ಪುರುಷರೇ, ಅಹಂಕಾರವನ್ನು ತ್ಯಜಿಸಿರಿ !

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

‘ಪುರುಷರು ಕೈಯಲ್ಲಿ (ಅಹಂಕಾರದ) ಬಳೆ ತೊಟ್ಟಿರುವುದರಿಂದ ಸ್ತ್ರೀಯರೇ ಕ್ರಾಂತಿ ಮಾಡುವರು, ಎಂದು ನಾನು ೧೯೯೪ ರಲ್ಲಿ ಹೇಳಿದ್ದೆನು. ಕಲಿಯುಗದಲ್ಲಿ ಹಿಂದೂ ರಾಷ್ಟ್ರದ, ಅಂದರೆ ರಾಮರಾಜ್ಯದ, ಧರ್ಮರಾಜ್ಯವನ್ನು ಸ್ಥಾಪಿಸುವಲ್ಲಿ ಈಗ ಸ್ತ್ರೀಯರೇ ಮುಂದಾಳತ್ವ ವಹಿಸುತ್ತಿದ್ದಾರೆ ಎಂಬುದರ ಅನುಭವವು ಬರುತ್ತಿದೆ. ಧರ್ಮರಾಜ್ಯದ ಸ್ಥಾಪನೆಗೆ ಆಧ್ಯಾತ್ಮಿಕ ಬಲವು ಅತ್ಯಾವಶ್ಯಕವಾಗಿದೆ. ಪುರುಷರಿಗಿಂತ ಸ್ತ್ರೀಯರಲ್ಲಿ ಅದು ಅಧಿಕ ಪ್ರಮಾಣದಲ್ಲಿದೆ.  (ಆಧಾರ : ಪರಾತ್ಪರ ಗುರು ಡಾ. ಆಠವಲೆಯವರು ಬರೆದ ಲೇಖನ)

ಎಲ್ಲಿ ಸ್ತ್ರೀ ರಕ್ಷಣೆಯ ಆದರ್ಶವಿರುವ ರಾಮ, ಕೃಷ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಎಲ್ಲಿ ಹಿಂದೂ ಧರ್ಮ ಹಾಗೂ ಭಾರತ ಇವೆರಡನ್ನು ನಾಚಿಸುವ ಜನ್ಮ ಹಿಂದೂಗಳು !

‘ರಾವಣನು ಸೀತೆಯನ್ನು ಅಪಹರಿಸಿದನೆಂದು ರಾಮನು ಲಂಕೆಯ ಮೇಲೆ ದಂಡೆತ್ತಿ ಹೋಗಿ ಸೀತೆಯನ್ನು ರಾವಣನಿಂದ ಮುಕ್ತಗೊಳಿಸಿದನು. ನರಕಾಸುರನು ಬಂಧಿಸಿಟ್ಟ ೧೬,೦೦೦ ಕನ್ಯೆಯರನ್ನು ಶ್ರೀಕೃಷ್ಣನು ನರಕಾಸುರನೊಂದಿಗೆ ಯುದ್ಧ ಮಾಡಿ ಬಂಧಮುಕ್ತಗೊಳಿಸಿದನು. ಛತ್ರಪತಿ ಶಿವಾಜಿ ಮಹಾರಾಜರು ಸ್ತ್ರೀಯರ ಮೇಲೆ ಅತ್ಯಾಚಾರ ಮಾಡುವ ಪಾಟೀಲನ ಕೈ-ಕಾಲು ತುಂಡರಿಸಿದನು. ಸ್ತ್ರೀರಕ್ಷಣೆ ಹೇಗೆ ಮಾಡಬೇಕು ?, ಇದರ ಅನೇಕ ದಾಖಲೆಗಳು ಹಿಂದೂಗಳ ಎದುರು ಇದ್ದರೂ ಭಾರತದಲ್ಲಿ ಪ್ರತಿದಿನ ಸ್ತ್ರೀಯರ ಮೇಲೆ ಅತ್ಯಾಚಾರವಾಗುತ್ತಿದೆ. ಎಲ್ಲಿ ರಾಮ, ಕೃಷ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಎಲ್ಲಿ ಇಂದಿನ ಜನ್ಮ ಹಿಂದೂಗಳು ! ಸ್ತ್ರೀರಕ್ಷಣೆಗಾಗಿ ಏನೂ ಮಾಡದ ಇಂತಹ ಜನ್ಮಹಿಂದೂಗಳು ಹಿಂದೂ ಧರ್ಮ ಹಾಗೂ ಭಾರತ ಇವೆರಡಕ್ಕೂ ಲಜ್ಜಾಸ್ಪದ !

– (ಪರಾತ್ಪರ ಗುರು) ಡಾ. ಆಠವಲೆ