
‘೧೯.೪.೨೦೨೬ ರಂದು ‘ಅಕ್ಷಯ ತದಿಗೆ’ ಇದೆ. ‘ಅಕ್ಷಯತದಿಗೆ’ ಎಂದರೆ ಹಿಂದೂ ಧರ್ಮದಲ್ಲಿ ಹೇಳಿರುವ ಮೂರುವರೆಶುಭಮುಹೂರ್ತಗಳಲ್ಲೊಂದಾಗಿದೆ. ಈ ದಿನದ ಪ್ರತಿಯೊಂದುಘಳಿಗೆಯು ಶುಭಮುಹೂರ್ತವೇ ಇರುತ್ತದೆ. ಈ ದಿನ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ, ಅಂದರೆ ಅವುಗಳ ಫಲ ಖಂಡಿತ ಸಿಗುತ್ತದೆ. ಆದುದರಿಂದ ಅನೇಕ ಜನರು ಈ ದಿನ ದೊಡ್ಡ ಪ್ರಮಾಣದಲ್ಲಿ ದಾನಧರ್ಮ ಮಾಡುತ್ತಾರೆ.
೧. ‘ಸತ್ಪಾತ್ರೆ ದಾನ’ದ ಮಹತ್ವ !
‘ಸತ್ಪಾತ್ರೆ ದಾನ ಮಾಡುವುದು ಪ್ರತಿಯೊಬ್ಬ ಮನುಷ್ಯನ ಪರಮ ಕರ್ತವ್ಯವಾಗಿದೆ,’ ಎಂದು ಹಿಂದೂ ಧರ್ಮವು ಹೇಳುತ್ತದೆ. ‘ಸತ್ಪಾತ್ರೆದಾನ’ ಎಂದರೆ ಸತ್ನ ಕಾರ್ಯಾರ್ಥವಾಗಿ ದಾನ ಧರ್ಮವನ್ನು ಮಾಡುವುದು ! ದಾನವನ್ನು ಮಾಡುವುದರಿಂದ ಮನುಷ್ಯನ ಪುಣ್ಯಬಲ ಹೆಚ್ಚಾಗುತ್ತದೆ. ಆದರೆ ಅದೇ ‘ಸತ್ಪಾತ್ರೆ ದಾನ’ವನ್ನು ಮಾಡುವುದರಿಂದ ಪುಣ್ಯಸಂಚಯದೊಂದಿಗೆ ವ್ಯಕ್ತಿಗೆ ಆಧ್ಯಾತ್ಮಿಕ ಲಾಭವೂ ಆಗುತ್ತದೆ. ಅಕ್ಷಯ ತದಿಗೆಯಂದು ಮುಂದಿನಂತೆ ‘ಸತ್ಪಾತ್ರೆ ದಾನ’ವನ್ನು ಮಾಡಬಹುದು.
೨. ದಾನದ ವಿಧಗಳು
೨ ಅ. ಧನದಾನ : ಸದ್ಯ ಧರ್ಮಗ್ಲಾನಿಯ ಕಾಲವಾಗಿದೆ. ಧರ್ಮಶಿಕ್ಷಣದ ಅಭಾವದಿಂದ ಹಿಂದೂ ಸಮಾಜವು ಅಧರ್ಮಾಚರಣಿಆಗಿದೆ. ಸೂಕ್ತ ಧರ್ಮಶಿಕ್ಷಣವನ್ನು ಕೊಡದಿದ್ದರಿಂದ ಹಿಂದೂಗಳಲ್ಲಿ ಧರ್ಮಾಭಿಮಾನವು ಇಲ್ಲವಾಗಿದೆ. ಧರ್ಮದ ಸ್ಥಿತಿ ಈ ರೀತಿ ಹದಗೆಟ್ಟಿರುವಾಗ ಧರ್ಮದ ಪುನರುತ್ಥಾನದ ಕಾರ್ಯ ಮಾಡುವುದು ಕಾಲಾನುಸಾರ ತುಂಬಾ ಅಗತ್ಯವಾಗಿದೆ.ಆದುದರಿಂದ ಧರ್ಮಪ್ರಸಾರ ಮಾಡುವ ಸಂತರು, ಹಾಗೆಯೇರಾಷ್ಟ್ರ ಮತ್ತು ಧರ್ಮ ಇವುಗಳ ರಕ್ಷಣೆಗಾಗಿ ಕಾರ್ಯ ಮಾಡುವ ಸಂಸ್ಥೆ ಅಥವಾ ಸಂಘಟನೆ ಇವುಗಳ ಕಾರ್ಯಕ್ಕಾಗಿ ದಾನ ಮಾಡುವುದು ಕಾಲಾನುಸಾರ ಸರ್ವಶ್ರೇಷ್ಠ ದಾನವಾಗಿದೆ. ಸನಾತನ ಸಂಸ್ಥೆಯು ಧರ್ಮಜಾಗೃತಿಯ ಇದೇ ಕಾರ್ಯ ಮಾಡುತ್ತಿದೆ. ದಾನಿಗಳು ಇಂತಹ ಸಂಸ್ಥೆ ಅಥವಾ ಸಂಘಟನೆ ಗಳಿಗೆ ಮಾಡಿದ ದಾನದ (ಅರ್ಪಣೆಯ) ವಿನಿಯೋಗ ಧರ್ಮದ ಪುನರುತ್ಥಾನಕ್ಕಾಗಿಯೇ ಆಗಲಿದೆ. (ಸನಾತನ ಸಂಸ್ಥೆಗೆ ಧನದಾನದ ಅಪೇಕ್ಷೆ ಇಲ್ಲ, ಇಲ್ಲಿ ದಾನ ಮಾಡುವುದರ ಹಿಂದಿನ ಶಾಸ್ತ್ರವನ್ನು ಹೇಳಲಾಗಿದೆ.)
೨ ಆ. ಜ್ಞಾನದಾನ : ಸನಾತನದ ಬಹುವಿಧ ಮತ್ತು ಸರ್ವಾಂಗಸ್ಪರ್ಶಿಗ್ರಂಥ ಸಂಪತ್ತು ಅಂದರೆ ಚಿರಂತನ ಜ್ಞಾನದ ಅಮೂಲ್ಯ ಭಂಡಾರವಾಗಿದೆ. ಈ ಗ್ರಂಥಗಳು ಸಹಜ ಸುಲಭ ಭಾಷೆಗಳಲ್ಲಿ ವಾಚಕರಿಗೆ ಅಮೂಲ್ಯ ಜ್ಞಾನ ನೀಡುತ್ತವೆ, ಹಾಗೆಯೇ ಧರ್ಮದಬಗ್ಗೆ ಶ್ರದ್ಧೆಯನ್ನೂ ಹೆಚ್ಚಿಸುತ್ತವೆ. ಧರ್ಮದ ಶಾಶ್ವತ ಶಿಕ್ಷಣನೀಡುವ ಈ ಗ್ರಂಥ ಸಂಪತ್ತು ಅಂದರೆ ಜ್ಞಾನದಾನ ಮಾಡುವ ಸರ್ವೋತ್ತಮ ಮಾಧ್ಯಮ ಎಂದು ಹೇಳಬಹುದು. ಆದುದರಿಂದ ಅಕ್ಷಯ ತದಿಗೆಯಂದು ಇಂತಹ ಗ್ರಂಥಗಳ ಮೂಲಕ ಜ್ಞಾನದಾನ ಮಾಡುವ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನೂ ಮಾಡಿಕೊಳ್ಳಬೇಕು. ಗ್ರಂಥಗಳ ಮೂಲಕ ಅಧ್ಯಾತ್ಮ ಪ್ರಸಾರ ಮಾಡಲು ಈ ಗ್ರಂಥಗಳನ್ನು ಆಪ್ತ ಸಂಬಂಧಿಕರು, ಶಾಲೆ ಮಹಾವಿದ್ಯಾಲಯಗಳು ಇವುಗಳಲ್ಲಿನ ಗ್ರಂಥಾಲಯಗಳು ಹಾಗೆಯೇ ಸಾರ್ವಜನಿಕ ವಾಚನಾಲಯಗಳಿಗೆ ಕೊಡಬಹುದು. ಸನಾತನದ ಗ್ರಂಥ ಮತ್ತು ಕಿರುಗ್ರಂಥ ಖರೀದಿಸಲು ಶ್ಚಿಟಿಚಿಣಚಿಟಿಶೊಠಿ.ಛಿಒಮ್ ಈ ಜಾಲತಾಣವನ್ನು ಭೇಟಿ ನೀಡಿ.
ಅಕ್ಷಯ ತದಿಗೆಯ ನಿಮಿತ್ತದಿಂದ ದಾನ ಮಾಡಲು ಬಯಸುವ ದಾನಿಗಳು ತಮ್ಮ ಮಾಹಿತಿ ತಿಳಿಸಬೇಕು.
ಹೆಸರು ಮತ್ತು ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ ೭೦೫೮೮೮೫೬೧೦
ವಿ-ಅಂಚೆ ವಿಳಾಸ :[email protected]
ಅಂಚೆಯ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಮೂಲಕ ‘ಸನಾತನ ಆಶ್ರಮ’, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. – ೪೦೩೪೦೧
https://www.sanatan.org/en/donate ಇಲ್ಲಿಯೂ ದಾನ (ಅರ್ಪಣೆ) ಮಾಡುವ ಸೌಲಭ್ಯ ಇದೆ.’
– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೩.೩.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !