ಯಾರಾದರೂ ಆಧಾರಕಾರ್ಡ್ ಕ್ರಮಾಂಕ, ‘ಎಟಿಎಮ್ ಪಿನ್’, ‘ಓಟಿಪಿ’ಗಳಂತಹ ಗೌಪ್ಯ ಮಾಹಿತಿಯನ್ನು ಕೇಳಿದರೆ ವಂಚನೆಗೊಳಗಾಗದಿರಲು ಅದರತ್ತ ದುರ್ಲಕ್ಷಿಸಿ !

ಸಾಧಕರಿಗೆ ಸೂಚನೆ ಮತ್ತು ಓದುಗರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

ಇತ್ತೀಚೆಗೆ ಕೊರೊನಾ ಲಸಿಕೆಯ ನೋಂದಣಿಗಾಗಿ ಆಧಾರ ಕಾರ್ಡ್ ಕ್ರಮಾಂಕ ಅಥವಾ ಸಂಚಾರವಾಣಿಯ ಮೇಲೆ ‘ಓಟಿಪಿ’. (ವನ್ ಟೈಮ್ ಪಾಸವರ್ಡ್) ಕಳುಹಿಸಿ, ಎಂದು ಕೇಳುತ್ತಿದ್ದಾರೆ. ಈ ರೀತಿ ನಾಗರಿಕರನ್ನು ಮೋಸಗೊಳಿಸುವ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿಂದೆಯೂ ಆಯಾ ಸಮಯಕ್ಕೆ ಎದುರಾಗುವ ಸಾಮಾಜಿಕ ಸಮಸ್ಯೆ, ನಾಗರಿಕರ ಅಜ್ಞಾನ ಮತ್ತು ಮುಗ್ಧತೆ ಇತ್ಯಾದಿ ಕಾರಣಗಳಿಂದ ಸಮಾಜದ ದುಷ್ಟಶಕ್ತಿಗಳು ಜನರನ್ನು ಲೂಟಿ ಮಾಡುತ್ತಿರುವುದು ಕಂಡು ಬಂದಿದೆ. ಇದೇ ರೀತಿ ಮುಂದೆ ತಿಳಿಸಿರುವ ಕೆಲವು ಕಾರಣಗಳಿಗಾಗಿ ಆಧಾರಕಾರ್ಡ್ ಕ್ರಮಾಂಕ, ‘ಎಟಿಎಮ್ ಪಿನ್’, ‘ಓಟಿಪಿ’ ಕೇಳುವುದು ಅಥವಾ ಕಳುಹಿಸಿದ ಲಿಂಕ್ ‘ಕ್ಲಿಕ್’ ಮಾಡಲು ಹೇಳಿ, ಈ ಹಿಂದೆಯೂ ನಾಗರಿಕರಿಗೆ ಮೋಸ ಮಾಡಿದ್ದಾರೆ ಮತ್ತು ಈಗಲೂ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನು ಇಲ್ಲಿ ನೀಡುತ್ತಿದ್ದೇವೆ.

೩.೧೦.೨೦೨೧ ರಂದು ಓರ್ವ ಸಾಧಕನಿಗೆ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ಇದರೊಂದಿಗೆ ಜೋಡಿಸಿದ ‘ಬಿ.ಎಸ್.ಎನ್.ಎಲ್’ ಈ ಕಂಪನಿಯ ಸಿಮ್ ಕಾರ್ಡ್‌ಗೆ ಒಂದು ಖಾಸಗಿ ಸಂಖ್ಯೆಯಿಂದ ಸಂದೇಶ ಬಂದಿತು. ‘ಸಿಮ್‌ಕಾರ್ಡ್‌ಗಾಗಿ ನೀಡಿದ ಕಾಗದ ಪತ್ರಗಳ ಅವಧಿ (expired) ಮುಗಿದಿದೆ. ಸಿಮ್‌ಕಾರ್ಡ್ ‘ಬ್ಲಾಕ್ (ತಾತ್ಕಾಲಿಕ ಬಂದ್)’ ಆಗುವುದು. ಹಾಗಾಗಬಾರದೆಂದಿದ್ದರೆ ಈ ಕ್ರಮಾಂಕವನ್ನು ಸಂಪರ್ಕಿಸಿ. ಮುಂದೆ ಸಾಧಕನು ಈ ಸಂಖ್ಯೆಯನ್ನೇ ಎಲ್ಲ ಸರಕಾರಿ ಮತ್ತು ಕಾರ್ಯಾಲಯಕ್ಕೆ ಕೊಟ್ಟಿದ್ದರಿಂದ  ತಕ್ಷಣ ಅಪರಿಚಿತ ಸಂಖ್ಯೆಗೆ ಸಂಪರ್ಕಿಸಿದನು. ಆಗ ಸಂಬಂಧಪಟ್ಟ ವ್ಯಕ್ತಿಯು ಕಾಗದಪತ್ರಗಳನ್ನು ಪರಿಶೀಲಿಸಲು (ಡೊಕ್ಯುಮೆಂಟ್ ವೆರಿಫಿಕೇಶನ್) ೧೧ ರೂಪಾಯಿಯನ್ನು ತುಂಬಿಸಲು ಹೇಳಿದನು. ಅದಕ್ಕಾಗಿ ಪ್ಲೇ ಸ್ಟೋರ್ ಆಪ್ (Play Store app) ನಲ್ಲಿ ‘ಡೆಸ್ಕ್ ಆಪ್’ ಸಕ್ರಿಯ ಮಾಡಿದನು. ಎದುರಿನ ಅಪರಿಚಿತ ವ್ಯಕ್ತಿಗೆ ‘ಶೇರ್ ಸ್ಕ್ರಿನ್’ ಮಾಡಿ ಕೊಟ್ಟರು. ಅನಂತರ ಆ ವ್ಯಕ್ತಿಯು ಸಾಧಕನಿಗೆ ‘ಡಿಬಿಟ್ ಕಾರ್ಡ’ನ ವಿವರ ಮತ್ತು ಅದರ ಮೇಲಿನ ಪರಿಶೀಲನಾಸಂಖ್ಯೆಯನ್ನು (CVV ಸಂಖ್ಯೆ) ತುಂಬಿಸಲು ಹೇಳಿದರು. ಅದಕ್ಕನುಸಾರ ಅನುಕ್ರಮವಾಗಿ ೯ ಸಾವಿರದ ೯೧೬, ೨೪ ಸಾವಿರ ರೂಪಾಯಿ ಮತ್ತು ೪೦ ಸಾವಿರ ರೂಪಾಯಿ ಹೀಗೆ ಒಟ್ಟು ೭೪ ಸಾವಿರದ ೯೧೬ ರೂಪಾಯಿಗಳಷ್ಟು ಮೊತ್ತ ‘ಮೊಬಿವಿಕ’ ಈ ಹಣ ನೀಡುವ ಜಾಲತಾಣದಿಂದ (ಪೆಮೆಂಟ್ ಸೈಟ್) ಹಣ ತೆಗೆದನು.

ನಾಗರಿಕರಿಗೆ ಮುಂದಿನ ಕಿರುಸಂದೇಶಗಳನ್ನು ಕಳಿಸಲಾಗುತ್ತದೆ

೧. ‘ಕೌನ ಬನೇಗಾ ಕರೋಡಪತಿ’ಯಲ್ಲಿ ಬಹುಮಾನ ಬಂದಿದೆ.

೨. ‘ಆನ್‌ಲೈನ್ ಲಾಟರಿ’ ಗೆದ್ದಿದ್ದೀರಿ.

೩. ಪತಿ-ಪತ್ನಿ ಅಥವಾ ಕುಟುಂಬದ ಸಮೇತ ಪ್ರವಾಸಕ್ಕೆ (‘ಟ್ರಾವಲ್ ಪ್ಯಾಕೇಜ್’ಗಾಗಿ) ನೀವು ಆಯ್ಕೆಯಾಗಿದ್ದೀರಿ.

೪. ನಿಮಗೆ ವಿದೇಶ ಪ್ರಯಾಣದ ವಿಮಾನದ ಟಿಕೇಟು ಸಿಕ್ಕಿದೆ.

೫. ಯಾವುದಾದರೂ ಕಂಪನಿಯ ಭಾಗ್ಯಶಾಲಿ ಗ್ರಾಹಕರೆಂದು (‘ಲಕಿ ಕಸ್ಟಮರ್’) ಆಯ್ಕೆಯಾಗಿದ್ದೀರಿ.

೬. ಅಬಕಾರಿ ಇಲಾಖೆಯಿಂದ (‘ಫಾರೆನ್ ಎಕ್ಸಚೇಂಜ್’ನಿಂದ) ಬೆಲೆಬಾಳುವ ಸಾಮಗ್ರಿಯನ್ನು ಬಿಡಿಸಿಕೊಳ್ಳಬೇಕಾಗಿದೆ.

೭.   ಚತುಷ್ಚಕ್ರ ವಾಹನ, ತಂಪುಪೆಟ್ಟಿಗೆ (ಫ್ರಿಡ್ಜ್), ಎಲ್.ಇ.ಡಿ. ಟಿ.ವಿ.  ಇತ್ಯಾದಿ ಬೆಲೆಬಾಳುವ ಸಾಮಗ್ರಿಗಳ ಬಹುಮಾನ ಗೆದ್ದಿದ್ದೀರಿ.

೮. ಸಂಚಾರವಾಣಿಯ ‘ಸಿಮ್‌ಕಾರ್ಡ್’ ಇತರ ಕಂಪನಿಗಳಿಗೆ ಉಚಿತವಾಗಿ ಬದಲಾಯಿಸಿ (ಪೋರ್ಟ್) ಕೊಡಲಾಗುವುದು.

೯. ಕಡಿಮೆ ಬಡ್ಡಿದರದಲ್ಲಿ ಸಾಲ ಮಂಜೂರಾತಿಯಾಗಿದೆ.

೧೦. ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಕಳುಹಿಸಲಾಗಿದೆ.

೧೧. ನಿಮ್ಮ ಖಾತೆಯ ‘ಪಿನ್’ ಕ್ರಮಾಂಕವನ್ನು ಬದಲಾಯಿಸಬೇಕಾಗಿದೆ.

೧೨. ಸಂಚಾರವಾಣಿ ಕಂಪನಿಯು ‘ಗ್ರಾಹಕ ಪರಿಚಯ’ದ ‘ಲಿಂಕ್’ (ಕೆವೈಸಿ – Know your Customer) ಕಳುಹಿಸಲಾಗಿದೆ. ಎಂದು ಹೇಳಿ ‘ಕ್ಲಿಕ್’ ಮಾಡಲು ಹೇಳುವುದು ಮತ್ತು ಆ ಮೂಲಕ ಸಂಬಂಧಪಟ್ಟವರ ಖಾತೆಯಿಂದ ಹಣ ತೆಗೆಯುತ್ತಾರೆ.

ಈ ರೀತಿ ಪರಿಸ್ಥಿತಿಯನ್ನು ದುರುಪಯೋಗಿಸಿ ಸವಿ ಮಾತಿನಲ್ಲಿಯೇ ನಾಗರಿಕರನ್ನು ಮರಳು ಮಾಡುತ್ತಾರೆ. ಈ ರೀತಿ ಅಜಾಗರೂಕತೆಯಿಂದ ಮೋಸಗೊಳಿಸುವ ಜನರ ಮರಳುಮಾತಿಗೆ ಅಥವಾ ಬಹುಮಾನದ ಆಮಿಷಗಳಿಗೆ ಬಲಿಯಾಗಿ ನಾಗರಿಕರು ಮೋಸಕ್ಕೊಳಗಾಗುತ್ತಾರೆ.

ವಾಸ್ತವದಲ್ಲಿ ಯಾವುದೇ ಕಾರಣಕ್ಕೂ ನಾಗರಿಕರಿಂದ ಸಂಚಾರವಾಣಿಯಲ್ಲಿ ಆಧಾರಕಾರ್ಡ್ ಕ್ರಮಾಂಕ, ‘ಎಟಿಎಮ್ ಪಿನ್’, ‘ಓಟಿಪಿ’ಯನ್ನು ಕೇಳುವುದಿಲ್ಲವೆಂದು ಸರಕಾರ-ಆಡಳಿತ  ಸಂಸ್ಥೆಗಳು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂತಾದವರು ಆಗಾಗ ಸ್ಪಷ್ಟಪಡಿಸಿದ್ದಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು, ಯಾರಾದರೂ ನಿಮ್ಮ ಆಧಾರಕಾರ್ಡ್ ಕ್ರಮಾಂಕ, ‘ಎಟಿಎಮ್ ಪಿನ್’, ‘ಒಟಿಪಿ’ಗಳಂತಹ ಗೌಪ್ಯ ಮಾಹಿತಿಯನ್ನು ಕೇಳಿದರೆ ಅಥವಾ ಬಹುಮಾನ ಬಂದಿದೆಯೆಂದು ತಿಳಿಸಿ ‘ಲಿಂಕ್’ ಕಳುಹಿಸಿ ಅದನ್ನು ‘ಕ್ಲಿಕ್’ ಮಾಡಲು ಹೇಳಿದರೆ, ತಕ್ಷಣವೇ ಅದನ್ನು ನಿರ್ಲಕ್ಷಿಸಬೇಕು ಹಾಗೂ ಈ ರೀತಿ ಮೋಸ ಮಾಡುವವರ ಕರೆಗಳಿಗೆ ಸ್ಪಂದಿಸದೇ ನಿಮ್ಮ ಆರ್ಥಿಕ ಹಾನಿಯಾಗುವುದನ್ನು ತಡೆಯಬೇಕು.

ಈ ರೀತಿ ಮೋಸದ ಪ್ರಕರಣಗಳ ದೂರು ದಾಖಲಿಸಿದ ಬಳಿಕ ಅದರ ತನಿಖೆ ನಡೆದರೂ ಯಾವುದೇ ಪ್ರಯೋಜನವಾಗುವುದಿಲ್ಲ. ತಪ್ಪಿತಸ್ಥರು ಸಿಗುವ ಮತ್ತು ಅವರಿಗೆ ಶಿಕ್ಷೆಯಾಗುವ ಪ್ರಮಾಣವು ಬಹಳ ಕಡಿಮೆಯಿದೆ ಅಥವಾ ಇಲ್ಲವೆಂದೇ ಹೇಳಬಹುದು. `Prevention is better than Cure’ ಎನ್ನುವಂತೆ ಸಮಯ ಇರುವಾಗಲೇ ಜಾಗರೂಕರಾಗಿ ಸಂಭಾವ್ಯ ಹಾನಿ ತಡೆಯಬೇಕು. ಅದೇ ರೀತಿ ಕುಟುಂಬದವರು, ಸ್ನೇಹಿತರನ್ನು ಎಚ್ಚರಿಸಬೇಕು.