ಕಾನಪುರ(ಉತ್ತರಪ್ರದೇಶ)ದಲ್ಲಿ ಮುಸಲ್ಮಾನ ಹುಡುಗಿಯ ‘ಲವ್ ಜಿಹಾದ್’

ಹಿಂದೂ ಯುವಕನನ್ನು ಪ್ರೀತಿಯ ಬಲೆಗೆ ಸೆಳೆದುಕೊಂಡು ಮತಾಂತರ ಮಾಡಿ ಮದುವೆಯಾದಳು

ಹಿಂದೂ ಯುವಕರಾಗಿರಲಿ ಯುವತಿಯರಾಗಿರಲಿ, ಧರ್ಮಾಭಿಮಾನ ಇಲ್ಲದಿರುವುದರ ಪರಿಣಾಮ ಇದಾಗಿದೆ. ಅದಕ್ಕಾಗಿಯೇ ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡುವುದು ಅತ್ಯಾವಶ್ಯಕವಾಗಿದೆ. ಹಿಂದೂ ಸಂಘಟನೆಗಳು ಯುದ್ಧಸ್ತರದ ಪ್ರಯತ್ನಗಳನ್ನು ಮಾಡುವುದು ಅಗತ್ಯವಿದೆ !

ಕಾನಪುರ (ಉತ್ತರ ಪ್ರದೇಶ) – ಇಲ್ಲಿಯ ‘ನವಾಬ್ ಸಾಹಿಬ್ ಹಾತಾ’ ಪ್ರದೇಶದಲ್ಲಿ ಓರ್ವ ಮುಸಲ್ಮಾನ ಹುಡುಗಿ ಹಿಂದೂ ಯುವಕನನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಆತನನ್ನು ಮತಾಂತರ ಮಾಡಿ ಮದುವೆಯಾದಳು. ಈಗ ಮುಸಲ್ಮಾನ ಹುಡಡುಗಿಯರಿಂದಲೂ ಕೂಡ ‘ಲವ್ ಜಿಹಾದ್’ ಆಗುತ್ತಿದೆ ಎಂದು ಹೇಳಲಾಗುತ್ತಿದೆ.

೧. ಈ ಹಿಂದೂ ಯುವಕನ ಹೆಸರು ಸುಮಿತ್ ಕನೌಜಿಯಾ ಎಂದಾಗಿದೆ. ಆತ ಮತಾಂತರಗೊಂಡು ಸೈಫ್ ಖಾನ್ ಎಂಬ ಹೆಸರನ್ನು ಇಟ್ಟುಕೊಂಡು ನಂತರ ಆ ಮುಸಲ್ಮಾನ ಹುಡುಗಿಯನ್ನು ಮದುವೆಯಾದನು. ಯುವತಿಯು ಸುಮಿತ್‌ನನ್ನು ಬ್ರೈನ್ ವಾಶ್ ಮಾಡಿ ಮತಾಂತರ ಮಾಡಿದ್ದಾಳೆ ಎಂದು ಸುಮಿತ್ ತಾಯಿ ಆರೋಪಿಸಿದ್ದಾರೆ. ಈಗ ಅವನು ನಮಾಜ ಪಠಣ ಮಾಡುತ್ತಾನೆ ಹಾಗೂ ರೋಜಾ ಕೂಡ ಇಡುತ್ತಾನೆ.

೨. ಸುಮಿತ್ ಮತ್ತು ಈ ಯುವತಿ ೨ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ; ಆದರೆ ಕುಟುಂಬದ ವಿರೋಧದಿಂದಾಗಿ ಅವರು ಓಡಿಹೋಗಿ ಮದುವೆಯಾದರು. ಈ ಪ್ರಕರಣದಲ್ಲಿ ಇಬ್ಬರ ಕುಟುಂಬಗಳು ಪರಸ್ಪರರ ವಿರುದ್ಧ ಅಪಹರಣ ದೂರು ದಾಖಲಿಸಿದ್ದಾರೆ. ಈ ಕಾರಣದಿಂದ ಪೊಲೀಸರು ಸುಮಿತ್ ತಂದೆಯನ್ನು ಬಂಧಿಸಿದ್ದಾರೆ. (ಎರಡೂ ಕುಟುಂಬಗಳು ದೂರು ನೀಡಿದ್ದರೆ, ಹಿಂದೂ ಹುಡುಗನ ತಂದೆಯನ್ನು ಮಾತ್ರ ಏಕೆ ಬಂಧಿಸಲಾಯಿತು ? ಮುಸಲ್ಮಾನ ಹುಡುಗಿಯ ತಂದೆಯನ್ನು ಏಕೆ ಬಂಧಿಸಲಿಲ್ಲ ? ಇದರಿಂದ ಪೊಲೀಸರ ಹಿಂದೂ ದ್ವೇಷ ಕಾಣುತ್ತದೆ ! – ಸಂಪಾದಕ)