|
ಅಯೋಧ್ಯೆ – ಭಗವಾನ ಶ್ರೀರಾಮ ಮತ್ತು ಶ್ರೀಕೃಷ್ಣನ ಮೇಲೆ ಯಾರಿಗೂ ಹಕ್ಕಿಲ್ಲ. ಭಗವಾನ್ ಶ್ರೀರಾಮ ಕೂಡ ಸಮಾಜವಾದಿ ಪಕ್ಷಕ್ಕೆ ಸೇರಿದವರು. ನಾವೂ ರಾಮ ಮತ್ತು ಕೃಷ್ಣ ಭಕ್ತರಾಗಿದ್ದೇವೆ. ಭಗವಾನ ರಾಮನಿಗೆ ಪೂಜೆ ಸಲ್ಲಿಸಲು ಶೀಘ್ರದಲ್ಲೇ ತಮ್ಮ ಕುಟುಂಬ ಸದಸ್ಯರೊಂದಿಗೆ ಅಯೋಧ್ಯೆಗೆ ಹೋಗುವುದಾಗಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ ಹೇಳಿದ್ದಾರೆ. ಅವರು ಸದ್ಯ ರಾಜ್ಯದ ಪ್ರವಾಸದಲ್ಲಿದ್ದಾರೆ. ಈ ಸಮಯದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
Former Uttar Pradesh Chief Minister #AkhileshYadav said Lord Ram belongs to Samajwadi Party and he would soon visit #Ayodhya with his family members to worship the deityhttps://t.co/Ql5Zhh6yXV
— The Hindu (@the_hindu) December 15, 2020
ಅಖಿಲೇಶ ಯಾದವ ಅವರು ಅಯೋಧ್ಯೆಯ ಅಭಿವೃದ್ಧಿಗಾಗಿ ತಮ್ಮ ಸರಕಾರದ ಅವಧಿಯಲ್ಲಿ ಮಾಡಿದ ವಿವಿಧ ಕಾರ್ಯಗಳ ಪಟ್ಟಿಯನ್ನು ಓದಿದರು. ‘ಅಯೋಧ್ಯೆಯಲ್ಲಿ ವಿವಿಧ ನದಿತೀರಗಳು, ಜೊತೆಗೆ ಭಜನಾಸ್ಥಳಗಳನ್ನು ಸಮಾಜವಾದಿ ಪಕ್ಷದ ಸರಕಾರದ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಯಿತು.
(ಸೌಜನ್ಯ : Republic World)
ಅಯೋಧ್ಯೆಯ ಜನ್ಮಭೂಮಿ ಸ್ಥಳ, ಪರಿಕ್ರಮದ ಮಾರ್ಗದುದ್ದಕ್ಕೂ ಪಾರಿಜಾತ, ಪಪ್ಪಾಯಿ, ಆಲದ ಮರಗಳಂತಹ ಮರಗಳನ್ನು ನೆಡಲಾಗಿದೆ’, ಎಂದು ಹೇಳಿದರು.