ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

`ಚರಿತ್ರಸಂಪನ್ನ ರಾಷ್ಟ್ರ’ ಆದರ್ಶ ರಾಷ್ಟ್ರವಾಗಿದೆ !

`ಅಶ್ಲೀಲ ಚಲನಚಿತ್ರ’, `ಪಬ್’, `ಲಿವ್ ಇನ್ ರಿಲೇಶನ್ಶಿಪ್’ ನಂತಹ ವಿಷಯಗಳಿಗೆ ಆಡಳಿತಗಾರರು ಮಾನ್ಯತೆ ನೀಡಿದ್ದಾರೆ. ಇದರಿಂದ ರಾಷ್ಟ್ರದ ಜನತೆಯ ಚಾರಿತ್ರ ಹಾಳಾಗುತ್ತಿದೆ. `ರಾಮರಾಜ್ಯ’ ಮತ್ತು ಛತ್ರಪತಿ ಶಿವಾಜಿ ಮಹಾರಾಜರ `ಹಿಂದವೀ ಸ್ವರಾಜ್ಯ’ ಆದರ್ಶವಾಗಿತ್ತು; ಏಕೆಂದರೆ ಅವರ ರಾಜ್ಯಗಳು ಚರಿತ್ರಸಂಪನ್ನವಾಗಿದ್ದವು. ಪ್ರಸ್ತುತ ದಿನಗಳಲ್ಲಿ ಆಡಳಿತಗಾರರು ಇದನ್ನು ಗಮನದಲ್ಲಿಟ್ಟುಕೊಂಡು `ಚರಿತ್ರಸಂಪನ್ನ ರಾಷ್ಟ್ರವನ್ನು ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತಾರೇನು? ಭಾವೀ ಹಿಂದೂ ರಾಷ್ಟçವು (ಸನಾತನ ಧರ್ಮ ರಾಜ್ಯ) ಚರಿತ್ರಸಂಪನ್ನವೇ ಆಗಿರುತ್ತದೆ.’

ಬುದ್ಧಿಪ್ರಾಮಾಣ್ಯವಾದಿಗಳು, ಸರ್ವಧರ್ಮ ಸಮಭಾವದವರು, ಸಾಮ್ಯವಾದಿಗಳು, ಇವರಿಂದಾಗಿಯೇ ದೇಶ ಮತ್ತು ಧರ್ಮದ ಸ್ಥಿತಿ ದಯನೀಯವಾಗಿದೆ !

`ಬುದ್ಧಿಪ್ರಾಮಾಣ್ಯವಾದಿಗಳಿಂದಾಗಿ ಹಿಂದೂಗಳಿಗೆ ದೇವರ ಮೇಲಿನ ಶ್ರದ್ಧೆ ನಾಶವಾಯಿತು. ಸರ್ವಧರ್ಮ ಸಮಭಾವಿಗಳಿಂದಾಗಿ ಹಿಂದೂಗಳಿಗೆ ಹಿಂದೂ ಧರ್ಮದ ಅದ್ವಿತೀಯತೆ ತಿಳಿಯಲಿಲ್ಲ ಮತ್ತು ಸಾಮ್ಯವಾದಿಗಳಿಂದಾಗಿ ಹಿಂದೂಗಳಿಗೆ ದೇವರ ಮೇಲಿರುವ ವಿಶ್ವಾಸ ಇಲ್ಲವಾಯಿತು. ಇವೆಲ್ಲವುಗಳಿಂದಾಗಿ ದೇವರ ಕೃಪೆ ಆಗದ ಕಾರಣ ಹಿಂದೂಗಳ ಮತ್ತು ಭಾರತದ ಸ್ಥಿತಿ ದಯನೀಯವಾಗಿದೆ. ಇದಕ್ಕೆಲ್ಲಾ ಒಂದೇ ಉಪಾಯವೆಂದರೆ ಹಿಂದೂ ರಾಷ್ಟ್ರ ದ ಸ್ಥಾಪನೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ