ಅಮಾಯಕರನ್ನು ಬಿಡುಗಡೆಗೊಳಿಸಿ !
ಇಲ್ಲಿ ನಡೆದ ಗಲಭೆಯ ಪ್ರಕರಣದಲ್ಲಿ ಬಂಧಿಸಲಾಗಿದ್ದ ಮತಾಂಧರನ್ನು ಬಿಡುಗಡೆ ಮಾಡಲು ಕಾಂಗ್ರೆಸ್ನ ಮುಖಂಡ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರಿಗೆ ಮುಸಲ್ಮಾನರ ಸಮೂಹವೊಂದು ಭೇಟಿ ನೀಡಿ ಮನವಿ ಸಲ್ಲಿಸಿದೆ.
ಇಲ್ಲಿ ನಡೆದ ಗಲಭೆಯ ಪ್ರಕರಣದಲ್ಲಿ ಬಂಧಿಸಲಾಗಿದ್ದ ಮತಾಂಧರನ್ನು ಬಿಡುಗಡೆ ಮಾಡಲು ಕಾಂಗ್ರೆಸ್ನ ಮುಖಂಡ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರಿಗೆ ಮುಸಲ್ಮಾನರ ಸಮೂಹವೊಂದು ಭೇಟಿ ನೀಡಿ ಮನವಿ ಸಲ್ಲಿಸಿದೆ.
ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಮೇಲಿದ್ದ ಬಾಬರಿ ಮಸೀದಿಯನ್ನು ೬ ಡಿಸೆಂಬರ ೧೯೯೨ ರಲ್ಲಿ ನೆಲಸಮಗೊಳಿಸಿದ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಸಪ್ಟೆಂಬರ್ ೩೦ ರಂದು ತೀರ್ಪು ನೀಡಲಿದೆ. ನ್ಯಾಯಾಧೀಶರಾದ ಎಸ್.ಕೆ. ಯಾದವ್ ಇವರು ತೀರ್ಪಿನಿ ದಿನ ಲಾಲ್ಕೃಷ್ಣ ಆಡ್ವಾಣಿ ಸೇರಿ ಎಲ್ಲ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರಿರುವಂತೆ ಆದೇಶವನ್ನು ನೀಡಿದ್ದಾರೆ.
ದಕ್ಷಿಣ ಭಾರತದ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಹಾಗೂ ತಮಿಳನಾಡು ರಾಜ್ಯಗಳಿಂದ ಇಸ್ಲಾಮಿಕ್ ಸ್ಟೇಟ್ನ ೧೨೨ ಭಯೋತ್ಪಾದಕರನ್ನು ೧೭ ಅಪರಾಧಗಳಲ್ಲಿ ಬಂಧಿಸಲಾಗಿದೆ. ರಾಷ್ಟ್ರೀಯ ತನಿಖಾ ದಳದವರು (ಎನ್.ಐ.ಎ.ನಿಂದ) ಭಯೋತ್ಪಾದಕರನ್ನು ಬಂಧಿಸಿದ್ದಾರೆ, ಎಂದು ಕೇಂದ್ರ ಗೃಹ ಸಚಿವ ಜಿ. ಕಿಶನ್ ರೆಡ್ಡಿಯವರು ರಾಜ್ಯಸಭೆಯಲ್ಲಿ ಲಿಖಿತ ಮಾಹಿತಿ ನೀಡಿದ್ದಾರೆ.
ಸಿಂಧ್ ಪ್ರಾಂತ್ಯದಲ್ಲಿನ ಮೊರಿ ಎಂಬಲ್ಲಿ ೯ ನೇ ತರಗತಿಯಲ್ಲಿ ಕಲಿಯುತ್ತಿರುವ ೧೪ ವರ್ಷದ ಅಪ್ರಾಪ್ತೆ ಹಿಂದೂ ಹುಡುಗಿ ಪರಶ ಕುಮಾರಿಯನ್ನು ಅಬ್ದುಲ್ ಸಬೂರ್ನು ಅಪಹರಿಸಿ ಬಲವಂತವಾಗಿ ಮತಾಂತರಿಸಿ ನಂತರ ಆಕೆಯೊಂದಿಗೆ ನಿಕಾಹ ಮಾಡಿರುವ ಘಟನೆ ನಡೆದಿದೆ.
ಅತ್ಯಾಚರಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಗಲ್ಲಿಗೇರಿಸಬೇಕು ಅಥವಾ ನಪುಂಸಕರನ್ನಾಗಿ ಮಾಡಬೇಕು, ಇದರಿಂದ ಅಪರಾಧವನ್ನು ಮಾಡುವವರ ಮನಸ್ಸಿನಲ್ಲಿ ಒಂದು ಭಯ ನಿರ್ಮಾಣವಾಗಬಹುದು. ಹೇಗೆ ಕೊಲೆಯ ಘಟನೆಗೆ ‘ಫಸ್ಟ ಡಿಗ್ರಿ’, ‘ಸೆಕೆಂಡ್ ಡಿಗ್ರಿ’, ‘ಥರ್ಡ್ ಡಿಗ್ರಿ’ ಪದ್ದತಿಯ ಶಿಕ್ಷೆ ಇರುತ್ತದೆಯೋ, ಅದೇ ರೀತಿ ಅತ್ಯಾಚಾರ ಮಾಡುವ ಆರೋಪಿಗಳಿಗೂ ಮಾಡಬೇಕು.
೧ ಜನವರಿ ೨೦೧೫ ರಿಂದ ೩೧ ಡಿಸೆಂಬರ ೨೦೧೯ ರ ಕಾಲಾವಧಿಯಲ್ಲಿ ಬ್ಯಾಂಕ್ ಹಗರಣಗಳ ೩೮ ಆರೋಪಿಗಳು ದೇಶ ಬಿಟ್ಟು ಪರಾರಿಯಾಗಿದ್ದಾರೆ. ಸಿಬಿಐ ಯಾವ ಬ್ಯಾಂಕ್ ಹಗರಣಗಳ ತನಿಖೆಯನ್ನು ಮಾಡುತ್ತಿದೆಯೋ, ಅದರ ಆರೋಪಿಗಳೇ ಇವರು ಎಂದು ಕೇಂದ್ರ ಹಣಕಾಸು ಸಚಿವ ಅನುರಾಗ ಠಾಕುರ್ ಇವರು ಸಂಸತ್ತಿನಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
ಚುನಾವಣೆಯ ಎದುರಾಗುತ್ತಿದ್ದಂತೆ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಂಗಾಲದ ಬ್ರಾಹ್ಮಣ ಅರ್ಚಕರಿಗೆ ಉಚಿತವಾಗಿ ಮನೆ ಹಾಗೂ ೧ ಸಾವಿರ ರೂಪಾಯಿ ತಿಂಗಳ ಭತ್ಯೆ ನೀಡುವಂತೆ ಘೋಷಿಸಿದ್ದಾರೆ. ಬಂಗಾಲದಲ್ಲಿ ೮ ಸಾವಿರ ಬ್ರಾಹ್ಮಣ ಅರ್ಚಕರು ಇದ್ದಾರೆ. ಈ ಮೂಲಕ ಬ್ಯಾನರ್ಜಿಯವರು ರಾಜ್ಯದ ಬ್ರಾಹ್ಮಣ ಮತದಾರರನ್ನು ತಮ್ಮತ್ತ ಆಕರ್ಷಿಸಲು ಪ್ರಯತ್ನಿಸಿತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕ್ರೂರ, ಆಕ್ರಮಣಕಾರಿ ಹಾಗೂ ಕಟ್ಟರ ಹಿಂದೂದ್ವೇಷಿಯಾಗಿದ್ದ ಮೊಘಲರು ಭಾರತದ ಮೇಲೆ ೧೫೨೬ ರಿಂದ ೧೮೫೭(೩೩೧ ವರ್ಷ) ತನಕ ರಾಜ್ಯವಾಳಿದರು. ತದನಂತರವೂ ದೇಶದ ೬ ಲಕ್ಷ ನಗರಗಳು, ಊರುಗಳು ಹಾಗೂ ಗ್ರಾಮಗಳು ಬಾಬರ್, ಹುಮಾಯುನ್, ಅಕಬರ, ಜಹಾಂಗಿರ, ಶಾಹಜಹಾಂ ಹಾಗೂ ಔರಂಗಜೇಬ್ ಈ ಪ್ರಥಮ ೬ ಮೊಘಲ ಆಕ್ರಮಣಕಾರರ ಹೆಸರನ್ನು ಹೊಂದಿವೆ.
ಆಗ್ರಾದಲ್ಲಿ ನಿರ್ಮಿಸಲಾಗುವ ಸಂಗ್ರಹಾಲಯಕ್ಕೆ ‘ಮೊಘಲ್ ಮ್ಯೂಸಿಯಮ್’ ಅಲ್ಲ, ಛತ್ರಪತಿ ಶಿವಾಜಿ ಮಹಾರಾಜರ ಹೆಸರಿಡಲಾಗುವುದು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಘೋಷಣೆ ಮಾಡಿದರು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಇವರಿಗೆ ಆದೇಶವನ್ನು ನೀಡಿದ್ದಾರೆ.
ರಾಜ್ಯದ ಗೊಘಾಟ ರೈಲು ನಿಲ್ದಾಣದ ಬಳಿ ಒಂದು ಮರದ ಮೇಲೆ ಭಾಜಪದ ವಿಭಾಗೀಯ ಕಾರ್ಯದರ್ಶಿ ಗಣೇಶ ರಾಯ್ ಇವರ ಶವವು ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ‘ತೃಣಮೂಲ ಕಾಂಗ್ರೆಸ್ನವರು ಗಣೇಶ ರಾಯ್ ಇವರ ಹತ್ಯೆ ಮಾಡಿದ್ದಾರೆ’, ಎಂದು ಭಾಜಪ ಹಾಗೂ ರಾಯ್ನ ಮಗನು ಆರೋಪಿಸಿದ್ದಾನೆ.