ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲೆ ದತ್ತನ ತಾರಕ ಮತ್ತು ಮಾರಕ ನಾಮಜಪಗಳಿಂದಾದ ಪರಿಣಾಮ

ನಾವೀನ್ಯಪೂರ್ಣ ಆಧ್ಯಾತ್ಮಿಕ  ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು’ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷೆ

ಸೌ. ಮಧುರಾ ಕರ್ವೆ

‘ಸಮಾಜದಲ್ಲಿ ಹೆಚ್ಚುಕಡಿಮೆ  ಪ್ರಮಾಣದಲ್ಲಿ ಎಲ್ಲರಿಗೂ ಕೆಟ್ಟ ಶಕ್ತಿಗಳ ತೊಂದರೆ ಇರುತ್ತದೆ. ಕೆಟ್ಟ ಶಕ್ತಿಗಳಿಂದಾಗಿ ವ್ಯಕ್ತಿಗೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳಾಗುತ್ತವೆ, ಹಾಗೆಯೇ ಜೀವನದಲ್ಲಿ ಇತರ ಅಡಚಣೆಗಳೂ ಬರುತ್ತವೆ. ಕೆಟ್ಟ ಶಕ್ತಿಗಳು ಸಾಧಕರಿಗೆ ಸಾಧನೆಯಲ್ಲಿಯೂ ಅಡಚಣೆ ತರುತ್ತದೆ; ಆದರೆ ದುರ್ದೈವದಿಂದ ಹೆಚ್ಚಿನವರಿಗೆ ಕೆಟ್ಟ ಶಕ್ತಿಗಳ ತೊಂದರೆಯ ಕುರಿತು ಜ್ಞಾನವಿಲ್ಲ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ನಾಮಜಪ-ಸಾಧನೆ ಮಾಡುವುದೇ ಪರಿಣಾಮಕಾರಿ ಉಪಾಯವಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆ ಮಾಡುವ ಉಚ್ಚ ದೇವತೆಗಳ ಪೈಕಿ ಒಬ್ಬರೆಂದರೆ ದತ್ತಗುರುಗಳು. ಪ್ರಸ್ತುತ ಈ ಹಿಂದಿನಂತೆ ಯಾರೂ ಶ್ರಾದ್ಧ-ಪಕ್ಷ ಇತ್ಯಾದಿ, ಹಾಗೆಯೇ ಸಾಧನೆಯನ್ನೂ ಮಾಡದಿರುವುದರಿಂದ ಹೆಚ್ಚಿನವರಿಗೆ ಪೂರ್ವಜರ ಅತೃಪ್ತ ಲಿಂಗದೇಹಗಳಿಂದ ಆಧ್ಯಾತ್ಮಿಕ ತೊಂದರೆಯಾಗುತ್ತದೆ. ದತ್ತನ ನಾಮಜಪ ಮಾಡುವುದರಿಂದ ಉತ್ಪನ್ನವಾಗುವ ಶಕ್ತಿಯಿಂದ ನಾಮಜಪ ಮಾಡುವವರ ಸುತ್ತಲೂ ಸಂರಕ್ಷಕ-ಕವಚವು ತಯಾರಾಗುತ್ತದೆ. ದತ್ತನ ನಾಮಜಪದಿಂದ ಅತೃಪ್ತ ಪೂರ್ವಜರಿಗೆ ಗತಿ ಸಿಗುತ್ತದೆ. ಆದ್ದರಿಂದ ವ್ಯಕ್ತಿಗೆ ಅವರಿಂದಾಗುವ ತೊಂದರೆಗಳ ಪ್ರಮಾಣವು ಕಡಿಮೆಯಾಗುತ್ತದೆ. ಯಾವುದೇ ವಿಷಯವನ್ನು ಕಾಲಾನುಸಾರ ಮಾಡಿದರೆ, ಅದರಿಂದ ಹೆಚ್ಚು ಲಾಭವಾಗುತ್ತದೆ. ‘ಸದ್ಯ ಕಾಲಾನುಸಾರ ಯಾವ ವಿಧದ ನಾಮಜಪಗಳಿಂದ ದೇವತೆಗಳ ತಾರಕ ಮತ್ತು ಮಾರಕ ತತ್ತ್ವವು ಹೆಚ್ಚು ಸಿಗುತ್ತದೆ’, ಎಂದು ಅಧ್ಯಾತ್ಮ ಶಾಸ್ತ್ರದ ದೃಷ್ಟಿಯಿಂದ ಅಧ್ಯಯನ ಮಾಡಿ ದೇವತೆಗಳ ನಾಮಜಪವನ್ನು ಧ್ವನಿ ಮುದ್ರಣ ಮಾಡಿದ್ದಾರೆ. ಇದಕ್ಕಾಗಿ ಸನಾತನದ ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಧಕಿ ಕು. ತೇಜಲ ಪಾತ್ರೀಕರ ಇವರು (ಸಂಗೀತ  ಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ) ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನಕ್ಕನುಸಾರ ಅನೇಕ ಪ್ರಯೋಗಗಳನ್ನು ಮಾಡಿದರು. ಅವುಗಳಲ್ಲಿ ಈ ನಾಮಜಪಗಳು ಸಿದ್ಧವಾಗಿವೆ (ತಯಾರಾಗಿದೆ). ಆದ್ದರಿಂದ  ಈ ನಾಮಜಪವನ್ನು ಮಾಡಿದರೆ ಅವುಗಳಿಂದ ಕಾಲಾನುಸಾರ ಆವಶ್ಯಕವಾಗಿರುವ ಆಯಾ ದೇವತೆಗಳ ತಾರಕ ಅಥವಾ ಮಾರಕ ತತ್ತ್ವವು ಪ್ರತಿಯೊಬ್ಬರಿಗೆ ಅವರ ಭಾವಕ್ಕನುಸಾರ ಸಿಗಲು ಸಹಾಯವಾಗುತ್ತದೆ. ಪಿತೃಪಕ್ಷದ ಕಾಲದಲ್ಲಿ ದತ್ತನ ‘ಓಂ ಓಂ ಶ್ರೀ ಗುರುದೇವ ದತ್ತ ಓಂ ಓಂ’ ಈ ತಾರಕ ಮತ್ತು ಮಾರಕ ನಾಮಜಪಗಳಿಂದ ವ್ಯಕ್ತಿಯ ಮೇಲಾಗುವ ಪರಿಣಾಮವನ್ನು ವಿಜ್ಞಾನದ ಮಾಧ್ಯಮದಿಂದ ಅಧ್ಯಯನಕ್ಕಾಗಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.)’ ಈ ಉಪಕರಣವನ್ನು ಬಳಸಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ : ಈ ಪರೀಕ್ಷಣೆಯಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ (ಟಿಪ್ಪಣಿ) ಓರ್ವ ಸಾಧಕಿ ಮತ್ತು ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಓರ್ವ ಸಾಧಕರುಪಾಲ್ಗೊಂಡಿದ್ದರು. ಈ ಪರೀಕ್ಷಣೆಯಲ್ಲಿ ಮುಂದಿನಂತೆ ಒಟ್ಟು ೬ ಪ್ರಯೋಗಗಳನ್ನು ಮಾಡಲಾಯಿತು.

ಟಿಪ್ಪಣಿ : ಆಧ್ಯಾತ್ಮಿಕ ತೊಂದರೆ : ಆಧ್ಯಾತ್ಮಿಕ ತೊಂದರೆ ಇರುವುದೆಂದರೆ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ.೫೦ ಅಥವಾ ಅದಕ್ಕಿಂತ ಅಧಿಕ ಪ್ರಮಾಣದಲ್ಲಿರುವುದೆಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ೪೯ ಇರುವುದೆಂದರೆ ಮಧ್ಯಮ ತೊಂದರೆ ಮತ್ತು ಶೇ. ೩೦ ಕ್ಕಿಂತ ಕಡಿಮೆ ಇರುವುದೆಂದರೆ ಮಂದ ಆಧ್ಯಾತ್ಮಿಕ ತೊಂದರೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಗುರುತಿಸಬಲ್ಲರು.

ಅ. ಮಾರಕ ನಾಮಜಪದ ೩ ಪ್ರಯೋಗಗಳು : ಪರೀಕ್ಷಣೆಯಲ್ಲಿ ಸಾಧಕರಿಗೆ ದತ್ತನ ಮಾರಕ ನಾಮಜಪವನ್ನು ಸಣ್ಣ, ಮಧ್ಯಮ ಮತ್ತು ದೊಡ್ಡ ಧ್ವನಿಯಲ್ಲಿ ಪ್ರತಿ ಬಾರಿ ೧ ಗಂಟೆಯ ಕಾಲ ಕೇಳಿಸಲಾಯಿತು.

ಆ. ತಾರಕ ನಾಮಜಪದ ೩ ಪ್ರಯೋಗ : ಪರೀಕ್ಷಣೆಯಲ್ಲಿ ಸಾಧಕರಿಗೆ ದತ್ತನ ತಾರಕ ನಾಮಜಪವನ್ನು ಸಣ್ಣ, ಮಧ್ಯಮ ಮತ್ತು ದೊಡ್ಡ ಧ್ವನಿಯಲ್ಲಿ ಪ್ರತಿ ಬಾರಿ ೧ ಗಂಟೆಯ ಕಾಲ ಕೇಳಿಸಲಾಯಿತು. ಪ್ರತಿಯೊಂದು ಪ್ರಯೋಗದ ಮೊದಲು ಮತ್ತು ಪ್ರಯೋಗದ ನಂತರ ಇಬ್ಬರೂ ಸಾಧಕರ ‘ಯು.ಎ.ಎಸ್.’ ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು. ಇವೆಲ್ಲ ನಿರೀಕ್ಷಣೆಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು.

೧ ಅ. ನಕಾರಾತ್ಮಕ ಊರ್ಜೆಯ ಕುರಿತು ನಿರೀಕ್ಷಣೆಗಳ ವಿಶ್ಲೇಷಣೆ

೧ ಅ ೧. ದತ್ತನ ಮಾರಕ ನಾಮಜಪವನ್ನು ಕೇಳಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಲ್ಲಿರುವ ನಕಾರಾತ್ಮಕ ಊರ್ಜೆಯು ಬಹಳ ಕಡಿಮೆಯಾಗುವುದು

ಮೇಲಿನ ಕೋಷ್ಟಕದಿಂದ, ಸಣ್ಣ ಧ್ವನಿಯಲ್ಲಿ ಮಾರಕ ನಾಮಜಪವನ್ನು ಕೇಳಿದಾಗ ಇಬ್ಬರೂ ಸಾಧಕರಲ್ಲಿ ನಕಾರಾತ್ಮಕ ಊರ್ಜೆಯು ಅತ್ಯಧಿಕ ಪ್ರಮಾಣದಲ್ಲಿ ಕಡಿಮೆಯಾಯಿತು, ಎಂದು ಗಮನಕ್ಕೆ ಬರುತ್ತದೆ.

೧ ಅ ೨. ದತ್ತನ ತಾರಕ ನಾಮಜಪವನ್ನು ಕೇಳಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ನಕಾರಾತ್ಮಕ ಊರ್ಜೆಯು ಬಹಳ ಕಡಿಮೆಯಾಗುವುದು

ಮೇಲಿನ ಕೋಷ್ಟಕದಿಂದ ನಾಮಜಪವನ್ನು ಮಧ್ಯಮ ಧ್ವನಿಯಲ್ಲಿ ಕೇಳಿದ್ದರಿಂದ ಇಬ್ಬರೂ ಸಾಧಕರಲ್ಲಿ ನಕಾರಾತ್ಮಕ ಊರ್ಜೆಯು ಅತ್ಯಧಿಕ ಪ್ರಮಾಣದಲ್ಲಿ ಕಡಿಮೆಯಾಯಿತು, ಎಂಬುದು ಗಮನಕ್ಕೆ ಬರುತ್ತದೆ.

ಮೇಲಿನ ಅಂಶಗಳ ತುಲನಾತ್ಮಕ ಅಧ್ಯಯನದಿಂದ, ಸಣ್ಣ ಧ್ವನಿಯ ಮಾರಕ ನಾಮಜಪದಿಂದ ಇಬ್ಬರೂ ಸಾಧಕರ ಮೇಲೆ ಅತ್ಯಧಿಕ ಪರಿಣಾಮವಾಯಿತು, ಎಂಬುದು ಗಮನಕ್ಕೆ ಬರುತ್ತದೆ.

೧ ಆ. ಸಕಾರಾತ್ಮಕ ಊರ್ಜೆಯ ಕುರಿತಾದ ನಿರೀಕ್ಷಣೆಗಳ ವಿಶ್ಲೇಷಣೆ

೧ ಆ ೧. ದತ್ತನ ಮಾರಕ ನಾಮಜಪವನ್ನು ಕೇಳಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಸಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಹೆಚ್ಚಳವಾಗುವುದು

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.

೧. ಸಾಧಕಿಗೆ ದೊಡ್ಡ ಧ್ವನಿಯಲ್ಲಿ ಮಾರಕ ನಾಮಜಪವನ್ನು ಕೇಳಿದ್ದರಿಂದ ಅತ್ಯಧಿಕ ಲಾಭವಾಯಿತು.

೨. ಸಾಧಕನಿಗೆ ಮಧ್ಯಮ ಧ್ವನಿಯಲ್ಲಿ ಮಾರಕ ನಾಮಜಪವನ್ನು ಕೇಳಿದ್ದರಿಂದ ಅತ್ಯಧಿಕ ಲಾಭವಾಯಿತು.

೧ ಆ ೨. ದತ್ತನ ತಾರಕ ನಾಮಜಪವನ್ನು ಕೇಳಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಇಬ್ಬರೂ ಸಾಧಕರ ಸಕಾರಾತ್ಮಕ ಊರ್ಜೆಯು ಹೆಚ್ಚಳವಾಗುವುದು

ಮೇಲಿನ ಕೋಷ್ಟಕದಿಂದ, ಮಧ್ಯಮ ಧ್ವನಿಯಲ್ಲಿ ತಾರಕ ನಾಮಜಪದಿಂದ ಇಬ್ಬರೂ ಸಾಧಕರಿಗೆ ಅತ್ಯಧಿಕ ಲಾಭವಾಯಿತು, ಎಂದು ಗಮನಕ್ಕೆ ಬರುತ್ತದೆ.

ಮೇಲಿನ ಅಂಶಗಳ ತುಲನಾತ್ಮಕ ಅಧ್ಯಯನದಿಂದ, ಸಾಧಕಿಗೆ ದೊಡ್ಡ ಧ್ವನಿಯಲ್ಲಿ ಮಾರಕ ನಾಮಜಪವನ್ನು ಕೇಳಿದ್ದರಿಂದ ಮತ್ತು ಸಾಧಕನಿಗೆ ಮಧ್ಯಮ ಧ್ವನಿಯಲ್ಲಿ ಮಾರಕ ನಾಮಜಪ ಕೇಳಿದ್ದರಿಂದ ಅತ್ಯಧಿಕ ಲಾಭವಾಯಿತು, ಎಂದು ಗಮನಕ್ಕೆ ಬರುತ್ತದೆ.

ನಿಷ್ಕರ್ಷ : ಪಿತೃಪಕ್ಷದ ಸಮಯದಲ್ಲಿ ದತ್ತನ ‘ಓಂ ಓಂ ಶ್ರೀ ಗುರುದೇವ ದತ್ತ ಓಂ ಓಂ’ ತಾರಕ ಮತ್ತು ಮಾರಕ ನಾಮಜಪಗಳಿಂದ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲೆ ಸಕಾರಾತ್ಮಕ ಪರಿಣಾಮವಾಯಿತು; ಆದರೆ ತಾರಕ ನಾಮಜಪದ ತುಲನೆಯಲ್ಲಿ ಮಾರಕ ನಾಮಜಪದ ಅವರ ಮೇಲೆ ಹೆಚ್ಚು ಸಕಾರಾತ್ಮಕ ಪರಿಣಾಮವಾಯಿತು.

೩. ಪರೀಕ್ಷಣೆಯಲ್ಲಿ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ದೇವತೆಯ ‘ತಾರಕ’ ಮತ್ತು ‘ಮಾರಕ’ ನಾಮಜಪಗಳ ಮಹತ್ವ : ದೇವತೆಯ ತಾರಕ ಮತ್ತು ಮಾರಕ ಹೀಗೆ ಎರಡು ರೂಪಗಳಿರುತ್ತವೆ. ಭಕ್ತನಿಗೆ ಆಶೀರ್ವಾದ ನೀಡುವ ದೇವತೆಯ ರೂಪವೆಂದರೆ ತಾರಕ ರೂಪ, ಉದಾ. ಆಶೀರ್ವಾದ ನೀಡುವ ಮುದ್ರೆಯಲ್ಲಿ ಶ್ರೀಕೃಷ್ಣ. ದೇವತೆಯ ಅಸುರರ ಸಂಹಾರ ಮಾಡುವ ರೂಪವೆಂದರೆ ಮಾರಕ ರೂಪ, ಉದಾ. ಶಿಶುಪಾಲರ ಮೇಲೆ ಸುದರ್ಶನ ಚಕ್ರವನ್ನು ಬಿಡುವ ಶ್ರೀಕೃಷ್ಣ. ದೇವತೆಯ ತಾರಕ ಅಥವಾ ಮಾರಕ ರೂಪಕ್ಕೆ ಸಂಬಂಧಿಸಿದ ನಾಮಜಪವೆಂದರೆ ತಾರಕ ಅಥವಾ ಮಾರಕ ನಾಮಜಪ. ದೇವತೆಗಳ ಬಗ್ಗೆ ಸಾತ್ತ್ವಿಕ ಭಾವವು ಮೂಡಲು, ಹಾಗೆಯೇ ಚೈತನ್ಯ, ಆನಂದ ಮತ್ತು ಶಾಂತಿ ಇವುಗಳ ಅನುಭೂತಿಯು ಆದಷ್ಟು ಬೇಗನೆ ಬರಬೇಕೆಂದು ಮತ್ತು ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗಲು ದೇವತೆಗಳ ತಾರಕ ರೂಪದ ನಾಮಜಪವು ಆವಶ್ಯಕವಾಗಿರುತ್ತದೆ. ದೇವತೆಗಳಿಂದ ಶಕ್ತಿ ಮತ್ತು ಚೈತನ್ಯವು ಗ್ರಹಣ ಮಾಡಲು ಮತ್ತು ಕೆಟ್ಟ ಶಕ್ತಿಗಳ ನಾಶ ಮಾಡಲು ದೇವತೆಯ ಮಾರಕ ರೂಪದ ನಾಮಜಪ ಆವಶ್ಯಕವಾಗಿರುತ್ತದೆ.

೩ ಆ. ದತ್ತನ ತಾರಕ ಮತ್ತು ಮಾರಕ ನಾಮಜಪದಿಂದ ಪ್ರಕ್ಷೇಪಿತವಾದ ಚೈತನ್ಯದಿಂದ ಪರೀಕ್ಷಣೆಯಲ್ಲಿ ಇಬ್ಬರೂ ಸಾಧಕರಿಗೆ ಆಧ್ಯಾತ್ಮಿಕ ಲಾಭವಾಗುವುದು : ಪರೀಕ್ಷಣೆಯಲ್ಲಿದ್ದ ಇಬ್ಬರೂ ಸಾಧಕರಿಗೆ ಕೆಟ್ಟ ಶಕ್ತಿಗಳ ಮತ್ತು ಪೂರ್ವಜರ ತೊಂದರೆಯೂ ಇದೆ. ಪ್ರಯೋಗಗಳ ಆರಂಭದಲ್ಲಿ ಇಬ್ಬರೂ ಸಾಧಕರಲ್ಲಿ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ಎರಡೂ ಪ್ರಕಾರಗಳ ನಕಾರಾತ್ಮಕ ಊರ್ಜೆಯು ಬಹಳಷ್ಟು ಪ್ರಮಾಣದಲ್ಲಿ ಕಂಡು ಬಂದವು. (‘ಇನ್ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯು ವ್ಯಕ್ತಿಯ ಸುತ್ತಲಿನ ಕಪ್ಪು ಆವರಣವನ್ನು ದರ್ಶಿಸುತ್ತದೆ ಮತ್ತು ‘ಅಲ್ಟಾವೈಲೆಟ್’ ಈ ನಕಾರಾತ್ಮಕ ಊರ್ಜೆಯು ವ್ಯಕ್ತಿಯ ದೇಹದಲ್ಲಿ ಕೆಟ್ಟ ಶಕ್ತಿಗಳು ಸಂಗ್ರಹಿಸಿದ ತೊಂದರೆದಾಯಕ ಶಕ್ತಿಯನ್ನು ದರ್ಶಿಸುತ್ತದೆ.) ಸಾಧಕರಲ್ಲಿ ಸಕಾರಾತ್ಮಕ ಊರ್ಜೆಯೂ ಇತ್ತು. ದತ್ತನ ತಾರಕ ಮತ್ತು ಮಾರಕ ನಾಮಜಪದಿಂದ ಪ್ರಕ್ಷೇಪಿತವಾದ ಚೈತನ್ಯವನ್ನು ಸಾಧಕರು ಅವರ ಕ್ಷಮತೆಗನುಸಾರ ಗ್ರಹಣ ಮಾಡಿದುದರಿಂದ ಅವರಲ್ಲಿ ನಕಾರಾತ್ಮಕ ಊರ್ಜೆಯು ಬಹಳ ಕಡಿಮೆಯಾಯಿತು ಮತ್ತು ಅವರ ಸಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಯಿತು.

೩ ಇ. ಪಿತೃಪಕ್ಷದಲ್ಲಿ ದತ್ತನ ತಾರಕ ನಾಮಜಪದ ತುಲನೆಯಲ್ಲಿ ಮಾರಕ ನಾಮಜಪದ ಇಬ್ಬರೂ ಸಾಧಕರ ಮೇಲೆ ಹೆಚ್ಚು ಸಕಾರಾತ್ಮಕ ಪರಿಣಾಮವಾಗುವುದು: ಪರೀಕ್ಷಣೆಯಲ್ಲಿ ಇಬ್ಬರೂ ಸಾಧಕರಿಗೆ ಕೆಟ್ಟ ಶಕ್ತಿಗಳ ಮತ್ತು ಪೂರ್ವಜರ ತೊಂದರೆಯೂ ಇದೆ. ಪಿತೃಪಕ್ಷದ ಸಮಯದಲ್ಲಿ ಅವರ ತೊಂದರೆಗಳಲ್ಲಿ ತುಂಬಾ ಹೆಚ್ಚಳವಾಗುತ್ತದೆ. ದೇವತೆಯ ಮಾರಕ ನಾಮಜಪ ದಿಂದ ದೇವತೆಯ ಶಕ್ತಿಯ ಸ್ಪಂದನಗಳು ಸಿಗುತ್ತವೆ. ವ್ಯಕ್ತಿಗಿರುವ ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆ ಗಾಗಿ ಅವನು ಮಾರಕ ನಾಮಜಪ ಮಾಡುವುದು ಲಾಭದಾಯಕವಾಗಿದೆ. ಮಾರಕ ನಾಮಜಪವನ್ನು ಮಾಡುವುದರಿಂದ ದೇವತೆಯ ಶಕ್ತಿಯ ಸ್ಪಂದನಗಳು ವ್ಯಕ್ತಿಗೆ ಸಿಗುವುದರಿಂದ ಅವನಲ್ಲಿ ನಕಾರಾತ್ಮಕ ಸ್ಪಂದನಗಳು ಕಡಿಮೆ ಸಮಯದಲ್ಲಿ ಬಹಳ ಕಡಿಮೆ ಯಾಗುತ್ತವೆ, ಹಾಗೆಯೇ ಅವನಲ್ಲಿ ಸಕಾರಾತ್ಮಕ ಸ್ಪಂದನಗಳಲ್ಲಿ ಹೆಚ್ಚಳವಾಗುತ್ತದೆ. ಸದ್ಯದ ಕಾಲವು ಆಪತ್ಕಾಲವಾಗಿರುವುದರಿಂದ ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳ ಪ್ರಮಾಣವೂ ಬಹಳ ಹೆಚ್ಚಾಗಿದೆ. ಸಾಧಕರಿಗಾಗುವ ಆಧ್ಯಾತ್ಮಿಕ ತೊಂದರೆಗಳನ್ನು ದೂರ ಮಾಡಲು ಅವರಿಗೆ ಹೆಚ್ಚೆಚ್ಚು ಪರಿಣಾಮಕಾರಿ ಉಪಾಯಗಳ ಆವಶ್ಯಕತೆ ಇರುವುದರಿಂದ ಪರಾತ್ಪರ ಗುರು ಡಾಕ್ಟರರು ದತ್ತನ ನಾಮಜಪದ ಮೊದಲು ಮತ್ತು ನಂತರ ೨-೨ ‘ಓಂ ಸೇರಿಸಿ ಜಪವನ್ನು ಮಾಡಲು ಹೇಳಿದರು. ಯಾವಾಗ ಗುರುಗಳು ಒಂದು ವಿಷಯವನ್ನು ಮಾಡಲು ಹೇಳುವರೋ, ಆಗ ಅದರ ಹಿಂದೆ ಅವರ ಸಂಕಲ್ಪವು ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಗುರುಗಳು ಹೇಳಿದ ಕೃತಿಯನ್ನು ಸಾಧಕರು ಶ್ರದ್ಧೆಯಿಂದ ಮಾಡಿದರೆ ಅವರಿಗೆ (ಸಾಧಕರಿಗೆ) ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ. ದತ್ತನ ಮಾರಕ ನಾಮಜಪದ ಪ್ರಯೋಗಗಳ ಸಮಯದಲ್ಲಿ ಮುಂದಿನಂತೆ ಇದರ ಅನುಭವವು ಬಂದಿತು.

೧. ಇಬ್ಬರೂ ಸಾಧಕರಲ್ಲಿ ನಕಾರಾತ್ಮಕ ಊರ್ಜೆಯು ಸಣ್ಣ ಧ್ವನಿಯಲ್ಲಿ ಮಾರಕ ನಾಮಜಪವನ್ನು ಕೇಳಿ ದ್ದರಿಂದ ಅತ್ಯಧಿಕ ಪ್ರಮಾಣದಲ್ಲಿ ಕಡಿಮೆಯಾಯಿತು.

೨. ಸಾಧಕಿಯಲ್ಲಿ ಸಕಾರಾತ್ಮಕ ಊರ್ಜೆಯು ದೊಡ್ಡ ಧ್ವನಿಯಲ್ಲಿ ಮಾರಕ ನಾಮಜಪವನ್ನು ಕೇಳಿದ್ದರಿಂದ ಮತ್ತು ಸಾಧಕನಲ್ಲಿ ಸಕಾರಾತ್ಮಕ ಊರ್ಜೆಯು ಮಧ್ಯಮ ಧ್ವನಿಯಲ್ಲಿ ಮಾರಕ ನಾಮಜಪವನ್ನು ಕೇಳಿದ್ದರಿಂದ ಅತ್ಯಧಿಕ ಹೆಚ್ಚಳವಾಯಿತು.

ಟಿಪ್ಪಣಿ – ಸಣ್ಣ ಧ್ವನಿಯ ನಾಮಜಪವು ಸತ್ತ್ವಪ್ರಧಾನ, ಮಧ್ಯಮ ಧ್ವನಿಯ ನಾಮಜಪವು ಸತ್ತ್ವ-ರಜಪ್ರಧಾನ ಮತ್ತು ದೊಡ್ಡ ಧ್ವನಿಯಲ್ಲಿ ನಾಮಜಪವು ರಜ-ಸತ್ತ್ವಪ್ರಧಾನವಾಗಿದೆ. ದೊಡ್ಡ ಧ್ವನಿಯಲ್ಲಿ ನಾಮಜಪವು ಸಗುಣ, ಮಧ್ಯಮ ಧ್ವನಿಯ ನಾಮಜಪವು ಸಗುಣ-ನಿರ್ಗುಣ ಮತ್ತು ಸಣ್ಣ ಧ್ವನಿಯ ನಾಮಜಪವು ನಿರ್ಗುಣ-ಸಗುಣ ಸ್ತರದ್ದಾಗಿರುವುದರಿಂದ ಹೆಚ್ಚೆಚ್ಚು ಸೂಕ್ಷ್ಮವಾಗಿದೆ; ಆದ್ದರಿಂದ ಅದು ಅತ್ಯಧಿಕ ಪರಿಣಾಮಕಾರಿಯಾಗಿದೆ.

ಸ್ವಲ್ಪದರಲ್ಲಿ, ಪಿತೃಪಕ್ಷದ ಕಾಲದಲ್ಲಿ ದತ್ತನ ‘ಓಂ ಓಂ ಶ್ರೀ ಗುರುದೇವ ದತ್ತ ಓಂ ಓಂ’ ಮಾರಕ ನಾಮಜಪವನ್ನು ಕೇಳಿದ್ದರಿಂದ ಪರೀಕ್ಷಣೆಯಲ್ಲಿದ್ದ ಸಾಧಕರ ಆಧ್ಯಾತ್ಮಿಕ ತೊಂದರೆಯು ಬಹಳ ಕಡಿಮೆಯಾಗಿ ಅವರಿಗೆ ದತ್ತ ತತ್ತ್ವದ (ಚೈತನ್ಯದ) ಲಾಭವಾಯಿತು. ಸಾಧಕರ ಪ್ರಕೃತಿ ಮತ್ತು ಅವರ ಆವಶ್ಯಕತೆ ಇವುಗಳಿಗನುಸಾರ ಅವರಿಗೆ ಆಯಾ ಧ್ವನಿಯಲ್ಲಿ ದತ್ತನ ಮಾರಕ ನಾಮಜಪದಿಂದ ಅತ್ಯಧಿಕ ಲಾಭವಾಯಿತು.

೪. ನಾಮಜಪಗಳ ಹಿಂದೆ ಪರಾತ್ಪರ ಗುರು ಡಾ. ಆಠವಲೆಯವರ ಸಂಕಲ್ಪ : ಜಗತ್ತಿನಾದ್ಯಂತದ ಸಾಧಕರ ಆಧ್ಯಾತ್ಮಿಕ ತೊಂದರೆಗಳು ಬೇಗನೆ ದೂರವಾಗಬೇಕು, ಹಾಗೆಯೇ ಅವರಿಗೆ ದೇವತೆಗಳ ತತ್ತ್ವಗಳಿಂದ ಹೆಚ್ಚೆಚ್ಚು ಲಾಭವಾಗಬೇಕೆಂದು, ಪರಾತ್ಪರ ಗುರು ಆಠವಲೆಯವರು ಕಾಲಾನುಸಾರ ನಾಮಜಪಗಳ ನಿರ್ಮಿತಿಯನ್ನು ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಅವರ ಪರೋಕ್ಷ ಸಂಕಲ್ಪವು ಕಾರ್ಯನಿರತವಾಗಿರುವುದರಿಂದ ಸಾಧಕರು ಈ ನಾಮಜಪಗಳಿಗನುಸಾರ ನಾಮಜಪವನ್ನು ಮಾಡಿದರೆ ಅವರ ತೊಂದರೆಗಳು ದೂರವಾಗಲು, ಹಾಗೆಯೇ ಅವರಿಗೆ ದೇವತೆಗಳ ತತ್ತ್ವಗಳ ಲಾಭವಾಗಲು ನಿಶ್ಚಿತವಾಗಿಯೂ ಸಹಾಯವಾಗುವುದು.’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೫.೯.೨೦೨೦)

ಈ-ಮೇಲ್ : [email protected]