ದಿನಪತ್ರಿಕೆಗಳಿಗೆ ಸಂಬಂಧಿಸಿದ ನಾವೀನ್ಯಪೂರ್ಣ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ದೈನಿಕ ‘ಸನಾತನ ಪ್ರಭಾತ’ದ ಧ್ಯೇಯವಾಗಿದೆ. ದೈನಿಕದಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ವಿಷಯದಲ್ಲಿ ಮಾರ್ಗದರ್ಶಕ ಲೇಖನಗಳನ್ನು ಪ್ರಕಟಿಸಲಾಗುತ್ತದೆ. ಹಾಗೆಯೇ ಹಿಂದೂ ಧರ್ಮದ ಮುಖ್ಯ ಹಬ್ಬ ಮತ್ತು ಉತ್ಸವಗಳ ಹಿಂದಿನ ಅಧ್ಯಾತ್ಮಶಾಸ್ತ್ರ, ಹಾಗೆಯೇ ಅವುಗಳನ್ನು ಆಚರಿಸುವ ಯೋಗ್ಯ ಪದ್ಧತಿ ಈ ಕುರಿತು ಮಾಹಿತಿಯನ್ನು ಪ್ರಕಟಿಸಲಾಗುತ್ತದೆ.

ಅಡುಗೆಯನ್ನು ಮಾಡುವಾಗ ಆಹಾರ ಪದಾರ್ಥಗಳಲ್ಲಿ ಖಾರವನ್ನು ಅತ್ಯಲ್ಪ ಪ್ರಮಾಣದಲ್ಲಿ ಉಪಯೋಗಿಸಬೇಕು !

ಖಾರದ ಪಲ್ಯವನ್ನು ತಿಂದಿದ್ದರಿಂದ ಸಾಧಕರ ಮೇಲೆ ನಕಾರಾತ್ಮಕ ಪರಿಣಾಮವಾಯಿತು. ಮಧ್ಯಮ ಖಾರದ ಪಲ್ಯವನ್ನು ತಿಂದಿದ್ದರಿಂದ ಅವರ ಮೇಲೆ ಸ್ವಲ್ಪ ಸಕಾರಾತ್ಮಕ ಪರಿಣಾಮವಾಯಿತು. ಹಾಗೆಯೇ ಖಾರವನ್ನು ಹಾಕದೇ ತಯಾರಿಸಲಾದ ಪಲ್ಯವನ್ನು ತಿಂದಿದ್ದರಿಂದ ಅವರ ಮೇಲೆ ಅತ್ಯಧಿಕ ಸಕಾರಾತ್ಮಕ ಪರಿಣಾವಾಯಿತು.

ಗಾಯತ್ರಿಮಂತ್ರದ ಪಠಣವನ್ನು ಭಾವಪೂರ್ಣವಾಗಿ ಮಾಡಿದ್ದರಿಂದ ಸಾಧಕರಿಗಾದ ಆಧ್ಯಾತ್ಮಿಕ ಲಾಭ !

ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ಆಗುವ ಪರಿಣಾಮಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡಲು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ‘ಯುನಿವರ್ಸಲ್ ಔರಾ ಸ್ಕ್ಯಾನರ್(ಯೂ.ಎ.ಎಸ್.) ಉಪಕರಣದ ಮೂಲಕ ಒಂದು ಪರೀಕ್ಷಣೆಯನ್ನು ಮಾಡಲಾಯಿತು.

ಅಖಂಡ ಭಾರತದ ನಕಾಶೆ ಮತ್ತು ಸದ್ಯದ ಭಾರತದ ನಕಾಶೆ ಇವುಗಳಿಂದ ವಾತಾವರಣದ ಮೇಲಾದ ಪರಿಣಾಮದ ಅಧ್ಯಯನ ಮಾಡಲು ‘ಪಿಪ್ ತಂತ್ರಜ್ಞಾನದ ಸಹಾಯದಿಂದ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಮಾಡಿದ ವೈಜ್ಞಾನಿಕ ಪ್ರಯೋಗ !

ಭಕ್ತರು ಮತ್ತು ಸಾಧಕರು, ಸಂತರು ಹೇಳಿದ ಶಬ್ದಗಳನ್ನು ‘ಪ್ರಮಾಣವೆಂದು ತಿಳಿದು ಅದರ ಮೇಲೆ ಶ್ರದ್ಧೆಯನ್ನಿಡುತ್ತಾರೆ; ಆದರೆ ಬುದ್ಧಿಜೀವಿಗಳಿಗೆ ಮಾತ್ರ ‘ಶಬ್ದಪ್ರಮಾಣವಲ್ಲ, ‘ಪ್ರತ್ಯಕ್ಷ ಪ್ರಮಾಣ ಬೇಕಾಗುತ್ತದೆ. ಅವರಿಗೆ ಪ್ರತಿಯೊಂದು ವಿಷಯವನ್ನು ವೈಜ್ಞಾನಿಕ ಪರೀಕ್ಷಣೆಯ ಮೂಲಕ, ಅಂದರೆ ಯಂತ್ರದಿಂದ ಸಿದ್ಧ ಮಾಡಿ ತೋರಿಸಿದರೆ ಮಾತ್ರ, ಅದು ನಿಜವೆನಿಸುತ್ತದೆ.

ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲೆ ದತ್ತನ ತಾರಕ ಮತ್ತು ಮಾರಕ ನಾಮಜಪಗಳಿಂದಾದ ಪರಿಣಾಮ

‘ಸಮಾಜದಲ್ಲಿ ಹೆಚ್ಚುಕಡಿಮೆ  ಪ್ರಮಾಣದಲ್ಲಿ ಎಲ್ಲರಿಗೂ ಕೆಟ್ಟ ಶಕ್ತಿಗಳ ತೊಂದರೆ ಇರುತ್ತದೆ. ಕೆಟ್ಟ ಶಕ್ತಿಗಳಿಂದಾಗಿ ವ್ಯಕ್ತಿಗೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳಾಗುತ್ತವೆ, ಹಾಗೆಯೇ ಜೀವನದಲ್ಲಿ ಇತರ ಅಡಚಣೆಗಳೂ ಬರುತ್ತವೆ. ಕೆಟ್ಟ ಶಕ್ತಿಗಳು ಸಾಧಕರಿಗೆ ಸಾಧನೆಯಲ್ಲಿಯೂ ಅಡಚಣೆ ತರುತ್ತದೆ; ಆದರೆ ದುರ್ದೈವದಿಂದ ಹೆಚ್ಚಿನವರಿಗೆ ಕೆಟ್ಟ ಶಕ್ತಿಗಳ ತೊಂದರೆಯ ಕುರಿತು ಜ್ಞಾನವಿಲ್ಲ.

ದೇವರಿಗೆ ಭಾವಪೂರ್ಣವಾಗಿ ನೈವೇದ್ಯವನ್ನು ತೋರಿಸಿ ಅದನ್ನು ‘ಪ್ರಸಾದ’ವೆಂಬ ಭಾವದಿಂದ ಸೇವಿಸಿದರೆ ವ್ಯಕ್ತಿಗಾಗುವ ಆಧ್ಯಾತ್ಮಿಕ ಲಾಭ

‘ಹಿಂದೂ ಧರ್ಮದಲ್ಲಿ ದೇವರಿಗೆ ನೈವೇದ್ಯವನ್ನು ತೋರಿಸಿ ಅದನ್ನು ಪ್ರಸಾದವೆಂದು ಸೇವಿಸಲಾಗುತ್ತದೆ. ‘ದೇವರಿಗೆ ನೈವೇದ್ಯವನ್ನು ತೋರಿಸಿ ಅದನ್ನು ಪ್ರಸಾದವೆಂದು ಸೇವಿಸುವವರ ಮೇಲೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಯಾವ ಪರಿಣಾಮವಾಗುತ್ತದೆ ?’, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ರಾಮನಾಥಿ (ಗೋವಾ)ಯಲ್ಲಿ ಸನಾತನದ ಆಶ್ರಮದಲ್ಲಿ ‘ಯೂ.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು.

ಸಕ್ಕರೆ ಹಾಕಿ ಮಾಡಿದ ಪಾಯಸ ಮತ್ತು ಬೆಲ್ಲ ಹಾಕಿ ಮಾಡಿದ ಪಾಯಸಕ್ಕೆ ಸಂಬಂಧಿಸಿದ ವೈಶಿಷ್ಟ್ಯಪೂರ್ಣ ಸಂಶೋಧನೆ !

ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನಿಂದ ಸಕ್ಕರೆಯನ್ನು ತಯಾರಿಸುವಾಗ ಕಬ್ಬಿನ ರಸವನ್ನು ಅತೀ ಹೆಚ್ಚು ತಾಪಮಾನದಲ್ಲಿ ಕುದಿಸುವುದರಿಂದ ಅದರಲ್ಲಿ ಆರೋಗ್ಯಕ್ಕೆ ಉಪಯುಕ್ತವಾಗಿರುವ ಪೋಷಕಾಂಶಗಳು (ಘಟಕಗಳು) ನಾಶವಾಗುತ್ತವೆ. ಸಕ್ಕರೆಯು ಬೆಳ್ಳಗೆ ಶುಭ್ರವಾಗಿ ಕಾಣಿಸಲು ಅದರ ಮೇಲೆ ರಾಸಾಯನಿಕ ಪ್ರಕ್ರಿಯೆ ಮಾಡಲಾಗುತ್ತದೆ. ಕಾರ್ಖಾನೆಯಲ್ಲಿ ವಿದ್ಯುತ್ ಸಂಚಾಲಿತ ಆಧುನಿಕ ಯಂತ್ರಗಳನ್ನು ಉಪಯೋಗಿಸಿ ಸಕ್ಕರೆಯನ್ನು ಉತ್ಪಾದಿಸಲಾಗುತ್ತದೆ.

ವಿದ್ಯುತ್ ದೀಪದ ಪ್ಲಾಸ್ಟಿಕ್ ಹಣತೆ ಮತ್ತು ಮೇಣದ ಹಣತೆ ಹಚ್ಚಿದ್ದರಿಂದ ನಕಾರಾತ್ಮಕ ಸ್ಪಂದನ ಹಾಗೂ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯಿರುವ ಮಣ್ಣಿನ ಹಣತೆಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು

ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯಿರುವ ಮಣ್ಣಿನ  ಹಣತೆಗಳು ಸಾತ್ತ್ವಿಕತೆಯ ದೃಷ್ಟಿಯಿಂದ ಮಹತ್ವದ್ದಾಗಿವೆ. ಈ ಮಹತ್ವದ ಕುರಿತು ಸಮಾಜಕ್ಕೆ ಅರಿವು ಮೂಡಿಸಲು ‘ವಿದ್ಯುತ್ ದೀಪವಿರುವ ಪ್ಲಾಸ್ಟಿಕ್ ‘ಚೀನಿ ಹಣತೆ, ಮೇಣದ ಹಣತೆ ಹಾಗೂ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯಿರುವ ಪಾರಂಪಾರಿಕ ಮಣ್ಣಿನ ಹಣತೆಯನ್ನು ಹಚ್ಚಿದಾಗ ಆ ಪ್ರತಿಯೊಂದು ಹಣತೆಯಿಂದ ಪ್ರಕ್ಷೇಪಿತಗೊಳ್ಳುವ ಸ್ಪಂದನಗಳಿಂದ ವಾತಾವರಣದ ಮೇಲಾಗುವ ಪರಿಣಾಮವನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡುವುದೇ ಆ ಪರೀಕ್ಷಣೆಯ ಉದ್ದೇಶವಾಗಿತ್ತು.

ವಾತಾವರಣದಲ್ಲಿ ಸಾಮಾನ್ಯ ಆಕಾಶದೀಪದಿಂದ ಬಹಳಷ್ಟು ನಕಾರಾತ್ಮಕ ಸ್ಪಂದನಗಳು ಮತ್ತು ಸನಾತನ-ನಿರ್ಮಿತ ಆಕಾಶದೀಪದಿಂದ ಬಹಳಷ್ಟು ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು

ಸಾಮಾನ್ಯ ಆಕಾಶದೀಪ ಮತ್ತು ‘ಸನಾತನ-ನಿರ್ಮಿತ ಆಕಾಶದೀಪ ಇವುಗಳಿಂದ ವಾತಾವರಣದ ಮೇಲಾಗುವ ಪರಿಣಾಮವನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡಲು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಒಂದು ಪರೀಕ್ಷಣೆಯನ್ನು ಮಾಡಲಾಯಿತು.

ಅಸಾತ್ತ್ವಿಕ ರಂಗೋಲಿಯಿಂದ ಬಹಳ ನಕಾರಾತ್ಮಕ ಸ್ಪಂದನಗಳು ಮತ್ತು ಸಾತ್ತ್ವಿಕ ರಂಗೋಲಿಯಿಂದ ಬಹಳ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು !

ಹಿಂದೂ ಧರ್ಮದಲ್ಲಿ ಎಲ್ಲ ಹಬ್ಬಗಳು, ಹಾಗೆಯೇ ವಿಧಿಗಳು ಯಾವುದಾದರೊಂದು ದೇವತೆಗಳೊಂದಿಗೆ ಸಂಬಂಧಿಸಿರುತ್ತದೆ. ಆಯಾ ಹಬ್ಬದ ದಿನ ಅಥವಾ ವಿಧಿಗಳ ದಿನದಂದು ಆಯಾ ದೇವತೆಯ ತತ್ತ್ವವು ವಾತಾವರಣದಲ್ಲಿ ಎಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿರುತ್ತದೆ ಅಥವಾ ವಿಧಿಗಳಿಂದಾಗಿ ಅಲ್ಲಿ ಆಕರ್ಷಿತವಾಗುತ್ತದೆ. ಆ ತತ್ತ್ವವು ಇನ್ನೂ ಹೆಚ್ಚು ಪ್ರಮಾಣದಲ್ಲಿ ಬಂದು ಎಲ್ಲರಿಗೂ ಲಾಭವಾಗಬೇಕೆಂದು, ಆ ತತ್ತ್ವಗಳನ್ನು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಿರಿ.