ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ‘ಕಲೆಯ ಮಾಧ್ಯಮದಿಂದ ಈಶ್ವರಪ್ರಾಪ್ತಿ’ ಎಂಬ ಸಂಕಲ್ಪನೆಯನ್ನು ಮಂಡಿಸಿದರು. ಅದರಂತೆ ಅವರು ಕಲಾಸೇವೆಯಲ್ಲಿ ಸಾಧಕರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನಕ್ಕನುಸಾರ ಮೂರ್ತಿ ಸೇವೆಯಲ್ಲಿರುವ ಸಾಧಕರು ಶ್ರೀ ಗಣೇಶನ ಸಾತ್ತ್ವಿಕ ಮೂರ್ತಿಯನ್ನು ನಿರ್ಮಿಸಿದ್ದಾರೆ. ಆಧುನಿಕ ವಿಜ್ಞಾನವನ್ನು ಉಪಯೋಗಿಸಿ ಅದನ್ನು ಸಾತ್ತ್ವಿಕ ಕಲಾಕೃತಿ ನಿರ್ಮಾಣಕ್ಕೆ ಬಳಸಿ ಹೆಚ್ಚೆಚ್ಚು ಜನರಿಗೆ ಈ ಮೂರ್ತಿಯ ಲಾಭ ಪಡೆದುಕೊಳ್ಳಲು ಸಾಧ್ಯವಾಗಬೇಕೆಂಬ ಉದ್ದೇಶದಿಂದ ಈ ಮೂರ್ತಿಯ ಗಣಕೀಯ (ಕಂಪ್ಯೂಟರ್) ತ್ರಿಮಿತಿಯ ರಚನೆ ಮಾಡಲು ನಿಯೋಜಿಸಲಾಗಿದೆ. ಅದಕ್ಕಾಗಿ ‘ಬ್ಲೆಂಡರ್’, ‘ಝೆಡ್ಬ್ರಶ್’ ಮೊದಲಾದ ಗಣಕೀಯ ತಂತ್ರಾಂಶ (‘ಸಾಫ್ಟ್ವೇರ್’ಗಳ) ಜ್ಞಾನ ಇರುವುದು ಆವಶ್ಯಕವಾಗಿದೆ. ಸಾಧಕರು, ಹಿತಚಿಂತಕರು ಅಥವಾ ವಾಚಕರಿಗೆ ಇಂತಹ ಗಣಕೀಯ ತಂತ್ರಾಂಶಗಳ ಜ್ಞಾನವಿದ್ದರೆ ಅವರು ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಬಂದು ಸಾಧಕರಿಗೆ ಕಲಿಸಬಹುದು. ಇಂತಹ ಸೇವೆಯನ್ನು ಮಾಡುವ ಮತ್ತು ಸಾತ್ತ್ವಿಕ ಕಲಾಕೃತಿಗಳ ನಿರ್ಮಿತಿಯಲ್ಲಿ ಯೋಗದಾನ ನೀಡಲು ಇಚ್ಛಿಸುವವರು ಅಥವಾ ಯಾರಿಗೆ ಪೂರ್ಣವೇಳೆ ಆಶ್ರಮದಲ್ಲಿದ್ದು ಈ ಸೇವೆ ಮಾಡಲು ಇಚ್ಚೆ ಇದೆ, ಅಂತಹವರು, ತಮ್ಮ ಹೆಸರು, ಲಭ್ಯವಿರುವ ಸಮಯ ಮತ್ತು ಇತರ ಮಾಹಿತಿಗಳನ್ನು ಜಿಲ್ಲಾಸೇವಕರ ಮೂಲಕ ತಿಳಿಸಬೇಕಾಗಿದೆ.
ಸಂಪರ್ಕ: ಶ್ರೀ. ಅಭಿಜಿತ ಸಾವಂತ,
ಸಂಚಾರವಾಣಿ ಸಂಖ್ಯೆ. : ೮೭೯೩೬೭೮೧೭೮
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !