ಪ್ರಧಾನಮಂತ್ರಿ ಮೋದಿಯವರ ವಿರುದ್ಧ ಟ್ವೀಟ್ ಮಾಡಿದ್ದರಿಂದ ಕಾರ್ಯಾಚರಣೆ

ಪಾಲನಪುರ (ಗುಜರಾತ) – ಗುಜರಾತಿನ ಶಾಸಕರಾದ ಜಿಗ್ನೇಶ ಮೇವಾಣಿಯವರನ್ನು ಅಸ್ಸಾಮಿನ ಪೊಲೀಸರು ಏಪ್ರಿಲ್ ೨೦ರ ರಾತ್ರಿ ಇಲ್ಲಿಂದ ಬಂಧಿಸಿದಿದ್ದಾರೆ. ಅವರನ್ನು ಅಸ್ಸಾಮಿಗೆ ಕರೆದೊಯ್ಯಲಾಗುವುದು. ಮೇವಾಣಿಯವರ ವಿರುದ್ಧ ಅಸ್ಸಾಮಿನಲ್ಲಿ ಅನೇಕ ಅಪರಾಧಗಳು ದಾಖಲಾಗಿದ್ದರಿಂದ ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ಕಾಂಗ್ರೆಸ್ಸಿನ ನೇತಾರರಾದ ಕನ್ಹೈಯಾ ಕುಮಾರ ಟ್ವೀಟ್ ಮಾಡಿ ‘ಅಸ್ಸಾಮಿನ ಪೊಲೀಸರು ಯಾವುದೇ ರೀತಿಯ ಪೂರ್ವಕಲ್ಪನೆಯನ್ನು ನೀಡದೇ ಮೇವಾಣಿಯವರನ್ನು ಬಂಧಿಸಿದ್ದಾರೆ. ಹಾಗೆಯೇ ಕಾನೂನುಬದ್ಧ ಕಾರ್ಯಾಚರಣೆಯ ಬಗ್ಗೆ ದಾಖಲಿಸಲಾದ ಅಪರಾಧದ ಪ್ರತಿಯನ್ನು ತೋರಿಸಲಿಲ್ಲ’, ಎಂದು ಹೇಳಿದ್ದಾರೆ.
Arrested over tweeting about PM Modi, Gujarat MLA #JigneshMevani taken to Assam’s Kokrajharhttps://t.co/0T0Tsth3vQ
— TIMES NOW (@TimesNow) April 21, 2022
ಅಸ್ಸಾಮಿನ ಕೊಕರಾಝಾರದ ಪೊಲೀಸ ಅಧೀಕ್ಷಕರಾದ ಪ್ರತೀಕ ವಿಜಯ ಕುಮಾರರವರು ಜಿಗ್ನೇಶ ಮೇವಾಣಿಯವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದರಿಂದಲೇ ಈ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.

ಮೇವಾಣಿಯವರು ಒಂದು ಟ್ವೀಟ್ನಲ್ಲಿ ‘ಗೋಡಸೆಯನ್ನು (ನಥುರಾಮ ಗೋಡಸೆಯವರನ್ನು) ದೇವರೆಂದು ತಿಳಿಯುವ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನಲ್ಲಿ ಜಾತೀಯ ಸಂಘರ್ಷದ ವಿರುದ್ಧ ಶಾಂತಿ ಮತ್ತು ಸೌಹಾರ್ದವನ್ನು ಕಾಯ್ದುಕೊಳ್ಳುವ ಬಗ್ಗೆ ಕರೆ ನೀಡಬೇಕು’, ಎಂದು ಹೇಳಿದ್ದರು.
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ : Champat Rai Resignation
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ