ಬಾಂಗ್ಲಾದೇಶದಲ್ಲಿನ ಹಿಂದೂ ಮಹಿಳೆಯ ಮೇಲೆ ಮತ್ತೊಂದು ಅಮಾನವೀಯ ಘಟನೆ !

ರಾಜೀನಾಮೆ ನೀಡಲು ನಿರಾಕರಿಸಿದ ಗರ್ಭಿಣಿ ಹಿಂದೂ ಶಿಕ್ಷಕಿಯ ನಡು ರಸ್ತೆಯಲ್ಲಿ ಮೆರವಣಿಗೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಓರ್ವ ಗರ್ಭಿಣಿ ಹಿಂದೂ ಶಿಕ್ಷಕಿ ಶಿಖಾ ರಾಣಿ ರೇ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರಾಕರಿಸಿದ್ದಕ್ಕಾಗಿ ತೀವ್ರ ಅವಮಾನ ಎದುರಿಸಬೇಕಾಯಿತು. ರಾಜೀನಾಮೆ ನೀಡಿದ್ದಕ್ಕಾಗಿ ಶಿಖಾ ಅವರನ್ನು ಥಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇದನ್ನು ತೀವ್ರವಾಗಿ ಟೀಕಿಸಿದ ಜನರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುಲು ಹಾಗೂ ಮಾನವಾಧಿಕಾರ ಸಂಘಟನೆಗಳು ಈ ಘಟನೆಯ ಕುರಿತು ತಕ್ಷಣ ವಿಚಾರಣೆ ನಡೆಸುವಂತೆ ಆಗ್ರಹಿಸಿದ್ದಾರೆ.

ಶಿಖಾ ರಾಣಿ ರೇ ಅವರು ಹಿಂದೂ ಆಗಿರುವ ಕಾರಣ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಮುಖ್ಯ ಶಿಕ್ಷಕ ಮಹಮ್ಮದ್ ಬಿಲಾಲ್ ಎಂಬವನು ಒತ್ತಡ ಹೇರಿದ್ದನು. ಶಿಖಾ ಅವರನ್ನು ರಾಜೀನಾಮೆ ನೀಡಲು ಅನಿವಾರ್ಯಗೊಳಿಸಲಾಗುತ್ತಿತ್ತು. ಅವರು ಈ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಿ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಆ ಬಳಿಕ ಈ ಮೇಲಿನ ಘಟನೆ ನಡೆದಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಹಿಂದುಗಳಿಗೆ ಜಗತ್ತಿನಲ್ಲಿ ಯಾರೂ ಸಹಾಯಕ್ಕಿಲ್ಲ !