ಮತಾಂಧರ ಹಲ್ಲೆಯಿಂದ ಹನುಮಂತನ ದೇವಸ್ಥಾನವನ್ನು ರಕ್ಷಿಸಿದ ಮುಸಲ್ಮಾನರು !

ಮತಾಂಧರು ನಡೆಸಿದ ಹಿಂಸಾಚಾರದ ಸಮಯದಲ್ಲಿ ಹನುಮಂತನ ದೇವಸ್ಥಾನವನ್ನು ಗುರಿ ಮಾಡಲು ಪ್ರಯತ್ನಿಸುತ್ತಿದ್ದಾಗ ಕೆಲವು ಮುಸಲ್ಮಾನ ಯುವಕರು ಮಾನವ ಸರಪಳಿ ಮಾಡಿ ಮತಾಂಧರನ್ನು ತಡೆದ ವಾರ್ತೆಯು ಪ್ರಸಾರವಾಯಿತು. ಕಾಂಗ್ರೆಸ್‌ನ ಶಾಸಕರಾದ ಶ್ರೀನಿವಾಸ ಮೂರ್ತಿ ಇವರ ಮನೆಯ ಎದುರು ಹನುಮಂತನ ದೇವಸ್ಥಾನ ಇದೆ. ಈ ಘಟನೆಯಿಂದ ಮಾಧ್ಯಮಗಳು ಅವರನ್ನು ಪ್ರಶಂಸಿಸಿದರು.

ಇದೇ ಪ್ರಥಮ ಬಾರಿಗೆ ನ್ಯೂಯಾರ್ಕ್ಸ್‌ನ ‘ಟೈಮ್ಸ್ ಸ್ಕ್ವೇರ್’ನಲ್ಲಿ ಭಾರತದ ಸ್ವಾತಂತ್ರ್ಯ ದಿನ ನಿಮಿತ್ತ ಧ್ವಜಾರೋಹಣ

ಇಲ್ಲಿಯ ಪ್ರಸಿದ್ಧ ‘ಟೈಮ್ಸ್ ಸ್ಕ್ವೇರ್’ನಲ್ಲಿ ಭಾರತದ ೭೪ ನೇ ಸ್ವಾತಂತ್ರ್ಯದಿನ ಧ್ವಜಾರೋಹಣ ನೆರವೇರಲಿದೆ. ಇದೇ ಮೊದಲ ಬಾರಿ ಈ ರೀತಿಯಲ್ಲಿ ನಡೆಯಲಿದೆ. ಈ ಹಿಂದೆ ಆಗಸ್ಟ್ ೫ ರಂದು ಆಯೋಜಿಸಲಾಗಿದ್ದ ಶ್ರೀರಾಮಜನ್ಮಭೂಮಿಯ ಮೇಲಿನ ಶ್ರೀರಾಮಮಂದಿರದ ಭೂಮಿಪೂಜೆಯ ದಿನದಂದೂ ಕೂಡ ‘ಟೈಮ್ಸ್ ಸ್ಕ್ವೇರ್’ನಲ್ಲಿ ಶ್ರೀರಾಮಮಂದಿರದ ಚಿತ್ರವನ್ನು ಪ್ರದರ್ಶಿಸಲಾಗಿತ್ತು.

ಇಡೀ ದೇಶದಲ್ಲಿ ರಾಷ್ಟ್ರೀಯ ಪೌರತ್ವ ನೊಂದಣಿ ಜಾರಿಗೆ ತನ್ನಿ ! – ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಇಡೀ ದೇಶದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ.) ಜಾರಿಗೊಳಿಸಬೇಕು, ಎಂಬ ಬೇಡಿಕೆಯನ್ನು ಮಾಡುವ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ಈ ಅರ್ಜಿಯ ಮೂಲಕ ಕೇಂದ್ರ ಸರಕಾರಕ್ಕೆ ಅಕ್ರಮವಾಗಿ ಭಾರತದಲ್ಲಿ ವಾಸಿಸುವ ವಿದೇಶಿ ನಾಗರಿಕರ ಮೇಲೆ ಕ್ರಮ ಕೈಗೊಳ್ಳುವಂತೆ ಆದೇಶವನ್ನೂ ನೀಡಿ ಎಂದು ಬೇಡಿಕೆ ಮಾಡಿದೆ.

ಬಾಗಪತ (ಉತ್ತರ ಪ್ರದೇಶ) ಇಲ್ಲಿಯ ಭಾಜಪದ ಮಾಜಿ ಜಿಲ್ಲಾಧ್ಯಕ್ಷನ ಗುಂಡಿಕ್ಕಿ ಹತ್ಯೆ

ಇಲ್ಲಿ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಭಾಜಪದ ಮಾಜಿ ಜಿಲ್ಲಾಧ್ಯಕ್ಷ ಸಂಜಯ ಖೋಖರ ಇವರಿಗೆ ಅಜ್ಞಾತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೂವರು ಮಂದಿ ದಾಳಿ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮೂವರು ಮಂದಿ ದಾಳಿ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಖೋಖರ ಹತ್ಯೆಯ ಬಗ್ಗೆ ಖೇದವನ್ನು ವ್ಯಕ್ತಪಡಿಸುತ್ತಾ ಈ ಘಟನೆಯ ತನಿಖೆಯನ್ನು ನಡೆಸಿ ಆರೋಪಿಗಳ ಮೇಲೆ ೨೪ ಗಂಟೆಗಳಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶವನ್ನು ನೀಡಿದ್ದಾರೆ.

ರಶಿಯಾ ಸರಕಾರದಿಂದ ಕೊರೋನಾ ವಿರುದ್ಧದ ಲಸಿಕೆಗೆ ಮಾನ್ಯತೆ ರಾಷ್ಟ್ರಾಧ್ಯಕ್ಷ ಪುತಿನ್‌ನ ಮಗಳಿಗೂ ನೀಡಲಾಯಿತು ಲಸಿಕೆ!

ರಶಿಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ್ ಪುತಿನ್ ಇವರು ಕೊರೋನಾ ರೋಗಾಣುವಿನ ವಿರುದ್ಧ ಲಸಿಕೆಗೆ ಮಾನ್ಯತೆ ನೀಡಿದ್ದಾರೆ. ಆದ್ದರಿಂದ ಲಸಿಕೆಗೆ ಮಾನ್ಯತೆಯನ್ನು ನೀಡುವ ರಶಿಯಾ ಜಗತ್ತಿನ ಮೊದಲನೇಯ ದೇಶವಾಗಿದೆ. ‘ನನ್ನ ಇಬ್ಬರು ಮಗಳಿಗೂ ಇದರ ಲಸಿಕೆಯನ್ನು ನೀಡಲಾಗಿದೆ’, ಎಂದು ಪುತಿನ ಹೇಳಿದ್ದಾರೆ. ರಶಿಯಾದ ‘ಗಾಮಾಲಿಯಾ ಇನ್‌ಸ್ಟಿಟ್ಯುಟ್ ಆಫ್ ಆಪಿಡೆಮಿಯೊಲಾಜಿ’ ಹಾಗೂ ‘ಮೈಕ್ರೊಬಯೋಲಾಜಿ’ ಇವು ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಶ್ರೀರಾಮಮಂದಿರದ ಪುನರ್ ಸ್ಥಾಪನೆಯಾದ ನಂತರ ಬುದ್ಧಿಜೀವಿಗಳು ಹಾಗೂ ಪ್ರಗತಿಪರರ ಒತ್ತಡದಿಂದಾಗಿ ದೇವಸ್ಥಾನದ ಪೂಜೆ-ಅರ್ಚನೆ, ಧಾರ್ಮಿಕ ವಿಧಿ ಇತ್ಯಾದಿ ಅಂಶಗಳನ್ನು ಹಾಗೂ ಧರ್ಮನಿಯಮಗಳನ್ನು ಪಾಲಿಸದಿದ್ದರೆ ಹಿಂದೂಗಳು ಪುನಃ ವೈಯಕ್ತಿಕವಾಗಿ ಹಾಗೂ ರಾಷ್ಟ್ರೀಯವಾಗಿ ದುಃಖದಿಂದ ಬಳಲುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗಾದರೆ, ಶ್ರೀರಾಮ ಹಾಗೂ ದೇವತೆಗಳು ಅವರತ್ತ ಗಮನ ನೀಡುವರೇ ?

ಅಸಂಖ್ಯಾತ ಭಕ್ತರ ತ್ಯಾಗ, ಬಲಿದಾನ ಮತ್ತು ಸಂಘರ್ಷದಿಂದಲೇ ರಾಮ ಮಂದಿರದ ಕನಸು ನನಸಾಗುತ್ತಿದೆ ! – ಪ್ರಧಾನಮಂತ್ರಿ

ದೇಶದ ಹಲವು ತಲೆಮಾರುಗಳು ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನು ಅರ್ಪಿಸಿವೆ. ಆಗಸ್ಟ್ ೧೫ ಲಕ್ಷಾಂತರ ದೇಶಭಕ್ತರ ಬಲಿದಾನದ ಸಂಕೇತವಾಗಿದೆ. ಅದೇ ರೀತಿಯಲ್ಲಿ, ರಾಮಮಂದಿರಕ್ಕಾಗಿ ಅನೇಕ ದಶಕಗಳ ಕಾಲ ನಿರಂತರವಾಗಿ ಮತ್ತು ಏಕನಿಷ್ಠೆಯಿಂದ ಹೋರಡಿದ ಅನೇಕ ತಲೆಮರುಗಳ ತಪಸ್ಸು, ತ್ಯಾಗ ಮತ್ತು ಸಂಕಲ್ಪಗಳ ಪ್ರತೀಕವೆಂದರೆ ಇಂದಿನ ಈ ರಾಮಮಂದಿರದ ಭೂಮಿಪೂಜೆಯ ದಿನವಾಗಿದೆ.

ವಿಶೇಷ ಸಂಪಾದಕೀಯ

ಬಾಬರನು ೧೫೨೮ ರಲ್ಲಿ ಅಯೋಧ್ಯೆಯಲ್ಲಿನ ರಾಮಮಂದಿರವನ್ನು ಧ್ವಂಸ ಮಾಡಿ ಅಲ್ಲಿ ಮಸೀದಿಯನ್ನು ಕಟ್ಟಿದನು. ಆ ಸಂದರ್ಭದಲ್ಲಿ ಹಿಂದೂಗಳು ನಿರಂತರ ೧೦ ದಿನಗಳವರೆಗೆ ಹೋರಾಟ ನಡೆಸಿದ್ದರು. ಬಾಬರನ ತೋಪುಗಳ ಕೈಮೇಲಾಯಿತು. ಗುರುಗೋವಿಂದಸಿಂಹರು ಸಹ ಇದಕ್ಕಾಗಿ ಹೋರಾಡಿದ್ದಾರೆ. ಮೊಗಲರ ಆಡಳಿತದಲ್ಲಿಯೂ ಹಿಂದೂಗಳು ಮಂದಿರಕ್ಕಾಗಿ ಹೋರಾಡುತ್ತಿದ್ದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಧರ್ಮಶಿಕ್ಷಣ ಮತ್ತು ಸಾಧನೆ ಇವುಗಳ ಅಭಾವದಿಂದ ಕೃತಘ್ನರಾಗಿರುವ ಈಗಿನ ಪೀಳಿಗೆಗೆ ತಂದೆ-ತಾಯಿಯರ ಆಸ್ತಿ ಮಾತ್ರ ಬೇಕಾಗಿರುತ್ತದೆ; ಆದರೆ ಅವರು ವೃದ್ಧ ತಂದೆ-ತಾಯಿಯರ ಸೇವೆ ಮಾಡಲು ಸಿದ್ಧರಿರುವುದಿಲ್ಲ. ವೈಜ್ಞಾನಿಕ ಸಂಶೋಧನೆಯ ಧ್ಯೇಯವು ಮನುಷ್ಯನಿಗೆ ಈಶ್ವರಪ್ರಾಪ್ತಿ ಮಾಡಿಸುವುದ ಅಲ್ಲ ಬದಲಾಗಿ ಕೇವಲ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಸುಖಪ್ರಾಪ್ತಿ ಮಾಡಿಸಿಕೊಡುವುದು ಆಗಿದೆ  !

ಗೋಕುಲಾಷ್ಟಮಿಯ ಶುಭದಿನದಂದು ನೇಪಾಳಿ ಭಾಷೆಯಲ್ಲಿ ‘ಸನಾತನ ಸಂಸ್ಥೆ’ಯ ಜಾಲತಾಣದ ಲೋಕಾರ್ಪಣೆ !

ಸನಾತನ ಸಂಸ್ಥೆ ಹಿಂದೂ ಧರ್ಮಪ್ರಸಾರದ ವ್ರತವನ್ನು ಕೈಗೆತ್ತಿಕೊಂಡು ಕಾರ್ಯನಿರತವಾಗಿದ್ದರಿಂದ ನಾವು ಈ ಬೇಡಿಕೆಯನ್ನು ಪೂರ್ಣ ಮಾಡುತ್ತಿದ್ದೇವೆ. ಜಗತ್ತಿನಾದ್ಯಂತ ನೇಪಾಳಿ ಭಾಷೆಯವರಿಗೆ ಧರ್ಮಶಿಕ್ಷಣ ಸಿಗಲು ನಾವು ನೇಪಾಳಿ ಜಾಲತಾಣವನ್ನು ಆರಂಭಿಸುತ್ತಿದ್ದೇವೆ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ್ ಇವರು ಹೇಳಿದ್ದಾರೆ.