(ಟಿಪ್ಪಣೆ : ಎಸ್.ಐ.ಆರ್. (ಸ್ಪೆಷಲ್ ಇನ್ವೆಸ್ಟಿಗೇಷನ್ ರಿವಿಷನ್ – ಮತದಾರರ ಪಟ್ಟಿ ಮರುಪರಿಶೀಲನೆ)

ಬೀಡ – ಪರಳಿಯ ಪೇಠ ಮೊಹಲ್ಲಾದಲ್ಲಿರುವ ಶಾದಿ ಖಾನಾ ಕ್ಯಾಂಪಿನಲ್ಲಿ ಬಿ.ಎಲ್.ಒ. (ಬೂತ್ ಲೆವೆಲ್ ಆಫೀಸರ್ – ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯನ್ನು ಮರುಪರಿಶೀಲಿಸುವ ಅಧಿಕಾರಿ) ಆಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಮಹಫೂಜ ಜಾಕೀರ ಶೇಖ ರವರಿಗೆ ಮತದಾರರ ಪಟ್ಟಿ ಮರುಪರಿಶೀಲನೆಯ ಸ್ಥಳಕ್ಕೆ (ಕ್ಯಾಂಪ್ ಗೆ) ಬಂದು ಶಾಕೀರ ಅಹಮದ ಶೇಖ, ಜುನೇದ ಶೇಖ, ಶೋಯೆಬ ಶೇಖ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿ ಹಲ್ಲೆ ಮಾಡಿ, ಜೀವಬೆದರಿಕೆ ಹಾಕಿದ್ದಾರೆ. ‘ಮತದಾರರ ಪಟ್ಟಿ ಮರುಪರಿಶೀಲನೆಯ ಅರ್ಜಿಗಳನ್ನು ಹಿಡಿದುಕೊಂಡು ನಮ್ಮ ಮನೆಗೆ ಏಕೆ ಬರುತ್ತಿಲ್ಲ?’ ಎಂಬ ಕಾರಣಕ್ಕಾಗಿ ಅವರು ಈ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನಾಲ್ವರ ವಿರುದ್ಧ ಪರಳಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ‘ದೂರನ್ನು ಹಿಂಪಡೆಯದಿದ್ದರೆ, ನಾವು ಹೊರಗೆ ಬಂದು ನಿನಗೆ ತಕ್ಕ ಪಾಠ ಕಲಿಸುತ್ತೇವೆ’, ಎಂದು ಈ ಮತಾಂಧರು ಸಂಬಂಧಪಟ್ಟ ಶಿಕ್ಷಕನಿಗೆ ಬೆದರಿಕೆಯನ್ನೂ ಹಾಕಿದ್ದಾರೆ.
ವರ್ಧಾದಲ್ಲಿ ಎಸ್.ಐ.ಆರ್. ನೊಂದಣಿ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಇಬ್ಬರು ಶಿಕ್ಷಕರು ಮತ್ತು ಒಬ್ಬ ನಾಲ್ಕನೇ ದರ್ಜೆಯ ನೌಕರನನ್ನು ಅಮಾನತುಗೊಳಿಸಲಾಗಿದೆ. ಈ ಕ್ರಮವನ್ನು ಶಿಕ್ಷಕರ ಸಂಘಟನೆಯು ತೀವ್ರವಾಗಿ ಖಂಡಿಸಿದೆ. ಈ ಪ್ರಕರಣದಲ್ಲಿ ಕೊರೋನಾ ಅವಧಿಯಲ್ಲಿ ತಮಗೆ ಲಭಿಸಿದ ಪ್ರಶಸ್ತಿಗಳನ್ನು ಮರಳಿ ನೀಡುವುದಾಗಿ ‘ಪ್ರಹಾರ ಶಿಕ್ಷಕ ಸಂಘಟನೆ’ಯು ಎಚ್ಚರಿಕೆ ನೀಡಿದೆ.
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ
ಸರಯೂ ನದಿಯಲ್ಲಿ ಮಾಂಸ-ಮದ್ಯ ಸೇವನೆ; ಮೂವರು ಬಂಧನ : Saryu River Case
ರಾಜ್ಯದಲ್ಲಿ ಶಾಲೆಗಳ ಹತ್ತಿರ ಪಿಜ್ಜಾ-ಬರ್ಗರ್ ಮಾರಾಟಕ್ಕೆ ಶೀಘ್ರದಲ್ಲೇ ನಿಷೇಧ !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!