
ರಾಮನಾಥಿ (ಗೋವಾ) – ನಾಗಪುರದ ಶ್ರೀ ಸಿದ್ಧಾರೂಢ ಶಿವ ಮಂದಿರದ ಶ್ರೀ ಶಿವಶಂಕರ ಸ್ವಾಮೀಜಿಯವರು ಮತ್ತು ಅವರ ಭಕ್ತರು ಡಿಸೆಂಬರ್ 29 ರಂದು ಇಲ್ಲಿನ ರಾಮನಾಥಿಯ ಸನಾತನ ಆಶ್ರಮಕ್ಕೆ ಭೇಟಿ ನೀಡಿದರು. ಈ ವೇಳೆ ಅವರನ್ನು ಸನಾತನ ಸಾಧಕರಾದ ಶ್ರೀ. ರೋಹಿತ ಸಾಳುಂಖೆ ಅವರು ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ ಮತ್ತು ಧರ್ಮದ ಕಾರ್ಯಗಳು ಹಾಗೂ ಆಧ್ಯಾತ್ಮಿಕ ಸಂಶೋಧನೆಯ ಕಾರ್ಯದ ಮಾಹಿತಿಯನ್ನು ನೀಡಿದರು. ತದನಂತರ ಶ್ರೀ ಶಿವಶಂಕರ ಸ್ವಾಮೀಜಿ ಅವರನ್ನು ಸನಾತನ ಪ್ರಭಾತ ದಿನಪತ್ರಿಕೆಯ ಸಮೂಹ ಸಂಪಾದಕರಾದ ಶ್ರೀ. ಯೋಗೀಶ ಜಲತಾರೆ ಅವರು ಮಾಲಾರ್ಪಣೆ ಮಾಡಿ ಶಾಲು ಹೊದಿಸಿ, ಶ್ರೀಫಲ ನೀಡಿ ಉಡುಗೊರೆ ನೀಡಿ ಗೌರವಿಸಿದರು. ಆಶ್ರಮದಲ್ಲಿರುವ ಸಾಧಕರು ಸ್ವಭಾವ ದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯ ಭಾಗವಾಗಿ ಫಲಕದ ಮೇಲೆ ತಮ್ಮ ತಪ್ಪುಗಳನ್ನು ಬರೆಯುತ್ತಾರೆ, ಇದನ್ನು ನೋಡಿ ಅವರು ಸಾಧಕರನ್ನು ಹೊಗಳಿದರು.

ಸನಾತನ ಆಶ್ರಮವನ್ನು ನೋಡಿದ ಬಳಿಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಸ್ವಾಮೀಜಿಯವರು, ಸನಾತನ ಆಶ್ರಮವನ್ನು ನೋಡಿ ತುಂಬಾ ಸಂತೋಷವಾಯಿತು. ಆಶ್ರಮದಲ್ಲಿ ಸಾತ್ವಿಕತೆ ಮತ್ತು ಶಾಂತಿಯನ್ನು ಅನುಭವಿಸಿದೆನು. ಸಾಧಕರ ಸಾಧನೆ ಮತ್ತು ಸೇವೆ ವಿಶೇಷವಾಗಿದೆ. ಇಂತಹ ಆಶ್ರಮಗಳು ಪ್ರತಿ ಜಿಲ್ಲೆಯಲ್ಲೂ ಇರಬೇಕು’, ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !