ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಬಾಂಗ್ಲಾದೇಶಿ ಶೇಖ್ ಅತಾಉಲ್ ನ ಬಂಧನ

ನವದೆಹಲಿ – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಶೇಖ್ ಅತಾಉಲ್ (40 ವರ್ಷ) ನನ್ನು ನೋಯ್ಡಾ ಪೋಲೀಸರು ದೆಹಲಿಯ ಶಾಹೀನ್ ಬಾಗ್ ಪ್ರದೇಶದಿಂದ ಬಂಧಿಸಿದ್ದಾರೆ. ಅವನು ಮೂಲತಃ ಬಾಂಗ್ಲಾದೇಶದವನಾಗಿದ್ದು ಮತ್ತು ಅವನ ಕುಟುಂಬವು ಬಂಗಾಳದ ಮುಸ್ಲಿಂ ಬಹುಸಂಖ್ಯಾತ ಮಾಲ್ದಾ ಜಿಲ್ಲೆಯಲ್ಲಿ ನೆಲೆಸಿದೆ. ಪ್ರಸ್ತುತ ಅವನು ಶಾಹೀನ್‌ಬಾಗ್‌ನಲ್ಲಿ ವಾಸಿಸುತ್ತಿದ್ದಾನೆ. ಶೇಖ್ ಅತಾಲ್‌ನಿಂದ ಪಿಸ್ತೂಲ್, ಜೀವಂತ ಕಾರ್ಟ್ರಿಡ್ಜ್, ಚಾಕು, ದಾಖಲೆಗಳು ಮತ್ತು ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು, ಅದರಲ್ಲಿ ಅವನು ಯೋಗಿ ಆದಿತ್ಯನಾಥ್‌ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.

ಸಂಪಾದಕೀಯ ನಿಲುವು

ಹಿಂದೂಗಳ ನಾಯಕರನ್ನು ಯಾರು ಕೊಲ್ಲಲು ಯತ್ನಿಸುತ್ತಿದ್ದಾರೆ, ಇದನ್ನು ಗಮನಿಸಿ ! ‘ದೇಶದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’, ಎನ್ನುವವರು ಇಂತಹ ಘಟನೆಗಳ ಬಗ್ಗೆ ಮಾತ್ರ ಮೌನ ವಹಿಸುತ್ತಾರೆ !