ಎಲ್ಲ ಸಾಧಕರಿಗೆ ಸೂಚನೆ !
೨೬.೯.೨೦೨೨ ರಿಂದ ನವರಾತ್ರ್ಯುತ್ಸವ ಆರಂಭವಾಗುತ್ತಿದೆ. ಈ ಅವಧಿಯಲ್ಲಿ ಎಲ್ಲೆಡೆ ದೊಡ್ಡ ಪ್ರಮಾಣದಲ್ಲಿ ದೇವಿಯ ಆರಾಧನೆ ನಡೆಯುತ್ತದೆ. ಸನಾತನ ಸಂಸ್ಥೆಯು ದೇವಿಯ ವಿಷಯದ ಅಧ್ಯಾತ್ಮ ಶಾಸ್ತ್ರೀಯ ಜ್ಞಾನವನ್ನು ನೀಡುವ ಗ್ರಂಥ, ಕಿರುಗ್ರಂಥ ಹಾಗೂ ದೇವಿತತ್ತ್ವದ ಅನುಭೂತಿಯನ್ನು ನೀಡುವ ಚಿತ್ರಗಳು ಮತ್ತು ನಾಮಜಪ-ಪಟ್ಟಿಗಳನ್ನು ತಯಾರಿಸಿದೆ. ಭಕ್ತರಿಗೆ ನವರಾತ್ರಿಯ ಸಮಯದಲ್ಲಿ ದೇವಿಯ ಆರಾಧನೆಯನ್ನು ಶಾಸ್ತ್ರೋಕ್ತವಾಗಿ ಮಾಡಲು ಸಾಧ್ಯವಾಗಿ ಅವರಿಗೆ ದೇವಿತತ್ತ್ವದ ಹೆಚ್ಚೆಚ್ಚು ಲಾಭವಾಗಬೇಕೆಂಬ ದೃಷ್ಟಿಯಿಂದ ಈ ಗ್ರಂಥಗಳನ್ನು ಮತ್ತು ಉತ್ಪಾದನೆಗಳನ್ನು ಸಮಾಜಕ್ಕೆ ತಲುಪಿಸುವುದು ಆವಶ್ಯಕವಾಗಿದೆ.
೧. ದೇವಿಗೆ ಸಂಬಂಧಿಸಿದ ಗ್ರಂಥಗಳು ಮತ್ತು ಕಿರುಗ್ರಂಥಗಳು
೧ ಅ. ‘ಶಕ್ತಿ’ಯ ಉಪಾಸನೆ ಹೇಗೆ ಮಾಡಬೇಕು ? ಎಂಬುದರ ಮಾಹಿತಿಯನ್ನು ನೀಡುವ ‘ಶಕ್ತಿಯ ಪ್ರಾಸ್ತಾವಿಕ ವಿವೇಚನೆ’ ಮತ್ತು ‘ಶಕ್ತಿಯ ಉಪಾಸನೆ’ ಈ ಗ್ರಂಥ ! : ಈ ೨ ಗ್ರಂಥಗಳಲ್ಲಿ ಶಕ್ತಿಯ ವಿವಿಧ ಹೆಸರುಗಳು, ಅವುಗಳ ವಿಧಗಳು ಮತ್ತು ಕಾರ್ಯ, ದೇವಿಯ ಉಪಾಸನೆಯ ವೈಶಿಷ್ಟ್ಯಗಳು ಹಾಗೂ ಮೂರ್ತಿವಿಜ್ಞಾನ ಇವುಗಳನ್ನು ವಿವರಿಸಲಾಗಿದೆ. ಇದರೊಂದಿಗೆ ‘ಯಾವ ರಂಗೋಲಿಯನ್ನು ಬಿಡಿಸಿದರೆ ಶಕ್ತಿತತ್ತ್ವವು ಆಕರ್ಷಿತವಾಗುತ್ತದೆ ? ಕಾಲಾನುಸಾರ ಯಾವ ದೇವಿಯ ಉಪಾಸನೆ ಮಾಡಬೇಕು ಹಾಗೂ ಅದನ್ನು ಹೇಗೆ ಮಾಡಬೇಕು ? ನವರಾತ್ರ್ಯುತ್ಸವವನ್ನು ಹೇಗೆ ಆಚರಿಸಬೇಕು ?’ ಇತ್ಯಾದಿ ವಿಷಯಗಳ ಅಮೂಲ್ಯವಾದ ಮಾಹಿತಿಯನ್ನು ಇವುಗಳಲ್ಲಿ ನೀಡಲಾಗಿದೆ. (ಈ ವಿಷಯದ ಕಿರುಗ್ರಂಥವೂ ಲಭ್ಯವಿದೆ.)
೧ ಆ. ದೇವಿ ಉಪಾಸನೆಯ ವಿಷಯದಲ್ಲಿ ಜ್ಞಾನವನ್ನು ನೀಡುವ ಕಿರುಗ್ರಂಥ – ‘ದೇವಿಪೂಜೆಯ ಶಾಸ್ತ್ರ’ : ಈ ಕಿರುಗ್ರಂಥದಲ್ಲಿ ‘ನವರಾತ್ರಿಯಲ್ಲಿ ಘಟಸ್ಥಾಪನೆ ಹೇಗೆ ಮಾಡಬೇಕು ? ವಿಜಯ ದಶಮಿಗೆ ಅಪರಾಜಿತಾ ದೇವಿಯ ಪೂಜೆ ಏಕೆ ಮಾಡಬೇಕು ? ದೇವಿಯ ಮೂರ್ತಿಗೆ ‘ಕುಂಕುಮಾರ್ಚನೆ’ ಏಕೆ ಮಾಡುತ್ತಾರೆ ?’ ಇತ್ಯಾದಿ ಮಾಹಿತಿಗಳನ್ನು ಸವಿಸ್ತಾರವಾಗಿ ನೀಡಲಾಗಿದೆ.
೨. ಸನಾತನದ ಇತರ ಸಾತ್ತ್ವಿಕ ಉತ್ಪಾದನೆಗಳು
೨ ಅ. ಶಕ್ತಿತತ್ತ್ವವಿರುವ ಚಿತ್ರ : ಸನಾತನ-ನಿರ್ಮಿತ ದುರ್ಗಾದೇವಿಯ ಸಾತ್ತ್ವಿಕ ಚಿತ್ರದಲ್ಲಿ ಶೇ. ೩೦.೫ ರಷ್ಟು ಶಕ್ತಿತತ್ತ್ವ ಬಂದಿದೆ. (ಕಲಿಯುಗದಲ್ಲಿ ಮೂರ್ತಿ ಅಥವಾ ಚಿತ್ರಗಳಲ್ಲಿ ಹೆಚ್ಚೆಂದರೆ ಶೇ. ೩೦ ರಷ್ಟು ಪ್ರಮಾಣದಲ್ಲಿ ದೇವತೆಯ ತತ್ತ್ವ ಬರಲು ಸಾಧ್ಯವಿದೆ. ಇತರೆಡೆ ಲಭ್ಯವಿರುವ ದೇವತೆಯ ಚಿತ್ರಗಳಲ್ಲಿ ಈ ತತ್ತ್ವ ಸರಾಸರಿ ಶೇ. ೨-೩ ರಷ್ಟಿರುತ್ತದೆ.) ಈ ಚಿತ್ರ ಸಣ್ಣದು, ಮಧ್ಯಮ ಮತ್ತು ದೊಡ್ಡ ಗಾತ್ರದಲ್ಲಿ ಸಿಗುತ್ತದೆ.
೨ ಆ. ನಾಮಪಟ್ಟಿ : ಅಕ್ಷರ ಸಾತ್ತ್ವಿಕವಾಗಿದ್ದರೆ ಅದರಲ್ಲಿ ಚೈತನ್ಯವಿರುತ್ತದೆ. ಸಾತ್ತ್ವಿಕ ಅಕ್ಷರಗಳು ಮತ್ತು ಅವುಗಳ ಸುತ್ತಲಿರುವ ದೇವತೆಯ ತತ್ತ್ವಕ್ಕನುರೂಪವಾದ ಚೌಕಟ್ಟನ್ನು ಅಭ್ಯಾಸ ಮಾಡಿ ಸನಾತನ ವಿವಿಧ ದೇವತೆಗಳ ನಾಮಜಪದ ಪಟ್ಟಿಗಳನ್ನು ತಯಾರಿಸಿದೆ.’ (೭.೯.೨೦೨೨)
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
‘ವಾಟ್ಸಾಪ್’ ನಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸುವ ಮೂಲಕ ಮೊಬೈಲ್ ನಲ್ಲಿರುವ ಮಾಹಿತಿಯನ್ನು ಕದಿಯುವುದರಿಂದ ನಾಗರಿಕರು ಎಚ್ಚರದಿಂದಿರಬೇಕು!
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !