ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆ ಇವರ ತೇಜಸ್ವಿ ವಿಚಾರ
ಎಲ್ಲಿ ಶಿಶುವಿಹಾರ ಮಟ್ಟದ ಮತ್ತು ಶೋಧ ಕಾರ್ಯ ಮಾಡುವ ಪಾಶ್ಚಾತ್ಯರ ವಿಜ್ಞಾನ; ಮತ್ತು ಎಲ್ಲಿ ಲಕ್ಷಾಂತರ ವರ್ಷಗಳ ಹಿಂದೆಯೇ ಪರಿಪೂರ್ಣತೆ ಪ್ರಾಪ್ತ ಮಾಡಿಕೊಂಡಹಿAದೂ ಧರ್ಮದ ವಿಜ್ಞಾನ !
ಎಲ್ಲಿ ಶಿಶುವಿಹಾರ ಮಟ್ಟದ ಮತ್ತು ಶೋಧ ಕಾರ್ಯ ಮಾಡುವ ಪಾಶ್ಚಾತ್ಯರ ವಿಜ್ಞಾನ; ಮತ್ತು ಎಲ್ಲಿ ಲಕ್ಷಾಂತರ ವರ್ಷಗಳ ಹಿಂದೆಯೇ ಪರಿಪೂರ್ಣತೆ ಪ್ರಾಪ್ತ ಮಾಡಿಕೊಂಡಹಿAದೂ ಧರ್ಮದ ವಿಜ್ಞಾನ !
ವಿಜ್ಞಾನದಲ್ಲಿ ಪ್ರಯೋಗ ಮಾಡುವುದು, ಅಂಕಿಅಂಶಗಳನ್ನು ಸಂಗ್ರಹಿಸಿ ಅದರ ವಿಶ್ಲೇಷಣೆ ಮಾಡುವುದು ಇತ್ಯಾದಿಗಳ ಆಧಾರದಲ್ಲಿ ನಿಷ್ಕರ್ಷಕ್ಕೆ ಬರಲಾಗುತ್ತದೆ. ತದ್ವಿರುದ್ಧ ಅಧ್ಯಾತ್ಮದಲ್ಲಿ ತಕ್ಷಣವೇ ನಿಷ್ಕರ್ಷವು ತಿಳಿಯುತ್ತದೆ !
ಪೊಲೀಸರು ಮತ್ತು ನ್ಯಾಯಾಧೀಶರಿಗೆ ಸಾಧನೆಯನ್ನು ಕಲಿಸುತ್ತಿದ್ದರೆ ಅವರಿಗೆ ಒಂದು ಕ್ಷಣದಲ್ಲಿ ಅಪರಾಧಿ ಯಾರೆಂದು ತಿಳಿಯುತ್ತಿತ್ತು. ಸಾಧನೆಯ ಅಭಾವದಿಂದಾಗಿ ತನಿಖೆ ಮಾಡುವುದಕ್ಕಾಗಿಯೇ ಜನರ ಕೋಟಿಗಟ್ಟಲೆ ಹಣ ಖರ್ಚಾಗುತ್ತಿದೆ. ಈಶ್ವರೀ ರಾಜ್ಯದಲ್ಲಿ ಹೀಗಿರುವುದಿಲ್ಲ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಆಧ್ಯಾತ್ಮಿಕ ಮಟ್ಟದ ಮಹತ್ವ ‘ಉಚ್ಚ ಆಧ್ಯಾತ್ಮಿಕ ಮಟ್ಟವಿದ್ದರೆ, ರಜ -ತಮಗಳ ಪರಿಣಾಮವಾಗುವುದಿಲ್ಲ. ಬದಲಾಗಿ ಉಚ್ಚ ಆಧ್ಯಾತ್ಮಿಕ ಮಟ್ಟದಿಂದ ನಿರ್ಮಾಣವಾದ ಚೈತನ್ಯದಿಂದ ರಜ-ತಮಗಳ ಮೇಲೆ ಪರಿಣಾಮ ವಾಗುತ್ತದೆ ಮತ್ತು ರಜ-ತಮ ಕಡಿಮೆಯಾಗುತ್ತವೆ.
ವೃದ್ಧಾಪ್ಯದಲ್ಲಿ ಮಕ್ಕಳು ಗಮನ ನೀಡುವುದಿಲ್ಲ, ಎಂದು ಹೇಳುವ ವೃದ್ಧರೇ, ತಮ್ಮ ಮಕ್ಕಳಿಗೆ ಸಾಧನೆಯ ಸಂಸ್ಕಾರ ನೀಡಲಿಲ್ಲ, ಅದರ ಫಲವೇ ತಮ್ಮ ಇಂದಿನ ಸ್ಥಿತಿಯಾಗಿದೆ. ಅದಕ್ಕೆ ಮಕ್ಕಳ ಜೊತೆಗೆ ತಾವೂ ಜವಾಬ್ದಾರರು !
ನಾವು ಕಲಿಯುತ್ತಿರುವಾಗ ‘ನಾನು ಅಜ್ಞಾನಿ ಇದ್ದೇನೆ’, ಎಂಬುದರ ಅರಿವಿಟ್ಟುಕೊಂಡು ಜ್ಞಾನವನ್ನು ಪಡೆಯುವ ಪ್ರಕ್ರಿಯೆ ಮಾಡಬೇಕು. ಇದರಿಂದ ‘ನನ್ನತನ ಕಡಿಮೆಯಾಗುವುದು ಮತ್ತು ಜ್ಞಾನದಲ್ಲಿನ ಚೈತನ್ಯವನ್ನು ಅನುಭವಿಸಲು ಸಾಧ್ಯವಾಗುವುದು’, ಹೀಗೆ ಎರಡೂ ಲಾಭಗಳಾಗುತ್ತವೆ.
ಹಿಂದೂ ಧರ್ಮವನ್ನು ಬಿಟ್ಟು ಉಳಿದ ಧರ್ಮಗಳ ಇತಿಹಾಸ ನೋಡಿದರೆ, ಅದರಲ್ಲಿ ವಿವಿಧ ಕಾಲಘಟ್ಟದಲ್ಲಿ ಲಕ್ಷಾಂತರ ಹತ್ಯೆಗಳ, ಕ್ರೂರತೆಯ, ಬಲಾತ್ಕಾರಗಳ, ಗೆದ್ದ ಪ್ರದೇಶಗಳಲ್ಲಿರುವ ಸ್ತ್ರೀ-ಪುರುಷರನ್ನು ಗುಲಾಮರೆಂದು ಮಾರಾಟ ಮಾಡಿದ ಸಾವಿರಾರು ಉಲ್ಲೇಖಗಳಿವೆ. ಹಿಂದೂ ಧರ್ಮದ ಇತಿಹಾಸದಲ್ಲಿ ಇಂತಹ ಒಂದು ಉದಾಹರಣೆಯೂ ಇಲ್ಲ !
ಮೂರನೇ ಮಹಾಯುದ್ಧದ ಸಮಯದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಹಿಂದೂಗಳ ರಕ್ಷಣೆ ಮಾಡಲು ಆಗುವುದಿಲ್ಲ; ಏಕೆಂದರೆ ಅವರಲ್ಲಿ ಆಧ್ಯಾತ್ಮಿಕ ಬಲ ಇಲ್ಲ. ಆ ಕಾಲದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಇಂದಿನಿಂದ ಸಾಧನೆ ಮಾಡಿ !’
ಕಳೆದ ೭ ವರ್ಷಗಳಿಂದ ನನಗೆ ಎಲ್ಲಿಯೂ ಹೊರಗೆ ಹೋಗಲು ಸಾಧ್ಯವಾಗಿಲ್ಲ, ಆದರೆ ಕೇವಲ ಕಿಟಕಿಯಿಂದ ಕಾಣಿಸುವ ದೃಶ್ಯವನ್ನು ನೋಡಿ ನಾನು ಆನಂದದಿಂದಿದ್ದೇನೆ.– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಕೆಲಸ ಮಾಡದಿರುವುದು, ಭ್ರಷ್ಟಾಚಾರ ಮಾಡುವುದು, ಇತ್ಯಾದಿಗಳ ಅಭ್ಯಾಸವಾಗಿರುವ ಹೆಚ್ಚಿನ ಪೊಲೀಸರು ಮತ್ತು ಸರಕಾರಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನು ಒಂದೇ ಒಂದು ಖಾಸಗಿ ಕಂಪನಿ ಗಳು ಒಂದು ದಿನವೂ ನೌಕರಿಯಲ್ಲಿಡಲಾರವು.