ವಿವಿಧ ತೊಂದರೆಗಳಿಗೆ ಕರಾರುವಕ್ಕಾಗಿ ನಾಮಜಪಾದಿ ಉಪಾಯಗಳನ್ನು ಹುಡುಕಿ ಜಪಿಸಿದರೆ ತೊಂದರೆಗಳು ದೂರವಾಗುವವು ಮತ್ತು ಇದರಿಂದ ಗಮನಕ್ಕೆ ಬರುವ ಉಪಾಯಗಳ ಮಹತ್ವ !

‘ನಾಮಜಪಾದಿ ಉಪಾಯಗಳನ್ನು ಮಾಡುವುದರಿಂದ ಸಾಧಕರಿಗಾಗುವ ತೊಂದರೆಗಳು ಹೇಗೆ ದೂರವಾಗುತ್ತವೆ ?, ಈ ವಿಷಯದ ಹೊಸ ಲೇಖನಮಾಲೆ !

(ಸದ್ಗುರು) ಡಾ. ಮುಕುಲ ಗಾಡಗೀಳ

‘ಮನುಷ್ಯನ ಜೀವನದಲ್ಲಿ ಶೇ. ೮೦ ರಷ್ಟು ಸಮಸ್ಯೆಗಳು ಆಧ್ಯಾತ್ಮಿಕ ಕಾರಣಗಳಿಂದ ಬರುತ್ತವೆ. ಆದ್ದರಿಂದ ಇಂತಹ ಸಮಸ್ಯೆಗಳ ನಿವಾರಣೆಗಾಗಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ. ಸಾಧನೆಯ ಜೊತೆಗೆ ಸಮಸ್ಯೆಗಳ ಆಯಾ ಪ್ರಸಂಗಗಳಲ್ಲಿ ಆಯಾ ಸಮಸ್ಯೆಗಳಿಗೆ ನಾಮಜಪಾದಿ ಆಧ್ಯಾತ್ಮಿಕ ಉಪಾಯಗಳನ್ನು ಹುಡುಕಿ ಅವುಗಳನ್ನು ಮಾಡುವುದೂ ಆವಶ್ಯಕವಾಗಿದೆ. ಸದ್ಯ ಧರ್ಮಾಚರಣೆಯು ಲುಪ್ತವಾದುದರಿಂದ ಉದ್ಭವಿಸಿರುವ ಆಪತ್ಕಾಲದಲ್ಲಿ ಕೆಟ್ಟ ಶಕ್ತಿಗಳ ಪ್ರಕೋಪವುಂಟಾಗಿದೆ. ಆದ್ದರಿಂದ ಅವು ಸತ್ಕಾರ್ಯದಲ್ಲಿ ವಿಘ್ನಗಳನ್ನು ತಂದು ತೊಂದರೆಗಳನ್ನು ನೀಡುವ ಪ್ರಮಾಣದಲ್ಲಿಯೂ ಬಹಳ ಹೆಚ್ಚಳವಾಗಿದೆ. ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಸಮಾಜಾಭಿಮುಖ ಸತ್ಕಾರ್ಯವನ್ನು ಮಾಡುವ, ಅಂದರೆ ಸಮಷ್ಟಿ ಸಾಧನೆಯನ್ನು ಮಾಡುವ ಸನಾತನದ ಸಾಧಕರಿಗೆ ಸದ್ಯ ಮೇಲಿಂದ ಮೇಲೆ ಇಂತಹ ತೊಂದರೆಗಳ ಅನುಭವವಾಗುತ್ತಿದೆ. ಆದ್ದರಿಂದ ಯಾವುದೇ ಸತ್ಕಾರ್ಯವು ನಿರ್ವಿಘ್ನವಾಗಲು ಮೊದಲೇ ನಾಮಜಪಾದಿ ಉಪಾಯಗಳನ್ನು ಕಂಡುಹಿಡಿದು ಅವುಗಳನ್ನು ಮಾಡಬೇಕಾಗುತ್ತದೆ. ಹಾಗೆಯೇ ಸಾಧಕರಿಗೂ ಆಧ್ಯಾತ್ಮಿಕ ಉನ್ನತಿಗಾಗಿ ಪ್ರತಿದಿನ ಮಾಡುತ್ತಿರುವ ವ್ಯಷ್ಟಿ ಸಾಧನೆಯಲ್ಲಿಯೂ ಕೆಟ್ಟ ಶಕ್ತಿಗಳು ಮೇಲಿಂದ ಮೇಲೆ ತೊಂದರೆಗಳನ್ನು ಕೊಡುತ್ತಿವೆ. ಅದಕ್ಕಾಗಿಯೂ ಸಾಧಕರು ನಾಮಜಪಾದಿ ಉಪಾಯಗಳನ್ನು ಕಂಡುಹಿಡಿದು ಅವುಗಳನ್ನು ಮಾಡಬೇಕಾಗುತ್ತದೆ.

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/53717.html

ಪರಾತ್ಪರ ಗುರು ಡಾ. ಆಠವಲೆಯವರಿಂದ ಲಭಿಸಿದ ಮಾರ್ಗದರ್ಶನ ಮತ್ತು ಅವರ ಕೃಪೆಯಿಂದ ನಾನು ಸಾಧಕರಿಗಾಗುತ್ತಿರುವ ಮತ್ತು ಅವರ ಸೇವೆಯಲ್ಲಿ ಬರುತ್ತಿರುವ ಆಧ್ಯಾತ್ಮಿಕ ತೊಂದರೆಗಳಿಗೆ ನಾಮಜಪಾದಿ ಉಪಾಯಗಳನ್ನು ಕಂಡುಹಿಡಿಯುವ ಮತ್ತು ಕೆಲವು ಪ್ರಸಂಗಗಳಲ್ಲಿ ಉಪಾಯಗಳನ್ನು ಮಾಡುವ ಸೇವೆಯನ್ನು ಕಳೆದ ಕೆಲವು ವರ್ಷಗಳಿಂದ ಮಾಡುತ್ತಿದ್ದೇನೆ. ಹಾಗೆಯೇ ಸಾಧಕರ ವಸ್ತು, ವಾಸಿಸುವ ವಾಸ್ತು, ದೇವತೆಗಳ ಚಿತ್ರ ಮುಂತಾದವುಗಳ ಮೇಲಾಗುತ್ತಿರುವ ಕೆಟ್ಟ ಶಕ್ತಿಗಳ ಆಕ್ರಮಣ ಗಳ ಮೇಲೆಯೂ ನಾಮಜಪಾದಿ ಉಪಾಯಗಳನ್ನು ಮಾಡಲು ನನಗೆ ಸಾಧ್ಯವಾಗುತ್ತಿದೆ. ಕೆಟ್ಟ ಶಕ್ತಿಗಳ ತೊಂದರೆಗಳಿಗೆ ಉಪಾಯ ಮಾಡುವುದೆಂದರೆ ಒಂದು ರೀತಿಯಲ್ಲಿ ಅವುಗಳೊಂದಿಗಿನ ಹೋರಾಟವೇ ಆಗಿರುತ್ತದೆ. ಐದನೇಯ, ಆರನೇಯ ಪಾತಾಳದಲ್ಲಿನ ಕೆಟ್ಟ ಶಕ್ತಿಗಳಲ್ಲಿ ಅಪಾರ ಶಕ್ತಿಯಿರುವುದರಿಂದ ಅವುಗಳೊಂದಿಗೆ ಹೋರಾಡುವುದೆಂದರೆ ನಮ್ಮ ಜೀವವನ್ನೇ ಪಣಕ್ಕಿಟ್ಟಷ್ಟು ಅಪಾಯಕಾರಿಯಾಗಿರುತ್ತದೆ, ಆದರೂ ಗುರುಗಳ ಸಂರಕ್ಷಣಾಕವಚ ಮತ್ತು ದೇವರ ಕೃಪೆಯಿಂದಲೇ ನಾನು ಈ ಸೇವೆಯನ್ನು ಮಾಡುತ್ತಿದ್ದೇನೆ. ಈ ಸೇವೆಯಲ್ಲಿನ ನನ್ನ ವಿವಿಧ ಅನುಭವಗಳು, ನನಗೆ ಕಲಿಯಲು ಸಿಕ್ಕಿದ ಅಂಶಗಳು, ನಾನು ಉಪಾಯ ಮಾಡಿದ ಸಾಧಕರ ಅನುಭೂತಿಗಳು ಇತ್ಯಾದಿ ಬರವಣಿಗೆಯನ್ನು ಈ ಲೇಖನಮಾಲೆಯಲ್ಲಿ ನೀಡುತ್ತಿದ್ದೇನೆ. ‘ಈ ಲೇಖನವನ್ನು ಓದಿ ಜೀವನದಲ್ಲಿ ಸಾಧನೆ, ನಾಮಜಪಾದಿ ಉಪಾಯಗಳು ಮತ್ತು ಗುರುಕೃಪೆಯು ಮಹತ್ವವು ಎಲ್ಲರ ಮನಸ್ಸಿನ ಮೇಲೆ ಮೂಡಲಿ, ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆಯನ್ನು ಮಾಡುತ್ತೇನೆ.

– (ಸದ್ಗುರು) ಡಾ. ಮುಕುಲ ಗಾಡಗೀಳ. ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೧.೮.೨೦೨೧)


೯ ನೇಯ ಆನ್‌ಲೈನ್ ‘ಅಖಿಲ ಭಾರತೀಯ ಹಿಂದೂ-ರಾಷ್ಟ್ರ ಅಧಿವೇಶನದ ಕಾಲಾವಧಿಯಲ್ಲಿ ಸದ್ಗುರು ಡಾ. ಮುಕುಲ ಗಾಡಗೀಳರು ಹೇಳಿದ ಮತ್ತು ಅಡಚಣೆಗಳನ್ನು ದೂರಗೊಳಿಸಲು ವಿವಿಧ ಸಂತರು ಮಾಡಿದ ಉಪಾಯ ಮತ್ತು ಅದರಿಂದಾದ ಪರಿಣಾಮಗಳು

ಶ್ರೀ. ಅರುಣ ಕುಲಕರ್ಣಿ

ಪರಾತ್ಪರ ಗುರದೇವರ ಕೃಪೆಯಿಂದ ನಮ್ಮೆಲ್ಲ ಸಾಧಕರಿಗೆ ನಾಮಜಪಾದಿ ಉಪಾಯಗಳ ಮಹತ್ವ ಕಲಿಯಲು ಸಿಗುತ್ತಿದೆ, ಎಂಬುದಕ್ಕಾಗಿ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗಿದೆ..

‘ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆ ವತಿಯಿಂದ ೩೦.೭.೨೦೨೦ ರಿಂದ ೨.೮.೨೦೨೦ ಮತ್ತು ೬ ರಿಂದ ೧೦.೮.೨೦೨೦ ಈ ಕಾಲಾವಧಿಯಲ್ಲಿ ಆನ್‌ಲೈನ್ ‘೯ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಆಯೋಜನೆಯನ್ನು ಮಾಡಲಾಗಿತ್ತು ಆಯೋಜನೆಯ ಸೇವೆಯಲ್ಲಿ ವಿವಿಧ ಸ್ತರಗಳಲ್ಲಿ ಅಡಚಣೆಗಳು ಬರುತ್ತಿರುವುದು ಗಮನಕ್ಕೆ ಬಂದಿತು. ಈ ಅಡಚಣೆಗಳಲ್ಲಿ ನೇರಪ್ರಸಾರದಲ್ಲಿನ ತಾಂತ್ರಿಕ ಸಮಸ್ಯೆಗಳು, ವಕ್ತಾರರನ್ನು ‘ಆನ್‌ಲೈನ್ನಲ್ಲಿ ಜೋಡಿಸಲು ಅಡಚಣೆಗಳು ಬರುವುದು, ಅಧಿವೇಶನಕ್ಕಾಗಿ ಆವಶ್ಯಕ ವಿರುವ ಧ್ವನಿಚಿತ್ರಮುದ್ರಿಕೆ (ಸಿ.ಡಿ)ಗಳು ‘ಅಪ್‌ಲೋಡ್ ಆಗದಿರುವುದು, ಉಪಸ್ಥಿತಿ ಕಡಿಮೆ ಇರುವುದು ಮುಂತಾದವುಗಳ ಸಮಾವೇಶವಿತ್ತು. ಇದರ ಹಿಂದೆ ಆಧ್ಯಾತ್ಮಿಕ ಕಾರಣಗಳಿದ್ದರೆ, ಅವುಗಳ ನಿವಾರಣೆಗಾಗಿ ಸದ್ಗುರು ಡಾ. ಮುಕುಲ ಗಾಡಗೀಳಕಾಕಾರವರಲ್ಲಿ ನಾಮಜಪಾದಿ ಉಪಾಯಗಳನ್ನು ಕೇಳಿದೆವು. ಅವರು ಹೇಳಿದ ನಾಮಜಪಾದಿ ಉಪಾಯಗಳು ಪರಿಣಾಮಕಾರಿಯಾದುದರಿಂದ ಅಧಿವೇಶನದಲ್ಲಿ ಬರುವ ವಿವಿಧ ಅಡಚಣೆಗಳನ್ನು ನಿವಾರಿಸಲು ಸಾಧ್ಯವಾಯಿತು. ಈ ನಾಮಜಪಾದಿ ಉಪಾಯಗಳನ್ನು ಸನಾತನದ ಸಂತರಾದ ಪೂ. ಉಮೇಶ ಶೆಣೈ, ಪೂ. ಶಿವಾಜಿ ವಟಕರ, ಪೂ. ಗುರುನಾಥ ದಾಭೋಲಕರ ಮತ್ತು ಪೂ. (ದಿ.) ಸದಾಶಿವ ಸಾಮಂತ ಇವರೆಲ್ಲರೂ ಮಾಡಿದರು. ೩೦.೭.೨೦೨೦ ರಿಂದ ಅಧಿವೇಶನವು ಆರಂಭವಾಯಿತು. ಆ ದಿನ ಯಾವುದೇ ಅಡಚಣೆಗಳು ಬರಬಾರದೆಂದು ೨೯.೭.೨೦೨೦ ಈ ದಿನ ನಾಮಜಪಾದಿ ಉಪಾಯಗಳನ್ನು ಮಾಡಲಾಯಿತು. ಅದರ ವೃತ್ತಾಂತವನ್ನು ಇಲ್ಲಿ ನೀಡುತ್ತಿದ್ದೇವೆ.

೨. ೩೦.೭.೨೦೨೦ (ಮೊದಲ ದಿನ)

೨ ಅ. ಜಪ : ಮಹಾಶೂನ್ಯ

೨ ಆ. ಮುದ್ರೆ : ನಾಮಜಪಾದಿ ಉಪಾಯಗಳನ್ನು ಮಾಡುವ ಸಾಧಕನು ತನ್ನ ಅಂಗೈಯನ್ನು ಆಜ್ಞಾಚಕ್ರದ ಎದುರು ೧ – ೨ ಸೆಂ. ಮೀ. ಅಂತರದಲ್ಲಿ ಅಡ್ಡ ಹಿಡಿದು ‘ಮಹಾಶೂನ್ಯ ನಾಮ ಜಪವನ್ನು ಮಾಡಬೇಕು.

೨ ಇ. ಸಮಯ : ೧ ತಾಸು

೩. ೩೧.೭.೨೦೨೦ (ಎರಡನೇಯ ದಿನ)

೩ ಅ. ಜಪ : ಶೂನ್ಯ

೩ ಆ. ಮುದ್ರೆ : ಸಾಧಕನು ತನ್ನ ಅಂಗೈಯನ್ನು ಬಾಯಿಯ ಮುಂದೆ ೧-೨ ಸೆಂ.ಮೀ. ಅಂತರದಲ್ಲಿ ಅಡ್ಡಹಿಡಿದು ‘ಶೂನ್ಯ ಈ ಜಪ ಮಾಡಬೇಕು.

೩ ಇ. ಸಮಯ : ೨ ಗಂಟೆ

೩ ಈ. ಪ್ರಾರ್ಥನೆ : ನಾಮಜಪಾದಿ ಉಪಾಯಗಳನ್ನುಮಾಡುವ ಸಾಧಕನು ‘ಈ ಕಾರ್ಯಕ್ರಮವು ನಿರ್ವಿಘ್ನವಾಗಿ ನೆರವೇರಲಿ, ಎಂದು ಶ್ರೀಕೃಷ್ಣನಲ್ಲಿ ಪ್ರಾರ್ಥನೆಯನ್ನು ಮಾಡಬೇಕು.

(ಮುಂದುವರಿಯುವುದು)

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.