ಕೆಂಗಣ್ಣು(ಕಣ್ಣು ಬರುವುದು) ರೋಗ ಬರುವುದು ಎಂದರೇನು ? ಮತ್ತು ಅದಕ್ಕೆ ಪರಿಹಾರ

ಪ್ರಸ್ತುತ ಕಣ್ಣುಗಳ ಸೋಂಕು (ಕಣ್ಣುಗಳು ಕೆಂಪಗಾಗುವ ಸೋಂಕು) ಎಲ್ಲೆಡೆ ಹಬ್ಬುತ್ತಿದೆ. ತಮ್ಮ ಪರಿಸರದಲ್ಲಿ ಯಾರಿಗಾದರೂ ಕೆಂಗಣ್ಣು ರೋಗ ಬಂದಿರುವುದು ಗಮನಕ್ಕೆ ಬಂದರೆ ಈ ಲೇಖನದಲ್ಲಿ ನೀಡಿದಂತೆ ಎಲ್ಲರೂ ಕಣ್ಣುಗಳ ಕಾಳಜಿವಹಿಸಬೇಕು. ತಮಗೆ ಕೆಂಗಣ್ಣು ರೋಗ ಬಂದಿದ್ದರೆ ಕಣ್ಣುಗಳಿಗೆ ಡಾಕ್ಟರರ ಸಲಹೆಯಂತೆ ಔಷಧಿಯನ್ನು ಹಾಕಿಕೊಳ್ಳಬೇಕು. ನಿಮಗಾದ ಕಣ್ಣುಗಳ ಸೋಂಕು ಇತರರಿಗೆ ಅಂಟಬಾರದೆಂದು ನೀವೇ ಕಾಳಜಿವಹಿಸಬೇಕು.

೧. ಕೆಂಗಣ್ಣು ರೋಗ ಬರುವುದು ಎಂದರೇನು ?

ಕೆಂಗಣ್ಣು ರೋಗ, ಇದೊಂದು ಕಣ್ಣುಗಳ ಸೋಂಕಿನ ರೋಗವಾಗಿದೆ. ಇದರಲ್ಲಿ ಕಣ್ಣುಗಳಿಂದ ಜಿಗುಟಾದ ಸ್ರಾವವಾಗಿ ಕಣ್ಣುಗಳು ಕೆಂಪಗಾಗುತ್ತವೆ.

ಡಾ. ನಿಖಿಲ ಮಾಳಿ

೨. ವೈಜ್ಞಾನಿಕ ಭಾಷೆಯಲ್ಲಿ ಈ ರೋಗಕ್ಕೆ ಏನೆನ್ನುತ್ತಾರೆ ?

ಈ ರೋಗಕ್ಕೆ ‘ಕನ್‌ಜಕ್ಟಿವಿಟಿಸ್’ (conjunctivitis) ಅಥವಾ ‘ರೆಡ್‌ ಐಜ್’ (red eyes) ಅಥವಾ ‘ಸೊರ್‌ ಐಜ್’ (sore eyes) ಎನ್ನುತ್ತಾರೆ. ಈ ರೋಗವು ಸಾಮಾನ್ಯವಾಗಿ ‘ಬ್ಯಾಕ್ಟೆರಿಯಲ್’ (ಜೀವಾಣು) ಅಥವಾ ‘ವೈರಲ್’ (ಸೋಂಕು) ಇರುತ್ತದೆ; ಆದರೆ ಪ್ರಸ್ತುತ ಸೋಂಕಿನ ಸ್ವರೂಪದ ಈ ಕಾಯಿಲೆ ‘ವೈರಲ್’ ಸ್ವರೂಪದ್ದಾಗಿದೆ, ಇದು ‘ಯಂಡೆನೋವೈರಸ್’ (Adenovirus) ಎಂಬ ವಿಷಾಣುವಿನಿಂದ ಬರುತ್ತದೆ.

೩. ಈ ರೋಗದ ಲಕ್ಷಣಗಳು ಯಾವುವು ?

ಮೊತ್ತಮೊದಲು ಕಣ್ಣುಗಳು ಕೆಂಪಾಗಿ ಕಣ್ಣುಗಳಿಂದ ಜಿಗುಟು ಸ್ವರೂಪದ ದ್ರವ ಬರುತ್ತದೆ. ಅನಂತರ ಕಣ್ಣುರೆಪ್ಪೆಗಳು ಊದಿಕೊಂಡು ವಿಶೇಷವಾಗಿ ಬೆಳಗ್ಗೆ ಪರಸ್ಪರ ಅಂಟಿಕೊಳ್ಳುತ್ತವೆ. ಒಟ್ಟಾರೆ ಕಣ್ಣುಗಳಲ್ಲಿ ಅಸ್ವಸ್ಥತೆ ಉಂಟಾಗುತ್ತದೆ. ಸ್ರಾವವು ಹೆಚ್ಚಿದ್ದರೆ ಕೆಲವೊಮ್ಮೆ ಮಸುಕಾಗಿ ಕಾಣಿಸುತ್ತದೆ.

೪. ಈ ಕಾಯಿಲೆಯ ಇತರ ಲಕ್ಷಣಗಳು ಯಾವುವು ?

ಈ ವಿಷಾಣುವಿನಿಂದಾಗಿ ಶೀತ, ಕೆಮ್ಮು, ತಲೆನೋವು, ಮೈಕೈ ನೋವು, ಕೆಲವೊಮ್ಮೆ ಜ್ವರ ಬರಬಹುದು.

೫. ಈ ರೋಗ ಹರಡಲು ಕಾರಣವೇನು ?

ಈ ರೋಗ ಸೋಂಕುಜನ್ಯವಾಗಿರುವುದರಿಂದ ತಕ್ಷಣ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುತ್ತದೆ. ಕೆಂಗಣ್ಣು ರೋಗ ಬಂದಿರುವ ವ್ಯಕ್ತಿಯು ತನ್ನ ಕಣ್ಣುಗಳನ್ನು ಸ್ಪರ್ಶಿಸಿ, ಹಾಗೆಯೇ ಆ ಕೈಗಳಿಂದ ಇತರ ವಸ್ತುಗಳನ್ನು ಸ್ಪರ್ಶಿಸಿದರೆ ಮತ್ತು ಎರಡನೇ ವ್ಯಕ್ತಿಯು ಆ ವಸ್ತುವನ್ನು ಸ್ಪರ್ಶಿಸಿ ಅದೇ ಕೈಯಿಂದ ಕಣ್ಣುಗಳನ್ನು ಮುಟ್ಟಿಕೊಂಡರೆ ಈ ರೋಗ ಆ ಎರಡನೇ ವ್ಯಕ್ತಿಗೆ ಬರುತ್ತದೆ. ಉದಾಹರಣೆಗೆ ಕೆಂಗಣ್ಣು ಬಂದಿರುವ ವ್ಯಕ್ತಿಯ ಕರವಸ್ತ್ರ, ಪೆನ್, ಟಾವೆಲ್, ಚಮಚ, ಕನ್ನಡಕ ಇತ್ಯಾದಿ ವಸ್ತುಗಳನ್ನು ಬಳಸಿದರೆ ಈ ರೋಗವು ಹೆಚ್ಚಾಗುತ್ತದೆ.

೬. ಕೆಂಗಣ್ಣು ಬಂದಿರುವ ರೋಗಿಗಳು ವಹಿಸಬೇಕಾದ ಕಾಳಜಿಗಳೇನು ?

ಅ. ಕೆಂಗಣ್ಣು ರೋಗ ಬಂದಿರುವುದು ಗಮನಕ್ಕೆ ಬಂದರೆ ಮೊತ್ತಮೊದಲು ಸಾಧ್ಯವಾದರೆ ತಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಕು (ಈಸೊಟಚಿಣಎ)

ಆ. ಕಣ್ಣುಗಳನ್ನು ಸ್ಪರ್ಶಿಸಬಾರದು ಮತ್ತು ಕಣ್ಣುಗಳನ್ನು ಉಜ್ಜಬಾರದು.

ಇ. ಕಣ್ಣುಗಳನ್ನು ಒರೆಸಿಕೊಳ್ಳಲು ‘ಟಿಶ್ಯು ಪೆಪರ್‌’ಅನ್ನು ಬಳಸಬೇಕು.

ಈ. ವೈದ್ಯಕೀಯ ಸಲಹೆಯಂತೆ ಚಿಕಿತ್ಸೆಯನ್ನು ಆರಂಭಿಸಬೇಕು. ಸ್ವಂತ ಮನಸ್ಸಿನಂತೆ ಔಷಧಿಗಳ ಅಂಗಡಿಗಳಿಂದ ಯಾವುದೇ ‘ಡ್ರಾಪ್ಸ್‌’ ಖರೀದಿಸಿ ಅದನ್ನು ಬಳಸಬಾರದು.

ಉ. ಹಗುರ ಮತ್ತು ತಾಜಾ ಆಹಾರವನ್ನು ಸೇವಿಸಬೇಕು.

ಊ. ಪದೇಪದೇ ಕೈಗಳನ್ನು ತೊಳೆಯುತ್ತಿರಬೇಕು.

ಎ. ನಮ್ಮ ವಸ್ತುಗಳನ್ನು ಇತರರಿಗೆ ಕೊಡಬಾರದು.

ಏ. ಚಿಕ್ಕ ಮಕ್ಕಳಲ್ಲಿ ಈ ರೋಗವು ಹೆಚ್ಚು ಇರುವುದರಿಂದ ಕೆಂಗಣ್ಣು ರೋಗ ಬಂದಿರುವ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು.

ಐ. ಬಟ್ಟಲಲ್ಲಿ ಬಿಸಿ ನೀರು ತೆಗೆದುಕೊಂಡು ಅದರಲ್ಲಿ ಹತ್ತಿಯ ಉಂಡೆಯನ್ನು ನೆನೆಸಿ ಅದರಿಂದ ಕಣ್ಣುಗಳ ರೆಪ್ಪೆಗಳಿಗೆ ಹೊರಗಿನಿಂದ ಹಗುರವಾಗಿ ಶಾಖ ಕೊಡಬೇಕು.

ಔ. ಚುರುಕು(ಬಲವಾದ) ಬೆಳಕಿನಿಂದ ರಕ್ಷಣೆ ಪಡೆಯಲು ಕಪ್ಪು ಕನ್ನಡಕ ಬಳಸಬೇಕು.

೭. ನಿರೋಗಿ ವ್ಯಕ್ತಿಯು ಕೆಂಗಣ್ಣು ರೋಗ ಬರಬಾರದೆಂದು ಯಾವ ಕಾಳಜಿ ವಹಿಸಬೇಕು ?

ಕಣ್ಣುಗಳನ್ನು ಅನಗತ್ಯ ಸ್ಪರ್ಶಿಸಬಾರದು ಅಥವಾ ಕಣ್ಣುಗಳನ್ನು ಉಜ್ಜಬಾರದು. ಸೋಂಕು ತಾಗಿದ ವ್ಯಕ್ತಿಯ ಸಂಪರ್ಕಕ್ಕೆ ಬಂದರೆ ನಿಯಮಿತ ಮಧ್ಯಂತರಗಳಲ್ಲಿ ನಿಮ್ಮ ಕೈಗಳನ್ನು ತೊಳೆಯಬೇಕು ಅಥವಾ ಸ್ಯಾನಿಟೈಸರ್ನ್ನು ಬಳಸಿ. ಸೋಂಕಿತ ವ್ಯಕ್ತಿಯ ವಸ್ತುಗಳನ್ನು ಬಳಸಬೇಡಿ.

೮. ಈ ರೋಗವು ಎಷ್ಟು ಗಂಭೀರವಿದೆ  ?

ಈ ರೋಗವು ಗಂಭೀರ ಸ್ವರೂಪದ್ದೇನಲ್ಲ; ಆದರೆ ಯೋಗ್ಯ ಕಾಳಜಿ ತೆಗೆದುಕೊಳ್ಳದಿದ್ದರೆ ಅಥವಾ ದುರ್ಲಕ್ಷಿಸಿದರೆ, ಹಾಗೆಯೇ ಔಷಧಿ ಚಿಕಿತ್ಸೆ ಮಾಡದಿದ್ದರೆ ಈ ರೋಗದಿಂದ ತೊಂದರೆಗಳು ಉದ್ಭವಿಸುತ್ತವೆ ಮತ್ತು ನಂತರ ಈ ರೋಗವು ಗಂಭೀರ ಸ್ವರೂಪವನ್ನು ತಾಳುತ್ತದೆ. ಸೂಕ್ತವಾದ ಚಿಕಿತ್ಸೆ ಪಡೆದರೆ ಈ ರೋಗವು ಸಾಮಾನ್ಯವಾಗಿ ೩ ರಿಂದ ೭ ದಿನಗಳಲ್ಲಿ ಗುಣಮುಖವಾಗುತ್ತದೆ.
ಈ ರೀತಿ ಯೋಗ್ಯ ಕಾಳಜಿ ತೆಗೆದುಕೊಂಡರೆ ಕಣ್ಣುಗಳ ಈ ಸಮಸ್ಯೆಯನ್ನು ನಾವು ಜಯಿಸಬಹುದು. ವೈದ್ಯಕೀಯ ಸಲಹೆಯಂತೆ ಹೊಟ್ಟೆಯಲ್ಲಿ ನಿರ್ದಿಷ್ಟ ಆಯುರ್ವೇದಿಕ ಔಷಧಿಗಳನ್ನು ತೆಗೆದುಕೊಂಡರೆ ಈ ರೋಗವು ಗುಣಮುಖವಾಗಲು ಸಹಾಯವಾಗುತ್ತದೆ.

– ಡಾ. ನಿಖಿಲ ಮಾಳಿ, ಆಯುರ್ವೇದ ನೇತ್ರರೋಗತಜ್ಞರು, ಚಿಪಳುಣ, ಜಿಲ್ಲೆ ರತ್ನಾಗಿರಿ.

ಕೆಂಗಣ್ಣು ರೋಗ ಬಂದಿದ್ದರೆ ಅಥವಾ ಕೆಂಗಣ್ಣು ರೋಗ ಬರಬಾರದೆಂದು ಮುಂದೆ ಕೊಟ್ಟಿರುವ ದೇವತೆಗಳ ಜಪವನ್ನು ಮಾಡಿ !

(ಸದ್ಗುರು) ಡಾ. ಮುಕುಲ ಗಾಡಗೀಳ

ಕೆಂಗಣ್ಣು ರೋಗ ಬಂದರೆ ಅಥವಾ ಕೆಂಗಣ್ಣು ರೋಗ ಬರಬಾರದೆಂದು, ದೇವತೆಗಳ ಮುಂದಿನ ಜಪವನ್ನು ‘ಪ್ರತಿದಿನ ೧ ಗಂಟೆ’ಯಂತೆ ಕನಿಷ್ಠ ಪಕ್ಷ ೭ ದಿನಗಳಾದರೂ ಮಾಡಬೇಕು. ಈ ನಾಮಜಪವನ್ನು ಸತತ ೧ ಗಂಟೆ ಮಾಡದೇ ಅರ್ಧ ಗಂಟೆಯಂತೆ ೨ ಸಲ ಮಾಡಬಹುದು.

‘ಓಂ ನಮೋ ಭಗವತೇ ವಾಸುದೇವಾಯ | ಓಂ ನಮೋ ಭಗವತೇ ವಾಸುದೇವಾಯ | ಶ್ರೀ ಹನುಮತೇ ನಮಃ |
ಓಂ ನಮಃ ಶಿವಾಯ | ಓಂ ನಮಃ ಶಿವಾಯ |’

ಇಲ್ಲಿ ನೀಡಲಾದ ನಾಮಜಪವನ್ನು ಅದೇ ಕ್ರಮದಿಂದ ಹೇಳಿದರೆ, ಅದು ಒಂದು ನಾಮಜಪವಾಗುತ್ತದೆ. ಹೀಗೆ ಈ ನಾಮಜಪವನ್ನು ಆಯೋಜಿತ ಕಾಲಾವಧಿಯವರೆಗೆ (ಉದಾ. ಅರ್ಧ ಅಥವಾ ೧ ಗಂಟೆಯವರೆಗೆ) ಪುನಃ ಪುನಃ ಮಾಡಬೇಕು.

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೪.೮.೨೦೨೩)

ಸಾಧಕರು, ಕಾರ್ಯಕರ್ತರು, ವಾಚಕರು ಮತ್ತು ಧರ್ಮಪ್ರೇಮಿಗಳಿಗೆ ಸೂಚನೆ

ಕೆಂಗಣ್ಣು ರೋಗ ಬಂದಿದ್ದರೆ, ಅಥವಾ ಕೆಂಗಣ್ಣು ರೋಗ ಬರಬಾರದೆಂದು ಈ ಲೇಖನದಲ್ಲಿ ನೀಡಲಾದ ನಾಮಜಪವನ್ನು ಮಾಡಿದ ನಂತರ ಯಾರಿಗಾದರೂ ಏನಾದರೂ ಅನುಭೂತಿ ಬಂದರೆ ಅಥವಾ ಅವರಿಗೆ ಏನಾದರೂ ವೈಶಿಷ್ಟ್ಯಪೂರ್ಣ ಅರಿವಾದರೆ ಆ ಅನುಭೂತಿಯನ್ನು [email protected] ಈ ವಿ-ಅಂಚೆ ವಿಳಾಸಕ್ಕೆ ಕಳುಹಿಸಬೇಕಾಗಿ ವಿನಂತಿ !

ಸದ್ಯ ಅನೇಕ ಪ್ರದೇಶಗಳಲ್ಲಿ ಕೆಂಗಣ್ಣುಗಳ ಸೋಂಕಿನ ರೋಗ ತಲೆ ಎತ್ತಿದೆ. ಅದರ ಸೋಂಕು ವೇಗವಾಗಿ ಹಬ್ಬುತ್ತಿದೆ. ಎಲ್ಲ ವಯೋಗುಂಪಿನ ವ್ಯಕ್ತಿಗಳು ಪ್ರಮುಖವಾಗಿ ಮಕ್ಕಳು ಈ ರೋಗದಿಂದ ಪೀಡಿತರಾಗಿದ್ದಾರೆ. ‘ಕೆಂಗಣ್ಣು ರೋಗ’ ಎಂದರೇನು ? ಅದಕ್ಕೆ ಕಾರಣವೇನು ? ಅದರ ಲಕ್ಷಣಗಳು ಯಾವವು ? ಅದಕ್ಕಾಗಿ ಯಾವ ಚಿಕಿತ್ಸಾ ಕ್ರಮವನ್ನು ಮಾಡಬಹುದು ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಇಂದು ನಾವು ತಿಳಿದುಕೊಳ್ಳೋಣ ಮತ್ತು ಕಾಯಿಲೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳೋಣ.