ಅತ್ಯಾಚಾರಿಗಳನ್ನು ನಪುಂಸಕರನ್ನಾಗಿಸುವ ಕಾನೂನು ಅನ್ವಯಗೊಳಿಸಿದ ಪಾಕಿಸ್ತಾನ !

ಪಾಕಿಸ್ತಾನದಲ್ಲಿ ಅತ್ಯಾಚಾರಿಗಳನ್ನು ನಪುಂಸಕರನ್ನಾಗಿ ಮಾಡುವ ಕಾನೂನಿಗೆ ರಾಷ್ಟ್ರಪತಿಯವರು ಹಸ್ತಾಕ್ಷರ ಮಾಡಿದ್ದಾರೆ. ಹಾಗಾಗಿ ಈಗ ಅದನ್ನು ಕಾರ್ಯಾನ್ವಿತಗೊಳಿಸಲಾಗುವುದು. ಪದೇ ಪದೇ ಈ ರೀತಿಯ ಅಪರಾಧವನ್ನು ಮಾಡುವವರನ್ನು ನಪುಂಸಕರನ್ನಾಗಿಸಲಾಗುವುದು.

ತುಮಕೂರಿನ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮನವರು ಮಂಗಳೂರಿನ ಆಶ್ರಮಕ್ಕೆ ಆಗಮನ

ಕಾರ್ತಿಕ ಮಾಸದ ಕೊನೆಯ ಸೋಮವಾರ ಅಂದರೆ ದಿನಾಂಕ ೧೪ ಡಿಸೆಂಬರ್ ೨೦೨೦ ಈ ದಿನದಂದು ಸಂಜೆ ೪.೧೦ ಕ್ಕೆ ಸನಾತನದ ಮಂಗಳೂರು ಆಶ್ರಮಕ್ಕೆ ತುಮಕೂರಿನ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ನವರ ದಿವ್ಯ ಆಗಮನವಾಯಿತು.

ಗೋಹತ್ಯೆ ನಿಷೇಧ ಮಸೂದೆ ಕುರಿತು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಘರ್ಷಣೆ

ಗೋಹತ್ಯೆ ನಿಷೇಧದ ಬಗ್ಗೆ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರ ಮಧ್ಯೆ ಘರ್ಷಣೆ ನಡೆಯಿತು. ಕಾಂಗ್ರೆಸ್‌ನ ಸದಸ್ಯರು ನೇರವಾಗಿ ಸಭಾಪತಿಯ ಜಾಗಕ್ಕೆ ಧಾವಿಸಿ ಉಪಸಭಾಪತಿಯನ್ನು ಕುರ್ಚಿಯಿಂದ ಎತ್ತಿದರು.

‘ಸಿಬ್ಬಂದಿಗಳ ಮೇಲಿನ ದಾಳಿಯ ಭಯದಿಂದ ಫೇಸ್‌ಬುಕ್‌ನ ಸೌಮ್ಯ ನಿಲುವು !’(ಅಂತೆ) – ಅಮೇರಿಕಾದ ದೈನಿಕ ‘ವಾಲ್ ಸ್ಟ್ರೀಟ್ ಜರ್ನಲ್’ನ ಸುಳ್ಳಿನ ಕಂತೆ !

ಅಮೇರಿಕಾದ ‘ವಾಲ್ ಸ್ಟ್ರೀಟ್ ಜರ್ನಲ್’ ಈ ದಿನಪತ್ರಿಕೆಯಲ್ಲಿ ಮಾತ್ರ ‘ಭಾರತದ ಆಡಳಿತಾರೂಢ ಹಿಂದೂ ರಾಷ್ಟ್ರೀಯವಾದಿ ನಾಯಕರ ಮತ್ತು ಭಜರಂಗದಳದ ವಿರುದ್ಧದ ಕ್ರಮ ಕೈಗೊಂಡರೆ ಭಾರತದಲ್ಲಿನ ಫೇಸ್‌ಬುಕ್ ವ್ಯವಹಾರದ ಮೇಲೆ ವಿಪರೀತ ಪರಿಣಾಮ ಬೀರಬಹುದು ಅದೇರೀತಿ ಅವರ ಉದ್ಯೋಗಿಗಳ ಮೇಲೆ ದಾಳಿಯಾಗಬಹುದು. ಆದ್ದರಿಂದ ಫೇಸ್‌ಬುಕ್ ಭಜರಂಗದಳದ ಬಗ್ಗೆ ಮೃದುನಿಲುವನ್ನು ತೆಗೆದುಕೊಂಡಿದೆ ಎಂದು ಹೇಳಿದೆ.

‘ಭಗವಾನ್ ಶ್ರೀರಾಮ ಸಮಾಜವಾದಿ ಪಕ್ಷದವರಾಗಿದ್ದು, ನಾವೂ ಕೂಡಾ ರಾಮನ ಭಕ್ತರಾಗಿದ್ದೇವೆ !’(ಅಂತೆ) – ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ

ಭಗವಾನ ಶ್ರೀರಾಮ ಮತ್ತು ಶ್ರೀಕೃಷ್ಣನ ಮೇಲೆ ಯಾರಿಗೂ ಹಕ್ಕಿಲ್ಲ. ಭಗವಾನ್ ಶ್ರೀರಾಮ ಕೂಡ ಸಮಾಜವಾದಿ ಪಕ್ಷಕ್ಕೆ ಸೇರಿದವರು. ನಾವೂ ರಾಮ ಮತ್ತು ಕೃಷ್ಣ ಭಕ್ತರಾಗಿದ್ದೇವೆ. ಭಗವಾನ ರಾಮನಿಗೆ ಪೂಜೆ ಸಲ್ಲಿಸಲು ಶೀಘ್ರದಲ್ಲೇ ತಮ್ಮ ಕುಟುಂಬ ಸದಸ್ಯರೊಂದಿಗೆ ಅಯೋಧ್ಯೆಗೆ ಹೋಗುವುದಾಗಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ ಹೇಳಿದ್ದಾರೆ.

ಬಾಂಗ್ಲಾದೇಶದ ದೇವಸ್ಥಾನವೊಂದರ ಶ್ರೀ ಮಹಾಕಾಳಿ ಮಾತೆಯ ೩ ಮೂರ್ತಿ ಧ್ವಂಸ ಹಾಗೂ ಆಭರಣಗಳ ಲೂಟಿ !

ಸ್ಥಳೀಯ ಶುಜಾನಗರದ ಅಹಮದಪುರದಲ್ಲಿರುವ ಕಾಳಿ ದೇವಸ್ಥಾನದ ಶ್ರೀ ಮಹಾಕಾಳಿ ಮಾತೆಯ ೩ ಮೂರ್ತಿಗಳನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿರುವ ಘಟನೆ ಡಿಸೆಂಬರ ೧೧ ರಂದು ನಡೆದಿದೆ. ಇದರೊಂದಿಗೆ ಚಿನ್ನದ ಆಭರಣಗಳನ್ನೂ ಲೂಟಿ ಮಾಡಿದ್ದಾರೆ. ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರನ್ನು ನೋಂದಾಯಿಸಲಾಗಿದೆ.

ಕಾಂಚೀಪುರಂನ ಪ್ರಾಚೀನ ದೇವಾಲಯದ ಜೀರ್ಣೋದ್ಧಾರದ ಸಮಯದಲ್ಲಿ ದೊರೆತ ಅರ್ಧ ಕೆಜಿ ಚಿನ್ನ ಸರಕಾರದ ವಶಕ್ಕೆ !

ಕಾಂಚೀಪುರಂನ ಉತಿರಾಮೆರೂರಿನಲ್ಲಿರುವ ಪುರಾತನ ಶಿವ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿರುವಾಗ ಗ್ರಾಮಸ್ಥರಿಗೆ ದೇವಾಲಯದ ಗರ್ಭಗೃಹದ ಮೆಟ್ಟಿಲುಗಳ ಕೆಳಗೆ ೫೬೫ ಗ್ರಾಂ ಚಿನ್ನ ಸಿಕ್ಕಿದೆ. ಸರಕಾರಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ತಿಳಿದಾಗ ಅವರು ಸ್ಥಳಕ್ಕೆ ಧಾವಿಸಿ ಚಿನ್ನದ ಮೇಲೆ ಸರಕಾರದ ಹಕ್ಕಿದೆ ಎಂದು ಹೇಳಿದರು

ಅಯೋಧ್ಯೆಯ ಶ್ರೀ ರಾಮಮಂದಿರವನ್ನು ಭಕ್ತರ ನಿಧಿಯಿಂದ ನಿರ್ಮಿಸಲಾಗುವುದು ! – ಚಂಪತ ರಾಯ, ಪ್ರಧಾನ ಕಾರ್ಯದರ್ಶಿ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್

ಭಕ್ತರ ಆರ್ಥಿಕ ನೆರವಿನೊಂದಿಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಿಸಲಾಗುವುದು. ಇದಕ್ಕಾಗಿ ಸಂಕ್ರಾಂತಿಯಿಂದ ನಿಧಿಸಂಗ್ರಹವನ್ನು ಪ್ರಾರಂಭಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಶ್ರೀ. ಚಂಪತ ರಾಯ್‌ ಅವರು ಡಿಸೆಂಬರ್ ೧೨ ರಂದು ಮುಂಬಯಿ ಮರಾಠಿ ಪತ್ರಕಾರ ಸಂಘದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಲವ್ ಜಿಹಾದ್‌ನಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಮಸೀದಿಗಳು ಮತ್ತು ಮದರಸಾಗಳಿಗೆ ಸಿಗುವ ಸರಕಾರಿ ಅನುದಾನ ರದ್ದುಪಡಿಸಲಾಗುವುದು

ಮಧ್ಯಪ್ರದೇಶ ಸರಕಾರವು ಲವ್ ಜಿಹಾದ್ ವಿರೋಧಿ ಕಾನೂನನ್ನು ಜಾರಿಗೊಳಿಸುತ್ತಿದೆ. ಈ ಮಸೂದೆಯನ್ನು ‘ಧರ್ಮ ಸ್ವಾತಂತ್ರ್ಯ’ ಎಂದು ಕರೆಯಲಾಗುವುದು. ಧಾರ್ಮಿಕ ಸಂಘಟನೆಗಳು ಲವ್ ಜಿಹಾದ್ ಮತ್ತು ಮತಾಂತರಗೊಳಿಸುವ ಕಾರ್ಯದಲ್ಲಿ ಭಾಗಿಯಾಗಿದ್ದು ಕಂಡುಬಂದರೆ ಹಾಗೂ ಇಂತಹ ಸಂಘಟನೆಗಳಿಗೆ ಸರಕಾರದಿಂದ ಸೌಲಭ್ಯಗಳು ಸಿಗುತ್ತಿದ್ದರೆ, ಅವುಗಳನ್ನು ಅನುದಾನದ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಹಿಂದೂ ಹೆಸರು ಇಟ್ಟುಕೊಂಡು ಮತಾಂಧ ಯುವಕನಿಂದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಶೋಷಣೆ

ಹಿಂದೂ ಎಂದು ಹೇಳಿ ತನ್ನ ನಿಜವಾದ ಗುರುತನ್ನು ಮರೆಮಾಚಿ ೧೫ ವರ್ಷದ ಹಿಂದೂ ಬಾಲಕಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ, ಮದುವೆಯ ಭರವಸೆ ನೀಡಿ, ಆಕೆಯನ್ನು ಅಪಹರಿಸಿ ಲೈಂಗಿಕ ಕಿರುಕುಳ ಕೊಟ್ಟು ಮತಾಂತರಕ್ಕೆ ಒತ್ತಾಯಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ೧೮ ವರ್ಷದ ಶೋಯೆಬ್ ಖಾನ್ ಎಂಬವನನ್ನು ಬಂಧಿಸಿದ್ದಾರೆ.