ಬೆಳ್ತಂಗಡಿಯಲ್ಲಿ ಪಾಕ್‌ಪರ ಘೋಷಣೆ ಕೂಗಿದ ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಕೂಡಲೇ ಅಪರಾಧಿಗಳನ್ನು ಬಂಧಿಸಿ !

ಬೆಳ್ತಂಗಡಿಯ ಉಜಿರೆಯಲ್ಲಿ ಇಂದು ಗ್ರಾಮಪಂಚಾಯತ್ ಚುನಾವಣೆಯ ಮತ ಎಣಿಕೆ ಸಮಯದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪಾಕಿಸ್ತಾನಪರ ಘೋಷಣೆ ಕೂಗಿರುವ ಘಟನೆ ನಡೆದಿರುವುದು ದೇಶದ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಘಟನೆಯಾಗಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ಮಥುರಾದಲ್ಲಿ ರಾ.ಸ್ವ. ಸಂಘದ ಕಚೇರಿಯ ಮೇಲೆ ಮತಾಂಧರ ಗುಂಪಿನಿಂದ ಹಲ್ಲೆ

ಸ್ಥಳೀಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಯಲ್ಲಿ ಕಳ್ಳತನದ ಪ್ರಕರಣದ ನಂತರ ೪೦ ರಿಂದ ೫೦ ಮತಾಂಧರ ಗುಂಪೊಂದು ಕಚೇರಿಯ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದೆ. ಇದರಲ್ಲಿ ಇಬ್ಬರು ಸ್ವಯಂಸೇವಕರು ಗಾಯಗೊಂಡಿದ್ದಾರೆ. ದಾಳಿಕೋರರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ಈ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಮದುವೆಗಾಗಿ ಮತಾಂತರವಾಗಲು ಒತ್ತಾಯಿಸುವುದು ಸ್ವೀಕಾರಾರ್ಹವಲ್ಲ ! – ರಕ್ಷಣಾ ಸಚಿವ ರಾಜನಾಥ ಸಿಂಗ್

ದೇಶದಲ್ಲಿ ನಡೆಯುತ್ತಿರುವ ಸಾಮೂಹಿಕ ಮತಾಂತರವನ್ನು ನಿಲ್ಲಿಸಬೇಕು. ಮದುವೆಗಾಗಿ ಬಲವಂತವಾಗಿ ಮತಾಂತರಗೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸರಕಾರಗಳು ಜಾರಿಗೆ ತಂದಿರುವ ಲವ್ ಜಿಹಾದ್ ವಿರೋಧಿ ಕಾನೂನುಗಳನ್ನು ಬೆಂಬಲಿಸಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದರು.

ರೋಗಗಳು ಬರಬಾರದೆಂದು ಆಯುರ್ವೇದವು ಹೇಳಿದ ಕೆಲವು ಉಪಾಯಗಳು

ವಸಂತ ಋತುವಿನಲ್ಲಿ ಕಫ ಹೆಚ್ಚಾಗಬಾರದೆಂದು ವಾಂತಿಯನ್ನು ಮಾಡಿಕೊಳ್ಳುವುದು, ಶರದ ಋತುವಿನಲ್ಲಿ ಪಿತ್ತ ಹೆಚ್ಚಾಗಬಾರದೆಂದು ರೇಚಕವನ್ನು ತೆಗೆದುಕೊಳ್ಳುವುದು ಮತ್ತು ಮಳೆಗಾಲದಲ್ಲಿ ವಾತ ಹೆಚ್ಚಾಗಬಾರದೆಂದು ಎನಿಮಾ ತೆಗೆದುಕೊಳ್ಳಬೇಕು.

ಆಯುರ್ವೇದವು ತಡವಾಗಿ ಅಲ್ಲ, ಆದರೆ ತಕ್ಷಣ ಗುಣಪಡಿಸುವ ಶಾಸ್ತ್ರವಾಗಿದೆ !

ಗುರುಕುಲ ಶಿಕ್ಷಣಪದ್ಧತಿಯು ಲೋಪಗೊಂಡಿದ್ದರಿಂದ ಆಯುರ್ವೇದದ ಪರಿಪೂರ್ಣ ಜ್ಞಾನವಿರುವ ವೈದ್ಯರ ಸಂಖ್ಯೆಯು ತುಲನೆಯಲ್ಲಿ ಕಡಿಮೆ ಇದೆ. ಹೆಚ್ಚಿನ ವೈದ್ಯರು ರೋಗಿಯ ಪ್ರಕೃತಿ, ರೋಗದ ಕಾರಣಗಳು ಇತ್ಯಾದಿಗಳ ಬಗ್ಗೆ ವಿಚಾರ ಮಾಡದೇ ಅಲೋಪತಿಯ ಆಧಾರದಲ್ಲಿ ಆಯುರ್ವೇದಿಕ ಉಪಚಾರ ನೀಡುತ್ತಿರುವುದರಿಂದ ಮತ್ತು ರೋಗಿಯೂ ಪಥ್ಯ ಇತ್ಯಾದಿಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸದಿರುವುದರಿಂದ ‘ಆಯುರ್ವೇದಿಕ ಔಷಧಿಗಳಿಂದ ತಡವಾಗಿ ಗುಣಮುಖವಾಗುತ್ತದೆ’, ಎಂಬ ತಪ್ಪು ತಿಳುವಳಿಕೆಯು ರೂಢಿಗೆ ಬಂದಿದೆ.’

ಆಯುರ್ವೇದಕ್ಕನುಸಾರ ವ್ಯಾಯಾಮವನ್ನು ಮಾಡುವುದರಿಂದ ಆಗುವ ಲಾಭಗಳು !

‘ವ್ಯಾಯಾಮದಿಂದ ಚಕ್ರಗಳ ಸ್ಥಳಗಳ  ಮೇಲೆ (ಅಂದರೆ ಆ ಬಿಂದುಗಳ ಮೇಲೆ) ಒತ್ತಡ ನಿರ್ಮಾಣವಾಗುವುದರಿಂದ ಶರೀರದಲ್ಲಿನ ಸೂಕ್ಷ್ಮಚಕ್ರಗಳ (ಸಪ್ತಚಕ್ರಗಳ) ಸುತ್ತಲಿನ ಕಪ್ಪು ಶಕ್ತಿಯ ಆವರಣ ಪ್ರಾರಂಭದಲ್ಲಿ ವಿರಳವಾಗುತ್ತದೆ ಮತ್ತು ವ್ಯಾಯಾಮವನ್ನು ನಿರಂತರವಾಗಿ ಮಾಡಿದರೆ ಅದು ನಾಶವಾಗುತ್ತದೆ. ಇದರಿಂದ ಸೂಕ್ಷ್ಮ ಚಕ್ರಗಳ ಆಧೀನದಲ್ಲಿರುವ ಅವಯವಗಳ ಕಪ್ಪು ಶಕ್ತಿಯು ವಿರಳವಾಗುತ್ತದೆ

ಮಂಗಳಮಯ ವಾತಾವರಣದಲ್ಲಿ ಮಂಗಳೂರು ಸೇವಾಕೇಂದ್ರಕ್ಕೆ ತುಮಕೂರಿನ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಿಯವರ ಶುಭಾಗಮನ

ಶ್ರೀ ದೇವಿಯ ಮಹಿಮೆಯನ್ನು ಹೇಳುತ್ತಾ, ಶ್ರೀ. ಪವನಕುಮಾರ ಯಜಮಾನ ಇವರು, ‘ಕೊರೋನಾದಿಂದಾಗಿ ಸಮಾಜದಲ್ಲಿ ಒಂದೆಡೆ ಕಷ್ಟ ಎಂದೆನಿಸಿದರೂ ಇನ್ನೊಂದೆಡೆ ಎಷ್ಟೋ ಅನ್ಯಾಯ ಅತ್ಯಾಚಾರಗಳು ಕಡಿಮೆಯಾಯಿತು, ಕುಟುಂಬ ಬಾಂಧವ್ಯ ಹೆಚ್ಚಾಯಿತು, ಸಾತ್ತ್ವಿಕ ಆಹಾರವನ್ನೇ ಸೇವನೆ ಪ್ರಾರಂಭವಾಯಿತು. ಅಂದರೆ ಸಮಾಜದಲ್ಲಿ ಅನ್ಯಾಯಗಳು, ಅಧರ್ಮಗಳು ಹೆಚ್ಚಾದಾಗ ಭಗವಂತನು ಯಾವುದಾದರೊಂದು ಮಾಧ್ಯಮದಿಂದ ತನ್ನ ಲೀಲೆಯನ್ನು ತೋರಿಸುತ್ತಾನೆ ಎಂದು ಹೇಳಿದರು.

ದಿನಚರ್ಯೆಯು ಸುಲಭ ಹಾಗೂ ಆರೋಗ್ಯಕರವಾಗಿರಲು ಮಾಡಬೇಕಾದ ಕೃತಿಗಳು

ಶರೀರಕ್ಕೆ ಎಣ್ಣೆ ಹಚ್ಚಿರುವುದರಿಂದ ಸ್ನಾನಕ್ಕೆ ಬೆಚ್ಚಗಿನ ನೀರನ್ನು ಉಪಯೋಗಿಸಬೇಕು. ಸ್ನಾನ ಮಾಡುವಾಗ ಮೊದಲು ನಮ್ಮ ತಲೆ ಅನಂತರ ಕಾಲನ್ನು ನೆನೆಸಬೇಕು. ಮೊದಲೇ ಕಾಲನ್ನು ನೆನೆಸಿದರೆ ಶರೀರದ ಉಷ್ಣತೆ ಮೇಲೆ ಹೋಗಿ ಆರೋಗ್ಯ ಕೆಡುವ ಸಾಧ್ಯತೆಯಿದೆ. ತಲೆಗೆ ಬಿಸಿ ನೀರನ್ನು ಹಾಕಿದರೆ ಕೂದಲು ಉದುರುತ್ತವೆ, ಆದ್ದರಿಂದ ತಲೆಗೆ ಉಗುರು ಬೆಚ್ಚಗಿನ ನೀರನ್ನು ಉಪಯೋಗಿಸಬೇಕು. ತಣ್ಣೀರಿನಿಂದ ಸ್ನಾನ ಮಾಡುವವರು ತಲೆಗೆ ತಣ್ಣೀರು ಹಾಕಬಹುದು.

ಕೊಬ್ಬರಿ ಎಣ್ಣೆ – ಒಂದು ಬಹುಗುಣಿ ಔಷಧ

ಧೂಳಿನ ‘ಅಲರ್ಜಿ’ ಇರುವವರು ದಿನದಲ್ಲಿ ೫-೬ ಬಾರಿ ಕೊಬ್ಬರಿ ಎಣ್ಣೆಯ ಬಾಟಲಿಯಲ್ಲಿ ೧ ಕಿರುಬೆರಳನ್ನು ಮುಳುಗಿಸಿ ಅದಕ್ಕೆ ಅಂಟಿದ ಎಣ್ಣೆಯನ್ನು ಮೂಗಿನ ಹೊಳ್ಳೆಗಳ ಒಳಗೆ ಹಚ್ಚಬೇಕು. ಇದರಿಂದ ಮೂಗಿನಲ್ಲಿ ಬರುವ ಧೂಳು ಎಣ್ಣೆಗೆ ಅಂಟುವುದರಿಂದ ಅದು ಉಸಿರಾಟದ ಮಾರ್ಗದಲ್ಲಿ ಹೋಗುವುದಿಲ್ಲ ಮತ್ತು ಧೂಳಿನಿಂದಾಗುವ ತೊಂದರೆಯು ಕಡಿಮೆಯಾಗುತ್ತದೆ.

ರಾತ್ರಿ ಹಾಲು ಕುಡಿಯುವ ವಿಷಯದಲ್ಲಿ ಮಾರ್ಗದರ್ಶಕ ಅಂಶ ಮತ್ತು ಅದನ್ನು ಕುಡಿಯುವಾಗ ಪಾಲಿಸಬೇಕಾದ ಪಥ್ಯಗಳು

ರಾತ್ರಿ ಮಲಗುವಾಗ ಹಾಲು ಕುಡಿಯುವುದರಿಂದ ಪಚನಶಕ್ತಿ ಮಂದವಾಗುತ್ತದೆ ಹಾಗೂ ಕಫದ ರೋಗವಾಗುತ್ತದೆ. ಆದ್ದರಿಂದ ರಾತ್ರಿ ಹಾಲು ಕುಡಿಯುವ ಬದಲು ಬೆಳಗ್ಗೆ ಎದ್ದು ಸ್ನಾನವಾದ ನಂತರ ಹಾಲು ಕುಡಿಯಬೇಕು. ಹಾಲು ಕುಡಿದ ನಂತರ ಅಥವಾ ಹಾಲಿನ ಜೊತೆಗೆ ಏನೂ ತಿನ್ನಬಾರದು; ಏಕೆಂದರೆ ಇತರ ಪದಾರ್ಥಗಳಲ್ಲಿ ಉಪ್ಪಿನ ಅಂಶವಿರುತ್ತದೆ. ಅದು ಹಾಲಿನೊಂದಿಗೆ ಮಿಶ್ರಣವಾದಾಗ ಶರೀರಕ್ಕೆ ಅಪಾಯವಾಗಬಹುದು.