ದುರ್ಗಾಪೂಜೆಗೂ ಮೊದಲು ಹಿಂದೂಗಳಿಗೆ ಸಂಪೂರ್ಣ ಭದ್ರತೆ ನೀಡುವೆವು ! – ಬಾಂಗ್ಲಾದೇಶದ ಸೇನಾಪಡೆ ಮುಖ್ಯಸ್ಥ ವಕಾರ್-ಉಜ್-ಝಮಾನ್

ಬಾಂಗ್ಲಾದೇಶದ ಸೇನಾಪಡೆ ಮುಖ್ಯಸ್ಥ ವಕಾರ್-ಉಜ್-ಝಮಾನ್ ಅವರ ಭರವಸೆ

ಢಾಕಾ (ಬಾಂಗ್ಲಾದೇಶ) – ದುರ್ಗಾ ಪೂಜೆಗೂ ಮೊದಲು ಹಿಂದೂ ಸಮುದಾಯಕ್ಕೆ ಭದ್ರತೆ ಒದಗಿಸುವುದಾಗಿ ಬಾಂಗ್ಲಾದೇಶ ಸೇನಾ ಮುಖ್ಯಸ್ಥ ವಕಾರ್-ಉಜ್-ಝಮಾನ್ ಭರವಸೆ ನೀಡಿದ್ದಾರೆ. ಢಾಕೇಶ್ವರಿ ದೇವಸ್ಥಾನದಲ್ಲಿ ದುರ್ಗಾಪೂಜೆ ಆಚರಣೆಗಾಗಿ ಭದ್ರತಾ ಕ್ರಮಗಳನ್ನು ಪರಿಶೀಲಿಸಲು ಢಾಕಾಕ್ಕೆ ಬಂದಿದ್ದ ಝಮಾನ್ ಅವರು ಎಲ್ಲಾ ಹಿಂದೂಗಳಿಗೆ ಶುಭ ಹಾರೈಸಿದರು. ಝಮಾನ್ ಅವರು ಮೆಟ್ರೋಪಾಲಿಟನ್ ಪೂಜಾ ಸಮಿತಿ ಮತ್ತು ಬಾಂಗ್ಲಾದೇಶ ಪೂಜಾ ಸೆಲೆಬ್ರೆಶನ್ ಕೌನ್ಸಿಲ್ ನ ಅಧ್ಯಕ್ಷರು ಸೇರಿದಂತೆ ಪ್ರಮುಖ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಹಂಗಾಮಿ ಸರಕಾರದ ಸೂಚನೆಯಂತೆ ಪ್ರಾರ್ಥನಾ ಸ್ಥಳಗಳ ಭದ್ರತೆಗಾಗಿ ದೇಶದಾದ್ಯಂತ ಜಿಲ್ಲೆಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಇನ್ನೂ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿರುವಾಗ ಇಂತಹ ಸುಳ್ಳು ಆಶ್ವಾಸನೆಗಳನ್ನು ನೀಡುವ ಬಾಂಗ್ಲಾದೇಶದ ಸೇನಾಪಡೆ ಮುಖ್ಯಸ್ಥರನ್ನು ಯಾರು ನಂಬುತ್ತಾರೆ ?