‘ಸಂಪೂರ್ಣ ದೇಶದ ಶಾಂತಿ ಮತ್ತು ಸುವ್ಯವಸ್ಥೆ ಕದಡಬಹುದಂತೆ !’ – ಆಲ್ ಇಂಡಿಯಾ ಮುಸ್ಲಿಂ ಪರ್ಸನಲ ಲಾ ಬೋರ್ಡನ ಅಧ್ಯಕ್ಷ ಖಾಲಿದ ಸೈಫುಲ್ಲಾಹ ರಹಮಾನಿ

  • ಯತಿ ನರಸಿಂಹಾನಂದರು ಪ್ರವಾದಿ ಮಹಮ್ಮದ ಪೈಗಂಬರ ಅವರನ್ನು ಅವಮಾನಿಸಿರುವ ಪ್ರಕರಣ

  • ಆಲ್ ಇಂಡಿಯಾ ಮುಸ್ಲಿಂ ಪರ್ಸನಲ ಲಾ ಬೋರ್ಡನ ಅಧ್ಯಕ್ಷ ಖಾಲಿದ ಸೈಫುಲ್ಲಾಹ ರಹಮಾನಿಯವರ ಸಮಾಜಘಾತುಕ ಹೇಳಿಕೆ

ನವದೆಹಲಿ : ಯತಿ ನರಸಿಂಹಾನಂದರ ಹೇಳಿಕೆಯ ಮೇಲೆ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ ಲಾ ಬೋರ್ಡ ಅಧ್ಯಕ್ಷ ಖಾಲಿದ ಸೈಫುಲ್ಲಾ ರಹಮಾನಿಯವರು ಮಾತನಾಡಿ, ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ ಸಾಹೇಬರನ್ನು ನರಸಿಂಹಾನಂದರು ಅಪಮಾನ ಮಾಡಿ ತೋರಿಸಿರುವ ಉದ್ಧಟತನ ಅಸಹ್ಯವಾಗಿದೆ. ಪ್ರತಿಕ್ರಿಯಾತ್ಮಕವಾಗಿ ಯುವಕರು ಹಿಂಸಕರಾದರೆ ಸಂಪೂರ್ಣ ದೇಶದ ಶಾಂತಿ ಮತ್ತು ಸುವ್ಯವಸ್ಥೆ ಹದಗಡೆಬಹುದು. ಎಲ್ಲಾ ಧರ್ಮಗಳು ಪವಿತ್ರ ವ್ಯಕ್ತಿಮತ್ವವನ್ನು ಹೊಂದಿವೆ, ಇಸ್ಲಾಂ ಪರಿಕಲ್ಪನೆ ಸ್ಪಷ್ಟವಾಗಿದೆ. ನಾವು ಅವರ ಮೇಲೆ ವಿಶ್ವಾಸವಿಡುತ್ತೇವೆಯೋ ಅಥವಾ ಇಲ್ಲವೋ ಅವರನ್ನು ಗೌರವಿಸುವುದು ನಮಗೆ ಮುಖ್ಯವಾಗಿದೆ. ಇಸ್ಲಾಂ ಒಂದೇ ದೇವರನ್ನು ನಂಬುತ್ತದೆ. ಮುಸ್ಲಿಮರು ಮೂರ್ತಿಪೂಜೆಯಲ್ಲಿ ವಿಶ್ವಾಸವಿಡುವುದಿಲ್ಲ; ಆದರೆ ಕುರಾನ ಇತರ ಸಮುದಾಯಗಳು ಪೂಜಿಸುವ ದೇವತೆಗಳಿಗೆ ಅವಾಚ್ಯ ಶಬ್ದಗಳನ್ನು ಉಚ್ಚರಿಸಲು ನಿರ್ಬಂಧಿಸುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ಮಸೀದಿಗಳಿಂದ ದಾಳಿಗಳು ನಡೆಯುತ್ತಿರುವಾಗ, ಮುಸ್ಲಿಮರಿಂದ ದೇವಸ್ಥಾನಗಳ ಧ್ವಂಸ ನಡೆಯುತ್ತಿರುವಾಗ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಿರುವಾಗ ಭಾರತದಲ್ಲಿರುವ ಹಿಂದೂಗಳು ಯಾವತ್ತೂ ಶಾಂತಿ ಮತ್ತು ಸುವ್ಯವಸ್ಥೆ ಕದಡಬಹುದಾದಂತಹ ಕೃತ್ಯವನ್ನು ಮಾಡಿಲ್ಲ; ಬದಲಾಗಿ ಮತಾಂಧರು ತಥಾಕಥಿತ ಹೇಳಿಕೆಯ ಕಾರಣದಿಂದ ಇಂತಹ ಬೆದರಿಕೆಯನ್ನು ನೀಡುತ್ತಿದ್ದಾರೆ ಎನ್ನುವುದನ್ನು ಗಮನಿಸಿರಿ !