ಸನಾತನ ಯಷ್ಟಿಮಧು (ಜೇಷ್ಠಮಧು) ಚೂರ್ಣದ ಔಷಧದ ಉಪಯೋಗ
೧. ಕೆಮ್ಮು, ಗಂಟಲು ನೋವು, ಗಂಟಲು ಕೆರೆತ, ಗಂಟಲು ಕೂರುವುದು, ಗಂಟಲಿನಿಂದ ಕಫ ಹೊರಗೆ ಬೀಳದಿರುವುದು ಮತ್ತು ಬಾಯಿ ಹುಣ್ಣು : ಕಾಲು ಚಮಚದಷ್ಟು ಜೇಷ್ಠಮಧು ಚೂರ್ಣವನ್ನು ದಿನಕ್ಕೆ ೩-೪ ಬಾರಿ ಜಗಿದು ತಿನ್ನಬೇಕು. (೫ ದಿನ)
೨. ಮಲಬದ್ಧತೆ : ಎರಡು ಊಟದ ಮೊದಲು ೧ ಚಮಚ ಜೇಷ್ಠಮಧು ಚೂರ್ಣ ಮತ್ತು ೧ ಚಿಟಿಕೆ ಉಪ್ಪು ಅರ್ಧ ಬಟ್ಟಲು ಉಗುರುಬೆಚ್ಚ ನೀರಿನಲ್ಲಿ ಸೇರಿಸಿ ಕುಡಿಯಬೇಕು. (೧೫ ದಿನ)
೩. ಉಷ್ಣತೆಯ ರೋಗ (ಉಷ್ಣ ಪದಾರ್ಥಗಳ ತೊಂದರೆಯಾಗುವುದು, ಬಾಯಿ ಹುಣ್ಣು, ಮೈಯೆಲ್ಲ ಉರಿಯುವುದು, ಮೂತ್ರ ಮಾರ್ಗದಲ್ಲಿ ಉರಿಯುವುದು, ಮೈಮೇಲೆ ಬೊಕ್ಕೆಗಳಾಗುವುದು, ತಲೆ ಸುತ್ತುವುದು ಇತ್ಯಾದಿಗಳು) : ದಿನಕ್ಕೆ ೨-೩ ಬಾರಿ ೧ ಚಮಚ ಜೇಷ್ಠ ಮಧು ಚೂರ್ಣ ೧ ಚಮಚ ತುಪ್ಪದಲ್ಲಿ ತೆಗೆದುಕೊಳ್ಳಬೇಕು. (೧೫ ದಿನ)
![](https://static.sanatanprabhat.org/wp-content/uploads/sites/5/2022/09/11064939/Megharaj_Paradkar_june2019_hasara_320-1.jpg)
ಸನಾತನದ ಉಶೀರ (ಲಾವಂಚ) ಚೂರ್ಣದ ಔಷಧೀಯ ಉಪಯೋಗ
೧. ಉಷ್ಣತೆಯ ತೊಂದರೆಗಳು (ಉಷ್ಣ ಪದಾರ್ಥ ಆಗದಿರುವುದು, ಬಾಯಿ ಹುಣ್ಣು, ಶರೀರ ಉರಿಯುವುದು, ಮೂತ್ರ ಮಾರ್ಗದಲ್ಲಿ ಉರಿ ಬರುವುದು, ಮೈ ಮೇಲೆ ಗುಳ್ಳೆ ಬರುವುದು, ತಲೆ ಸುತ್ತು, ಕೂದಲು ಉದುರುವುದು ಇತ್ಯಾದಿ) : ಕಾಲು ಚಮಚ ಲಾವಂಚದ ಪುಡಿಯನ್ನು ಬಟ್ಟಲಿನಷ್ಟು ನೀರಿನಲ್ಲಿ ಸೇರಿಸಿ ದಿನದಲ್ಲಿ ೩-೪ ಸಲ ಕುಡಿಯಬೇಕು. (೭ ದಿನ)
೨. ಹೊಟ್ಟೆ ತೊಳೆಸುವುದು, ವಾಂತಿ, ಭೇದಿ ಆಗುವುದು ಮತ್ತು ಮಲ ವಿಸರ್ಜನೆಯ ಜಾಗದಲ್ಲಿ ರಕ್ತ ಬರುವುದು : ಈ ಮೇಲಿನಂತೆ ತೆಗೆದುಕೊಳ್ಳುವುದು. (೭ ದಿನ)
೩. ಬಿಸಿಲಿನಲ್ಲಿ ಅಥವಾ ಅಕ್ಟೋಬರನಲ್ಲಿ ವಾತಾವರಣದಲ್ಲಿನ ಉಷ್ಣತೆಯ ತೊಂದರೆಯಾಗಬಾರದು, ಅದಕ್ಕಾಗಿ : ೧ ಲೀಟರ್ ನೀರಿನಲ್ಲಿ ಅರ್ಧ ಚಮಚದಂತೆ ಲಾವಂಚದ ಪುಡಿ ಹಾಕಿಡುವುದು. ಬಾಯಾರಿಕೆ ಆದಾಗ ಇದೇ ನೀರು ಕುಡಿಯುವುದು. (ಬಿಸಿಲಿನಲ್ಲಿ ಹಾಗೂ ಅಕ್ಟೋಬರ್ನಲ್ಲಿ)
ಶಾಂತ ನಿದ್ದೆಗಾಗಿ ಬ್ರಾಹ್ಮಿ ಚೂರ್ಣ
ಮುಂದಿನ ಎರಡೂ ಚಿಕಿತ್ಸೆಗಳನ್ನು ಕಡಿಮೆಪಕ್ಷ ೩ ತಿಂಗಳು ಮಾಡಬೇಕು.
೧. ನಾಲ್ಕು ಚಮಚದಷ್ಟು ಬ್ರಾಹ್ಮಿ ಚೂರ್ಣ ೪ ಬಟ್ಟಲು ಕೊಬ್ಬರಿ ಎಣ್ಣೆಯಲ್ಲಿ ಸಾಧಾರಣ ೧ ನಿಮಿಷ ಕುದಿಸಬೇಕು. ಈ ಎಣ್ಣೆಯನ್ನು ಸೋಸಿ ತಣ್ಣಗಾದ ನಂತರ ಬಾಟಲಿಯಲ್ಲಿ ತುಂಬಿ ಅದರಲ್ಲಿ ೧೦ ಗ್ರಾಮ್ ಭೀಮಸೇನಿ ಕರ್ಪೂರವನ್ನು ಪುಡಿ ಮಾಡಿ ಹಾಕಬೇಕು ಮತ್ತು ಬಾಟಲಿಯ ಮುಚ್ಚಳವನ್ನು ಹಾಕಿಡಬೇಕು. ಪ್ರತಿದಿನ ರಾತ್ರಿ ಮಲಗುವಾಗ ಅದರಲ್ಲಿನ ೧-೨ ಚಮಚದಷ್ಟು ಎಣ್ಣೆಯನ್ನು ತಲೆಗೆ ಹಚ್ಚಿ ಮಲಗಬೇಕು.
೨. ರಾತ್ರಿ ಮಲಗುವಾಗ ೧ ಚಮಚ ಬ್ರಾಹ್ಮಿ ಚೂರ್ಣವನ್ನು ಅರ್ಧ ಬಟ್ಟಲು ಉಗುರುಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಬೇಕು.
ಬಿಕ್ಕಳಿಕೆಗೆ ಆಯುರ್ವೇದದ ಪ್ರಾಥಮಿಕ ಚಿಕಿತ್ಸೆ
‘ಲಶುನಾದಿ ವಟಿ’ ಈ ಔಷಧಿಯ ೨ ರಿಂದ ೪ ಮಾತ್ರೆಗಳನ್ನು ಸಣ್ಣ ಪುಡಿ ಮಾಡಿ ಅದನ್ನು ೨ ಚಮಚ ತುಪ್ಪದಲ್ಲಿ ಸರಿಯಾಗಿ ಕಲಸಿ ನೆಕ್ಕಬೇಕು. ತುಪ್ಪವು ಲಭ್ಯವಿಲ್ಲದಿದ್ದರೆ ಮಾತ್ರೆಗಳನ್ನು ಜಗಿದು ತಿನ್ನಬೇಕು. ಔಷಧಿಯನ್ನು ಸೇವಿಸಿದ ನಂತರ ಸ್ವಲ್ಪ ಬೆಚ್ಚಗಿನ ನೀರನ್ನು ಕುಡಿಯಬೇಕು.’
೧. ಅಳತೆಗಾಗಿ ಚಹಾದ ಚಮಚವನ್ನು ಉಪಯೋಗಿಸಬೇಕು.
೨. ಇಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಲಾಗಿದೆ. ೭ ದಿನಗಳಲ್ಲಿ ಗುಣಮುಖವಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು.
೩. ಸನಾತನ ಯಷ್ಟಿಮಧು (ಜೇಷ್ಠಮಧು) ಚೂರ್ಣ, ಸನಾತನದ ಉಶೀರ (ಲಾವಂಚ) ಚೂರ್ಣ, ಸನಾತನದ ಬ್ರಾಹ್ಮಿ ಚೂರ್ಣ ಮತ್ತು ಭೀಮಸೇನಿ ಕರ್ಪೂರ ಲಭ್ಯವಿದೆ. ಇವುಗಳಿಂದ ಇತರ ರೋಗಗಳ ಮೇಲೆ ವಿವರವಾದ ಉಪಯೋಗವನ್ನು ಆ ಡಬ್ಬಿಯಲ್ಲಿನ ಪತ್ರದಲ್ಲಿ ಕೊಡಲಾಗಿದೆ.
೪. ಇಲ್ಲಿ ಕೊಟ್ಟಿರುವ ಮಾಹಿತಿ ಮತ್ತು ಪತ್ರದಲ್ಲಿನ ಮಾಹಿತಿಗಳಲ್ಲಿ ವ್ಯತ್ಯಾಸ ಇರಬಹುದು. ಎರಡರಲ್ಲಿ ಯಾವುದೇ ರೀತಿಯ ಔಷಧದ ಉಪಯೋಗವನ್ನು ಮಾಡಬಹುದು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.