ಜಾರ್ಖಂಡ್ನಲ್ಲಿ ಪಾದ್ರಿ ಸ್ಟ್ಯಾನ್ ಸ್ವಾಮಿಯ ಬಂಧನ
೨೦೧೮ ರಲ್ಲಿ ಭೀಮಾ ಕೋರೆಗಾವ್ನಲ್ಲಾದ ಹಿಂಸಾಚಾರದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯು) ೮೩ ವರ್ಷದ ತಥಾಕಥಿತ ಸಾಮಾಜಿಕ ಕಾರ್ಯಕರ್ತ ಪಾದ್ರಿ ಸ್ಟ್ಯಾನ್ ಸ್ವಾಮಿಯನ್ನು ರಾಂಚಿಯಲ್ಲಿರುವ ಅವರ ನಿವಾಸದಿಂದ ಬಂಧಿಸಿದೆ.
೨೦೧೮ ರಲ್ಲಿ ಭೀಮಾ ಕೋರೆಗಾವ್ನಲ್ಲಾದ ಹಿಂಸಾಚಾರದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯು) ೮೩ ವರ್ಷದ ತಥಾಕಥಿತ ಸಾಮಾಜಿಕ ಕಾರ್ಯಕರ್ತ ಪಾದ್ರಿ ಸ್ಟ್ಯಾನ್ ಸ್ವಾಮಿಯನ್ನು ರಾಂಚಿಯಲ್ಲಿರುವ ಅವರ ನಿವಾಸದಿಂದ ಬಂಧಿಸಿದೆ.
ಹಾಲಿವುಡ್ನ ಖ್ಯಾತ ನಟಿ ಸಲಮಾ ಹಯೆಕ್ ಇವರು ಸಾಮಾಜಿಕ ಮಾಧ್ಯಮವಾದ ‘ಇನ್ಸ್ಟಾಗ್ರಾಮ್’ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು, ಮಾತೆ ಶ್ರೀ ಲಕ್ಷ್ಮೀದೇವಿಯು ಆಂತರಿಕ ಸೌಂದರ್ಯವನ್ನು ಪ್ರೇರಣೆ ನೀಡುತ್ತಾಳೆ ಎಂದು ಬರೆದಿದ್ದಾರೆ.
‘ನ್ಯೂಸ್ ಬ್ರಾಡಕಾಸ್ಟಿಂಗ್ ಸ್ಟ್ಯಾಂಡರ್ಡ್ ಆಥೊರಿಟಿ’ಯಿಂದ(ಎನ್.ಬಿ.ಎಸ್.ಐ.ಯು) ಹಿಂದಿ ವಾರ್ತಾ ವಾಹಿನಿ ‘ಆಜ್ ತಕ್’ಗೆ ೧ ಲಕ್ಷ ರೂಪಾಯಿಯ ದಂಡವನ್ನು ಹೊರಿಸಲಾಗಿದೆ. ನಟ ಸುಶಾಂತ್ಸಿಂಹ ರಾಜಪುತರ ವಿಷಯದ ಟ್ವೀಟ್ ಒಂದನ್ನು ಪ್ರಸಾರ ಮಾಡಿದ ಬಗ್ಗೆ ಈ ಕ್ರಮ ಕೈಗೊಳ್ಳಲಾಗಿದೆ.
ಇಲ್ಲಿಯ ‘ನವಾಬ್ ಸಾಹಿಬ್ ಹಾತಾ’ ಪ್ರದೇಶದಲ್ಲಿ ಓರ್ವ ಮುಸಲ್ಮಾನ ಹುಡುಗಿ ಹಿಂದೂ ಯುವಕನನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಆತನನ್ನು ಮತಾಂತರ ಮಾಡಿ ಮದುವೆಯಾದಳು. ಈಗ ಮುಸಲ್ಮಾನ ಹುಡಡುಗಿಯರಿಂದಲೂ ಕೂಡ ‘ಲವ್ ಜಿಹಾದ್’ ಆಗುತ್ತಿದೆ ಎಂದು ಹೇಳಲಾಗುತ್ತಿದೆ.
ಬ್ರಿಟನ್ನ ಒಂದು ಶಾಲೆಯ ಜಾಲತಾಣದಿಂದ ‘ಬ್ರಿಟಿಷ್ ಜಿ.ಸಿ.ಎಸ್.ಇ. ಧಾರ್ಮಿಕ ಸ್ಟಡೀಸ್ ವರ್ಕ್ಬುಕ್’ಅನ್ನು ತೆಗೆಯಲಾಗಿದೆ. ಅದೇ ರೀತಿ ಪ್ರಕಾಶಕರು ಪುಸ್ತಕವನ್ನು ಹಿಂತೆಗೆದುಕೊಂಡಿದ್ದಾರೆ. ಇಲ್ಲಿನ ಹಿಂದೂಗಳ ವಿರೋಧದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಪುಸ್ತಕದಲ್ಲಿ ಹಿಂದೂಗಳನ್ನು ಭಯೋತ್ಪಾದಕರು ಎಂದು ಹೇಳಲಾಗಿತ್ತು.
ಯಾವುದೇ ಸವಾಲನ್ನು ಎದುರಿಸಲು ಪಾಕಿಸ್ತಾನ ಸೇನೆಯು ಸಿದ್ಧವಾಗಿದೆ. ನಮ್ಮ ದೇಶದ ಸಾರ್ವಭೌಮತ್ವದ ಮೇಲೆ ಆಕ್ರಮಣಕ್ಕೆ ಪ್ರಯತ್ನಿಸಿದರೆ ಅವರಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು. ಅದಕ್ಕಾಗಿ ಸೈನ್ಯವು ಸಿದ್ಧವಾಗಿರಬೇಕು, ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಜವಾ ಆದೇಶ ನೀಡಿದ್ದಾರೆ.
ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ನಡುವಿನ ಖಟ್ಲೆಯಲ್ಲಿ ಜಿಲ್ಲಾ ನ್ಯಾಯಾಲಯವು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ಗೆ ೩ ಸಾವಿರ ರೂಪಾಯಿಗಳ ದಂಡ ವಿಧಿಸಿದೆ. ಅಕ್ಟೋಬರ್ ೬ ರಂದು ನಡೆದ ಆಲಿಕೆಯ ಸಮಯದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಅರ್ಜಿಯನ್ನು ಅವರು ತಡವಾಗಿ ಪ್ರಶ್ನಿಸಿದ್ದರಿಂದ ಈ ದಂಡವನ್ನು ವಿಧಿಸಲಾಗಿದೆ.
ಪ್ರಸಿದ್ಧ ಪಾಪ್ ಗಾಯಕಿ ರಿಹಾನಾಳು ತನ್ನ ಕಾರ್ಯಕ್ರಮವೊಂದರಲ್ಲಿ ಹಾಡಿದ ಹಾಡಿನಲ್ಲಿ ಇಸ್ಲಾಂ ಧರ್ಮದ ಅವಮಾನ ಆಗಿದ್ದ ಬಗ್ಗೆ ಕ್ಷಮೆಯಾಚಿಸಿದ್ದಾಳೆ. ಈ ಹಾಡಿನಲ್ಲಿ, ರಿಹಾನಾಳು ಇಸ್ಲಾಂ ಧರ್ಮದ ಹದೀಸ್ನ ಕೆಲವು ಸಾಲುಗಳನ್ನು ಬಳಸಿದ್ದಳು.
ಕಳೆದ ತಿಂಗಳು ರಾಜ್ಯದ ಮುರ್ಶಿದಾಬಾದ್ನಿಂದ ಏಳು ಅಲ್ ಕಾಯಿದಾ ಭಯೋತ್ಪಾದಕರನ್ನು ಬಂಧಿಸಲಾಗಿತ್ತು. ನಂತರ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯು) ರಾಜ್ಯದಲ್ಲಿ ಹೆಚ್ಚಿನ ತನಿಖೆ ನಡೆಸಿದೆ. ಅದಕ್ಕನುಸಾರ ಬಂಗಾಲದ ಗಡಿ ಜಿಲ್ಲೆಗಳಲ್ಲಿ ಮುಸಲ್ಮಾನ ಯುವಕರನ್ನು ಜಿಹಾದಿ ಸಿದ್ಧಾಂತದತ್ತ ಸೆಳೆಯಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಈ ಮೂಲಕ ಅವರನ್ನು ಜಿಹಾದ್ಗಾಗಿ ಸಿದ್ಧ ಪಡಿಸಲು ಸಂಚು ರೂಪಿಸಲಾಗುತ್ತಿದೆ.
ಕೇರಳದಲ್ಲಿ ‘ಚೈಲ್ಡ್ ಪೋರ್ನೊಗ್ರಾಫಿ’ಯ (ಸಣ್ಣ ಮಕ್ಕಳ ಅಶ್ಲೀಲ ವಿಡಿಯೋ, ಚಿತ್ರಗಳು) ಪ್ರಸಾರ ಮಾಡುವ ಘಟನೆಗಳು ಹೆಚ್ಚಾಗಿವೆ. ಈ ಪ್ರಕರಣದಲ್ಲಿ ಪೊಲೀಸರು ‘ಡೆಮಾಕ್ರಟಿಕ್ ಯೂಥ್ ಫೆಡರೇಶನ್ ಆಫ್ ಇಂಡಿಯಾ’ದ ಮುಖಂಡ ಇಸಾ ರಿಯಾಜ್ ಸೇರಿದಂತೆ ೪೧ ಜನರನ್ನು ಈವರೆಗೆ ಬಂಧಿಸಿದ್ದಾರೆ.