‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವ’ವನ್ನು ನೋಡಲು ಅವಕಾಶ ಸಿಕ್ಕಿದ ಸಾಧಕರಿಗೆ ಸೂಚನೆ !
ರಥಾರೂಢ ಭಗವಾನ ಶ್ರೀವಿಷ್ಣುವಿನ ಸ್ತುತಿಯನ್ನು ನೃತ್ಯ, ಗಾಯನ ಮತ್ತು ವಾದನ ಇವುಗಳ ಮೂಲಕ ಮಾಡುವುದೆಂದರೆ ಬ್ರಹ್ಮೋತ್ಸವ !
ಸಾಧಕರನ್ನು ಭಾವಭಕ್ತಿಯಲ್ಲಿ ಮುಳುಗಿಸುವ ವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವವನ್ನು ಫರ್ಮಾಗುಡಿ (ಗೋವಾ)ಯಲ್ಲಿ ಆಚರಿಸಲಾಯಿತು. ಭವ್ಯ ಸ್ವರೂಪ ದಲ್ಲಿ ಆಚರಿಸಲಾದ ಈ ಸಮಾರಂಭಕ್ಕೆ ಮಹಾರಾಷ್ಟ್ರ, ಕರ್ನಾಟಕ, ಗೋವಾ ಇತ್ಯಾದಿ ರಾಜ್ಯಗಳಲ್ಲಿನ ೧೦ ಸಾವಿರಗಳಿಗಿಂತ ಹೆಚ್ಚು ಸಾಧಕರು ಉಪಸ್ಥಿತರಿದ್ದರು. ಹಾಗೆಯೇ ಎಲ್ಲೆಡೆಯ ಇತರ ಸಾವಿರಾರು ಸಾಧಕರಿಗೆ ಈ ಸಮಾರಂಭದಲ್ಲಿ ‘ಆನ್ಲೈನ್’ ಪಾಲ್ಗೊಳ್ಳುವ ಅವಕಾಶ ಲಭಿಸಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದರ್ಶನ ವಾದುದರಿಂದ ಸಾವಿರಾರು ಸಾಧಕರಿಗೆ ಕೃತಾರ್ಥರಾದಂತಾಯಿತು. ಈ ಸಮಾರಂಭದ ಮಾಧ್ಯಮದಿಂದ ಗುರುಗಳು ಸಾಧಕರ ಮೇಲೆ ಮಾಡಿದ ಕೃಪೆಯ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಮಾಡುವ ಅವಕಾಶ ಎಲ್ಲ ಸಾಧಕರಿಗೆ ಮತ್ತೊಮ್ಮೆ ದೊರಕಿದೆ. ‘ಈ ಸಮಾರಂಭದ ಪ್ರತ್ಯಕ್ಷ ಅಥವಾ ‘ಆನ್ಲೈನ್’ ಪಾಲ್ಗೊಳ್ಳುವ ಬಗ್ಗೆ ತಿಳಿದಾಗ ಏನು ಅನಿಸಿತು ? ಸಮಾರಂಭವನ್ನು ನೋಡುವಾಗ ಏನು ಅರಿವಾಯಿತು ? ಮತ್ತು ಸಮಾರಂಭವು ಮುಕ್ತಾಯಗೊಂಡಾಗ ಏನು ಅನಿಸಿತು ?’, ಈ ಬಗೆಗಿನ ಅನುಭೂತಿಗಳನ್ನು ಸಾಧಕರು [email protected] ಈ ಗಣಕೀಯ ವಿಳಾಸಕ್ಕೆ ಕಳುಹಿಸಬೇಕು ಮತ್ತು ಆ ಮಾಧ್ಯಮದಿಂದ ಗುರುಗಳ ಚರಣಗಳಲ್ಲಿ ಅನುಭೂತಿರೂಪಿ ಕೃತಜ್ಞತಾಪುಷ್ಪವನ್ನು ಅರ್ಪಿಸಬೇಕು.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ರಾಜಮಾತಂಗಿ ಯಜ್ಞದಿಂದ ಗೋವಾದ ರಾಮನಾಥಿಯ ಸನಾತನದ ಆಶ್ರಮ ಪರಿಸರದಲ್ಲಿ ಅನುಭವವಾದ ಅಂಶಗಳು
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !