ಹಿಂದೂಗಳೇ, ಶತ್ರುಗಳು ಸೀಮೋಲ್ಲಂಘನ ಮಾಡುತ್ತಿದ್ದಾರೆ; ಆದುದರಿಂದ ಸ್ವತಃದ ರಕ್ಷಣೆಯ ಸಿದ್ಧತೆ ಮಾಡಿಕೊಳ್ಳಿ !

ವಿಜಯದಶಮಿಯ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ 

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ದೇವತೆಗಳು ಆಸುರಿ ಶಕ್ತಿಗಳ ಮೇಲೆ ವಿಜಯ ಪ್ರಾಪ್ತಮಾಡಿಕೊಂಡ ದಿನವೆಂದರೆ ವಿಜಯದಶಮಿ ! ವಿಜಯದಶಮಿ ಎಂದರೆ ಸೀಮೋಲ್ಲಂಘನ ಮಾಡಿ ಶತ್ರುಗಳ ರಾಜ್ಯವನ್ನು ಪ್ರವೇಶಿಸಿ ವಿಜಯವನ್ನು ಪ್ರಾಪ್ತಮಾಡಿಕೊಳ್ಳುವ ಸನಾತನ ಸಂಪ್ರದಾಯವನ್ನು ಹೇಳುವ ಹಬ್ಬವಾಗಿದೆ. ಸದ್ಯದ ಕಾಲದಲ್ಲಿಯೂ ಆಸುರಿ ಶಕ್ತಿಗಳು ಭಾರತವನ್ನು ವಿಭಜಿಸಲು ಕಾತುರಗೊಂಡಿವೆ. ಬಾಂಗ್ಲಾದೇಶದಲ್ಲಿ ಅರಾಜಕತೆ ಹರಡಿದ್ದು ಭಯೋತ್ಪಾದಕ ಶಕ್ತಿಗಳು ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಅತಿಯಾದ ದೌರ್ಜನ್ಯವನ್ನು ಎಸಗುತ್ತಿವೆ. ಕಾಶ್ಮೀರ, ಆಸ್ಸಾಂ, ಬಂಗಾಲ, ಪೂರ್ವೊತ್ತರ ರಾಜ್ಯಗಳು ಅಕ್ಷರಶಃ ಭಯೋತ್ಪಾದಕ ಶಕ್ತಿಗಳಿಂದ ನಲುಗಿ ಹೋಗಿವೆ. ನಕ್ಸಲ್ ಪಡೆಗಳು ಭಾರತದ ಶೇ. 30 ರಷ್ಟು ಭೂಪ್ರದೇಶವನ್ನು ಸಮಾನಾಂತರವಾಗಿ ಆಳುತ್ತಿವೆ. ಭಯೋತ್ಪಾದಕ ಮತ್ತು ನಕ್ಸಲಿಸ್ಟ್ ಶಕ್ತಿಗಳ ಗುಪ್ತ ಕೈಗಳು ಸಂಪೂರ್ಣ ಭಾರತದಾದ್ಯಂತ ಅಂತರ್ಯುದ್ಧದ ಸಂಚು ರೂಪಿಸುತ್ತಿವೆ. ಭಯೋತ್ಪಾದಕ ಶಕ್ತಿಗಳು ದೆಹಲಿಯಿಂದ ಹಿಡಿದು ಓಣಿಓಣಿಗಳ ವರೆಗೆ ಗಲಭೆಗಳ ಮಾಧ್ಯಮದಿಂದ ಒಂದು ರೀತಿಯಲ್ಲಿ ಸೀಮೋಲ್ಲಂಘನ ಮಾಡಿ ಹಿಂದೂಗಳನ್ನು ಸೋಲಿಸುತ್ತಿವೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಹಿಂದೂಗಳೇ, ಶತ್ರುಗಳು ಸೀಮೋಲ್ಲಂಘನ ಮಾಡುತ್ತಿದ್ದಾರೆ; ಆದುದರಿಂದ ಸ್ವತಃದ ರಕ್ಷಣೆಯ ಸಿದ್ಧತೆಯನ್ನು ಮಾಡಿಕೊಳ್ಳಿ !

ಹಿಂದೂಗಳೇ, ವಿಜಯದಶಮಿಯನ್ನು ಏಕೆ ಆಚರಿಸಬೇಕು ? ಅಥವಾ ಅಪರಾಜಿತಾ ಪೂಜೆಯನ್ನು ಮತ್ತು ಆಯುಧಪೂಜೆಯನ್ನು ಏಕೆ ಮಾಡಲಾಗುತ್ತದೆ ? ಎಂಬುದರ ಧರ್ಮಬೋಧನೆಯನ್ನು ಪಡೆಯಿರಿ. ನಿಜವಾದ ಸೀಮೋಲ್ಲಂಘನವೆಂದರೆ ‘ವಿಜಯಕ್ಕಾಗಿ ಶತ್ರುಗಳ ಸೀಮೆಯನ್ನು ಉಲ್ಲಂಘಿಸಿ ಯುದ್ಧವನ್ನು ಸಾರುವುದು’, ಅಪರಾಜಿತಾ ದೇವಿಯ ಪೂಜೆ ಎಂದರೆ ‘ವಿಜಯಕ್ಕಾಗಿ ದೇವಿಯ ಬಳಿ ಶಕ್ತಿಯನ್ನು ಬೇಡುವುದು’ ಮತ್ತು ಮಹಾನ್ ವ್ಯಕ್ತಿಗಳಿಗೆ, ಹಿರಿಯರಿಗೆ ಮಂದಾರದ ಎಲೆಗಳನ್ನು ನೀಡುವುದು ಎಂದರೆ ‘ವಿಜಯಶ್ರೀಯನ್ನು ಪ್ರಾಪ್ತಮಾಡಿಕೊಳ್ಳಲು ಮಹಾನ್ ವ್ಯಕ್ತಿಗಳ, ಹಿರಿಯರ ಆರ್ಶೀವಾದ ಪಡೆಯುವುದಾಗಿದೆ’.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ