ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆಯನ್ನು ಮಾಡಿ ಶರೀರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯುವ ಪದ್ಧತಿ !

೧. ‘ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆ’ಯ ಆವಿಷ್ಕಾರ

೨೦೨೧ ರಲ್ಲಿ ಒಮ್ಮೆ ಸನಾತನದ ರಾಮನಾಥಿ ಆಶ್ರಮದಲ್ಲಿ ಯಜ್ಞವು ನಡೆದಿತ್ತು. ಆಗ ನನಗೆ, ‘ಯಜ್ಞದಲ್ಲಿ ಆಹುತಿಯನ್ನು ನೀಡುವ ಯಜಮಾನರ ಮೇಲೆ ತೊಂದರೆದಾಯಕ (ಕಪ್ಪು) ಶಕ್ತಿಯ ಆವರಣವು ಬಂದಿದೆ’, ಎಂದು ಅರಿವಾಯಿತು. ನಾನು ಅವರ ಮೇಲಿನ ಆವರಣವನ್ನು ತೆಗೆಯಲು ಪ್ರಯತ್ನಿಸಿದೆನು; ಆದರೆ ಅದು ದೂರವಾಗುತ್ತಿರಲಿಲ್ಲ. ಆಗ, ‘ಕೆಟ್ಟ ಶಕ್ತಿ ಯಜಮಾನರ ಮೇಲೆ ಮೇಲಿನಿಂದ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ಬಿಡುತ್ತಿದೆ. ಆದುದರಿಂದ ಅವರ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ದೂರವಾಗುತ್ತಿಲ್ಲ ಮತ್ತು ಇದಕ್ಕಾಗಿ ಮೊದಲಿಗೆ ಮೇಲಿನಿಂದ ಬರುವ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ತಡೆಯಬೇಕು’, ಎಂದು ನನ್ನ ಗಮನಕ್ಕೆ ಬಂದಿತು. ಇದಕ್ಕಾಗಿ ದೇವರು ನನಗೆ ಮುಂದಿನಂತೆ ಸೂಚಿಸಿದರು, ‘ಒಂದು (ಬಲಗೈ) ಅಂಗೈಯನ್ನು ತಲೆಯ ಮೇಲೆ ೧ -೨ ಸೆಂ.ಮೀ. ಅಂತರದಲ್ಲಿ ಮುಂದೆ ನಮ್ಮ ದಿಶೆಗೆ ಬರುವಂತೆ ಇಟ್ಟುಕೊಳ್ಳಬೇಕು ಮತ್ತು ಅದರ ಮೇಲೆ ಇನ್ನೊಂದು (ಎಡಗೈ) ಅಂಗೈ ಮೊದಲಿನ ಅಂಗೈನ ವಿರುದ್ಧ ದಿಕ್ಕಿಗೆ, ಅಂದರೆ ಮೇಲಿನ ದಿಶೆಗೆ ಬರುವಂತೆ ಇಟ್ಟುಕೊಳ್ಳಬೇಕು. (ಛಾಯಾಚಿತ್ರ ೧ ನೋಡಬೇಕು)’ ಈ ಹೊಸ ಮುದ್ರೆಗೆ ನಾನು ‘ಎರಡೂ ಅಂಗೈಗಳನ್ನು ಜೋಡಿಸಿದ (ಸಂಯೋಜಿತ) ಮುದ್ರೆ’, ಎಂಬ ಹೆಸರು ಕೊಟ್ಟೆನು. ನಾನು ಈ ಮುದ್ರೆಯನ್ನು ಮಾಡಿ ‘ಮಹಾಶೂನ್ಯ’ ನಾಮಜಪವನ್ನು ಮಾಡಿದೆನು. ಆಗ ೧೦ ನಿಮಿಷಗಳ ನಂತರ ಮೇಲಿನಿಂದ ಬರುವ ತೊಂದರೆದಾಯಕ ಶಕ್ತಿಯ ಪ್ರವಾಹ ನಿಂತಿತ್ತು. ಹಾಗೆಯೇ ಯಜಮಾನರ ಮೇಲೆ ಬಂದ ಆವರಣವೂ ಬಹಳ ಕಡಿಮೆಯಾಯಿತು.

೧ ಅ. ‘ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆ’ಯಿಂದಾದ ಪರಿಣಾಮ : ಯಜ್ಞದ ಯಜಮಾನರಿಗಾಗಿ ಆ ಹೊಸ ಮುದ್ರೆಯಿಂದ ಉಪಾಯವನ್ನು ಮಾಡುತ್ತಿರುವಾಗ, ‘ಆ ಮುದ್ರೆಯಲ್ಲಿನ ಮೇಲಿನ ದಿಕ್ಕಿಗೆ ಇರುವ ಅಂಗೈ ಯಿಂದಾಗಿ ಉಪಾಯವಾಗಿ ಕೆಟ್ಟ ಶಕ್ತಿಗಳು ಬಿಡುತ್ತಿರುವ ತೊಂದರೆದಾಯಕ ಶಕ್ತಿಯ ಪ್ರವಾಹವು ತಡೆಯಲ್ಪಟ್ಟಿತು ಮತ್ತು ಸ್ವತಃದ ದಿಕ್ಕಿಗೆ ಇರುವ ಅಂಗೈಯಿಂದ ನನ್ನ ಮೇಲೆ, ಅಂದರೆ ನಾನು ಉಪಾಯ ಮಾಡುತ್ತಿರುವ ಯಜ್ಞಕ್ಕೆ ಕುಳಿತ ಯಜಮಾನರ ಮೇಲೆ ಉಪಾಯವಾಗಿ ಅವರ ಮೇಲಿನ ಆವರಣವು ಕಡಿಮೆಯಾಯಿತು’, ಎಂದು ನನ್ನ ಗಮನಕ್ಕೆ ಬಂದಿತು. ಈ ರೀತಿ ಈ ಹೊಸದಾಗಿರುವ ‘ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆ’ಯ ಆವಿಷ್ಕಾರವಾಯಿತು.

೨. ‘ಎರಡೂ ಅಂಗೈಗಳ ಜೋಡಿಸಿದ ಮುದ್ರೆ’ಯಿಂದ ಆವರಣವನ್ನು ತೆಗೆಯುವ ಆವಶ್ಯಕತೆ

ಹಿಂದೆ ಕೆಟ್ಟ ಶಕ್ತಿಗಳು ಶರೀರದ ಮೇಲೆ ಆವರಣವನ್ನು ತರುತ್ತಿದ್ದವು, ಆಗ ಆ ಆವರಣ ಯಾವುದಾದರೊಂದು ಚಕ್ರದ ಮೇಲೆ ಅಥವಾ ಹೆಚ್ಚೆಂದರೆ ೨ ಚಕ್ರಗಳ ಮೇಲೆ ಇರುತ್ತಿತ್ತು. ಆಗ ‘ಮುಷ್ಠಿಯಿಂದ ಆವರಣ ತೆಗೆಯುವುದು’ (‘ಶರೀರದ ಮೇಲೆ ಬಂದಿರುವ ತೊಂದರೆ ದಾಯಕ ಶಕ್ತಿಯ ಆವರಣ ಎರಡೂ ಕೈಗಳ ಮುಷ್ಠಿಯಲ್ಲಿ ಒಟ್ಟುಗೂಡಿಸುವುದು ಮತ್ತು ಅದನ್ನು ಶರೀರದಿಂದ ದೂರ ಎಸೆಯುವುದು’ (ಛಾಯಾಚಿತ್ರ ೨ ಮತ್ತು ಛಾಯಾಚಿತ್ರ ೨ ಅ ನೋಡಿ) ಈ ಪದ್ಧತಿ ಲಾಭದಾಯಕವಾಗುತ್ತಿತ್ತು. ಅನಂತರ ಸೂಕ್ಷ್ಮದಲ್ಲಿನ ಯುದ್ಧದ ಸ್ತರ ಹೆಚ್ಚಾಯಿತು. ಆಗ ಕೆಟ್ಟ ಶಕ್ತಿಗಳು ಶರೀರದ ಮೇಲೆ ಒಂದು-ಎರಡನೇ ಚಕ್ರಗಳ ಮೇಲೆ ಆವರಣವನ್ನು ತರದೇ ತಲೆಯಿಂದ ಎದೆಯವರೆಗೆ ಅಥವಾ ತಲೆಯಿಂದ ಸೊಂಟದವರೆಗೆ ಆವರಣವನ್ನು ತಂದು ಅನುಕ್ರಮವಾಗಿ ೪ ಚಕ್ರಗಳನ್ನು (ಸಹಸ್ರಾರ ದಿಂದ ಅನಾಹತಚಕ್ರ) ಅಥವಾ ೬ ಚಕ್ರಗಳ ಮೇಲೆ (ಸಹಸ್ರಾರದಿಂದ ಸ್ವಾಧಿಷ್ಠಾನಚಕ್ರ) ಆವರಣ ಹಾಕತೊಡಗಿದವು. ಆ ಸಮಯದಲ್ಲಿ ‘ಮನೋರಾ (ಗೋಪುರ) (ಟಾವರ್) ಮುದ್ರೆ’ ಶರೀರದ ಮೇಲಿಂದ ತಿರುಗಿಸುವುದು’ ಈ ಪದ್ಧತಿಯನ್ನೇ ಬಳಸಬೇಕಾಯಿತು. ಈ ಮುದ್ರೆ ಎಂದರೆ ಎರಡೂ ಕೈಗಳ ಮಧ್ಯದ ಬೆರಳುಗಳನ್ನು ಪರಸ್ಪರ ಜೋಡಿಸಿ ಮತ್ತು ಮಣಿಕಟ್ಟು ಗಳನ್ನು ತಲೆಗೆ ಎರಡು ಬದಿಗಳಿಂದ ಆನಿಸಿ ‘ಮನೋರಾ(ಗೋಪುರ) ಮುದ್ರೆ’ (ಛಾಯಾಚಿತ್ರ ೩ ನೋಡಿ)ಯನ್ನು ಮಾಡುವುದು ಮತ್ತು ಈ ಮುದ್ರೆಯನ್ನು ಕುಂಡಲಿನಿ ಚಕ್ರಗಳಿಂದ (ಸಹಸ್ರಾರದಿಂದ ಸ್ವಾಧಿಷ್ಠಾನಚಕ್ರದ ಮೂಲಕ) ‘ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ’ ಹೀಗೆ ೭-೮ ಸಲ ತಿರುಗಿಸುವುದು ಅನಂತರ ಸೂಕ್ಷ್ಮದಲ್ಲಿನ ಯುದ್ಧದ ಸ್ತರ ಮತ್ತಷ್ಟು ಹೆಚ್ಚಾಯಿತು. ಆಗ ಕೆಟ್ಟ ಶಕ್ತಿಗಳು ಕೇವಲ ಒಂದೇ ಸಲ ವ್ಯಕ್ತಿಯ ಮೇಲೆ ಆವರಣವನ್ನು ತಂದು ಶಾಂತವಾಗದೇ ಆ ವ್ಯಕ್ತಿಯ ಮೇಲೆ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ಸತತವಾಗಿ ಬಿಡತೊಡಗಿದವು. ಆದುದರಿಂದ ಆಗ ‘ಮುಷ್ಠಿಗಳಿಂದ ಆವರಣ ತೆಗೆಯುವುದು’ ಅಥವಾ ‘ಮನೋರಾ(ಗೋಪುರ) ಮುದ್ರೆ’ ಯನ್ನು ಶರೀರದ ಮೇಲೆ ತಿರುಗಿಸಿ ಆವರಣ ತೆಗೆಯುವುದು’ ಈ ಎರಡೂ ಪದ್ಧತಿಗಳ ಉಪಯೋಗ ಆಗುತ್ತಿರಲಿಲ್ಲ; ಏಕೆಂದರೆ ತೊಂದರೆದಾಯಕ ಶಕ್ತಿಯ ಪ್ರವಾಹ ಸತತವಾಗಿ ಬರುತ್ತಿದ್ದುದರಿಂದ ಎಷ್ಟೇ ಆವರಣ ತೆಗೆದರೂ ಅದು ಮುಗಿಯುತ್ತಲೇ ಇರಲಿಲ್ಲ. ಇದಕ್ಕಾಗಿ ವ್ಯಕ್ತಿಯ ಕಡೆಗೆ ಬರುವ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ಮೊದಲು ತಡೆಯ ಬೇಕಾಗುತ್ತದೆ. ಇದನ್ನು ಮಾಡಲು ‘ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆ’ಯು ಉಪಯುಕ್ತವಾಗುತ್ತದೆ.

೩. ‘ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆ’ಯಿಂದ ಶರೀರದ ಮೇಲಿನ ಆವರಣವನ್ನು ತೆಗೆಯುವ ಪದ್ಧತಿ

ಮೊದಲು ‘ಪ್ರಾಣಶಕ್ತಿವಹನ ಉಪಾಯ ಪದ್ಧತಿ’ಯಿಂದ (‘ಶರೀರ ಮತ್ತು ಶರೀರದ ಚಕ್ರಗಳ ಮೇಲೆ ಕೈಬೆರಳುಗಳನ್ನು ತಿರುಗಿಸಿ ಬೆರಳುಗಳಿಂದ ಪ್ರಕ್ಷೇಪಿತವಾಗುವ ಪ್ರಾಣಶಕ್ತಿಯ ಮೂಲಕ ಆಧ್ಯಾತ್ಮಿಕ ತೊಂದರೆ ಅಥವಾ ರೋಗಕ್ಕೆ ಕಾರಣವಾಗಿರುವ ಶರೀರದ ಅಡಚಣೆಯ ಸ್ಥಾನವನ್ನು ಕಂಡು ಹಿಡಿಯಬೇಕು. ಅನಂತರ ಆ ಸ್ಥಾನದಲ್ಲಿ ಅಡಚಣೆಯ ತೀವ್ರತೆಗನುಸಾರ ಕೈ ಬೆರಳುಗಳ ಮುದ್ರೆ ಮತ್ತು ನಾಮಜಪವನ್ನು ಕಂಡು ಹಿಡಿದು ಅವುಗಳ ಮೂಲಕ ಉಪಾಯವನ್ನು ಮಾಡುವುದು’) ‘ಯಾವ ಜಪವನ್ನು ಮಾಡಬೇಕು ?’ ಎಂದು ಕಂಡು ಹಿಡಿಯಬೇಕು. (ಇದಕ್ಕಾಗಿ ಸನಾತನದ ಗ್ರಂಥ ‘ರೋಗ ನಿವಾರಣೆಗಾಗಿ ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಹೇಗೆ ಹುಡುಕಬೇಕು ?’ ಓದಬೇಕು.) ಶರೀರದ ಆವರಣವನ್ನು ತೆಗೆಯುವಾಗ ಕಂಡು ಹಿಡಿದ ನಾಮಜಪವನ್ನು ಸತತ ಮಾಡಬೇಕು. ಶರೀರದ ಮೇಲಿನ ಆವರಣವನ್ನು ದೂರ ಮಾಡಲು ‘ಎರಡೂ ಅಂಗೈಗಳನ್ನು ಜೋಡಿ ಸಿದ ಮುದ್ರೆ’ಯನ್ನು ಮಾಡಬೇಕು ಮತ್ತು ಆ ಮುದ್ರೆಯನ್ನು ಕುಂಡಲಿನಿ ಚಕ್ರಗಳ ಮೇಲಿಂದ (ಸಹಸ್ರಾರದಿಂದ ಸ್ವಾಧಿಷ್ಠಾನಚಕ್ರದ ಮೇಲಿಂದ) ‘ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ’ ಹೀಗೆ ೭-೮ ಸಲ ತಿರುಗಿಸಬೇಕು. ಪ್ರತಿಯೊಂದು ಚಕ್ರದ ಮೇಲೆ ಬಂದಾಗ ಅಲ್ಲಿ ಸಾಧಾರಣ ಅರ್ಧ ನಿಮಿಷ ನಿಲ್ಲಬೇಕು. ಮುದ್ರೆಯನ್ನು ಚಕ್ರಗಳ ಮೇಲೆ ತಿರುಗಿಸುವಾಗ ಶರೀರದಿಂದ ೨ ರಿಂದ ೩ ಸೆಂ.ಮೀ. ದೂರವಿರಬೇಕು.

ಈ ಪದ್ಧತಿಯಿಂದ ಆವರಣವನ್ನು ತೆಗೆದರೆ ಶರೀರದ ಮೇಲಿನ ಆವರಣದಿಂದ ಬಂದ ಜಡತ್ವ ಅಥವಾ ಒತ್ತಡ ಬಹಳಷ್ಟು ಕಡಿಮೆಯಾಗಿರುವುದು ಅರಿವಾಗುತ್ತದೆ. ಮುಂದೆ ಉಳಿದ ಆವರಣವನ್ನು ನಾವು ‘ಮುಷ್ಠಿಗಳಿಂದ ಆವರಣವನ್ನು ತೆಗೆಯುವುದು’ (ಅಂಶ ೨ ನೋಡಿ.) ಈ ಪದ್ಧತಿಯಿಂದ ಅಥವಾ ಆವಶ್ಯಕವೆನಿಸಿದರೆ ‘ಗೋಪುರ ಮುದ್ರೆ’ಯನ್ನು ಬಳಸಿ ಸಂಪೂರ್ಣವಾಗಿ ದೂರ ಮಾಡಬಹುದು.

೪. ‘ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆ’ಯ ಬಗ್ಗೆ ಗಮನಕ್ಕೆ ಬಂದ ಇನ್ನೂ ಕೆಲವು ಲಾಭಗಳು

೪ ಅ. ಸೇವೆಯನ್ನು ಮಾಡುತ್ತಿರುವ ಕೋಣೆಯಲ್ಲಿ ಮೇಲಿನಿಂದ ಬರುವ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ತಡೆಯಲು ಸಾಧ್ಯವಾಗುವುದು, ಹಾಗೆಯೇ ಪಾತಾಳದಿಂದ ಅಂದರೆ ಭೂಮಿ ಯಿಂದ ಬರುವ ತೊಂದರೆದಾಯಕ ಶಕ್ತಿಯ ಪ್ರವಾಹವನ್ನೂ ತಡೆಯಲು ಸಾಧ್ಯವಾಗುವುದು : ನಾವು ಗಣಕಯಂತ್ರದಲ್ಲಿ ಸೇವೆಯನ್ನು ಮಾಡುತ್ತಿರುವಾಗ ಕೆಲವೊಮ್ಮೆ ‘ಗಣಕಯಂತ್ರವು ಮೇಲಿಂದ ಮೇಲೆ ಬಂದ ಬೀಳುತ್ತದೆ ಅಥವಾ ಮಾಡುತ್ತಿರುವ ಸೇವೆಯಲ್ಲಿ ಮೇಲಿಂದ ಮೇಲೆ ಅಡಚಣೆ (ಎರರ್) ಬರುತ್ತಿರುತ್ತದೆ. ಹಾಗೆಯೇ ಇನ್ನೂ ಬೇರೆ ಯಾವುದೋ ಸೇವೆ ಯನ್ನು ಮಾಡುತ್ತಿರುವಾಗಲೂ ಅದರಲ್ಲಿ ಮೇಲಿಂದ ಮೇಲೆ ಅಡಚಣೆಗಳು ಬರುತ್ತಿರುತ್ತವೆ. ಆಗ ಸೂಕ್ಷ್ಮದಿಂದ ನೋಡಿದರೆ, ಕೆಟ್ಟ ಶಕ್ತಿಗಳು ನಮ್ಮ ಸೇವೆಯ ಮಾಧ್ಯಮದ ಮೇಲೆ ಮೇಲಿನಿಂದ ತೊಂದರೆದಾಯಕ ಶಕ್ತಿಯನ್ನು ಬಿಡುತ್ತಿರುತ್ತವೆ’ ಎಂದು ಗಮನಕ್ಕೆ ಬರುತ್ತದೆ. ಆಗ ಆ ತೊಂದರೆದಾಯಕ ಶಕ್ತಿಯನ್ನು ತಡೆಯಲು, ‘ಎರಡೂ ಅಂಗೈಗಳ ಜೋಡಿಸಿದ ಮುದ್ರೆ’ಯ ಉಪಯೋಗವಾಗುತ್ತದೆ. ಆಗ ‘ನಮ್ಮ ಒಂದು ಕೈಯ ಅಂಗೈಯನ್ನು ಮೇಲಿನ ದಿಶೆಗೆ ಬರುವಂತೆ ಮತ್ತು ಇನ್ನೊಂದು ಕೈಯ ಅಂಗೈಯನ್ನು ಕೆಳಗೆ ಭೂಮಿಯ ದಿಶೆಗೆ ಬರುವಂತೆ’, ಮುದ್ರೆಯನ್ನು ಮಾಡಿ ಅದನ್ನು ನಮ್ಮೆದುರು ಹಿಡಿಯಬೇಕು (ಛಾಯಾಚಿತ್ರ ೪ ನೋಡಿ) (ಸಾಧ್ಯವಿದ್ದರೆ ನಾವು ಸೇವೆ ಮಾಡುತ್ತಿರುವ ಮಾಧ್ಯಮವಾಗಿರುವ, ಉದಾ. ಗಣಕಯಂತ್ರ ಅಥವಾ ಯಾವುದಾದರೊಂದು ಯಂತ್ರದ ಮೇಲೆಯೂ ಪ್ರತ್ಯಕ್ಷ ಉಪಾಯ ಮಾಡಬಹುದು. ಆಗ ‘ಎರಡೂ ಅಂಗೈಗಳ ಜೋಡಿಸಿದ ಮುದ್ರೆ’ಯನ್ನು ಗಣಕಯಂತ್ರ ಅಥವಾ ಆ ಯಂತ್ರದ ಮೇಲೆ ಹಿಡಿಯಬೇಕು. ಅದರಿಂದ ಗಣಕಯಂತ್ರ ಅಥವಾ ಯಂತ್ರದ ಮೇಲೆಯೂ ಉಪಾಯವಾಗುತ್ತದೆ, ಹಾಗೆಯೇ ಮೇಲಿಂದ ಬರುತ್ತಿರುವ ತೊಂದರೆದಾಯಕ ಶಕ್ತಿಯ ಪ್ರವಾಹವನ್ನೂ ತಡೆಗಟ್ಟಬಹುದು.) ಕೆಟ್ಟ ಶಕ್ತಿಯನ್ನು ಹೋಗಲಾಡಿಸುವ ದಿಕ್ಕಿನಲ್ಲಿ ಅಂಗೈಯನ್ನು ಹಿಡಿಯಬೇಕು ಮತ್ತು ತೊಂದರೆಯ ಆವಶ್ಯಕತೆಗನುಸಾರ ‘ಶೂನ್ಯ, ಮಹಾಶೂನ್ಯ, ನಿರ್ಗುಣ ಅಥವಾ ಓಂ’ ಇವುಗಳ ಪೈಕಿ ಯಾವುದಾದರೊಂದು ನಾಮಜಪವನ್ನು ಮಾಡಬೇಕು. ನಮಗೆ ಕೋಣೆಯಲ್ಲಿ ಹಗುರ ಅನಿಸತೊಡಗಿದರೆ, ಈ ಉಪಾಯವನ್ನು ನಿಲ್ಲಿಸಬೇಕು.

ಹಾಗೆಯೇ ಕೆಲವೊಮ್ಮೆ ಕೆಟ್ಟ ಶಕ್ತಿಗಳು ಪಾತಾಳದಿಂದ ಅಂದರೆ ಭೂಮಿಯಿಂದ ತೊಂದರೆದಾಯಕ ಶಕ್ತಿಯನ್ನು ಬಿಡುತ್ತಿರುತ್ತವೆ. ಈ ತೊಂದರೆದಾಯಕ ಶಕ್ತಿಗಳನ್ನು ತಡೆಯಲೂ ಛಾಯಾಚಿತ್ರ ೪ ರಲ್ಲಿ ತೋರಿಸಿದಂತೆ ಮಾಡಿದ ಮುದ್ರೆಯ ಉಪಯೋಗವನ್ನು ಮಾಡಿಕೊಳ್ಳಬಹುದು. ಆ ಸಮಯದಲ್ಲಿ ಭೂಮಿಯಿಂದ ಬರುವ ತೊಂದರೆದಾಯಕ ಶಕ್ತಿ ಭೂಮಿಯ ದಿಕ್ಕಿಗೆ ಇರುವ ಅಂಗೈ ಮತ್ತು ನಾಮಜಪ ಇವುಗಳ ಮೂಲಕ ತಡೆಯಲ್ಪಡುತ್ತವೆ.

೪ ಆ. ನಮ್ಮ ಎದುರಿಗೆ ನಮ್ಮ ಮೇಲೆ ಬರುವ ತೊಂದರೆದಾಯಕ ಶಕ್ತಿಯನ್ನು ತಡೆಯಲು ಸಾಧ್ಯವಾಗುವುದು, ಹಾಗೆಯೇ ನಮ್ಮೆದುರು ಇರುವ ತೊಂದರೆದಾಯಕ ಶಕ್ತಿಯ ಆವರಣವನ್ನು ದೂರ ಮಾಡಲು ಸಾಧ್ಯವಿರುವುದು : ಕೆಲವೊಮ್ಮೆ ಕೆಟ್ಟ ಶಕ್ತಿಗಳು ನಮ್ಮ ಎದುರಿನಿಂದ ನಮ್ಮ ಮೇಲೆ ತೊಂದರೆದಾಯಕ ಶಕ್ತಿ ಯನ್ನು ಬಿಡುತ್ತಿರುತ್ತವೆ. ಹಾಗೆಯೇ ಕೆಲವೊಮ್ಮೆ ಕೆಟ್ಟ ಶಕ್ತಿಗಳು ನಮ್ಮೆದುರು ತೊಂದರೆದಾಯಕ ಶಕ್ತಿಯ ಆವರಣವನ್ನು ಸೃಷ್ಟಿಸಿರುತ್ತವೆ. ಇಂತಹ ಎರಡೂ ಸಮಯದಲ್ಲಿ ‘ಎರಡೂ ಅಂಗೈಗಳ ಜೋಡಿಸುವ ಮುದ್ರೆ’ಯ ಉಪಯೋಗವಾಗುತ್ತದೆ. ಆಗ ‘ನಮ್ಮ ಒಂದು ಅಂಗೈ ನಮ್ಮ ಕಡೆಗೆ ಬರುವಂತೆ ಮತ್ತು ಎರಡನೇ ಅಂಗೈ ನಮ್ಮ ಎದುರಿನ ದಿಶೆಗೆ ಬರುವಂತೆ’ ಮುದ್ರೆಯನ್ನು ಮಾಡಬೇಕು (ಛಾಯಾಚಿತ್ರ ೫ ನೋಡಿ), ಹಾಗೆಯೇ ಆವಶ್ಯಕವಾದ ನಾಮಜಪವನ್ನು ಮಾಡಬೇಕು. ಆ ಸಮಯದಲ್ಲಿ ನಮ್ಮ ಶರೀರ ಹಗುರವೆನಿಸುವವರೆಗೆ ಈ ಉಪಾಯವನ್ನು ಮಾಡಬೇಕು. ಗುರುಕೃಪೆಯಿಂದಲೇ ಶರೀರದ ಮೇಲಿನ ಆವರಣವನ್ನು ತೆಗೆಯುವ ಈ ಪದ್ಧತಿಯ ಆವಿಷ್ಕಾರವಾಯಿತು. ಇದಕ್ಕಾಗಿ ನಾವೆಲ್ಲ ಸಾಧಕರು ಶ್ರೀ ಗುರುಗಳ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ.’

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೯.೭.೨೦೨೩)

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.