ದೇಶದ ನಿಜವಾದ ಇತಿಹಾಸವನ್ನು ಮಂಡಿಸಲು ಅವಿರತವಾಗಿ ಶ್ರಮಿಸುತ್ತಿರುವ ಬೆಂಗಳೂರಿನ ‘ಪದ್ಮಭೂಷಣ’ ಡಾ. ಪ್ರಾ. ಎಸ್‌.ಎಲ್. ಭೈರಪ್ಪ (ವಯಸ್ಸು ೯೩ ವರ್ಷಗಳು) !

ಬೆಂಗಳೂರಿನ ಡಾ. ಪ್ರಾ. ಎಸ್‌.ಎಲ್. ಭೈರಪ್ಪನವರು ಜುಲೈ ೨೦, ೧೯೩೧ ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತಶಿವರ ಎಂಬ ಗ್ರಾಮದಲ್ಲಿ ಜನಿಸಿದರು. ಚಿಕ್ಕಂದಿನಲ್ಲೇ ‘ಬ್ಯುಬೊನಿಕ್‌ ಪ್ಲೆಗ್‌’ನಿಂದ ಅವರು ತಮ್ಮ ತಾಯಿ ಮತ್ತು ಸಹೋದರರನ್ನು ಕಳೆದುಕೊಂಡರು. ಶಿಕ್ಷಣಕ್ಕಾಗಿ ಹಣ ಸಂಪಾದಿಸಲು ಅವರು ಚಿಕ್ಕ-ಪುಟ್ಟ ಕೆಲಸಗಳನ್ನು ಮಾಡಿದರು ಮತ್ತು ಭಿಕ್ಷೆಯನ್ನೂ ಬೇಡಿದರು. ಬಾಲ್ಯದಲ್ಲಿ ಅವರ ಮೇಲೆ ಲೇಖಕರಾದ ಗೊರೂರು ರಾಮಸ್ವಾಮಿ ಅಯ್ಯಂಗಾರರವರ ಪ್ರಭಾವವಿತ್ತು.

ಶ್ರೀ. ಭೈರಪ್ಪನವರು ತಮ್ಮ ೧೩ನೇ ವಯಸ್ಸಿನಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಶ್ರೀ. ಭೈರಪ್ಪನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚನ್ನರಾಯಪಟ್ಟಣ ತಾಲೂಕಿನಲ್ಲಿ ಪೂರ್ಣಗೊಳಿಸಿದರು ಮತ್ತು ಅನಂತರ ಅವರು ಮೈಸೂರಿಗೆ ಹೋಗಿ ತಮ್ಮ ಮುಂದಿನ ಶಿಕ್ಷಣವನ್ನು ಪೂರ್ಣಗೊಳಿಸಿದರು. ಶ್ರೀ ಭೈರಪ್ಪನವರು ಶಾಲಾ ಶಿಕ್ಷಣ ಪಡೆಯುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಶಾಲೆಯಿಂದ ಹೊರಬಂದು ತಮ್ಮ ಚಿಕ್ಕಪ್ಪನ ಮಗನ ಸಲಹೆಯ ಮೇರೆಗೆ ಅವರೊಂದಿಗೆ ಆ ವರ್ಷಪೂರ್ತಿ ತಿರುಗಾಡಿದರು. ಅವರು ಮುಂಬಯಿಯಲ್ಲಿ ‘ರೇಲ್ವೆ ಪೊರ್ಟರ್‌'(ಕೂಲಿ) ಆಗಿ ಕೆಲಸ ಮಾಡಿದರು. ಮುಂಬಯಿಯಲ್ಲಿ ಅವರು ಸಾಧುಗಳ ಗುಂಪನ್ನು ಭೇಟಿಯಾದರು ಮತ್ತು ಆಧ್ಯಾತ್ಮಿಕ ಶಾಂತಿ ಪಡೆಯಲು ಅವರೊಂದಿಗೆ ಸೇರಿಕೊಂಡರು. ‘ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳ ಬಗ್ಗೆ ಪ್ರೀತಿ, ಐತಿಹಾಸಿಕ ಮತ್ತು ಸಾಮಾಜಿಕ ವಿಷಯಗಳಲ್ಲಿ ಆಸಕ್ತಿ, ಸತ್ಯ ಮತ್ತು ವಾಸ್ತವಿಕತೆಯ ಹುಡುಕಾಟ, ಸಾಹಿತ್ಯಿಕ ದೃಷ್ಟಿಕೋನ ಮತ್ತು ಪ್ರಯಾಣದ ಅನುಭವ’ ಈ ಎಲ್ಲ ಕಾರಣಗಳಿಂದ ಡಾ. ಎಸ್‌.ಎಲ್‌ ಭೈರಪ್ಪನವರಿಗೆ ಇತಿಹಾಸ ಸಂಶೋಧನೆ ಮಾಡಲು, ಹಾಗೂ ಅದರ ಆಧಾರದ ಮೇಲೆ ಪ್ರಭಾವಶಾಲಿ ಕಾದಂಬರಿಗಳನ್ನು ರಚಿಸುವ ಪ್ರೇರಣೆ ಸಿಕ್ಕಿತು.

ವಿಶೇಷ ಸರಣಿ


ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು ಮಾಡಿದ ತ್ಯಾಗವು ಸರ್ವೋಚ್ಚವಾಗಿದೆ, ಅದರಂತೆಯೇ ಇಂದಿಗೂ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರಗಳ ರಕ್ಷಣೆಗಾಗಿ ‘ಶಿಲೆದಾರ’ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮತ್ತು ಅವರ ಹಿಂದು ಧರ್ಮರಕ್ಷಣೆಯ ಹೋರಾಟದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರರು’ ಎಂಬ ಸರಣಿಯ ಮೂಲಕ ಇತರರಿಗೂ ಪ್ರೇರಣೆ ಸಿಗುತ್ತದೆ. ಈ ಉದಾಹರಣೆಗಳಿಂದ ನಮ್ಮ ಮನಸ್ಸಿನ ಚಿಂತೆ ದೂರವಾಗಿ ಉತ್ಸಾಹ ಮೂಡುತ್ತದೆ ! – ಸಂಪಾದಕರು

ಡಾ. ಭೈರಪ್ಪನವರು ‘ತತ್ತ್ವಜ್ಞಾನ’ದ ವಿಷಯದಲ್ಲಿ ‘ಎಮ್‌.ಎ.’ (ಸ್ನಾತಕೋತ್ತರ ಕಲಾ ಶಾಖೆ) ಮತ್ತು ‘ಸೌಂದರ್ಯಶಾಸ್ತ್ರ’ದಲ್ಲಿ ಪಿ.ಎಚ್‌.ಡಿ (ವಿದ್ಯಾವಾಚಸ್ಪತಿ) ಪಡೆದಿದ್ದಾರೆ. ಡಾ. ಎಸ್‌.ಎಲ್. ಭೈರಪ್ಪನವರು ‘ತತ್ತ್ವಜ್ಞಾನ’ದ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಅವರು ‘ರಾಷ್ಟ್ರೀಯ ಪ್ರಾಧ್ಯಾಪಕ’ರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ‘ಎನ್‌.ಸಿ.ಈ.ಆರ್‌.ಟಿ.’ಯಲ್ಲಿ (‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು’) ೩ ದಶಕಗಳಿಗಿಂತ ಹೆಚ್ಚು ಕಾಲ ‘ತತ್ತ್ವಶಾಸ್ತ್ರದ ಪ್ರಾಧ್ಯಾಪಕ’ರಾಗಿ ಕೆಲಸ ಮಾಡಿದ್ದಾರೆ. ಅವರ ಅನೇಕ ಕಾದಂಬರಿಗಳು ಹಿಂದಿ, ಕನ್ನಡ, ತೆಲುಗು ಭಾಷೆಗಳಲ್ಲಿ ನಾಟಕಗಳು, ಚಲನಚಿತ್ರಗಳು ಮತ್ತು ದೂರದರ್ಶನ ದಾರಾವಾಹಿಗಳಾಗಿ ಪ್ರಸಿದ್ಧವಾಗಿವೆ. ನಾವಿಂದು ಅವರ ಬಗ್ಗೆ ತಿಳಿದುಕೊಳ್ಳೋಣ.

೧. ಅತ್ಯಧಿಕ ಕಾದಂಬರಿಗಳು ಮಾರಾಟವಾಗುವ ಕಾದಂಬರಿಕಾರ

ಡಾ. ಎಸ್‌.ಎಲ್. ಭೈರಪ್ಪನವರು ಒಬ್ಬ ಶ್ರೇಷ್ಠ ಸಾಹಿತಿಯಾಗಿದ್ದಾರೆ. ಅವರು ಕನ್ನಡ ಭಾಷೆಯಲ್ಲಿ ಬರೆಯುತ್ತಾರೆ ಮತ್ತು ಕಳೆದ ೨೫ ವರ್ಷಗಳಿಗಿಂತ ಹೆಚ್ಚು ಕಾಲ ಅವರು ‘ಅತ್ಯಧಿಕ ಕಾದಂಬರಿಗಳ ಮಾರಾಟವಾಗುವ ಕಾದಂಬರಿಕಾರ’ರಾಗಿದ್ದಾರೆ. ಅವರ ಅನೇಕ ಕಾದಂಬರಿಗಳು ದೇಶದ ವಿವಿಧ ಭಾಷೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅನುವಾದಗೊಂಡಿವೆ. ಕಳೆದ ದಶಕದಲ್ಲಿ ಅವರ ಮಾರಾಠಿ ಸಾಹಿತ್ಯದಲ್ಲಿ ಅತಿ ಹೆಚ್ಚು ಕಾದಂಬರಿಗಳ ಮಾರಾಟವಾದ ಕಾದಂಬರಿಕಾರರೂ ಆಗಿದ್ದಾರೆ ಮತ್ತು ಹಿಂದಿಯಲ್ಲಿ ಅತಿ ಹೆಚ್ಚು ಕಾದಂಬರಿಗಳ ಮಾರಾಟವಾಗುವ ೫ ಲೇಖಕರಲ್ಲಿ ಇವರು ಒಬ್ಬರಾಗಿದ್ದಾರೆ. ಅವರು ಒಬ್ಬ ಜಾಗರೂಕ ಸಾಹಿತಿಯಾಗಿದ್ದು, ತಮ್ಮ ಕಾದಂಬರಿಗಳಲ್ಲಿ ಮೂಲಭೂತ ಮಾನವ ಭಾವನೆಗಳನ್ನು ವ್ಯಕ್ತ ಪಡಿಸುತ್ತಾರೆ. ಭಾರತೀಯ ತಾತ್ತ್ವಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ಆಳವಾದ ಜ್ಞಾನವನ್ನು ಹೊರತುಪಡಿಸಿ ಡಾ. ಪ್ರಾ. ಭೈರಪ್ಪನವರಿಗೆ ತಮ್ಮ ಬಾಲ್ಯದಿಂದಲೂ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರ ಆಳವಾದ ವೈಯಕ್ತಿಕ ಅನುಭವವಿದೆ. ಇದರ ಪರಿಣಾಮವಾಗಿ ಅವರ ಪಾತ್ರಗಳ ಬೇರುಗಳು ಭಾರತೀಯ ನೆಲದಲ್ಲಿ ಆಳವಾಗಿ ನೆಟ್ಟಿವೆ. ಅವರ ಕಾದಂಬರಿಗಳ ಮೇಲೆ ಅನೇಕ ಚರ್ಚಾಗೋಷ್ಠಿಗಳು ನಡೆದಿವೆ ಮತ್ತು ನಡೆಯುತ್ತಿವೆ. ಅವರ ಕೃತಿಗಳನ್ನು ಆಧಾರಿಸಿದ ಸಾಹಿತ್ಯ ವಿಮರ್ಶೆಗಳ ಸಂಪುಟಗಳೂ ಪ್ರಕಟವಾಗಿವೆ.


ಸತ್ಯ ಇತಿಹಾಸವನ್ನು ಮಂಡಿಸಲು ಒತ್ತಾಯಿಸುವ ಡಾ. ಭೈರಪ್ಪನವರನ್ನು ‘ರಾಷ್ಟ್ರೀಯ ಪಠ್ಯಕ್ರಮ ಪರಿಷ್ಕರಣಾ ಸಮಿತಿ’ಯಿಂದ ಹೊರಗಿಡಲಾಯಿತು !

‘ರಾಷ್ಟ್ರೀಯ ಪಠ್ಯಕ್ರಮ ಪರಿಷ್ಕರಣಾ ಸಮಿತಿ’ಯ ಅಧ್ಯಕ್ಷರಾದ ಪಾರ್ಥಸಾರಥಿ (ಪಾರ್ಥಸಾರಥಿಯವರು ಇಂದಿರಾ ಗಾಂಧಿಯವರ ನೀತಿ ಸಲಹೆಗಾರ ಮತ್ತು ಅವರ ವಿಶ್ವಾಸಾರ್ಹರಾಗಿದ್ದರು, ಹಾಗೆಯೇ ಅವರು ಜವಾಹರಲಾಲ್‌ ನೆಹರು ಕುಟುಂಬಕ್ಕೂ ಹತ್ತಿರದವರಾಗಿದ್ದರು.) ಇವರನ್ನು, ‘ವಾರಣಾಸಿಯ ಮಸೀದಿಯನ್ನು ದಿಟ್ಟಿಸುತ್ತಿರುವ ನಂದಿಯನ್ನು ನೋಡಿ ಯಾವ ತೀರ್ಮಾನಕ್ಕೆ ಬರಬಹುದು ? ಭವಿಷ್ಯದಲ್ಲಿ ವಿದ್ಯಾರ್ಥಿಗಳು ಈ ಬಗ್ಗೆ ಶಿಕ್ಷಕರನ್ನು ಪ್ರಶ್ನಿಸಿದರೆ, ಶಿಕ್ಷಕರು ಏನು ಉತ್ತರ ನೀಡುತ್ತಾರೆ ?’ ಎಂದು ಕೇಳಿದೆನು. ಪಾರ್ಥಸಾರಥಿಯವರ ಬಳಿ ಈ ಪ್ರಶ್ನೆಗೆ ಉತ್ತರವಿರಲಿಲ್ಲ.

ಇದನ್ನೂ ಸಹ ಓದಿರಿ –

ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ವಿದ್ಯಾರ್ಥಿಗಳಿಂದ ನಿಜ ಇತಿಹಾಸವನ್ನು ಮರೆಮಾಚಿತು !

♦ Dr. S L Bhyrappa on Distorting Indian History

ಪಾರ್ಥಸಾರಥಿಯವರು ನನ್ನನ್ನು ತಮ್ಮ ಕೊಠಡಿಗೆ ಕರೆದೊಯ್ದು, ‘ನೀವು ಕರ್ನಾಟಕದವರು ಮತ್ತು ನಾನು ತಮಿಳುನಾಡಿನವನು. ನಾವು ಸಹೋದರರಂತೆ ವರ್ತಿಸಬೇಕು, ಜಗಳವಾಡಬಾರದು’, ಎಂದರು. ಪಾರ್ಥಸಾರಥಿಯವರ ಮಾತನ್ನು ಕೇಳಿ ನಾನು ಹೊರಬಂದೆ. ೧೫ ದಿನಗಳ ನಂತರ ನಡೆದ ಮುಂದಿನ ಸಭೆಯಲ್ಲಿ ನಾನು ಮತ್ತೇ ಅದೇ ಪ್ರಶ್ನೆಯನ್ನು ಕೇಳಿದೆ. ಪಾರ್ಥಸಾರಥಿಯವರು ಕೋಪದಿಂದ ಸಭೆಯನ್ನು ಅಲ್ಲಿಯೇ ಮುಗಿಸಿದರು. ಕೆಲವು ದಿನಗಳ ನಂತರ, ‘ರಾಷ್ಟ್ರೀಯ ಪಠ್ಯಕ್ರಮ ಪರಿಷ್ಕರಣಾ ಸಮಿತಿ’ಯನ್ನು ಪುನರ್‌ರಚಿಸಲಾಗಿದೆ ಎಂಬ ಸರಕಾರಿ ಅಧಿಸೂಚನೆ ಪ್ರಕಟವಾಯಿತು. ಅದರಲ್ಲಿನ ನನ್ನ ಹೆಸರು ಕಣ್ಮರೆಯಾಗಿತ್ತು. ನನ್ನ ಬದಲಿಗೆ ಓರ್ವ ಸಾಮ್ಯವಾದಿ ವಿಚಾರಸರಣಿಯ ಇತಿಹಾಸಕಾರರನ್ನು ನೇಮಿಸಲಾಗಿತ್ತು. ಈ ಸಮಿತಿಯು ಇತಿಹಾಸ ಮತ್ತು ಸಾಮಾಜಿಕ ಅಧ್ಯಯನಗಳ ಪುಸ್ತಕಗಳನ್ನು ಬದಲಾಯಿಸಿ ವಿದ್ಯಾರ್ಥಿಗಳಿಂದ ನಿಜವಾದ ಇತಿಹಾಸವನ್ನು ಮರೆಮಾಚಿತು. ಎಲ್ಲ ಪಾಠಗಳು ಸಾಮ್ಯವಾದಿ ವಿಚಾರಸರಣಿಗೆ ಅನುಕೂಲಕರವಾಗಿದ್ದವು. ಪಠ್ಯಕ್ರಮದಲ್ಲಿ ಹೊರಗಿನ ಆಕ್ರಮಣಕಾರರನ್ನು ‘ನಾಯಕರು’ ಎಂದು ತೋರಿಸಲಾಗಿತ್ತು. ಇದಕ್ಕೆ ವಿರುದ್ಧವಾಗಿ, ಭಾರತದ ನಿಜವಾದ ಸಂಪತ್ತು, ಇತಿಹಾಸ ಮತ್ತು ಜ್ಞಾನಕ್ಕೆ ಆ ಪುಸ್ತಕಗಳಲ್ಲಿ ಸ್ಥಾನವಿರಲಿಲ್ಲ.” – ಡಾ. ಎಸ್‌.ಎಲ್. ಭೈರಪ್ಪ

೨. ಪಠ್ಯಪುಸ್ತಕಗಳಲ್ಲಿ ಡಾ. ಎಸ್‌.ಎಲ್. ಭೈರಪ್ಪನವರ ಪುಸ್ತಕಗಳು ಸೇರ್ಪಡೆ

ಡಾ. ಎಸ್‌.ಎಲ್‌ ಭೈರಪ್ಪನವರ ಪುಸ್ತಕಗಳು ಕರ್ನಾಟಕ ರಾಜ್ಯದಲ್ಲಿನ ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಠ್ಯಕ್ರಮಗಳಲ್ಲಿ ಸೇರ್ಪಡೆಯಾಗಿವೆ, ಹಾಗೂ ಸುಮಾರು ೨೦ ‘ಪಿಎಚ್‌.ಡಿ’ ಪ್ರಬಂಧಗಳ ವಿಷಯವಾಗಿವೆ. ಅವರು ೨೪ ಕಾದಂಬರಿಗಳು, ಸಾಹಿತ್ಯ ವಿಮರ್ಶೆಯ ೪ ಸಂಪುಟಗಳು ಮತ್ತು ಸೌಂದರ್ಯಶಾಸ್ತ್ರ, ಸಾಮಾಜಿಕ ಸಮಸ್ಯೆಗಳು ಮತ್ತು ಸಂಸ್ಕೃತಿಯ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಅವರ ೬ ಕಾದಂಬರಿಗಳು ಆಂಗ್ಲ ಭಾಷೆಯಲ್ಲಿ ಅನುವಾದಗೊಂಡಿವೆ.

೩. ಡಾ. ಎಸ್‌.ಎಲ್. ಭೈರಪ್ಪನವರಿಗೆ ದೊರಕಿದ ವಿವಿಧ ಪ್ರಶಸ್ತಿ

ಡಾ. ಪ್ರಾ. ಎಸ್‌.ಎಲ್. ಭೈರಪ್ಪನವರಿಗೆ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡುತ್ತಿರುವ ರಾಷ್ಟ್ರಪತಿ ದ್ರೌಪದಿ ಮುರ್ಮೂ

ಅ. ಭಾರತ ಸರಕಾರದಿಂದ ‘ಪದ್ಮಶ್ರೀ’ ಮತ್ತು ‘ಪದ್ಮಭೂಷಣ’ ಈ ಮಹತ್ವದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಆ. ೨೦೧೬ ರಲ್ಲಿ ‘ಆಸಾಮ ಸಾಹಿತ್ಯ ಸಭೆ’ಯ ‘ಮಾಮೋನಿ ರಾಯಸೋಮ ಗೋಸ್ವಾಮಿ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’

ಇ. ಮೈಸೂರು ವಿಶ್ವವಿದ್ಯಾಲಯದಿಂದ ೨೦೧೬ ರಲ್ಲಿ ‘ಗೌರವ ಡಾಕ್ಟರೇಟ್’ ಪದವಿ

ಈ. ಭಾರತ ಸರಕಾರದಿಂದ ೨೦೧೫ ರಲ್ಲಿ ‘ಸಾಹಿತ್ಯ ಅಕ್ಯಾಡಮಿ ವಿದ್ಯಾರ್ಥಿವೇತನ’

ಉ. ದೀನಾನಾಥ ಮೆಮೋರಿಯಲ್‌ ಫೌಂಡೇಶನ್, ಮುಂಬಯಿಯಿಂದ ೨೦೧೨ ರಲ್ಲಿ ‘ವಾಗವಿಲಾಸಿನಿ ಪ್ರಶಸ್ತಿ’

ಊ. ಕೊಲಕಾತಾದಲ್ಲಿ ೨೦೦೭ ರಲ್ಲಿ ‘ಹೆಡಗೆವಾರ ಪ್ರಶಸ್ತಿ’

ಎ. ಆಂಧ್ರಪ್ರದೇಶದಲ್ಲಿ ಎನ್‌.ಟಿ.ಆರ್. ಪ್ರಶಸ್ತಿ (೨೦೦೭ ನೇ ಇಸವಿ)

೪. ಸಂಶೋಧನೆ ಮತ್ತು ವಿದ್ಯಾರ್ಥಿವೇತನ

ಅ. ರಾಷ್ಟ್ರೀಯ ಸಂಶೋಧನೆ ಪ್ರಾಧ್ಯಾಪಕರು, ಭಾರತ ಸರಕಾರ

ಆ. ಚೀನಾ ಸರಕಾರದ ಆಮಂತ್ರಣದ ಮೇರೆಗೆ ಚೀನಾಗೆ ಭೇಟಿ ನೀಡುವ ಭಾರತೀಯ ಸಾಹಿತ್ಯ ಪ್ರತಿನಿಧಿ ಮಂಡಳಿಯ ೫ ಸದಸ್ಯರಲ್ಲಿ ಒಬ್ಬರು.

ಇ. ಅಮೇರಿಕದಲ್ಲಿರುವ ಸ್ಥಳಾಂತರಗೊಂಡ ಭಾರತೀಯರ ಸಾಂಸ್ಕೃತಿಕ ಸಮಸ್ಯೆಗಳ ಅಧ್ಯಯನಕ್ಕಾಗಿ ‘ಫೋರ್ಡ್ ಫೌಂಡೇಶನ್‌ ಪ್ರಶಸ್ತಿ’

ಈ. ೧೯೭೭ ರಲ್ಲಿ ಲಂಡನ್ ವಿಶ್ವವಿದ್ಯಾಲಯದ ‘ಸ್ಕೂಲ್‌ ಆಫ್‌ ಎಜ್ಯುಕೇಶನ್‌ನಲ್ಲಿ ‘ಬ್ರಿಟಿಷ್‌ ಕೌನ್ಸಿಲ್‌ ಫೆಲೋಶಿಪ್’ ನ ಕಾರ್ಯಾವಧಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಡಾ. ಎಸ್‌.ಎಲ್. ಭೈರಪ್ಪನವರ ಭೇಟಿಯಲ್ಲಿ ನಡೆದ ಸಂವಾದ

ಡಾ. ಪ್ರಾ. ಎಸ್‌.ಎಲ್. ಭೈರಪ್ಪ (ಬಲಬದಿಗೆ) ಇವರೊಂದಿಗೆ ಸಂವಾದ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ

ಡಾ. ಎಸ್‌.ಎಲ್. ಭೈರಪ್ಪನವರಿಗೆ ‘ಪದ್ಮಭೂಷಣ’ ಪ್ರಶಸ್ತಿ ದೊರೆತ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈ ಜೋಡಿಸಿ ಕೆಲವು ಹೆಜ್ಜೆ ಮುಂದೆ ನಡೆದು, ಅವರನ್ನು ಗೌರವದಿಂದ `ನಮಸ್ಕಾರ ಭೈರಪ್ಪಾಜಿ, ನೀವು ಹೇಗಿದ್ದೀರಿ ?’, ಎಂದು ಕೇಳುತ್ತಾರೆ. ಅದಕ್ಕೆ ಭೈರಪ್ಪನವರು, `ನಾನು ಕರ್ನಾಟಕದ ಎಸ್‌.ಎಲ್, ಭೈರಪ್ಪ, ಕನ್ನಡ ಕಾದಂಬರಿಕಾರ’, (ನಮಸ್ಕಾರದ ಹಾವಭಾವದೊಂದಿಗೆ ಮತ್ತು ಶಿಷ್ಟಾಚಾರವನ್ನು ಪಾಲಿಸುತ್ತಾ) ಎಂದು ಉತ್ತರಿಸುತ್ತಾರೆ ! `ಸರ್, ನಿಮ್ಮ ಪರಿಚಯ ಯಾರಿಗಿಲ್ಲ ?’ ಎಂದು ಹೇಳುತ್ತಾ, ಮೋದಿ ತಕ್ಷಣವೇ ಡಾ. ಭೈರಪ್ಪನವರ ಕೈಯನ್ನು ತಮ್ಮ ಕೈಯಲ್ಲಿ ತೆಗೆದುಕೊಂಡು ಉತ್ತರಿಸುತ್ತಾರೆ. ಆಗ ಮೋದಿಯವರು, `ನೀವು ಈಗ ಯಾವ ಪುಸ್ತಕವನ್ನು ಬರೆಯುತ್ತಿದ್ದೀರಿ ?’, ಎಂದು ಕೇಳುತ್ತಾರೆ. ಡಾ. ಭೈರಪ್ಪನವರು, `ನಿಜ ಹೇಳಬೇಕೆಂದರೆ ಹೊಸ ಪುಸ್ತಕ ಬರೆಯುತ್ತಿಲ್ಲ’, ಎಂದು ಸಂಕೋಚದಿಂದ ಉತ್ತರಿಸುತ್ತಾರೆ. ಅದಕ್ಕೆ ಮೋದಿಯವರು ಮತ್ತೇ, `ದಯವಿಟ್ಟು ಕಾದಂಬರಿ ಬರೆಯುವುದನ್ನು ನಿಲ್ಲಿಸಬೇಡಿ ಸರ್. ಭಾರತದಲ್ಲಿರುವ ನಿಮ್ಮ ಓದುಗರಿಗೆ ನಿಮ್ಮ ಪುಸ್ತಕಗಳು ಮತ್ತು ಬುದ್ಧಿವಂತಿಕೆ ಬೇಕಾಗಿದೆ’, ಎಂದು ಹೇಳುತ್ತಾರೆ. ಇದಕ್ಕೆ ಡಾ. ಭೈರಪ್ಪನವರು ನಗುತ್ತಾರೆ.

೫. ಜಗತ್ತಿನಾದ್ಯಂತ ಪ್ರಯಾಣ

ಡಾ. ಭೈರಪ್ಪನವರು ಭಾರತೀಯ ಶಾಸ್ತ್ರೀಯ ಮತ್ತು ಪಾಶ್ಚಾತ್ಯ ಸಂಗೀತದ ಉತ್ಸುಕ ಕೇಳುಗರಾಗಿದ್ದಾರೆ ಮತ್ತು ಕಲೆಯ ಅಧ್ಯಯನಕಾರರಾಗಿದ್ದಾರೆ. ಪ್ರವಾಸವು ಅವರ ಬಾಲ್ಯದಿಂದಲೇ ಇರುವ ಹವ್ಯಾಸವಾಗಿದೆ. ಅವರು ಹಿಮನದಿಗಳು, ಅಮೇಝಾನ್‌ ಕಾಡುಗಳು, ಆಫ್ರಿಕಾದಲ್ಲಿನ ಮರುಭೂಮಿ, ಯುರೋಪ್‌ ಮತ್ತು ಅಮೇರಿಕದ ಗಿಜಿಗಿಡುವ ನಗರಗಳು ಸೇರಿದಂತೆ ವಿವಿಧ ಸ್ಥಳಗಳೊಂದಿಗೆ ಜಗತ್ತಿನಾದ್ಯಂತ ಪ್ರಯಾಣಿಸಿದ್ದಾರೆ. ಅವರು ಆಲ್ಪ್ಸ್‌, ರಾಕೀಜ, ಎಂಡಿಸ್‌ ಮತ್ತು ಫುಜಿಯಾಮಾದಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿದ್ದಾರೆ. ಹೀಗಿದ್ದರೂ ಹಿಮಾಲಯದಲ್ಲಿ ತಿರುಗಾಡುವುದು ಅವರ ಅತಿದೊಡ್ಡ ಹವ್ಯಾಸವಾಗಿದೆ.

೬. ಡಾ. ಎಸ್. ಎಲ್. ಭೈರಪ್ಪನವರ ಆಂಗ್ಲ ಶೈಕ್ಷಣಿಕ ಪ್ರಕಾಶನಗಳು

‘Values in Modern Indian Educational Thought’, ೧೯೬೮ (ಆಧುನಿಕ ಭಾರತೀಯ ಶೈಕ್ಷಣಿಕ ವಿಚಾರಗಳಲ್ಲಿನ ಮೌಲ್ಯಗಳು, ೧೯೬೮) (ನವದೆಹಲಿ : ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು) ; ‘Truth & Beauty: A Study in Correlations, ೧೯೬೪ (ಸತ್ಯ ಮತ್ತು ಸೌಂದರ್ಯ : ಪರಸ್ಪರ ಸಂಬಂಧಗಳ ಅಧ್ಯಯನ, ೧೯೬೪) (ಬರೋಡಾ : ಎಮ್‌.ಎಸ್. ಯುನಿವರ್ಸಿಟಿ ಫ್ರೆಸ್) ; ಇಂಡಿಯನ್‌ ಫಿಲೋಸೊಫಿಕಲ್‌ ಕ್ವಾಟರ್ಲಿ ‘, ದರ್ಶನಾ ಇಂಟರ್‌ನ್ಯಾಶನಲ್, ‘ಜರ್ನಲ್‌ ಆಫ್‌ ಯುನಿವರ್ಸಿಟಿ ಆಫ್‌ ಬಡೋದಾ’ ಇವುಗಳಂತಹ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾದ ೨೦ ಸಂಶೋಧನಾ ಲೇಖನಗಳು.

೭. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಇತರ ಉಪಕ್ರಮಗಳಲ್ಲಿ ಸಹಭಾಗ

ಅ. ಅಂತರರಾಷ್ಟ್ರೀಯ ಪರಿಷತ್ತು, ಉದಾಯಿನ ವಿಶ್ವವಿದ್ಯಾಲಯ, ಇಟಲಿ (ವರ್ಷ ೨೦೦೭)

ಆ. ಅಧ್ಯಕ್ಷರು, ಅಸೋಸಿಯೇಷನ್‌ ಆಫ್‌ ಕನ್ನಡಿಗಾಸ್‌ ಮಿಟೀಂಗ್, ದುಬೈ (ವರ್ಷ ೨೦೦೭)

ಇ. ಅಸೋಸಿಯೇಶನ್‌ ಆಫ್‌ ಕನ್ನಡ ಕೂಟ ಅಮೇರಿಕಾ, ವಾಶಿಂಗ್‌ಟನ್‌ ಡಿ. ಸಿ., ಅಮೇರಿಕಾ (ವರ್ಷ ೨೦೦೬)

ಈ. ಉದ್ಘಾಟನಾ ಭಾಷಣ, ಅಖಿಲ ಭಾರತೀಯ ಮರಾಠಿ ಸಾಹಿತ್ಯ ಪರಿಷತ್ತು, ಗೋವಾ (ವರ್ಷ ೧೯೯೪)

ಉ. ಪೂರ್ವ-ಪಶ್ಚಿಮ ಲೇಖಕರ ಸಭೆ, ಬ್ಲೇಡ್, ಸ್ಲೊವೇನಿಯಾ (ವರ್ಷ ೧೯೯೧)

ಊ. ಭಾರತದ ಪ್ರತಿನಿಧಿ, ‘ಯುನೆಸ್ಕೋ’ದ ನೈತಿಕ ಶಿಕ್ಷಣದ ಕುರಿತಾದ ಚರ್ಚಾಗೋಷ್ಠಿ, ಟೋಕಿಯೋ, ಜಪಾನ್‌ (ವರ್ಷ ೧೯೭೫)

ಎ. ಭಾರತದಲ್ಲಿ ನಡೆದ ೨೫ ಕ್ಕಿಂತ ಹೆಚ್ಚು ಸಾಹಿತ್ಯ ಪರಿಷತ್ತುಗಳ ಅಧ್ಯಕ್ಷರು ಮತ್ತು ಅಧ್ಯಕ್ಷೀಯ ಪ್ರಶಸ್ತಿಗಳು.


ಡಾ. ಎಸ್‌.ಎಲ್. ಭೈರಪ್ಪನವರ ಮಹತ್ವಪೂರ್ಣ ವಿಚಾರಗಳು

೧. ಯಾವುದೇ ಇತಿಹಾಸವು ಘೋಷಣೆಗಳು, ಆದರ್ಶಗಳು ಅಥವಾ ಸುಧಾರಣಾ ಚಳುವಳಿಗಳೊಂದಿಗೆ ಸಂಬಂಧಿಸಿಲ್ಲ. ಅದನ್ನು ನಿಜವಾದ ಘಟನೆಗಳು ಘಟಿಸಿದಂತೆಯೇ ನೋಡಬೇಕು. ಇದನ್ನು ಸಾಧಿಸಲು ನಾವು ವರ್ತಮಾನ ಕಾಲದ ಸುಳ್ಳು ಕಲ್ಪನೆಗಳಿಂದ ನಮ್ಮ ಮನಸ್ಸನ್ನು ಮುಕ್ತಗೊಳಿಸಬೇಕು.

೨. ಪ್ರಶಸ್ತಿಗಳಿಗೆ ವ್ಯಕ್ತಿಯಿಂದ ಮಹತ್ವ ಬರುತ್ತದೆ; ವ್ಯಕ್ತಿಯು ಪ್ರಶಸ್ತಿಯಿಂದ ದೊಡ್ಡವನಾಗುವುದಿಲ್ಲ. ನನಗೆ ನನ್ನ ಕೆಲಸದ ಶಾಶ್ವತತೆಯೇ ನಿಜವಾದ ಪ್ರಶಸ್ತಿಯಾಗಿದೆ.

೩. ಡಾ. ಎಸ್‌.ಎಲ್‌ ಭೈರಪ್ಪನವರು ಬರೆದ ‘ಆವರಣ’ ಈ ಪುಸ್ತಕದಲ್ಲಿನ ಕೆಲವು ವಾಕ್ಯಗಳು :

ಅ. ಸತ್ಯವನ್ನು ಮರೆಮಾಚುವ ಕ್ರಿಯೆಯನ್ನು ‘ಆವರಣ ಎನ್ನುತ್ತಾರೆ ಮತ್ತು ಸುಳ್ಳನ್ನು ಪ್ರಕ್ಷೇಪಿಸುವುದನ್ನು ‘ವಿಕ್ಷೇಪ’ ಎನ್ನುತ್ತಾರೆ. ಇದು ಯಾವುದೇ ವ್ಯಕ್ತಿಯ ಮಟ್ಟದಲ್ಲಿ ನಡೆದಾಗ, ಅದನ್ನು ‘ಅವಿದ್ಯೆ’ ಎಂದು ಹೇಳುತ್ತಾರೆ ಮತ್ತು ಅದು ಒಂದು ಗುಂಪು ಅಥವಾ ಜಗತ್ತಿನ ಮಟ್ಟದಲ್ಲಿ ನಡೆದಾಗ, ಅದನ್ನು ‘ಮಾಯೆ’ ಎಂದು ಕರೆಯುತ್ತಾರೆ.

ಆ. ಇತಿಹಾಸವನ್ನು ಓದುವ ಉದ್ದೇಶವು ಯಾರನ್ನೂ ಕೀಳಾಗಿ ಕಾಣುವುದು ಅಥವಾ ಕಳಂಕಿತಗೊಳಿಸುವುದಲ್ಲ, ಮತ್ತು ಅದು ಹಾಗೆ ಇರಬಾರದು. ಹೆಚ್ಚೆಂದರೆ ಇತಿಹಾಸದ ಅಧ್ಯಯನದಿಂದ ನಮ್ಮ ಪೂರ್ವಜರ ಯೋಗ್ಯ ಮತ್ತು ಅಯೋಗ್ಯ ಸಂಗತಿಗಳನ್ನು ಪ್ರಾಮಾಣಿಕವಾಗಿ, ನಿಷ್ಪಕ್ಷಪಾತವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಬೇಕು ಮತ್ತು ಆ ಪಾಠಗಳನ್ನು, ನಮ್ಮ ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸಲು ಬಳಸಬೇಕು.

ಇ. ಇತಿಹಾಸದ ಗುರಿಯೆಂದರೆ, ಮಾನವತೆಯನ್ನು ಪ್ರಗತಿಯ ಹಾದಿಯಲ್ಲಿನ ಪ್ರಯಾಣದಲ್ಲಿ ಸಶಕ್ತಗೊಳಿಸುವುದು.