Nagpur Riots : ನಾಗಪುರ ಗಲಭೆಯಲ್ಲಿ ಗಾಯಗೊಂಡಿದ್ದ ಪೊಲೀಸರನ್ನು ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಮೇಲೆ ಕಲ್ಲು ತೂರಾಟ !

ಆಂಬುಲೆನ್ಸ್ ನ ಗಾಜುಗಳು ಪುಡಿ ಪುಡಿ

ನಾಗಪುರ – ಮಹಾಲ ಪರಿಸರದಲ್ಲಿ ಗಲಭೆಯಲ್ಲಿ ಗಾಯಗೊಂಡಿರುವ ಪೊಲೀಸ ಅಧಿಕಾರಿ ನಿಕೇತನ ಕದಮ ಇವರ ಜೊತೆಗೆ ಇತರರು ಗಾಯಗೊಂಡಿರುವವರನ್ನು ಮೊದಲು ಮೇಯೋ ಆಸ್ಪತ್ರೆಗೆ ಬದಲಾಯಿಸಲಾಯಿತು. ಪ್ರಾಥಮಿಕ ಚಿಕಿತ್ಸೆಯ ನಂತರ ಮೂರು ಜನರನ್ನು ಬೇರೆ ಆಸ್ಪತ್ರೆಗೆ ಕಳುಹಿಸಬೇಕಿತ್ತು. ಅದರಲ್ಲಿ ಕದಮ ಇವರನ್ನು ಕರೆದುಕೊಂಡು ಹೊರಟಿರುವ ಆಂಬುಲೆನ್ಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ; ಆದರೆ ಆಂಬುಲೆನ್ಸ್ ಡ್ರೈವರ್ ಸಂದರ್ಭೋಚಿತ ವಾಹನ ಚಾಲನೆ ಮಾಡಿರುವುದರಿಂದ ಕದಮ ಉಳಿದಿದ್ದಾರೆ. ಈ ಕಲ್ಲು ತೂರಾಟದಲ್ಲಿ ಅಂಬುಲೆನ್ಸ್ ನ ಗಾಜುಗಳು ಒಡೆದಿದೆ.

ಸಂಪಾದಕೀಯ ನಿಲುವು

  • ಈ ಘಟನೆ ನೋಡಿದರೆ ಇಲ್ಲಿಯವರೆಗೆ ನಾಗಪುರದಲ್ಲಿನ ಗಲಭೆ ಶಾಂತವಾಗಿಲ್ಲ, ಎಂದೇ ಕಾಣುತ್ತಿದೆ ! ದಾಳಿಕೋರರು ಪೊಲೀಸರ ಮೇಲೆ ದಾಳಿ ನಡೆಸುವುದಕ್ಕಾಗಿ ಕಾದು ಕುಳಿತಿದ್ದರು. ಈ ರೀತಿ ರಾಜಾರೋಷವಾಗಿ ಓಡಾಡುವ ಕಲ್ಲು ತೂರಾಟಗಾರರ ಮೇಲೆ ಯಾವಾಗ ಕ್ರಮ ಕೈಗೊಳ್ಳುವರು ?
  • ನಾಗಪುರದಲ್ಲಿ ಹೆಚ್ಚುತ್ತಿರುವ ಅರಾಜಕತೆ ತಡೆಯುವದಕ್ಕಾಗಿ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು !