ವಾರಣಾಸಿ (ಉತ್ತರ ಪ್ರದೇಶ) – ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ನಡುವಿನ ಖಟ್ಲೆಯಲ್ಲಿ ಜಿಲ್ಲಾ ನ್ಯಾಯಾಲಯವು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ಗೆ ೩ ಸಾವಿರ ರೂಪಾಯಿಗಳ ದಂಡ ವಿಧಿಸಿದೆ. ಅಕ್ಟೋಬರ್ ೬ ರಂದು ನಡೆದ ಆಲಿಕೆಯ ಸಮಯದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಅರ್ಜಿಯನ್ನು ಅವರು ತಡವಾಗಿ ಪ್ರಶ್ನಿಸಿದ್ದರಿಂದ ಈ ದಂಡವನ್ನು ವಿಧಿಸಲಾಗಿದೆ. ಪ್ರಕರಣದ ಮುಂದಿನ ಆಲಿಕೆಯು ಅಕ್ಟೋಬರ್ ೧೩ ರಂದು ನಡೆಯಲಿದೆ. ಮುಂದಿನ ಆಲಿಕೆಯಲ್ಲಿ ಈ ಪ್ರಕರಣವನ್ನು ದಿವಾಣಿ ನ್ಯಾಯಾಲಯದಲ್ಲಿ ನಡೆಸುವುದೋ ಅಥವಾ ಲಖನೌದಲ್ಲಿನ ವಕ್ಫ್ ಪಂಚಾಯತಿಯಲ್ಲಿ ನಡೆಸುವುದು ಎಂಬುದರ ನಿರ್ಣಯವಾಗಲಿದೆ. ಅಂಜುಮಾನ ಇಂತಜಾಮಿಯಾ ಮಸೀದಿ ಕಮಿಟಿಯು ಈ ಮೊದಲು ದಿವಾಣಿ ನ್ಯಾಯಾಲಯದಲ್ಲಿ ಆಲಿಕೆ ನಡೆಸಿದ ಬಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಆದರೆ ಸುನ್ನಿ ಬೋರ್ಡ್ಗೆ ಇದರ ಆಲಿಕೆಯನ್ನು ಲಖನೌ ವಕ್ಫ ಪಂಚಾಯತಿಯಲ್ಲಿ ನಡೆಸಬೇಕು ಎಂದು ಅನಿಸುತ್ತದೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಕಾಶಿ ವಿಶ್ವನಾಥ ದೇವಸ್ಥಾನದ ಅರ್ಜಿಯ ಬಗ್ಗೆ ತಡವಾಗಿ ಪ್ರಶ್ನಿಸಿದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ಗೆ ೩ ಸಾವಿರ ರೂಪಾಯಿ ದಂಡ
ಕಾಶಿ ವಿಶ್ವನಾಥ ದೇವಸ್ಥಾನದ ಅರ್ಜಿಯ ಬಗ್ಗೆ ತಡವಾಗಿ ಪ್ರಶ್ನಿಸಿದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ಗೆ ೩ ಸಾವಿರ ರೂಪಾಯಿ ದಂಡ
ಸಂಬಂಧಿತ ಲೇಖನಗಳು
ರಾಜ್ಯದ ಕಾಂಗ್ರೆಸ್ ಸರಕಾರದಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 85 ಕೋಟಿ ರೂಪಾಯಿ ಅನುದಾನ
Teacher Suspended : ಬುಡಕಟ್ಟು ಜನಾಂಗದ ಮಹಿಳೆಯರನ್ನು ‘ಅವರು ಹಿಂದುಗಳೆ ಅಲ್ಲ’, ಹಾಗಾಗಿ ಹಣೆಗೆ ಕುಂಕುಮ ಮತ್ತು ಮಂಗಳಸೂತ್ರ ಹಾಕದಂತೆ ಕರೆ ನೀಡಿದ್ದ ಶಿಕ್ಷಕಿ ಅಮಾನತು !
Sanskrit Verse Opposition : ಗುನಾ (ಮಧ್ಯಪ್ರದೇಶ) ಇಲ್ಲಿಯ ಕಾನ್ವೆಂಟ್ ಶಾಲೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಶ್ಲೋಕ ಹೇಳಲು ವಿರೋಧ !
Change in Religion : ಮತಾಂತರದ ನಂತರ ಶಾಲೆಯ ಪ್ರಮಾಣಪತ್ರಗಳಲ್ಲಿ ಹೊಸ ಧರ್ಮವನ್ನು ನಮೂದಿಸಬಹುದು ! – ಕೇರಳ ಉಚ್ಚನ್ಯಾಯಾಲಯದ ತೀರ್ಪು
ಜೈಲಿನಲ್ಲಿರುವ ಕೈದಿಗಳ ಬಳಿ 25 ಮೊಬೈಲ್ ಪತ್ತೆ !
ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಅನ್ನು ‘ಗಣತಂತ್ರ ಮಂಟಪ’ ಮತ್ತು ಅಶೋಕ ಹಾಲ್ ಅನ್ನು ‘ಅಶೋಕ್ ಮಂಟಪ’ ಎಂದು ಮರುನಾಮಕರಣ !