ಬೆಂಗಳೂರಿನ ಪ್ರಸಿದ್ಧ ಗಾಳಿ ಆಂಜನೇಯ ದೇವಸ್ಥಾನದಲ್ಲಿನ ಸಿಬ್ಬಂದಿ ಮತ್ತು ಅರ್ಚಕರಿಂದ ಕಳ್ಳತನ

  • ಸಿಸಿಟಿವಿ ದೃಶ್ಯಾವಳಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

  • ಇನ್ನೂ ಯಾವುದೇ ದೂರು ಅಥವಾ ಅಪರಾಧ ದಾಖಲಾಗಿಲ್ಲ

ಬೆಂಗಳೂರು – ನಗರದ ಪ್ರಸಿದ್ಧ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ದೇವಸ್ಥಾನದ ಸಿಬ್ಬಂದಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಎಣಿಸುವ ವೇಳೆ ಈ ಘಟನೆ ನಡೆದಿದೆ. ಸಿಸಿಟಿವಿ ಕ್ಯಾಮೆರಾಗಳಿದ್ದರೂ ಹಣ ಕದ್ದು ಜೇಬಿಗಿಳಿಸಿಕೊಂಡಿದ್ದಾರೆ. 500 ರೂಪಾಯಿ ನೋಟುಗಳ ಬಂಡಲ್ ಕಳ್ಳತನ ಮಾಡಲಾಗಿದೆ. ಕಳ್ಳತನದ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಸದ್ಯ ಈ ಸಂಬಂಧ ಯಾವುದೇ ದೂರು ಅಥವಾ ಪ್ರಕರಣ ದಾಖಲಾಗಿಲ್ಲ.

ಸಂಪಾದಕೀಯ ನಿಲುವು

ಅಂತಹವರನ್ನು ಗಲ್ಲಿಗೇರಿಸಬೇಕು ಎಂದು ಯಾರಿಗಾದರು ಅನಿಸಿದರೆ ತಪ್ಪೇನು ? ದೇವಸ್ಥಾನಗಳನ್ನು ರಕ್ಷಿಸುವ ಮತ್ತು ನಿರ್ವಹಿಸುವ ಹೊಣೆ ಹೊಂದಿರುವವರೇ ಹೀಗೆ ಮಾಡುತ್ತಿದ್ದರೆ, ಯಾರನ್ನು ನಂಬಬೇಕು ?