ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!

ಶಿಕ್ಷಕಿ ಶೇಖ್ ಆಯೆಷಾ ಪರ್ವೀನ್ (ಎಡ)

​(‘ಕಲ್ಮಾ’ ಎಂದರೆ ಅಲ್ಲಾಹನ ಮಹಿಮೆಯನ್ನು ವರ್ಣಿಸುವ ವಾಕ್ಯಗಳು)

​ಭಾಗ್ಯನಗರ (ತೆಲಂಗಾಣ) – ಇಲ್ಲಿನ ಸೈದಾಬಾದ್‌ನಲ್ಲಿರುವ ‘ಸಕ್ಸಸ್, ದಿ ಸ್ಕೂಲ್’ ಸಂಸ್ಥೆಯು ಶಿಕ್ಷಕಿ ಶೇಖ್ ಆಯಿಷಾ ಪರ್ವೀನ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಆಕೆಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಿದೆ. ಎರಡನೇ ತರಗತಿಯ ವಿದ್ಯಾರ್ಥಿಗೆ ಈ ಶಿಕ್ಷಕಿಯು ‘ಕಲ್ಮಾ’ ಕಂಠಪಾಠ ಮಾಡುವಂತೆ ಮನೆ ಪಾಠ ನೀಡಿದ್ದಾಳೆ ಎಂದು ವಿದ್ಯಾರ್ಥಿಯ ಪೋಷಕರು ಆರೋಪಿಸಿದ್ದರು. ಈ ವಿಷಯ ಬೆಳಕಿಗೆ ಬಂದ ತಕ್ಷಣ ಶಾಲಾ ಆಡಳಿತ ಮಂಡಳಿಯು ಆಂತರಿಕ ತನಿಖೆ ನಡೆಸಿ, ಈ ಕ್ರಮ ಕೈಗೊಳ್ಳುವ ನಿರ್ಧಾರ ಮಾಡಿದೆ. ಶಾಲೆಯು ಬಿಡುಗಡೆ ಮಾಡಿರುವ ಸೇವಾ ಮುಕ್ತಾಯ ಪತ್ರದಲ್ಲಿ ಕೇವಲ ಕೆಲಸದಿಂದ ತೆಗೆದುಹಾಕಿರುವ ಉಲ್ಲೇಖ ಮಾತ್ರವಲ್ಲದೆ, ಭವಿಷ್ಯದಲ್ಲೂ ಆ ಶಿಕ್ಷಕಿಗೆ ಸಂಸ್ಥೆಯ ಯಾವುದೇ ಶಾಲೆಯಲ್ಲಿ ಉದ್ಯೋಗ ನೀಡದಂತೆ ಸ್ಪಷ್ಟಪಡಿಸಲಾಗಿದೆ.

​ಈ ಪ್ರಕರಣದ ಕುರಿತು ಬಿಜೆಪಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದೆ. ಈ ಘಟನೆಯ ಹಿಂದೆ ಎ.ಐ.ಎಮ್.ಐ.ಎಮ್. (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ – ಅಖಿಲ ಭಾರತ ಮುಸ್ಲಿಂ ಐಕ್ಯತಾ ಸಂಘ) ಪಕ್ಷದ ಕೈವಾಡವಿದೆ, ಆದ್ದರಿಂದ ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು ಈ ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

​ಈ ಕ್ರಮದ ಮೂಲಕ ಶಾಲಾ ಆಡಳಿತ ಮಂಡಳಿಯು, ಶೈಕ್ಷಣಿಕ ಆವರಣದಲ್ಲಿ ಸಂಸ್ಥೆಯ ನೀತಿಗಳಿಗೆ ವಿರುದ್ಧವಾಗಿ ನಡೆಯುವ ಯಾವುದೇ ಕೆಲಸವನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ. ಆದರೆ, ಖಚಿತವಾಗಿ ಯಾವ ಮನೆಪಾಠ ನೀಡಲಾಗಿತ್ತು ಮತ್ತು ಅದನ್ನು ಧಾರ್ಮಿಕ ಎಂದು ಏಕೆ ಪರಿಗಣಿಸಲಾಯಿತು ಎಂಬುದನ್ನು ಶಾಲೆ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.

ಸಂಪಾದಕೀಯ ನಿಲುವು

ಕೇವಲ ಕೆಲಸದಿಂದ ವಜಾಗೊಳಿಸಿದರೆ ಸಾಲದು, ಇಂತಹವರ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಲು ಸಹ ಪ್ರಯತ್ನವಾಗಬೇಕು! ಹಿಂದೂದ್ವೇಷಿ ಮಾನಸಿಕತೆಯನ್ನು ನಾಶಪಡಿಸಲು ಕಠಿಣ ಶಿಕ್ಷೆಯಾಗಬೇಕು!