ಸೈಬರ್ ವಂಚಕರನ್ನು ನ್ಯಾಯಕ್ಕೆ ಒಳಪಡಿಸಲು ಕೈಗೊಂಡ ಕ್ರಮ

ಜಯಪುರ (ರಾಜಸ್ಥಾನ) – ರಾಜಸ್ಥಾನದ ಡಿಗ್ ಪ್ರದೇಶದ ಪಾಲ್ಡಿ ಗ್ರಾಮದಲ್ಲಿ, ಹಿರಿಯ ಮತ್ತು ಪ್ರಮುಖ ವ್ಯಕ್ತಿಗಳು ಮಕ್ಕಳು ಮತ್ತು ಯುವಕರು ಜನರಿಂದ ಸೈಬರ್ ವಂಚನೆ ಮಾಡಲೆಂದು ಖರೀದಿಸಿದ್ದ 300 ಮೊಬೈಲ್ ಫೋನ್ಗಳು ಮತ್ತು ಸಿಮ್ ಕಾರ್ಡ್ಗಳನ್ನು ಕಸಿದು ಎಲ್ಲಾ ಮೊಬೈಲ್ ಫೋನ್ಗಳನ್ನು ಒಡೆದು ಸುಟ್ಟುಹಾಕಿದರು. ಈ ಘಟನೆಯ ಮೂಲಕ ಸೈಬರ್ ವಂಚನೆಗೆ ಕುಖ್ಯಾತಿ ಪಡೆದಿರುವ ಈ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸುವುದಾಗಿ ಹಿರಿಯರು ಸಂದೇಶ ರವಾನಿಸಿದ್ದಾರೆ. ಗ್ರಾಮದಲ್ಲಿ ಒಂದು ತಂಡ ರಚನೆ ಮಾಡಲಾಗುವುದು. ಅವರು ಹಳ್ಳಿಯ ಮಕ್ಕಳು ಅಥವಾ ಯುವಕರು ಮಾಡಿದ ವಂಚನೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಅವರನ್ನು ಸರಿಯಾದ ದಾರಿಗೆ ತರಲು ಪ್ರಯತ್ನಿಸುತ್ತಾರೆ. ಅನೇಕ ಹಳ್ಳಿಗಳ ಹಿರಿಯರು ಯುವಕರಿಗೆ ಸೈಬರ್ ವಂಚನೆ ಮಾಡುವುದಿಲ್ಲ ಎಂದು ಪ್ರಮಾಣ ವಚನ ನೀಡಿದರು, ಎಂದು ಹಿರಿಯರು ಹೇಳಿದರು.
1. ‘ರಾಜಸ್ಥಾನ ಪತ್ರಿಕಾ’ದ ‘ಆಪರೇಷನ್ ರಕ್ಷಾ ಕವಚ’ ಮತ್ತು ಭರತಪುರ ವಿಭಾಗದ ಪೊಲೀಸ್ ಮಹಾನಿರ್ದೇಶಕ ರಾಹುಲ ಪ್ರಕಾಶ ಅವರು ತೆಗೆದುಕೊಂಡ ಕಠಿಣ ಕ್ರಮದಿಂದಾಗಿ, ಡಿಗ್ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೈಬರ್ ವಂಚಕರನ್ನು ಖಂಡಿಸಲು ಪ್ರಾರಂಭವಾಗಿದೆ.
2. ಭರತಪುರ ವಿಭಾಗದ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ, ಪೊಲೀಸ್ ತಂಡವು ಸೈಬರ್ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅನೇಕ ಜನರು ಜೈಲು ಸೇರಿದ್ದಾರೆ.
3. ಸೈಬರ್ ಅಪರಾಧಗಳಿಂದ ಯುವಕರನ್ನು ತಡೆಯಲು ಗ್ರಾಮದ ಹಿರಿಯರು ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಗ್ರಾಮಗಳಲ್ಲಿ ಈಗ ಸೈಬರ್ ವಂಚನೆ ಘಟನೆಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.
ಸಂಪಾದಕೀಯ ನಿಲುವುಜನರಿಗೆ ಮೋಸ ಮಾಡುವುದಿಲ್ಲ ಎಂದು ಮಕ್ಕಳು ಮತ್ತು ಯುವಕರಿಗೆ ಪ್ರಮಾಣವಚನ ನೀಡಲಾಯಿತು. ಮಕ್ಕಳಿಗೆ ವಂಚನೆ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿಸುವುದರ ಜೊತೆಗೆ ‘ಸಾಧನೆ’ ಕಲಿಸಿದರೆ ಅವರು ಅಂತಹ ಅಪರಾಧಗಳಿಗೆ ಕೈವೊಡ್ಡುವುದಿಲ್ಲ ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !