​ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav

ಏಕರೂಪ ನಾಗರಿಕ ಸಂಹಿತೆಯ ಕುರಿತು ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರ ಹೇಳಿಕೆ


ಇಂದೂರ (ಮಧ್ಯಪ್ರದೇಶ) – ಪ್ರಭು ಶ್ರೀರಾಮಚಂದ್ರರು ಒಂದು ವಿವಾಹ ಮಾಡಿಕೊಂಡರೆ, ರಹೀಮನಿಂದಲೂ ಒಂದೇ ವಿವಾಹದ ನಿರೀಕ್ಷೆಯನ್ನು ಮಾಡಬಹುದು. ಮುಸ್ಲಿಂ ಸಹೋದರಿಯರು ಕೂಡ ನಮ್ಮದೇ ಸಹೋದರಿಯರಾಗಿದ್ದಾರೆ. ಅವರ ಜೀವನದಲ್ಲೂ ತೊಂದರೆಗಳು ಬರುತ್ತವೆ; ಆದ್ದರಿಂದಲೇ ಕಾನೂನು ಎಲ್ಲರಿಗೂ ಸಮಾನವಾಗಿರಬೇಕು, ಎಂದು ಮಧ್ಯಪ್ರದೇಶದ ಭಾಜಪ ಸರಕಾರದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಏಕರೂಪ ನಾಗರಿಕ ಸಂಹಿತೆಯ (ಎಲ್ಲಾ ಧರ್ಮದವರಿಗೆ ಸಮಾನ ಕಾನೂನು) ಕುರಿತು ಮಾತನಾಡುವಾಗ ಹೇಳಿದರು.

ಮಳೆಗಾಲದ ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆಯ ಮಸೂದೆ ಮಂಡಿಸಲು ಸಿದ್ಧತೆ.

​ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ಮುಂದುವರಿದು ಮಾತನಾಡುತ್ತಾ, ರಾಜ್ಯ ಸರಕಾರವು ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಅಗತ್ಯವಿರುವ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ. ಮುಂಬರುವ ಜುಲೈ 20 ರಿಂದ ಪ್ರಾರಂಭವಾಗಲಿರುವ ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡಬಹುದು. ಈ ನಿಟ್ಟಿನಲ್ಲಿ ಕರಡನ್ನು ಸಿದ್ಧಪಡಿಸಲು ರಚಿಸಲಾಗಿದ್ದ ವಿಶೇಷ ಸಮಿತಿಯು ಸರಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಈ ವರದಿಯನ್ನು ಈಗ ಮುಂದಿನ ಕಾನೂನು ಪ್ರಕ್ರಿಯೆಗಾಗಿ ಕಾನೂನು ಇಲಾಖೆಗೆ ಕಳುಹಿಸಲಾಗಿದೆ.

10 ಲಕ್ಷಕ್ಕೂ ಹೆಚ್ಚು ಸಲಹೆಗಳು ಮತ್ತು ಎಲ್ಲಾ ವರ್ಗಗಳೊಂದಿಗೆ ಸಂವಾದ

​ಮುಖ್ಯಮಂತ್ರಿ ಡಾ. ಯಾದವ್ ಅವರು, ಸರಕಾರವು ಈ ಕಾನೂನನ್ನು ಜಾರಿಗೆ ತರುವ ಮುನ್ನ ವ್ಯಾಪಕ ಜನಸಂವಾದವನ್ನು ನಡೆಸಿದೆ ಎಂದು ಹೇಳಿದರು. ವಿಶೇಷ ಸಮಿತಿಯು ರಾಜ್ಯದ ಎಲ್ಲಾ 55 ಜಿಲ್ಲೆಗಳಲ್ಲಿ ವಿವಿಧ ಧರ್ಮ, ಸಮುದಾಯ, ಸಾಮಾಜಿಕ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿ ಸುಮಾರು 10 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಸಂಗ್ರಹಿಸಿದೆ. ಎಲ್ಲಾ ವರ್ಗಗಳ ವಿಚಾರಗಳನ್ನು ಗೌರವಿಸಿ, ಸರ್ವಸಮ್ಮತಿಯಿಂದ ಈ ಕಾನೂನನ್ನು ಜಾರಿಗೆ ತರಲು ಸರಕಾರವು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ಸಂಪಾದಕೀಯ ನಿಲುವು

ರಾಮ ಮತ್ತು ರಹೀಮರನ್ನು ಎಂದಿಗೂ ಹೋಲಿಸಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು! ಭಾರತವು ಶ್ರೀರಾಮನ ದೇಶವಾಗಿದೆ, ಆದರೆ ‘ರಹೀಮ್’ ಭಾರತವನ್ನು ದೇಶವೆಂದು ಪರಿಗಣಿಸುವುದಿಲ್ಲ; ಆದ್ದರಿಂದಲೇ ಅವನು ‘ವಂದೇ ಮಾತರಂ’ ಎಂದು ಹೇಳಲು ನಿರಾಕರಿಸುತ್ತಾನೆ, ಇದೇ ವಾಸ್ತವವಾಗಿದೆ!