಲ್ಲಿ ಅತ್ಯಧಿಕ ಸಾತ್ತ್ವಿಕತೆ ನಿರ್ಮಾಣವಾಗಿರುವುದರಿಂದ ಅದರಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಣೆಗೊಂಡವು.’  – ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ವಿ-ಅಂಚೆ ವಿಳಾಸ [email protected]